ತುಮಕೂರು: ಬಹುದೊಡ್ಡ ಪಿಡುಗಾಗಿರುವ ಮಾದಕ ವಸ್ತುಗಳ ನಿರ್ಮೂಲನೆಗೆ ಪ್ರಬಲ ಕಾನೂನೂನಿದೆ. ಎನ್‌ಡಿಪಿಎಸ್ ಕಾಯಿದೆ, ಕಾನೂನು ಅನುಷ್ಠಾನ ಬಿಗಿಗೊಳ್ಳಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದರ ಜತೆಗೆ, ತಪ್ಪಿಸ್ಥರ ವಿರುದ್ಧ ಕಾನೂನಾತ್ಮಕ ಕ್ರಮ ಮುಲಾಜಿಲ್ಲದೆ ಜರುಗಿಸಬೇಕು. ಆಗ ಮಾತ್ರ ಡ್ರಗ್ಸ್ ನಿರ್ಮೂಲನೆ ಸಾಧ್ಯವೆಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಕರೆ ನೀಡಿದರು.
ಕುವೆಂಪು ನಗರದ ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ಬೆಂಗಳೂರಿನ ನವಸಹಯೋಗ್ ಫೌಂಡೇಶನ್, ಯಂಗ್ ಇಂಡಿಯನ್ಸ್ ಆರ್ಗನೈಸೇಷನ್ ಮತ್ತು ಸತ್‌ಕೃತಿ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಡ್ರಗ್ಸ್ ವಿರುದ್ಧ ಯುವಜನತೆ’ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡ್ರಗ್ಸ್ ಪೂರೈಕೆ, ಬಳಕೆಯಲ್ಲಿ ವಿದ್ಯಾರ್ಥಿಗಳು ಸಿಕ್ಕಿಬಿದ್ದರೆ ಕಾನೂನಾತ್ಮಕ ಕ್ರಮ ಜರುಗಿಸಬೇಕು. ವಿದ್ಯಾರ್ಥಿ ಎಂಬ ಐಡಿ ಕಾರ್ಡ್ಗೆ ವಿನಾಯಿತಿ ನೀಡಿ ಕಳುಹಿಸಿದರೆ ಕಾನೂನು ಮೇಲೆ ಭಯವೇ ಇಲ್ಲದಂತಾಗುತ್ತದೆ. ಇತರೆ ವಿದ್ಯಾರ್ಥಿಗಳು ತಪ್ಪೆಸುಗುವ ಸಾಧ್ಯತೆ ಇರುತ್ತದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು, ವಿದ್ಯಾರ್ಥಿಗಳೆಂದು ತಪ್ಪನ್ನು ಲಘುವಾಗಿ ಪರಿಗಣಿಸದೆ ತಪ್ಪೆಸೆಗಿದವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದರು.
ಡ್ರಗ್ಸ್ ಎ0ಲ್ಲಿದ? ಎಲ್ಲಿಗೆ? ಯಾವ ಮೂಲಕ ಪೂರೈಕೆ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಆರೋಪಿಗಳ ಹೆಡೆಮುರಿ ಕಟ್ಟಬೇಕು. ಕಠಿಣ ಕ್ರಮವಾದರೆ ಮಾತ್ರ ನಿಯಂತ್ರಣಕ್ಕೆ ಬರುತ್ತದೆ. ಇಲ್ಲದಿದ್ದರೆ ಎಷ್ಟೇ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿದರೂ ಪ್ರಯೋಜನ ಅಷ್ಟಕಷ್ಟೇ ಎಂದ ಅವರು, ಪೊಲೀಸ್ ಇಲಾಖೆ ಮಾತ್ರವಲ್ಲದೇ, ಶಿಕ್ಷಣ ಸಂಸ್ಥೆಗಳು ಹಾಗೂ ಇಡೀ ಸಮಾಜದ ಜವಾಬ್ದಾರಿ ಮುಖ್ಯ ಎಂದರು.
ನವ ಸಹಯೋಗ್ ಫೌಂಡೇಶನ್‌ನ ಮುಖ್ಯಸ್ಥ ರಂಜಿತ್ ಕುಮಾರ್ ಸಿಂಗ್ ಮಾತನಾಡಿ, ಮಾದಕ ವಸ್ತುಗಳ ವಿರುದ್ಧ ಯುವಕರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಎಲ್ಲರೂ ಸಾಥ್ ನೀಡುವಂತೆ ಮನವಿ ಮಾಡಿದರು.
ಸತ್‌ಕೃತ್ ಫೌಂಡೇಶನ್ ಸಹ ಸಂಸ್ಥಾಪಕ ಕಿಶೋರ್ ಕೆ.ಸಿ.ಮಾತನಾಡಿ, ಮಾದಕ ವಸ್ತುಗಳು ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ, ಕಾನೂನು, ಶಿಕ್ಷೆ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉz್ದೆÃಶವೆಂದರು.
ಕಾರ್ಯಕ್ರಮದಲ್ಲಿ ನವಸಹಯೋಗ್ ಫೌಂಡೇಶನ್ ಆರ್‌ಒಎಚ್ ಶೇಖರ್ ಶಾಸ್ತಿçಘಿ, ಯಂಗ್ ಇಂಡಿಯನ್ಸ್ (ಹೆಲ್ತ್) ಮುಖ್ಯಸ್ಥೆ ಜಯಭವ್ಯಘಿ, ಸತ್‌ಕೃತಿ ಫೌಂಡೇಶನ್‌ನ ಸಹ ಸಂಸ್ಥಾಪಕ ಕಿಶೋರ್ ನಾಗಮಲ್ಲಿಘಿ, ಡೇಟಾ ಸೆಂಟಿಸ್ಟ್ ಗಗನ್ ಪಾಲ್ ಸಿಂಗ್, ವಿದ್ಯಾವಾಹಿನಿ ಪ್ರಥಮದರ್ಜೆ ಹಾಗೂ ಸ್ನಾನತಕೋತ್ತರ ಪದವಿ ಕಾಲೇಜು ಪ್ರಿನ್ಸಿಪಾಲ್ ಡಾ.ಅರುಣಾ ಎ ಉಪಸ್ಥಿತರಿದ್ದರು.

 

(Visited 1 times, 1 visits today)