ತುಮಕೂರು: ಭಾರತ ಕಮ್ಯುನಿಷ್ಟ ಪಕ್ಷ ಆರಂಭವಾಗಿ ೧೦೧ ವರ್ಷಗಳನ್ನು ಪೂರೈಸಿದ್ದು, ಅಂದಿನಿAದ ಇಂದಿನವರೆಗೆ ದುಡಿಯುವ ವರ್ಗದ ಜನರು, ರೈತರು, ಕಾರ್ಮಿಕರು, ಬಡವರ ಪರವಾಗಿ ದ್ವನಿ ಎತ್ತುತ್ತಲೇ ಬಂದಿದೆ. ರಾಷ್ಟçವ್ಯಾಪ್ತಿ ರಾಜಕೀಯ ಬದಲಾವಣೆಗೆ ಆಗಸ್ಟ್ ೦೬ ರಿಂದ ಆಗಸ್ಟ್ ೧೫ ರವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಾಜಕೀಯ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಷ್ಟç ರಾಜಕಾರಣದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಯುವ ಜನರಿಗೆ ಸತ್ಯದ ಅರಿವು ಮೂಡಿಸಲು ಸಿಪಿಐ ಪಕ್ಷ “ಬದಲಾವಣೆ ಅಗತ್ಯ” ಎಂಬ ಹೆಸರಿನಲ್ಲಿ ಹಮ್ಮಿಕೊಂಡಿರುವ ರಾಜಕೀಯ ಅಭಿಯಾನದ ಅಂಗವಾಗಿ ಇದೆಆಗಸ್ಟ್ ೦೯ರ ಭಾನುವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ತೋವಿನಕೆರೆ ಮತ್ತು ಕುರಂಕೋಟೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪಾದಯಾತ್ರೆಯ ಮೂಲಕ ಅಭಿಯಾನ ನಡೆಸಲಾಗುವುದು ಎಂದರು.
ಜನಧನ ಯೋಜನೆಯ ಮೂಲಕ ಸುಮಾರು ೮೦ ಕೋಟಿ ಜನರಿಂದ ಶೂನ್ಯ ಅಕೌಂಟ್ ತೆರೆದು, ಕನಿಷ್ಠ ಠೇವಣಿ ಇರಿಸಿಲ್ಲ ಎಂಬ ಕಾರಣಕ್ಕೆ ೨೬ ಸಾವಿರ ಕೋಟಿ ದಂಢ ವಿಧಿಸಿ, ಬಡವರ, ದುಡಿಯುವ ವರ್ಗದ ಜನರು ಕೂಡಿಟ್ಟದ ಹಣವನ್ನು ಲಪಟಾಯಿಸಲಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ತುಂಬುವ ಭರವಸೆ ನೀಡಿದ್ದ ಸರಕಾರ, ಖಾಲಿ ಇರುವ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಅತಿ ಹೆಚ್ಚು ಬಡವರೇ ಇರುವ ದೇಶದಲ್ಲಿ ಜನರ ಕಲ್ಯಾಣಕ್ಕಾಗಿ ಕೆಲ ಯೋಜನೆಗಳನ್ನು ರೂಪಿಸಿದರೆ ಉಚಿತ ಭಾಗ್ಯ ಎಂದು ಅಣಕಿಸುವ ಜನರೇ ಹೆಚ್ಚಾಗಿದ್ದಾರೆ. ಜನರಿಗೆ ಮನೆ ಬಾಗಿಲಲ್ಲಿಯೇ ಉದ್ಯೋಗ ಒದಗಿಸುತ್ತಿದ್ದ ನರೇಗಾ ಯೋಜನೆಯ ಕತ್ತು ಹಿಸುಕಿ, ರಾಮನ ಹೆಸರಿನಲ್ಲಿ ಯೋಜನೆ ತಂದು ಜನರಿಗೆ ಉದ್ಯೋಗ ದೊರೆಯುವಂತೆ ಮಾಡಲಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊAಡು ಸಿಪಿಐ ಪಕ್ಷ ಆಗಸ್ಟ್ ೦೬ ರಿಂದ ೧೫ ರವರಗೆ ರಾಜಕೀಯ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ಆಗಸ್ಟ್ ೦೯ ರಂದು ಉಪ ಮುಖ್ಯಮಂತ್ರಿಗಳ ಕ್ಷೇತ್ರದ ತೋವಿನಕೆರೆ ಗ್ರಾಮದಲ್ಲಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸಂತೆ ಮೈದಾನ ಸ್ಥಳಾಂತರ, ಸುಸಜ್ಜಿತ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಸ್ಮಶಾನ ಹಾಗೂ ಇನ್ನಿತರ ಕೊರತೆಯನ್ನು ಪೂರೈಸುವಂತೆ ಒತ್ತಾಯಿಸಿ ಆರಂಭವಾಗುವ ಸಿಪಿಐ ಪಕ್ಷದ ರಾಜಕೀಯ ಅಭಿಯಾನದ ಪಾದಯಾತ್ರೆ ತೋವಿನಕೆರೆಯಿಂದ ಸೂರೇನಹಳ್ಳಿ, ವೆಂಕಟರಮನಹಳ್ಳಿ, ಸಿವಿಡಿ ಪಾಳ್ಯ, ಜೋನಿಗರಹಳ್ಳಿ ಮೂಲಕ ಕುರಂಕೋಟೆ ಗ್ರಾಮ ಪಂಚಾಯಿತಿ ತಲುಪಲಿದೆ. ಸಿಪಿಐ ಪಕ್ಷದ ಹಿರಿಯರಾದ ಸಾತಿ ಸುಂದರೇಶ್ ಆಗಮಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಶಿರಾದ ಸಿಬಿ ಆಗ್ರಹಾರ, ಕಳ್ಳಂಬೆಳ್ಳ, ತುಮಕೂರು ಗ್ರಾಮಾಂತರದ ಊರುಕೆರೆ, ಜಟ್ಟಿ ಅಗ್ರಹಾರ, ತುಮಕೂರು ನಗರದ ವಾರ್ಡು ನಂಬರ್ ೧-೨ ಮತ್ತು ೩, ಪಾವಗಡದ ಚಿಪುಗಾನಹಳ್ಳಿ, ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಂದೋಲನ ನಡೆಯಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದರು,
ಸುದ್ದಿಗೋಷ್ಠಿಯಲ್ಲಿ ಸಿಪಿಐ ಪಕ್ಷದ ಮುಖಂಡರಾದ ಗೋವಿಂದರಾಜು.ಆರ್, ಬೋಜರಾಜು, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)