ಚಿಕ್ಕನಾಯಕನಹಳ್ಳಿ: ಕೆರೆಗಳಲ್ಲಿ ತಮ್ಮ ಹೊಲ ತೋಟಗಳಿಗೆ ಮಣ್ಣು ಹೊಡೆದುಕೊಳ್ಳು ರೈತರು, ಗ್ರಾಮಸ್ಥರು, ಜೆಸಿಬಿ, ಟ್ರಾಕ್ಟರ್ ಮಾಲೀಕರುಗಳು ಸೇರಿ ಕೆರೆ ಅಭಿವೃದ್ದಿ ಸಮಿತಿ ಮಾಡಿಕೊಳ್ಳುವ ಮೂಲಕ ರೈತರು ಕಾನೂನು ರೀತಿಯಲ್ಲಿ ವೈಜ್ಞಾನಿಕವಾಗಿ ಎಷ್ಟು ಮಣ್ಣನ್ನು ತೆಗೆಯಬೇಕು ಎಂಬುದನ್ನು ಆ ಸಮಿತಿಯೊಂದಿಗೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ತೀರ್ಮಾನ ಮಾಡಿ ಕಾನೂನು ರೀತಿಯಲ್ಲಿ ಕೆರೆಯ ಮಣ್ಣನ್ನು ಹೊಡೆದುಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲ್ಲೂಕಿನ ಕೆರೆಗಳಲ್ಲಿ ಮಣ್ಣು ಮತ್ತು ಮರಳು ತೆಗೆಯುತ್ತಿರುವ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿರುವ ೩೮ ಕೆರೆಗಳಿಗೂ ಆಯಾ ಕೆರೆಗಳ ಗ್ರಾಮದ ಹಾಗೂ ಸುತ್ತಮುತ್ತಲ ರೈತರ ಮುಖಂಡರನ್ನೊಳಗೊ0ಡ ಕೆರೆ ಅಭಿವೃದ್ದಿ ಸಮಿತಿಯನ್ನು ಮಾಡಿಕೊಂಡು ರೈತರ ಹೊಲ ತೋಟಗಳಿಗೆ ಅಗತ್ಯವಿರುವಂತಹ ಮಣ್ಣನ್ನು ಹೊಡೆದುಕೊಳ್ಳಲು ನಿಮ್ಮಲ್ಲೇ ತೀರ್ಮಾನ ಮಾಡಿಕೊಳ್ಳಿ, ಕಾನೂನು ರೀತಿಯ ಮಾನದಂಡಗಳನ್ನು ಇಟ್ಟು ಕೊಂಡು ಮಣ್ಣನ್ನು ತೆಗೆಯಿರಿ ಇದಕ್ಕೆ ಸಂಬ0ಧ ಪಟ್ಟಂತೆ ರೈತರಿಗೆ ಅನುಕೂಲ ಮಾಡಿಕೊಡಿ ಎಂದ ಅವರು ಪ್ರತಿ ಕೆರೆಯ ಸಮಿತಿಯನ್ನು ಸಂಬ0ದ ಪಟ್ಟ ಸಣ್ಣ ನೀರಾವರಿ ಇಲಾಖೆಯವರು ಮಾಡುವ ಮೂಲಕ ಈ ಮಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದರು.
ತಹಸೀಲ್ದಾರ್ ಮಮತಾ ಎಂ ಮಾತನಾಡಿ ಕೆರೆಯ ಮಣ್ಣನ್ನು ಹೊಲ ತೋಟಗಳಿಗೆ ಕಾನೂನು ರೀತಿಯಲ್ಲಿ ನೀವು ಸಂಬ0ಧ ಪಟ್ಟ ಇಲಾಖೆಯು ತಿಳಿಸಿದಂತೆ ಮಣ್ಣನ್ನು ತೆಗೆಯಲು ರೈತರಿಗೆ ಅವಕಾಶವಿದ್ದು ಅದು ಸಹ ನಿಮ್ಮ ಸಮಿತಿಯನ್ನು ಮಾಡಿ ತೀರ್ಮಾನ ಮಾಡಿ ಅದನ್ನು ಹೊರತು ಪಡಿಸಿ ಗೋಮಾಳ, ಖರಾಬು ಜಾಗದಲ್ಲಿ ಯಾವುದೇ ಕಾರಣಕ್ಕು ಮಣ್ಣನ್ನು ತೆಗೆಯಲು ಅವಕಾಶವಿಲ್ಲ ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಈಗಾಗಲೇ ಇಲಾಖೆಯವರು ತಿಳಿಸಿದಂತೆ ಕೇವಲ ಮೂರು ಅಡಿಗಳಷ್ಟು ಮಾತ್ರ ತೆಗೆಯಬೇಕು. ಅದರಿಂದ ಕೆಳಗೆ ತೆಗೆಯುವುದಾಗಲಿ ಅಥವ ಮರಳನ್ನು ತೆಗೆಯುವುದಾಗಲಿ ಮಾಡಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ರೇಷ್ಮಾಭಾನು ಮಾತನಾಡಿ ಮಣ್ಣಿನಲ್ಲಿ ೩ಎಎ ಇದ್ದು ಇದರಲ್ಲಿ ನೀವು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಮಣ್ಣನ್ನು ಹೊಡೆದುಕೊಳ್ಳಲು ಇಲಾಖೆಯ ಅನುಮತಿ ಪಡೆಯಬೇಕು ಹಾಗೂ ಸ್ಥಳೀಯ ಆಡಳಿತದ ಅನುಮತಿಯನ್ನು ಪಡೆಯಬೇಕು ಮಣ್ಣಿನ ಅಗತ್ಯತೆಗೆ ತಕ್ಕಂತೆ ರಾಯಧನವನ್ನು ಪಾವತಿಸಬೇಕಾಗುತ್ತದೆ ಅದರಲ್ಲೂ ವೈಜ್ಞಾನಿಕ ರೀತಿಯಲ್ಲಿ ಮೇಲ್ಪದರದ ಮಣ್ಣನ್ನು ಮಾತ್ರ ಸೂಕ್ತ ಆಳತೆಯಲ್ಲಿ ನೀಡಲಾಗುವುದು ಎಂದರು.
ವಕೀಲ ಶ್ರೀಧರ್ ಮಾತನಾಡಿ ಎಲ್ಲಾ ಭಾಗದ ಕೆರೆಗಳ ಮಣ್ಣು ಒಂದೇ ರೀತಿಯಲ್ಲಿರುವುದಿಲ್ಲ ಅದ್ದರಿಂದ ಆಯಾ ಕೆರೆಯಲ್ಲಿನ ಯಾವ ಮಣ್ಣು ರೈತರಿಗೆ ಅನುಕೂಲ ಎಷ್ಟು ತೆಗೆಯ ಬೇಕು ಎಂಬುದರ ಬಗ್ಗೆ ಸರಿಯಾದ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳು ತಿಳಿಸಬೇಕು. ಅದರಂತೆ ರೈತರು ಅಗತ್ಯಕ್ಕೆ ತಕ್ಕಂತೆ ತಮ್ಮ ಜಮೀನುಗಳಿಗೆ ಮಾತ್ರ ಮಣ್ಣನ್ನು ಹಾಕಿಕೊಳ್ಳಬೇಕು ಎಂದರು.
ತಿಮ್ಮನಹಳ್ಳಿಯ ಜೆಸಿಬಿ ಮಾಲೀಕ ಶ್ರೀಹರ್ಷ ಮಾತನಾಡಿ, ನಮ್ಮ ಜಮೀನಿನ ಮಣ್ಣನ್ನು ನಾವೇ ಬೇರೆ ಜಮೀನಿಗೆ ಹೊಡೆದುಕೊಳ್ಳಲು ಅನುಮತಿ ಬೇಕಾಗಿದೆ ಎಂದು ಪ್ರಶ್ನೆಮಾಡಿದರು.
ಇದಕ್ಕೆ ಉತ್ತರಿಸಿದ ಗಣಿ ಇಲಾಖೆಯ ಅಧಿಕಾರಿಗಳು ನಿಮ್ಮ ಭೂಮಿಯಲ್ಲಿನ ಮಣ್ಣನ್ನು ಅಲ್ಲೇ ತೆಗೆದು ನೀವೆ ಬಳಸಿಕೊಳ್ಳಬಹುದು ಅದರೆ ಬೇರೆ ಕಡೆ ಸಾಗಿಸಿದರೆ ಅದಕ್ಕೆ ಇಲಾಖೆಗೆ ಹಣ ಸಂದಾಯ ಮಾಡಬೇಕು ಅನುಮತಿ ಪಡೆಯಬೇಕು ಎಂದರು.
ಜೆಸಿಬಿ ಮಾಲೀಕ ರಮೇಶ್ ಮಾತನಾಡಿ ತಾಲ್ಲೂಕಿನಲ್ಲಿ ಸುಮಾರು ೧೫೦ ರಿಂದ ೨೦೦ ಜೆಸಿಬಿ ಮಾಲೀಕರು ಇದ್ದು ರೈತರು ತಮ್ಮ ಕೆಲಸಗಳಿಗೆ ಮಣ್ಣನ್ನು ಹೊಡೆಸಿಕೊಳ್ಳುತ್ತಾರೆ ಇದರಲ್ಲಿ ನಾವು ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಮಣ್ಣನ್ನು ತೆಗೆಯುವುದಿಲ್ಲ ಅದ್ದರಿಂದ ನಮ್ಮ ಮೇಲೆ ಅನಗತ್ಯ ಪ್ರಕರಣಗಳನ್ನು ಹಾಕದೇ ಸ್ಥಳದಲ್ಲಿನ ವಾಸ್ತವತೆಯನ್ನು ತಿಳಿದು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜೆಸಿಬಿ, ಟ್ರಾಕ್ಟರ್ ಗಳಿಗೆ ವಿಮೆ, ಪರವಾನಗಿ, ಚಾಲಕರ ಪರವಾನಗಿ ಸಂಬAದ ಪಟ್ಟ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಪೊಲೀಸ್ ಸಬ್ ಇನ್ಸೆಪೆಕ್ಟರ್ ಹೇಮಂತ್ ತಿಳಿಸಿದರೆ ಕೃಷಿಗೆ, ತೋಟಗಳಿಗೆ ಯಾವ ರೀತಿಯಲ್ಲಿ ಎಷ್ಟು ಮಣ್ಣನ್ನು ನೀಡಬೇಕು. ಎಂತಹ ಮಣ್ಣನ್ನು ನೀಡಬೇಕು ಎಂಬುದನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜಕುಮಾರ್, ತೋಟಗಾರಿಕೆ ಇಲಾಖೆಯ ಅಧಿಕಾರಿ ರಾಜಪ್ಪ ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಚಿತ್ತಪ್ಪ, ರೈತ ಮುಖಂಡರುಗಳಾದ ರಾಮಚಂದ್ರಯ್ಯ, ರಮೇಶ್, ಮಧು, ಷಡಾಕ್ಷರಿ, ನಾಗೇಶ ಸೇರಿದಂತೆ ಮತ್ತಿತರರು ಇದ್ದರು.

(Visited 1 times, 1 visits today)