ಪಾವಗಡ: ನಾಡು ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ನಾಡಪ್ರಭು ಕೆಂಪೇಗೌಡರು ಒಬ್ಬರು ಎಂದು ಹೇಳಿದ ಪಾವಗಡ ಕ್ಷೇತ್ರದ ಶಾಸಕರು ಹಾಗೂ ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಚ್.ವಿ. ವೆಂಕಟೇಶ್, ಒಕ್ಕಲಿಗ ಸಮುದಾಯದ ಸಂಘಟನೆ ಮತ್ತು ಶಕ್ತಿಯ ಬಗ್ಗೆ ಮಹತ್ವದ ಸಂದೇಶ ನೀಡಿದ್ದಾರೆ.
ಪಟ್ಟಣದ ಎಸ್.ಎಸ್.ಕೆ. ಸಮುದಾಯ ಭವನದಲ್ಲಿ ಕುಂಚಿಟಿಗ ಒಕ್ಕಲಿಗರ ಸಂಘ, ಕುಂಚಿಟಿಗ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ನಾಡಪ್ರಭು ಕೆಂಪೇಗೌಡ ಯುವಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ೫೧೬ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಭಾಷಣ ಮಾಡಿದರು.
“ಕರ್ನಾಟಕದ ರಾಜಕೀಯದಲ್ಲಿ ಒಕ್ಕಲಿಗ ಸಮುದಾಯದ ಪಾತ್ರ ಅತ್ಯಂತ ಪ್ರಭಾವಶೀಲ ವಾಗಿದೆ. ಹಳೆ ಮೈಸೂರು ಭಾಗದಲ್ಲಿ ಈ ಸಮುದಾಯದ ಬಲದ ಹಿನ್ನೆಲೆ, ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಯಿತು. ಈಗಲೂ ತಾಲೂಕು ರಾಜಕಾರಣದಲ್ಲಿ ಈ ಸಮುದಾಯದ ಹಿಡಿತ ಉತ್ತಮವಾಗಿದ್ದು, ಸಂಘಟನೆ ಇನ್ನಷ್ಟು ಬಲವಾಗಬೇಕು,” ಎಂದು ಅವರು ಹೇಳಿದರು.
“ನಾಡಪ್ರಭು ಕೆಂಪೇಗೌಡರ ಹೆಸರನ್ನು ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಿಗೆ ನಾಮಕರಣ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸಲಾಗಿದೆ. ರೈತಾಪಿ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯತ್ತ ಗಮನ ಹರಿಸಬೇಕು. ಮಕ್ಕಳು ನಮ್ಮ ಆಸ್ತಿಯಾಗಬೇಕು, ಆಸ್ತಿಯ ಪರಿಕಲ್ಪನೆಯ ಬದಲು, ಅವರ ಬೆಳವಣಿಗೆಗೆ ಜೋರಿಡಿ,” ಎಂದು ಪೋಷಕರಿಗೆ ಸಲಹೆ ನೀಡಿದರು
ಮಾಜಿ ಶಾಸಕರಾದ ಕೆ. ಎಂ. ತಿಮ್ಮರಾಯಪ್ಪ ಮಾತನಾಡಿ, ರಾಜ್ಯಸಭಾ ಸದಸ್ಯರಾದ ಎಚ್. ಡಿ. ದೇವೇಗೌಡ ಅವರ ಅನುದಾನದಿಂದ ತಾಲೂಕಿನ ಕುಂಚಿಟಿಗ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡಕ್ಕೆ ಅನುದಾನವನ್ನ ಮಂಜೂರು ಮಾಡಿಸಿಕೊಡಲಾಗುವುದು ಎಂದು ಭರವಸೆ ಯನ್ನು ನೀಡಿದರು.
ಸಮಾರಂಭದಲ್ಲಿ ಹಿರಿಯ ಕುಂಚಟಿಗ ಒಕ್ಕಲಿಗ ದುರೀಣ ರನ್ನು ಮತ್ತು ಎಸ್ .ಎಸ್. ಎಲ್. ಸಿ. ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಿ.ಎನ್. ವರದರಾಜು, ತುಮುಲ್ ನಿರ್ದೇಶಕರಾದ ಚಂದ್ರಶೇಖರ ರೆಡ್ಡಿ, ಕಮ್ಮ ಒಕ್ಕಲಿಗ ಸಂಘದ ಮುಖಂ ಡರಾದ ಭೀಮನಕುಂಟೆ ಸತ್ಯಪ್ಪ, ಕೆಂಚಗಾನಹಳ್ಳಿ ಗೋವಿಂದಪ್ಪ,,ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷರಾದ ಎಂ. ಸಿ. ತಿಪ್ಪೇ ವೀರಣ್ಣ ಮುಖ್ಯ ಶಿಕ್ಷಕ ಜಯರಾಂ,ಬಿ. ಆರ್. ಸಿ. ರಂಗಸ್ವಾಮಿ, ಗ್ರಂಥಪಾಲಕ ನಾಗರಾ ಜು,ಮುಖಂಡರಾದ ರಂಗಣ್ಣ, ಜೆಡಿಎಸ್ ಅಧ್ಯಕ್ಷರಾದ ಎನ್.ಎ. ಈರಣ್ಣ. ಖ್ಯಾತ ಗಾನ ಹಳ್ಳಿ ಕದಿರೇಹಳ್ಳಿ ಜಗನ್ನಾಥ್, ಮಂಜುನಾಥ್, ಬಿಜೆಪಿ ತಾ.ಅಧ್ಯಕ್ಷ ದೊಡ್ಡಹಳ್ಳಿ ಅಶೋಕ್, ಉಪನ್ಯಾಸಕರಾದ ಜಾನಕಿರಾಂ, ಡಾ. ಕಿರಣ್,
ಮರಿದಾಸನಹಳ್ಳಿ ಹೆಂಜಾರಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜು, ಕರಿಯಣ್ಣ, ಪಿ. ಎಲ್. ಡಿ. ಬ್ಯಾಂಕ್ ಮಾಜಿ ನಿರ್ದೇಶಕ ಗೋಪಿ, ಮತ್ತಿತರ ಕೆ ಆರ್ ರಘುನಾಥ್ ಮುರಳಿದರು ನೂರಾರು ಮುಖಂಡರುಗಳು ಹಾಜರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಪಾವಗಡ ಪಟ್ಟಣದ ಗುರುಭವನದ ಆಟದ ಮೈದಾನದಿಂದ ವಿವಿಧ ಜಾನಪದ ಕಲಾ ತಂಡಗಳೂ ಂದಿಗೆ ಕಾರ್ಯಕ್ರಮ ನಡೆಯುವ ಸಮುದಾಯ ಭವನದವರೆಗೂ ಮೆರವಣಿಗೆಯನ್ನು ನಡೆಸಲಾಯಿತು.

(Visited 1 times, 1 visits today)