BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಧ್ಯಯನದಿಂದ ಯಶಸ್ಸು ಸಾಧ್ಯ
  • ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು
  • ತಾಲೂಕು ಕರ‍್ಯನಿರತ ಪತ್ರರ‍್ತರ ಸಂಘದ ಅಧ್ಯಕ್ಷರಾಗಿ ವಿ.ಕೆ ಮರ‍್ತಿ ಆಯ್ಕೆ
  • 41 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಯತ್ನ
  • ವಿದ್ಯಾರ್ಥಿಗಳೇ ತಮ್ಮ ಅರಿವನ್ನ ಎಚ್ಚರಗೊಳಿಸಿ
  • ೨೨ ಮಹಾರ್ ವೀರ ಸೈನಿಕರ ಹೆಸರುಗಳನ್ನು ಸರ್ಕಾರಿ ಅಜ್ಞೆಯಂತೆ ವಿಜಯ ಸ್ತಂಭವನ್ನು ಸ್ಥಾಪಿಸಲಾಗಿದೆ
  • ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್
  • ಉತ್ತಮ ಆಡಳಿತ ವಾರ ಕಾರ್ಯಕ್ರಮ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಂತರ್ಜಲದ ಕತ್ತು ಹಿಸುಕಿದ ಮರಳು ಮಾಫಿಯಾ
Trending

ಅಂತರ್ಜಲದ ಕತ್ತು ಹಿಸುಕಿದ ಮರಳು ಮಾಫಿಯಾ

By News Desk BenkiyabaleUpdated:April 22, 2019 7:04 pm

ಚಿಕ್ಕನಾಯಕನಹಳ್ಳಿ:

     ತಾಲ್ಲೂಕಿನ ಭೂ ಸ್ವರೂಪ ಅರೆ ಮಲೆನಾಡು ಹಾಗೂ ಬಯಲುಸೀಮೆಯನ್ನು ಕೂಡಿಸುವ ಕೊಂಡಿಯಂತಿದೆ. ಕೃಷ್ಣ ಹಾಗೂ ಕಾವೇರಿ ಕೊಳ್ಳಗಳ ನಡುವೆ ವಿಭಾಗಿಸಿದೆ.

      ಆದ್ದರಿಂದ ತಾಲ್ಲೂಕಿನ ರೈತರು ತೆಂಗಿಗೂ ಸೈ ಹಾಗೂ ಸಿರಿಧಾನ್ಯಕ್ಕೂ ಜೈ ಎನ್ನುತ್ತಾರೆ. ಆದರೆ ಕಳೆದ ಎರಡು ದಶಕಗಳಿಂದ ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿರುವ ಕಬ್ಬಿಣದ ಅದಿರು ಗಣಿಗಾರಿಕೆ, ಅಕ್ರಮ ಮರಳು ಮಾಫಿಯಾ ಹಾಗೂ ಅಕ್ರಮ ಇಟ್ಟಿಗೆ ಕಾರ್ಖಾನೆಗಳು ತಾಲ್ಲೂಕಿನ ಭೂ ಸ್ವರೂಪ ಹಾಳುಗೆಡವಿವೆ. ರೈತರ ಬದುಕನ್ನು ಮೂರಾಬಟ್ಟೆ ಮಾಡಿವೆ.

      ತಾಲ್ಲೂಕಿನ ಉದ್ದಕ್ಕೂ ಚಾಚಿಕೊಂಡಿದ್ದ ಅಬ್ಬಿಗೆ, ಮದನಿಂಗನಕಣಿವೆ ಹಾಗೂ ಕುದುರೆ ಕಣಿವೆಯ ಬೆಟ್ಟಸಾಲುಗಳು ಹಾಗೂ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆಯಿಂದ ಬೋರನಕಣಿವೆ ವರೆಗೆ ಚಾಚಿಕೊಂಡಿರುವ ಸುವರ್ಣಮುಖಿ ಹಳ್ಳ ತಾಲ್ಲೂಕಿನ ಭೂ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದವು. ಕಬ್ಬಿಣದ ಅದಿರು ಗಣಿಗಾರಿಕೆ ಹಾಗೂ ಅಕ್ರಮ ಮರಳು ಗಣಿಗಾರಿಕೆ ನೇರವಾಗಿ ಈ ಎರಡು ಪ್ರಾಕೃತಿಕ ವೈವಿಧ್ಯದ ಮೇಲೆ ಹೊಡೆತ ಕೊಟ್ಟಿದೆ. ಶತಮಾನಗಳಿಂದ ಮದನಿಂಗನ ಕಣಿವೆಯ ಬೆಟ್ಟಗಳು ಮಳೆಯ ಮಾರುತಗಳನ್ನು ತಾಲ್ಲೂಕಿಗೆ ಕರೆ ತರುತ್ತಿದ್ದವು. ಆದರೆ ಗಣಿಗಾರಿಕೆ ಪ್ರಾರಂಭವಾದ ಬಳಿಕ ತಾಲ್ಲೂಕಿನ ಹವಾಗುಣದಲ್ಲಿ ಏರುಪೇರು ಪ್ರಾರಂಭವಾಯಿತು.

      ಇದಕ್ಕೆ ಸಾಕ್ಷಿ ಎಂಬಂತೆ 90ರ ದಶಕದವರೆಗೂ ಸಿಂಗದಹಳ್ಳಿ ಹಾಗೂ ದೊಡ್ಡಎಣ್ಣೆಗೆರೆ ಗ್ರಾಮದ ಮಳೆ ಮಾಪನ ಕೇಂದ್ರಗಳು ಅತಿ ಹೆಚ್ಚು ಮಳೆ ದಾಖಲಿಸುತ್ತಿದ್ದವು. ಆದರೆ ಈಗ ಅತಿ ಕಡಿಮೆ ಮಳೆ ದಾಖಲಾಗುತ್ತಿರುವುದು ಈ ಎರಡು ಮಾಪನಗಳಲ್ಲಿ ಎಂಬುದು ಜಿಜ್ಞಾಸೆಗೆ ಗ್ರಾಸವಾಗಿರುವ ವಿಷಯ. ಈ ಸ್ಥಿತ್ಯಂತರಕ್ಕೆ ತಾಲ್ಲೂಕಿನಲ್ಲಿ ನಡೆದ ಗಣಿಗಾರಿಕೆಯೇ ಕಾರಣ ಎಂಬುದು ನಿಸ್ಸಂಶಯ.

      ಒಣಗುತ್ತಿರುವ ತೋಟಗಳನ್ನು ಉಳಿಸಿಕೊಳ್ಳಲು ಮೇಲಿಂದ ಮೇಲೆ ಕೊಳವೆ ಬಾವಿಗಳನ್ನು ಕೊರೆಸುತ್ತಿರುವ ರೈತರು ಸಾಲದ ಶೂಲಕ್ಕೆ ಕೊರಳು ಕೊಡುತ್ತಿದ್ದಾರೆ. ಭೂ ತಾಯಿಯ ನೀರ ಬಳ್ಳಿಗಳಾದ ಪುಟ್ಟ ನದಿ, ಹಳ್ಳ ಹಾಗೂ ಕೆರೆಗಳ ಒಡಲು ಬಗೆದು ಮರಳು ದೋಚಿದ್ದರಿಂದ ಈ ದುರ್ಗತಿ ತಾಲ್ಲೂಕಿಗೆ ಎದುರಾಗಿದೆ.

       ಸುವರ್ಣಮುಖಿ ನದಿ ಪಾತ್ರ ತಾಲ್ಲೂಕಿನಲ್ಲಿ ಹರಡಿಕೊಂಡಿದೆ. ಸುವರ್ಣಮುಖಿ ಪಾತ್ರದಲ್ಲಿ ಇರುವ ಸಾಲು ಕೆರೆಗಳು ಕೋಡಿ ಬಿದ್ದು ಬೋರನ ಕಣಿವೆ ಜಲಾಶಯ ಭರ್ತಿಯಾಗುತ್ತಿತ್ತು. ನದಿ ಪಾತ್ರದ ರೈತರು ಕೊಳವೆಬಾವಿ ತೆಗೆಸಿಯೇ ಗೊತ್ತಿರಲಿಲ್ಲ. ಹೆಚ್ಚೆಂದರೆ ಹಳ್ಳದ ದಡದಲ್ಲಿ 25 ಅಡಿ ಆಳದ ಮುದ್ದೆ ಬೋರು ಹಾಕಿಸುತ್ತಿದ್ದರು. ಅದರಿಂದ ಹತ್ತಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಪಡೆಯುತ್ತಿದ್ದರು. ಆದರೆ ನದಿ ಪಾತ್ರದ ಉದ್ದಕ್ಕೂ ಅಕ್ರಮ ಮರಳು ಗಣಿಗಾರಿಕೆ ಅಡೆ ತಡೆಯಿಲ್ಲದೆ ಸಾಗುತ್ತಿದ್ದು ನದಿಯ ಅಸ್ಮಿತೆಯೇ ಅಳಿಸಿಹೋಗಿದೆ. ನೂರಾರು ಮುದ್ದೆ ಬೋರುಗಳು ಕಣ್ಣು ಮುಚ್ಚಿವೆ.

      ಸುವರ್ಣಮುಖಿ ಹಳ್ಳದ ಸಾಲಿನ ಅಣೆಕಟ್ಟೆ, ಅಂಕಸಂದ್ರ ಹಳ್ಳ, ಬರಗೂರು ಹಳ್ಳ, ಗೂಬೆಹಳ್ಳಿ, ನಂದಿಹಳ್ಳಿ ಭಾಗದಲ್ಲಿ ಸುತ್ತಾಡಿದರೆ ಅಕ್ರಮ ಮರಳುಗಣಿಗಾರಿಕೆಯ ಕರಾಳ ಮುಖ ಕಣ್ಣಿಗೆ ರಾಚುತ್ತದೆ.

      ರೈತರು ಒಂದು ಹೆಜ್ಜೆ ಮುಂದೆ ಹೋಗಿ ಪಾತ್ರದ ನೂರಾರು ಎಕರೆ ತೆಂಗಿನ ತೋಟಗಳಲ್ಲಿ ಮರಳೆತ್ತಲು ದಂಧೆಕೋರರಿಗೆ ಅನುವು ಮಾಡಿಕೊಡುತ್ತಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಮರಳು ಮಾಫಿಯಾ ಕುಳಗಳು ಹಾಗೂ ಇಟ್ಟಿಗೆ ಕಾರ್ಖಾನೆಗಳ ಮಾಲೀಕರು ಬತ್ತಿರುವ ಕೆರೆ ಕಟ್ಟೆಗಳನ್ನೂ ಬಿಡದೆ ಆಪೆರೇಷನ್ ತೆಗೆದುಕೊಳ್ಳುತ್ತಿದ್ದಾರೆ.

      ಸಂಬಂಧಿಸಿದ ಇಲಾಖೆಗಳು, ಜಾಗೃತಿ ಸಮಿತಿಗಳು ಎಚ್ಚೆತ್ತು ಕೊಳ್ಳದಿದ್ದರೆ ಈ ಮರಳು ದಂಧೆಯಿಂದ ಆಗುವ ಅನಾಹುತವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಜಿಲ್ಲಾ ವಿಜ್ಞಾನ ಸಂಘದ ಕಾರ್ಯದರ್ಶಿ ಯಗಚಿಹಳ್ಳಿ ರಾಮಕೃಷ್ಣಪ್ಪ ಆತಂಕ ವ್ಯಕ್ತಪಡಿಸುತ್ತಾರೆ.

(Visited 44 times, 1 visits today)
Previous Articleಕೊರಟಗೆರೆ : ಬೈಕ್ ಡಿಕ್ಕಿ- ಪಾದಚಾರಿ ಸಾವು!
Next Article ಗಣಿಬಾಧಿತ ಪ್ರದೇಶಕ್ಕೆ ಸೌಲಭ್ಯ ಮರೀಚಿಕೆ
News Desk Benkiyabale

Related Posts

ಅಧ್ಯಯನದಿಂದ ಯಶಸ್ಸು ಸಾಧ್ಯ

January 05, 2026 3:41 pm ತುಮಕೂರು

ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು

January 05, 2026 3:38 pm ತುಮಕೂರು

ಡಿ. 12 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

December 12, 2025 3:48 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಅಧ್ಯಯನದಿಂದ ಯಶಸ್ಸು ಸಾಧ್ಯ

January 05, 2026 3:41 pm
ತುಮಕೂರು

ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು

January 05, 2026 3:38 pm
ಇತರೆ ಸುದ್ಧಿಗಳು

ತಾಲೂಕು ಕರ‍್ಯನಿರತ ಪತ್ರರ‍್ತರ ಸಂಘದ ಅಧ್ಯಕ್ಷರಾಗಿ ವಿ.ಕೆ ಮರ‍್ತಿ ಆಯ್ಕೆ

January 05, 2026 3:36 pm
ಇತರೆ ಸುದ್ಧಿಗಳು

41 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಯತ್ನ

January 02, 2026 3:50 pm
ಇತರೆ ಸುದ್ಧಿಗಳು

ವಿದ್ಯಾರ್ಥಿಗಳೇ ತಮ್ಮ ಅರಿವನ್ನ ಎಚ್ಚರಗೊಳಿಸಿ

January 02, 2026 3:20 pm
ಇತರೆ ಸುದ್ಧಿಗಳು

೨೨ ಮಹಾರ್ ವೀರ ಸೈನಿಕರ ಹೆಸರುಗಳನ್ನು ಸರ್ಕಾರಿ ಅಜ್ಞೆಯಂತೆ ವಿಜಯ ಸ್ತಂಭವನ್ನು ಸ್ಥಾಪಿಸಲಾಗಿದೆ

January 02, 2026 2:54 pm
Our Youtube Channel
Our Picks

ತಾಲೂಕು ಕರ‍್ಯನಿರತ ಪತ್ರರ‍್ತರ ಸಂಘದ ಅಧ್ಯಕ್ಷರಾಗಿ ವಿ.ಕೆ ಮರ‍್ತಿ ಆಯ್ಕೆ

January 05, 2026 3:36 pm

41 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಯತ್ನ

January 02, 2026 3:50 pm

ವಿದ್ಯಾರ್ಥಿಗಳೇ ತಮ್ಮ ಅರಿವನ್ನ ಎಚ್ಚರಗೊಳಿಸಿ

January 02, 2026 3:20 pm

೨೨ ಮಹಾರ್ ವೀರ ಸೈನಿಕರ ಹೆಸರುಗಳನ್ನು ಸರ್ಕಾರಿ ಅಜ್ಞೆಯಂತೆ ವಿಜಯ ಸ್ತಂಭವನ್ನು ಸ್ಥಾಪಿಸಲಾಗಿದೆ

January 02, 2026 2:54 pm

ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್

January 02, 2026 2:46 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಅಧ್ಯಯನದಿಂದ ಯಶಸ್ಸು ಸಾಧ್ಯ

By News Desk BenkiyabaleJanuary 05, 2026 3:41 pm

ತುರುವೇಕೆರೆ: ವಿದ್ಯಾರ್ಥಿಗಳು ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಸಿಪಿಐ ಲೋಹಿತ್ ಹೇಳಿದರು. ಪಟ್ಟಣದ ಜೆಪಿ…

ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು

January 05, 2026 3:38 pm

ತಾಲೂಕು ಕರ‍್ಯನಿರತ ಪತ್ರರ‍್ತರ ಸಂಘದ ಅಧ್ಯಕ್ಷರಾಗಿ ವಿ.ಕೆ ಮರ‍್ತಿ ಆಯ್ಕೆ

January 05, 2026 3:36 pm

41 ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಯತ್ನ

January 02, 2026 3:50 pm
News by Date
January 2026
M T W T F S S
 1234
567891011
12131415161718
19202122232425
262728293031  
« Dec    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.