ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಗ್ರಾಮದ ಶ್ರೀ ಬೇಡರ ಕಣ್ಣಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಅರತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಹೆಣ್ಣು ಮಕ್ಕಳು ಸಾಂಪ್ರಾದಾಯಿಕ ಉಡುಗೆತೊಟ್ಟು ಮೆರವಣಿಗೆಯೊಂದಿಗೆ ಸಾಗಿ ಬೇಡರ ಕಣ್ಣಪ್ಪನಿಗೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀಬೇಡರ ಕಣ್ಣಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಓಬಳಯ್ಯ ಮಾತನಾಡಿ, ಮಹಾಶಿವಾರಾತ್ರಿ ಹಬ್ಬದ ಅಂಗವಾಗಿ ಪ್ರತಿವರ್ಷ ಸಮುದಾಯದ ಹೆಣ್ಣುಮಕ್ಕಳಿಂದ ಆರತಿ ಸೇವೆ ಕಾರ್ಯಕ್ರಮ ನಡೆಯುತ್ತದೆ, ಬೇಡರ ಕಣ್ಣಪ್ಪ ಸ್ವಾಮಿ ಸಮುದಾಯ ಭವನ ಕೆಲಸ ಪೂರ್ಣಗೊಂಡಿದ್ದು, ಭೋಜನ ಕೊಠಡಿಗಳು ಆಗಬೇಕಿದ್ದು, ಗೃಹ ಸಚಿವರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ತಾ.ಪ0 ಮಾಜಿ ಉಪಾಧ್ಯಕ್ಷೆ ಕವಿತಮ್ಮ ನರಸಪ್ಪ ಮಾತನಾಡಿ, ಸುಮಾರು ೩೦ ವರ್ಷಗಳಿಂದ ಮಹಾಶಿವಾರಾತ್ರಿ ಹಬ್ಬದಂದು ಉಪವಾಸ ಮುಗಿಸಿ ಮಾರನೇ ದಿನ ಸಮುದಾಯದ ಹೆಣ್ಣುಮಕ್ಕಳಿಂದ ಆರತಿ ಸೇವೆ ಕಾರ್ಯಕ್ರಮ ನಡೆಯಲಿದೆ, ಕಾರ್ತೀಕ ಮಾಸದಲ್ಲಿಯೂ ಈ ಸೇವೆ ನಡೆಯಲಿದೆ. ಭಕ್ತರಿಗೆ ಅವಶ್ಯಕತೆಯಿರುವ ದಾಸೋಹ ಭವನ ನಿರ್ಮಾಣಕ್ಕೆ ಗೃಹಸಚಿವರು ವಿಶೇಷ ಆಸಕ್ತಿ ತೋರಿದ್ದಾರೆ ಎಂದರು.
ಈ ವೇಳೆ ಕಾರ್ಯದರ್ಶಿ ನರಸಿಂಹಮೂರ್ತಿ ದೊಡ್ಡಮನೆ, ಮಾದಯ್ಯ, ಶಿವರಾಜು, ರಂಗಯ್ಯ, ಜಯರಾಜ್, ಚಂದ್ರಪ್ಪ, ಮುದ್ದಯ್ಯ, ಮುದ್ದರಂಗಯ್ಯ, ರಂಗಶಾಮಯ್ಯ, ತಿಮ್ಮಯ್ಯ, ರಾಜಣ್ಣ, ನಾಗರಾಜು, ಗಂಗಾಧರಪ್ಪ, ಸಿದ್ಧರಾಜು, ಪ್ರವೀಣ್, ಕಿಶೋರ್, ವಿನೋದ,ರವಿಕುಮಾರ್, ರಾಮಾಂಜಿನಯ್ಯ, ವೆಂಕಟರಾಜು, ಮಂಜುನಾಥ್ ಹಾಜರಿದ್ದರು.

(Visited 1 times, 1 visits today)