ತುಮಕೂರು: ಜಿಲ್ಲೆಯು ಪ್ರಾಚೀನ ಇತಿಹಾಸ ಮತ್ತು ಸಾಹಿತ್ಯಿಕ ಇತಿಹಾಸದಿಂದಲೂ ತುಂಬಾ ಪ್ರಸಿದ್ಧವಾಗಿದೆ. ಕೈದಾಳದಲ್ಲಿರುವ ಶಾಸನ ವಿಭಿನ್ನ ಧರ್ಮದ ಸೌಹಾರ್ಧತೆಯನ್ನು ಬಿಂಬಿಸುವAತಿದೆ. ಇದು ಜಿಲ್ಲೆ ಶಾಂತಿ-ಸೌಹಾರ್ದತೆಯ ನೆಲೆವೀಡಾಗಿತ್ತು ಎಂಬುದನ್ನು ಸೂಚಿಸುತ್ತದೆ. ಸುಮಾರು ೮೫೦ ಪ್ರಾಚೀನ ಸಾಹಿತಿಗಳು ಕಂಡುಬರುತ್ತಾರೆ. ೧೨ನೆಯ ಶತಮಾನದ ಬಸವಾದಿ ಶರಣರ ಕಾಲಘಟ್ಟಕ್ಕಿಂತಲೂ ಮೊದಲು ಗುಬ್ಬಿ ಬಳಿಯ ನಿಟ್ಟೂರು ಪುರದಲ್ಲಿ ಗುಬ್ಬಿಯ ಮಲ್ಲಣಾರ್ಯ, ಕ್ರಿ.ಶ. ಸುಮಾರು ೧೨೪೦ರ ಕಾಲಘಟ್ಟದಲ್ಲಿದ್ದ ಅಮರಗೊಂಡ ಮಲ್ಲಿಕಾರ್ಜುನ ಮತ್ತು ಪುರದ ನಾಗಣ್ಣ ಎಂಬ ವಚನಕಾರರಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಮುಂದೆ ಗುಬ್ಬಿಯ ಮಲ್ಲಣ್ಣ, ತೋಂಟದ ಸಿದ್ಧಲಿಂಗಯತಿ ಮುಂತಾದವರು ಕಂಡುಬರುತ್ತಾರೆ. ಇವರು ನೂರಾರು ವಚನ ರಚನೆ, ಸಾಹಿತ್ಯ ಕೃತಿ ರಚಿಸಿದ್ದಾರೆ.
೧೫ನೇ ಶತಮಾನದ ಹೊತ್ತಿಗೆ ಗುಬ್ಬಿ, ಯಡೆಯೂರು, ಗೂಳೂರು, ಸಿದ್ದಾಪುರ ಮುಂತಾದ ಕಡೆ ಕಂಡುಬರುತ್ತವೆ. ೧೫೩೧ರಲ್ಲಿದ್ದ ಗುಬ್ಬಿಯ ಮಲ್ಲಣಾರ್ಯನ ಭಾವಚಿಂತಾರತ್ನ ಮಹತ್ವದ ಕೃತಿಯಾಗಿದೆ.
ಬಿಜ್ಜಾವರದ ಮಲ್ಲಿಕಾರ್ಜುನ ಕವಿ, ದೇವರಾಯಪಟ್ಟಣದ ಶಂಕರದೇವ, ಗೂಳೂರಿನ ಸಿದ್ಧವೀರಣ್ಣ (ಶೂನ್ಯಸಂಪಾದನೆ ಕರ್ತೃ), ನಿಡಗಲ್ಲು ಚನ್ನಪ್ಪದೇವರು, ಹೆಬ್ಬೂರಿನ ಹೇರಂಬ ಕವಿ, ಸೋಮೇಕಟ್ಟೆಯ ಚನ್ನವೀರಸ್ವಾಮಿ, ಶಬ್ದಮಣಿ ದರ್ಪಣ ಕೃತಿಗೆ ಟೀಕು ಬರೆದ ನಿಟ್ಟೂರ ನಂಜಯ್ಯ ಮುಂತಾದವರಿAದ ಜಿಲ್ಲೆಯ ಸಾಹಿತ್ಯ ಸಮೃದ್ಧವಾಗಿದೆ. ನಿವೃತ್ತರಾದ ನಿಮಗೆ ಸಾಕಷ್ಟು ವೇಳೆದೊರಕುತ್ತದೆ. ಅಂತಹ ಸಾಹಿತ್ಯವನ್ನು ಓದುವ ಮೂಲಕ ಅಧ್ಯಯನಶೀಲರಾಗಲು ಅವಕಾಶವಿದೆ ಎಂದು ಅವರು ತುಮಕೂರು ಜಿಲ್ಲಾ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಜಿಲ್ಲೆಯ ಪ್ರಾಚೀನ ಸಾಹಿತ್ಯ ಕುರಿತು ಉಪನ್ಯಾಸ ನೀಡುತ್ತಾ ತಿಳಿಸಿದರು.
ತಾಲ್ಲೂಕು ಅಧ್ಯಕ್ಷರುಗಳು ತಮ್ಮ ತಮ್ಮ ತಾಲ್ಲೂಕುಗಳ ಪ್ರಗತಿ ಸಾಧನೆಗಳನ್ನು ಕುರಿತು ತಿಳಿಸಿದರು. ನಿವೃತ್ತ ನೌಕರರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅದ್ಯಕ್ಷರಾದ ಬಾ.ಹ.ರಮಾಕುಮಾರಿ ಅವರು ನಿವೃತ್ತ ನೌಕರರ ಬೇಡಿಕೆಗಳ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕಮ್ಯುಟೇಷನ್ ಅವಧಿ ಕಡಿತ ಮತ್ತು ಇನ್ನಿತರೆ ವಿಚಾರಗಳನ್ನು ಪ್ರಸ್ತಾಪಿಸಿ, ಅವುಗಳ ಸತ್ಯಾಸತ್ಯತೆ ತಿಳಿಯುವವರೆಗೂ ಅಧಿಕೃತ ಆದೇಶವನ್ನು ಕಣ್ಣಾರೆ ಕಾಣುವ ತನಕ ಯಾರೂ ನಂಬಬಾರದು ಹಾಗೂ ಹರಡಬಾರದು ಎಂದು ತಿಳಿಸಿದರು. ೧೨ ಜನ ಸದಸ್ಯರನ್ನು ಬರಮಾಡಿಕೊಳ್ಳಲಾಯಿತು. ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ಡಾ. ಹೆಚ್.ಎಸ್.ವೆಂಕಟೇಶಮೂರ್ತಿ, ಎನ್.ನಾಗಪ್ಪ ಮತ್ತು ಸಂಘದ ಸದಸ್ಯರುಗಳಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀಮತಿ ಲೀಲಾವತಿ ಅವರು ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಪುಟ್ಟನರಸಯ್ಯನವರು ಸ್ವಾಗತಿಸಿದರು. ನಂದೀಶ್ ಅವರು ವಂದನೆ ಸಲ್ಲಿಸಿದರು. ನಿವೃತ್ತ ಶಿಕ್ಷಕರಾದ ನರಸಿಂಹಮೂರ್ತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಅಂದಿನ ದಾಸೋಹ ವ್ಯವಸ್ಥೆ ಮಾಡಿದ್ದ ಜಿ.ಹನುಮಂತಪ್ಪ ಮತ್ತು ಪುಟ್ಟಸ್ವಾಮಿಯವರನ್ನು ಸನ್ಮಾನಿಸಲಾಯಿತು.
(Visited 1 times, 1 visits today)