BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ
  • ಜಾತಿ ಪತ್ರಕ್ಕಾಗಿ ಕಛೇರಿಗೆ ಅಲೆಯುವುದು ತಪ್ಪದು
  • ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ
  • ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ
  • ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ
  • ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ
  • ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ
  • ಲಂಚ ಸ್ವೀಕಾರ ಪ್ರಕರಣ: ಗ್ರಾಮ ಸಹಾಯಕ ವಜಾ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜಾತಿ ಪತ್ರಕ್ಕಾಗಿ ಕಛೇರಿಗೆ ಅಲೆಯುವುದು ತಪ್ಪದು
news

ಜಾತಿ ಪತ್ರಕ್ಕಾಗಿ ಕಛೇರಿಗೆ ಅಲೆಯುವುದು ತಪ್ಪದು

ಮನೆಬಾಗಿಲಿಗೆ ಬಂತು ಹಳೆಯ ಜಾತಿ ಪತ್ರ: ಸರ್ಕಾರದ ಗಿಮಿಕ್‌ಗೆ ಸಾರ್ವಜನಿಕರು ಕಂಗಾಲು!
By News Desk BenkiyabaleUpdated:August 25, 2026 3:47 pm
ಹುಳಿಯಾರು: ಸರ್ಕಾರವು ಸಾರ್ವಜನಿಕರ ಅನುಕೂಲಕ್ಕಾಗಿ, ಯಾವುದೇ ಅಲೆದಾಟವಿಲ್ಲದೆ ಮನೆಬಾಗಿಲಿಗೇ ಉಚಿತವಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ವಿತರಿಸಲು ಮುಂದಾಗಿರುವುದು ಮೊದಲ ನೋಟಕ್ಕೆ ಅತ್ಯಂತ ಪ್ರಶಂಸನೀಯ ಹಾಗೂ ಸ್ವಾಗತಾರ್ಹ ಯೋಜನೆಯಂತೆ ಕಾಣುತ್ತದೆ. ಕಂದಾಯ ಕಚೇರಿಗಳು, ತಾಲೂಕು ಕೇಂದ್ರಗಳು ಮತ್ತು ನೆಮ್ಮದಿ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಸರತಿಯಲ್ಲಿ ನಿಂತು, ಸರ್ವರ್ ಸಮಸ್ಯೆಯಿಂದ ದಿನಗಟ್ಟಲೆ ಅಲೆದಾಡುತ್ತಿದ್ದ ಗ್ರಾಮೀಣ ಭಾಗದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇದು ದೊಡ್ಡ ರಿಲೀಫ್ ನೀಡಬೇಕಿತ್ತು. ಆದರೆ, ಪ್ರಸ್ತುತ ಜಾರಿಯಲ್ಲಿರುವ ಈ ವಿತರಣಾ ವೈಖರಿ ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ಬದಲು, ಬರೀ ಸರ್ಕಾರದ ಪ್ರಚಾರದ ಸರಕಾಗಿ ಬದಲಾಗಿದೆಯೇ ಎಂಬ ಬಲವಾದ ಅನುಮಾನ ಮೂಡಿಸುತ್ತಿದೆ.
ಹಳೆಯ ದಾಖಲೆಯೇ ಮರುಮುದ್ರಣ: ಸಾರ್ವಜನಿಕರಿಗೆ ಸಿಗದ ಸೌಲಭ್ಯ: ಇತ್ತೀಚೆಗೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಹಂಚಿಕೆಗೆ ಸಂಬAಧಿಸಿದAತೆ ಮಹತ್ವದ ಆದೇಶ ಹಾಗೂ ಸುತ್ತೋಲೆಯನ್ನು ಹೊರಡಿಸಿದೆ. ಇದರನ್ವಯ, ಈ ಹಿಂದೆ ’ಆದಿ ಕರ್ನಾಟಕ’, ’ಆದಿ ದ್ರಾವಿಡ’ ಅಥವಾ ’ಆದಿ ಆಂಧ್ರ’ ಎಂದು ಜಾತಿ ಪ್ರಮಾಣಪತ್ರ ಪಡೆದಿದ್ದವರು, ತಮ್ಮ ಮೂಲ ಜಾತಿಯನ್ನು (ಉದಾಹರಣೆಗೆ: ಹೊಲೆಯ/ಮಾದಿಗ ಇತ್ಯಾದಿ) ನಮೂದಿಸಿ ಪ್ರವರ್ಗ ’ಎ’ ಅಥವಾ ಪ್ರವರ್ಗ ’ಬಿ’ ಅಡಿ ಹೊಸ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಿವಿಧ ಸರ್ಕಾರಿ ಸೌಲಭ್ಯಗಳು, ಶೈಕ್ಷಣಿಕ ಪ್ರವೇಶಾತಿ ಹಾಗೂ ಮುಂಬರುವ ಎಸ್‌ಐಆರ್ ಸೇರಿದಂತೆ ವಿವಿಧ ಯೋಜನಾ ಅರ್ಹತೆಗಳಿಗೆ ಈ ನವೀಕೃತ ದಾಖಲೆ ಅತ್ಯಗತ್ಯವಾಗಿದೆ. ಆದರೆ, ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಬಾಗಿಲಿಗೆ ತಲುಪಿಸುತ್ತಿರುವ ಜಾತಿ ಪ್ರಮಾಣಪತ್ರಗಳು ಈ ಹೊಸ ಆದೇಶಕ್ಕೆ ಅನುಗುಣವಾಗಿಲ್ಲ! ಬದಲಾಗಿ, ಅನೇಕ ವರ್ಷಗಳ ಹಿಂದೆ ಮಾಡಿಸಿದ್ದ ಹಳೆಯ ಜಾತಿ ಪ್ರಮಾಣಪತ್ರಗಳನ್ನೇ ಯಥಾವತ್ತಾಗಿ ಪುನಃ ಮುದ್ರಿಸಿ ನೀಡಲಾಗುತ್ತಿದೆ.
ಉಪಯೋಗಕ್ಕೆ ಬಾರದ ದಾಖಲೆಯಿಂದ ಅರ್ಹರಿಗೆ ನಿರಾಶೆ: ಯಾವ ಪ್ರಮಾಣಪತ್ರದಿಂದ ಮೀಸಲಾತಿಯ ನೈಜ ಪ್ರಯೋಜನ ಸಿಗಬೇಕಿತ್ತೋ, ಆ ಹೊಸ ಮಾಹಿತಿಯೇ ಇಲ್ಲದ ಹಳೆಯ ಪತ್ರಗಳನ್ನು ಕೈಗಿಟ್ಟರೆ ಜನಸಾಮಾನ್ಯರಿಗೆ ಅದರಿಂದಾಗುವ ಲಾಭವಾದರೂ ಏನು? ಮನೆಬಾಗಿಲಿಗೆ ಬಂದ ದಾಖಲೆ ಉಪಯೋಗಕ್ಕೆ ಬಾರದೆ ಹೋದಾಗ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹೊಸ ನಿಯಮದಂತೆ ಪ್ರಮಾಣಪತ್ರ ಪಡೆಯಲು ಮತ್ತೆ ತಾಲೂಕು ಕಚೇರಿಗಳಿಗೆ ಅಲೆದಾಡುವುದು ಅನಿವಾರ್ಯವಾಗಿದೆ. ಸರ್ಕಾರದ ನೂತನ ಆದೇಶದ ಲಾಭ ಪಡೆಯಲು ಮೂಲ ಜಾತಿಯ ಸ್ಪಷ್ಟ ನಮೂದು ಅಗತ್ಯವಿದ್ದು, ಹಳೆಯ ಮರುಮುದ್ರಿತ ಪತ್ರಗಳು ಒಳಮೀಸಲಾತಿಯ ಅನುಕೂಲ ಸೇರಿದಂತೆ ಶೈಕ್ಷಣಿಕ ಸೀಟು ಅಥವಾ ಸ್ಕಾಲರ್‌ಶಿಪ್ ಹಂತದಲ್ಲಿ ತಿರಸ್ಕöÈತಗೊಳ್ಳುವ ಭೀತಿ ಎದುರಾಗಿದೆ.
ಪ್ರಚಾರಕ್ಕಾಗಿ ಯೋಜನೆಯೋ ಅಥವಾ ಸಾರ್ವಜನಿಕರ ಹಿತಕ್ಕಾಗಿ ಅಭಿಯಾನವೋ?: ಸರ್ಕಾರ ನಿಜವಾಗಿಯೂ ಜನರ ಹಿತ ಬಯಸಿದ್ದರೆ, ನೂತನ ಒಳ ಮೀಸಲಾತಿ ಆದೇಶ ಹಾಗೂ ಕರಡು ನಿಯಮಗಳಿಗೆ ಪೂರಕವಾದ ಹೊಸ ವಿವರಗಳನ್ನು ಸಂಗ್ರಹಿಸಿ, ನವೀಕೃತ ಪ್ರಮಾಣಪತ್ರಗಳನ್ನು ಉಚಿತವಾಗಿ ನೀಡಬೇಕಿತ್ತು. ಅದನ್ನು ಬಿಟ್ಟು, ಯಾವುದೇ ಶೈಕ್ಷಣಿಕ ಅಥವಾ ಆಡಳಿತಾತ್ಮಕ ಪ್ರಯೋಜನಕ್ಕೆ ಬಾರದ ಹಳೆಯ ದಾಖಲೆಗಳನ್ನು ಮುದ್ರಿಸಿ ವಿತರಿಸುತ್ತಿರುವುದು ಬರೀ ’ದಾಖಲೆಯ ಮಟ್ಟದ ಪ್ರಚಾರ’ಕ್ಕೆ ಸೀಮಿತವಾಗಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಯೋಜನೆಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸಿ ಹಳೆಯ ದಾಖಲೆಗಳನ್ನು ಮುದ್ರಿಸಿ ಹಂಚುವ ಬದಲು, ಹೊಸ ಆದೇಶಕ್ಕನುಗುಣವಾಗಿ ಪ್ರತಿಯೊಂದು ಕುಟುಂಬಕ್ಕೂ ಉಪಯುಕ್ತವಾಗುವ ಜಾತಿ ಪ್ರಮಾಣಪತ್ರ ವಿತರಿಸಿದರೆ ಮಾತ್ರ ಈ ಅಭಿಯಾನಕ್ಕೊಂದು ಅರ್ಥ ಸಿಗುತ್ತದೆ. ಸರ್ಕಾರ ತಕ್ಷಣವೇ ಈ ಪ್ರಮಾದವನ್ನು ಸರಿಪಡಿಸಿ, ಪ್ರಚಾರದ ಮೊರೆ ಹೋಗುವುದನ್ನು ಬಿಟ್ಟು ಸಾರ್ವಜನಿಕರಿಗೆ ನಿಜವಾದ ನೆರವು ನೀಡಲು ಕ್ರಮ ಕೈಗೊಳ್ಳಬೇಕಿದೆ.
(Visited 1 times, 1 visits today)
Chikkanayakanahalli kannada news karnataka local news tumakur tumkur tumkur news ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಹುಳಿಯಾರು
Previous Articleಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ
Next Article ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ
News Desk Benkiyabale

Related Posts

ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ

August 25, 2026 3:49 pm news

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm news

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm news
ತಾಜಾ ಸುದ್ಧಿಗಳು
news

ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ

August 25, 2026 3:49 pm
news

ಜಾತಿ ಪತ್ರಕ್ಕಾಗಿ ಕಛೇರಿಗೆ ಅಲೆಯುವುದು ತಪ್ಪದು

August 25, 2026 3:47 pm
news

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm
news

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm
news

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm
news

ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಾ ಜನತೆ

August 24, 2026 5:45 pm
Our Youtube Channel
Our Picks

ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ

August 25, 2026 3:49 pm

ಜಾತಿ ಪತ್ರಕ್ಕಾಗಿ ಕಛೇರಿಗೆ ಅಲೆಯುವುದು ತಪ್ಪದು

August 25, 2026 3:47 pm

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜೀವನ ಶೈಲಿಯಾಗಲಿ

August 24, 2026 5:46 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ರಂಗಸೊಗಡು ಕಲಾ ಟ್ರಸ್ಟ್ನಿಂದ ಶ್ರಾವಣ ಸಿರಿ ಸಂಭ್ರಮ: ಕಾರ್ಯಕ್ರಮ

By News Desk BenkiyabaleAugust 25, 2026 3:49 pm

ತುಮಕೂರು ರಂಗಸೊಗಡು ಕಲಾ ಟ್ರಸ್ಟ್(ರಿ),ಸ್ವಾಂದೇನಹಳ್ಳಿ ತುಮಕೂರು ಇವರು, ೮೦ನೇ ಸ್ವಾತಂತ್ರ ದಿನದ ಸವಿನೆನಪಿಗಾಗಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಬೆಂಗಳೂರು…

ಜಾತಿ ಪತ್ರಕ್ಕಾಗಿ ಕಛೇರಿಗೆ ಅಲೆಯುವುದು ತಪ್ಪದು

August 25, 2026 3:47 pm

ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ-ಶಿಸ್ತು ಅಗತ್ಯ

August 24, 2026 5:49 pm

ಪಾವಗಡ ಕ್ಷೇತ್ರದಲ್ಲಿ ೧೧ ಹೊಸ ಮತಗಟ್ಟೆ

August 24, 2026 5:47 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.