ತುಮಕೂರು: ಉರ್ದು ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಗೆ ಉಳಿಯುತ್ತಿದ್ದು, ಆ ಮಕ್ಕಳನ್ನು ಶಾಲೆಗೆ ಮರಳಿ ಕರೆತರುವುದು ಆಯಾಯ ಶಾಲೆಗಳ ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ ಎಂದು ಡಿಡಿಪಿಐ ರಘುಚಂದ್ರ ತಿಳಿಸಿದ್ದಾರೆ.

ನಗರದ ಧ್ಹಾನಾ ಪ್ಯಾಲೇಸ್‌ನಲ್ಲಿ ತಹರೀಕ್ ಉರ್ದು- ಅದಬ್,ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಕರು ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಶಾಲೆಯ ಶಿಕ್ಷಕರು ಒಂದು ಮಾದರಿ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡರೆ, ಮಕ್ಕಳು ತಾನಾಗಿಯೇ ಶಾಲೆಗಳಿಗೆ ಪ್ರವೇಶ ಪಡೆಯುತ್ತಾರೆ.ಇಂದಿನ ಅಗತ್ಯಕ್ಕೆ ಅನುಗುಣವಾಗಿ, ಜ್ಞಾನದ ಜೊತೆಗೆ,ಮಾನವೀಯ ಗುಣಗಳನ್ನು ಕಲಿಸುವತ್ತ ಶಿಕ್ಷಕರು ಮುಂದಾಗಬೇಕೆ0ದರು.
ಉರ್ದು ಒಂದು ಸುಂದರ ಭಾಷೆ, ಭಾರತದಲ್ಲಿಯೇ ಹುಟ್ಟಿ, ವಿದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.ಉರ್ದು ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉರ್ದು ಸಾಹಿತ್ಯವನ್ನು ಓದುವಂತೆ ಶಾಲೆಯ ಶಿಕ್ಷಕರುಗಳು ಪ್ರೇರೆಪಿಸಬೇಕಾಗಿದೆ. ಆ ಮೂಲಕ ಮಕ್ಕಳು ಮೊಬೈಲ್ ಬಿಟ್ಟು,ಪುಸ್ತಕ ಓದುವ ಸಂಸ್ಕೃತಿಯನ್ನು ಪ್ರೋತ್ಸಾಹಿಸಬಹುದಾಗಿದೆ.ಉರ್ದುವಿನಲ್ಲಿ ಹೇರಳವಾದ ಸಾಹಿತ್ಯ ಬಂಡಾರವಿದೆ.ಅದನ್ನು ಶಿಕ್ಷಕರು ಮಕ್ಕಳಿಗೆ ಪರಿಚಯಿಸಿದರೆ, ಅವರ ಭವಿಷ್ಯ ಉಜ್ವಲವಾಗುವುದರ ಜೊತೆಗೆ,ಮಾನವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಡಿಡಿಪಿಐ ರಘುಚಂದ್ರ ತಿಳಿಸಿದರು.
ಉರ್ದು ಶಾಲೆಗಳು ಪ್ರಮುಖವಾಗಿ ಶಿಕ್ಷಕರ ಕೊರತೆ ಎದುರಿಸುತ್ತಿದೆ.ಬಹುತೇಕ ಅತಿಥಿ ಉಪನ್ಯಾಸಕರಿಂದ ಶಾಲೆಗ ಳಲ್ಲಿ ಪಾಠ ಪ್ರವಚನ ನಡೆಯುತ್ತಿವೆ.ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ಸ್ವಲ್ಪ ಒತ್ತಡ ಹಾಕಿದರೂ ಕೆಲಸಕ್ಕೆ ಬರುವುದಿಲ್ಲ.ಹಾಗಾಗಿ ಸಮುದಾಯದ ಮುಖಂಡರು ಹಾಗೂ ಜನಪ್ರತಿ ನಿಧಿಗಳು ಸರಕಾರದ ಮೇಲೆ ಒತ್ತಡ ತಂದು ಖಾಯಂ ಉಪನ್ಯಾಸಕರ ನೇಮಕಕ್ಕೆ ಮುಂದಾಗಬೇಕೆ0ದು ಡಿಡಿಪಿಐ ರಘುಚಂದ್ರ ಮನವಿ ಮಾಡಿದರು.
ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಕ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಸೈಯದ್ ಮುಮ್ತಾಜ್ ಮನ್ಸೂರಿ, ಬದಲಾವಣೆ ಎಂಬುದು ಒಂದು ನಿರಂತರ ಪ್ರಕ್ರಿಯೆ.ಕೊರತೆಗಳನ್ನು ನೆಪದಲ್ಲಿ ಬದಲಾವಣೆಗೆ ತಕ್ಕಂತೆ ನಾವು ತಯಾರಾಗದಿದ್ದರೆ ಭವಿಷ್ಯದ ಪೀಳಿಗೆಗೆ ಅದೋಗತಿಗೆ ಹೋಗಲಿದೆ. ಹಾಗಾಗಿ ಶಿಕ್ಷಕರು ಇರುವ ಸೌಕರ್ಯಗಳನ್ನು ಬಳಸಿಕೊಂಡೇ ಇಂದಿನ ಅಗತ್ಯಕ್ಕೆ ಅನುಗುಣವಾಗಿ ಜೆನ್.ಜಿ ಮತ್ತು ಅಲ್ಫಾ ಜೆನ್ ಯುಗದ ಮಕ್ಕಳಿಗೆ ಭೋಧನೆ ಮಾಡಬೇ ಕಾಗಿದೆ.ಪ್ರತಿಯೊಂದಕ್ಕೂ ಗ್ಯಾಡ್‌ಜೆಟ್ ಮೊರೆ ಹೋಗುವ ಮಕ್ಕಳನ್ನು ಪುಸ್ತಕದ ಕಡೆಗೆ ಎಳೆ ತರುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ.ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ ಸಮಾಜದಿಂದ ಕಲಿಯುವಂತಹದ್ದು ಬಹಳಷ್ಟಿದೆ.ಹಾಗಾಗಿ ಶಿಕ್ಷಕರು ಬೋಧ ನೆಗಷ್ಟೇ ಸಿಮೀತರಾಗದೆ, ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಪರಿ ಹೇಗೆ ಎಂಬುದನ್ನು ತಿಳಿಸಿಕೊ ಡಬೇಕಿದೆ.ಮಕ್ಕಳೊಂದಿಗೆ ನಿರಂತರವಾಗಿ ಸಂಮೋ ಹನ ನಡೆಸುವ ಮೂಲಕ, ಹೊಸ ಹೊಸ ಮಾದರಿಗಳನ್ನು ಅವರ ಮುಂದಿಟ್ಟು,ಸಮುದಾಯದ ಮಕ್ಕಳು ಇಂದಿನ ಸ್ಪರ್ಧಾತಕ ಯುಗದಲ್ಲಿ ಬದುಕುವುದಲ್ಲದೆ,ಶಿಕ್ಷಕರು ಬದುಕಬ ಹುದು ಎಂದರು.
ತಹರೀಕ್ ಉರ್ದು ಅದಬ್ ಜಿಲ್ಲೆಯ ಉರ್ದು ಶಾಲೆಗಳಲ್ಲಿರುವ ಇರುವ ಕುಂದು,ಕೊರತೆಗಳ ಕುರಿತು ಸಮೀಕ್ಷೆ ನಡೆಸಿ, ಸರಕಾರದ ಮುಂದಿಟ್ಟಿರುವ ಬೇಡಿಕೆಗಳ ಕುರಿತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮೆಹಬೂಬ್ ಪಾಷ ವರದಿ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಡಾ.ಎಸ್.ಷಪಿ ಅಹಮದ್ ವಹಿಸಿದ್ದರು.ವೇದಿಕೆಯಲ್ಲಿ ತಹರೀಕ್ ಉರ್ದು-ಅದಬ್ ನ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ಉದ್ಯಮಿ ತಾಜುದ್ದೀನ್ ಷರೀಫ್, ಕವಿ ಹಾಗೂ ತಹರೀಕ್ ಉರ್ದು ಅದಬ್‌ನ ಮಾಜಿ ಅಧ್ಯಕ್ಷರಾದ ಮುನಾವರ್ ಮುಬೀನ, ಉಬೇದ್‌ವುಲ್ಲಾ ಷರೀಫ್, ಕೆಎಂಡಿಸಿ ವ್ಯವಸ್ಥಾಪಕರಾದ ಆಲಿಂವುಲ್ಲಾ, ಖಜಾನಾಧಿಕಾರಿ ಜಕ್ರಿ ಯಾವುಲ್ಲಾ,ವಿಷಯ ಪರಿವೀಕ್ಷಕರಾದ ಮಂಜುನಾಥ್ ಆ ಚಾರ್ಯ, ಮುಜಮಿಲ್ ಪಾಷ, ಮುಖ್ಯೋಪಾಧ್ಯಾಯರಾದ ಫೈರೋಜ್ ಪಾಷ ಮತ್ತಿತರರು ವೇದಿಕೆಯಲ್ಲಿದ್ದರು.
ಕಾರ್ಯಾಗಾರದಲ್ಲಿ ಮೌಲನಾ ಶಾಲೆಯ ಶಿಕ್ಷಕರುಗಳು ಪಾಲ್ಗೊಂಡಿದ್ದರು.

(Visited 1 times, 1 visits today)