filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 32;

ತುಮಕೂರು: ವಿಜ್ಞಾನ, ತಂತ್ರಜ್ಞಾನದಲ್ಲಿ ನ್ಯೂಟನ್ ನಿಂದ ಹಿಡಿದು ಇಲ್ಲಿಯವರೆಗೆ ಹಲವಾರು ಹೊಸ ಆವಿಷ್ಕಾರಗಳು ನಡೆದಿದ್ದು, ತಕ್ಷಣದಲ್ಲಿ ಅವರು ಸಮಸ್ಯೆಗಳಿಗೆ ಪರಿಹಾರ ಒದಗಿಸಿದರೂ, ಧೀರ್ಘಕಾಲದಲ್ಲಿ ಜೀವ ವಿರೋಧಿಯಾಗಿ ಪರಿವರ್ತಿತ ವಾಗುವುದನ್ನು ನಾವು ಕಾಣುತಿದ್ದೇವೆ.ಹಾಗಾಗಿ ಕಣ್ಣಿಗೆ ಕಾಣದ ಹಾಗೂ ಕಾಣುವ ಜೀವಿಗಳೆರಡಕ್ಕೂ ಅನುಕೂಲವಾಗುವ ರೀತಿಯ ಸುಸ್ಥಿರ ಸಂಶೋಧನೆಗಳತ್ತ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ಸೈನ್ಸ್ ಅಂಡ್ ಟೆಕ್ನಾಲಜಿ ಅಕಾಡೆಮಿ ರಾಜ್ಯಾಧ್ಯಕ್ಷ ಡಾ.ಎ.ಹೆಚ್.ರಾಜಾಸಾಬ್ ಪ್ರತಿಪಾದಿಸಿದ್ದಾರೆ.
ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿಜ್ಞಾನ ವಿಭಾಗದಿಂದ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನ “ಸೈನ್ಸ್ ಅಂಡ್ ಸೊಸೈಟಿ ಫಾರ್ ಸಸ್ಟೇನಬಲ್ ಪ್ಯೂಚರ್” ಎಂಬ ವಿಷಯ ಕುರಿತು ವಿಚಾರ ಸಂಕಿರಣದ ಪರಿಚಯ ಭಾಷಣ ಮಾಡಿದ ಅವರು,ಸ್ವಾತಂತ್ರ ನಂತರದಲ್ಲಿ ದೇಶದ ೩೩ ಕೋಟಿ ಜನರಿಗೆ ಆಹಾರ ಒದಗಿಸಲು ಹಸಿರು ಕ್ರಾಂತಿಯನ್ನು ಅಳವಡಿಸಿಕೊಳ್ಳಲಾಯಿತು.ಇದರ ಪರಿಣಾಮವಾಗಿ ಭಾರತ ಆಹಾರ ಸ್ವಾವಲಂಭನೆ ಸಾಧಿಸಿ ದರೂ,ಅಂತರಜಲ ಬಳಕೆ,ಅತಿಯಾದ ರಸಾ ಯನಿಕ ಬಳಕೆ,ಹೈಬ್ರಿಡ್ ತಳಿಗಳು,ಕೀಟನಾಶಕಗಳ ಪರಿಣಾಮ ಪರಿಸರ ನಾಶವಾಗಿ,ಕುಡಿಯುವ ನೀರು ಸಹ ವಿಷಯುಕ್ತವಾಯಿತು.ಇದರಿಂದ ಹೊರಬರಬೇಕಾದರೆ ನಾವೆಲ್ಲರೂ ಪರಿಸ್ನೇಹಿ ಸಂಶೋಧನೆಯತ್ತ ಗಮನಹರಿಸಬೇಕಾದ ಅಗತ್ಯವಿದೆ.ಇದೊಂದು ಮುಗಿಯದ ಯುದ್ದ ಎಂದರು.
ಗಾ0ಧೀಜಿಯವರು ಹೇಳಿದಂತೆ ಭೂಮಿ ನಮ್ಮ ಆಸೆಯನ್ನು ಪೂರೈಸಬಲ್ಲದೇ ಹೊರತು ದುರಾಸೆಯನ್ನಲ್ಲ. ಇದನ್ನು ನಾವೆಲ್ಲರೂ ಅರಿತು ನಡೆಯಬೇಕಿದೆ.ಬುದ್ದ ಹೇಳಿದಂತೆ ಯಾವುದಕ್ಕು ಆರಂಭ, ಅಂತ್ಯ ಎಂಬುದಿಲ್ಲ.ಅದೊ0ದು ನಿರಂತರ ಪ್ರಕ್ರಿಯೆ.ಆದರೆ ಆತನನ್ನು ದೇವರ ಸ್ವರೂಪ ಕೊಟ್ಟು ಪೂಜೆಗೆ ಸಿಮೀತಗೊಳಿಸಿದ್ದೆವೆ.ಕೃತಕ ಬುದ್ದಿಮತ್ತೆಯಿಂದ ಬುದ್ದಿವಂತ ವಿದ್ಯಾರ್ಥಿ,ಅವರೆಜ್‌ಗೆ ಇಳಿದರೆ,ಸಾಮಾನ್ಯ ವಿದ್ಯಾರ್ಥಿ ಅದಕ್ಕಿಂತಲೂ ಕೆಳಮಟ್ಟಕ್ಕೆ ಕುಸಿಯುತ್ತಿದ್ದಾನೆ.ವಿದ್ಯಾರ್ಥಿಗಳ ಅಸೈನಮೆಂಟ್ ಮತ್ತು ಸಂಶೋಧನಾ ಪ್ರಬಂಧಗಳಲ್ಲಿ ಯಾವುದು ನಕಲು ಮಾಡಿದ್ದು ಎಂದು ಕಂಡು ಹಿಡಿಯಲು ಹೊಸ ಸಂಶೋಧನೆಗೆ ಮುಂದಾಗುವ0ತಹ ದುಸ್ಥಿತಿಗೆ ನಾವು ತಲುಪಿದ್ದೇವೆ ಎಂದು ಆಧುನಿಕ ಸಂಶೋಧನೆಗಳ ಅನುಕೂಲ, ಅನಾನುಕೂಲಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಡಾ.ಎ.ಹೆಚ್.ರಾಜಾಸಾಭಾ ಸಲಹೆ ನೀಡಿದರು.
ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗೀಯ ಜಂಟಿ ನಿರ್ದೇಶಕ ಡಾ.ರಾಮಕೃಷ್ಣಾರೆಡ್ಡಿ,ಸರಕಾರಿ ಕಾಲೇಜು ಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಹಾಗಾಗಿಯೇ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಮುಖವಾಗಿದೆ.ಸರಕಾರ ಸಹ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಾ ಬಂದಿದೆ.ಸುಮಾರು ೨೦ಕ್ಕು ಹೆಚ್ಚು ಒಪ್ಪಂದಗಳನ್ನು ಮಾಡಿಕೊಂಡು ಸರಕಾರಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹಗಲಿರುಳು ಶ್ರಮಿಸುತ್ತಿದೆ.ಅಜೀಂ ಪ್ರೇಮಜಿ ಪೌಂಡೇಷನ್ ಸಹಯೋಗದಲ್ಲಿ ರಾಜ್ಯದ ಬೆಂಗಳೂರು ವಿಭಾಗದ ಸುಮಾರು ೨೮ ಸಾವಿರ ವಿದ್ಯಾರ್ಥಿನಿಯರಿಗೆ ವಾರ್ಷಿಕ ೩೦ ಸಾವಿರ ರೂ ವಿದ್ಯಾರ್ಥಿ ವೇತನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಐ ನಿಂದ ಉದ್ಯೋಗ ನಷ್ಟ ಎನ್ನುವುದಕ್ಕಿಂತ, ಅದಕ್ಕೆ ಅಗತ್ಯವಿರುವ ಕೌಶಲ್ಯ ರೂಢಿಸಿಕೊಂಡರೆ ಹೆಚ್ಚು ದಿನ ಉಳಿಯಲು ಸಾಧ್ಯ.ಪದವಿ ಕಾಲೇಜು ಉಪನ್ಯಾಸಕರಿಗೆ ಸಾಕಷ್ಟು ಸೌಲಭ್ಯ ನೀಡುತಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಸಂತ.ಟಿ.ಡಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕುವೆಂಪು ವಿವಿಯ ಕುಲಪತಿ ಪ್ರೊ. ಶರತ್ ಆನಂತಮೂರ್ತಿ,ಐಕ್ಯೂಎಸಿ ಸಂಯೋಜಕರಾದ ಡಾ.ಕೆ.ವಿ.ಅನುಸೂಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಿಇಓ ಡಾ.ಆನಂದ.ಆರ್.,ಸ0ಘಟನಾ ಕಾರ್ಯದರ್ಶಿ ಡಾ.ಫಾತಿಮ ಥು ಜಹಾರ್ ಜಬೀನ್, ವಿಚಾರ ಸಂಕಿರಣದ ಸಂಯೋಜಕರಾದ ಡಾ.ಯೋಗೀಶ್.ಎನ್., ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಬಿ.ಆರ್.ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)