ಸಾಂದರ್ಭಿಕ ಚಿತ್ರ

ತುಮಕೂರು: ಇತ್ತೀಚಿನ ದಿನಗಳಲ್ಲಿ ಆಹಾರ ಅರಸುತ್ತ ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವುದು ಸರ್ವೆ ಸಾಮಾನ್ಯ ವಾಗಿಬಿಟ್ಟಿದೆ. ಇತ್ತ ಅರಣ್ಯ ಇಲಾಖೆಯೂ ಕೂಡ ಕಾಡುಪ್ರಾಣಿಗಳ ಹಾವಳಿಯ ಸ್ಥಳಗಳಲ್ಲಿ ಬೋನ್ ಗಳನ್ನು ಇಟ್ಟು ಹಿಡಿಯಲು ಪ್ರಯತ್ನಿಸುತ್ತೆ. ಆದ್ರೆ ಕಾಡುಪ್ರಾಣಿಗಳು ಬೋನಿಗೆ ಬೀಳದೆ ಪರಾರಿಯಾಗುತ್ತಿವೆ. ಇಂತಹ ಘಟನೆಗಳಿಂದಾಗಿ ಹಲವು ಗ್ರಾಮಗಳು, ಊರುಗಳಲ್ಲಿನ ಜನರು ಭಯದಿಂದಲೇ ಬದುಕುವಂತಾಗುತ್ತಿದೆ. ಇತ್ತ ತುಮಕೂರು ನೂತನ ವಿವಿ ಬಳಿಯಲ್ಲಿಯೇ ಚಿರತೆಯೊಂದು ಪ್ರತ್ಯೆಕ್ಷವಾಗಿದ್ದು, ಸುತ್ತಲಿನ ಗ್ರಾಮಸ್ಥರು, ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.

ಬಿದರಕಟ್ಟೆಯ ನೂತನ ವಿವಿ ಕ್ಯಾಂಪಸ್ ಬಳಿ ಚಿರತೆ ಮೇಕೆಯ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಡದಿದೆ. ವಿಷಯ ತಿಳಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ವಿವಿ ಕ್ಯಾಂಪಸ್ ಜ್ಞಾನ ಸಿರಿ ಬಳಿ ಇರುವ ಕಾಂತಣ್ಣ ಎಂಬುವವರ ತೋಟದ ಮನೆಯ ಹತ್ತಿರ, ಸಂಜೆ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ. ಮೂರು ಮೇಕೆಗಳಲ್ಲಿ ಒಂದು ಮೇಕೆಯನ್ನು ಹೊತ್ತೊಯ್ದು, ಸುಮಾರು ೨ ಕಿ.ಮೀ. ದೂರದ ಪೊದೆಯೊಳಗೆ ಎಳೆದೊಯ್ದು ಸಾಯಿಸಿದೆ.

ಇನ್ನು ವಿಚಾರ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದಾವಿಸಿದ್ರು. ಮೇಕೆಯನ್ನು ತಿಂದಿರುವುದು ಚಿರತೆಯೇ ಎಂದು ಅಧಿಕಾರಿ ಗಳು ಖಚಿತಪಡಿಸಿದ್ರು. ಇತ್ತ ಬಿದರಕಟ್ಟೆ ಗ್ರಾಮದ ವ್ಯಕ್ತಿ ಕಾಂತಣ್ಣ ಚಿರತೆ ಹಾವಳಿಯ ಬಗ್ಗೆ ಹೇಳೋದು ಹೀಗೆ. ಇಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ವಿವಿಗೆ ಬರುತ್ತಾರೆ. ಬೆಳಗ್ಗಿನ ಸಮಯದಲ್ಲಿ ಇಲ್ಲಿಯೇ ಕೆಲವು ಮಕ್ಕಳು, ವಿದ್ಯಾರ್ಥಿಗಳು ಆಟವಾಡುತ್ತಾರೆ. ವಿವಿಗೆ ಬರುವ ಪ್ರತಿಯೊಬ್ಬರು ಇದೇ ರಸ್ತೆಯ ಮಾರ್ಗದಲ್ಲಿ ಓಡಾಡುತ್ತಾರೆ. ಅಲ್ಲದೇ ವಿವಿ ಕ್ಯಾಂಪಸ್ ಆಹ್ಲಾದಿಸುವ ಸಲುವಾಗಿ ಅನೇಕ ನಾಗರೀಕರು ಬರುತ್ತಾರೆ. ಇಂತಹ ಸಮಯದಲ್ಲಿ ಚಿರತೆಯಿಂದ ಏನಾದ್ರೂ ಅನಾಹುತವಾದರೆ ಹೊಣೆ ಯಾರು. ಕೂಡಲೇ ಸಂಬ0ಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಚಿರತೆ ಹಾವಳಿಯನ್ನು ತಪ್ಪಿಸಬೇಕಿದೆ.

ಅದೇನೇ ಇರಲಿ ಬಿದರಿಕಟ್ಟೆಯಲ್ಲಿ ನೂತನ ವಿವಿ ಕ್ಯಾಂಪಸ್ ಓಪನ್ ಆಗಿದ್ದು, ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ. ಆದ್ರೆ ಈ ಪ್ರದೇಶದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದೆ ಅಂತ ಸುದ್ದಿ ಹರಿದಾಡುತ್ತಿದೆ. ಇದರಿಂದ ಅಲ್ಲಿ ವಾಸಿಸುವ ಗ್ರಾಮಸ್ಥರೇ ಭಯಬೀಳುತ್ತಿದ್ದಾರೆ. ಇತ್ತ ವಿವಿಗೆ ಹೋಗುವ ವಿದ್ಯಾರ್ಥಿಗಳು ನಡೆದುಕೊಂಡೇ ಹೋಗುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಿರತೆ ಹಾವಳಿಯನ್ನು ತಪ್ಪಿಸಬೇಕಿದೆ.

 

(Visited 1 times, 1 visits today)