BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಡಿಸೆಂಬರ್ ೫ರಂದು ಗುಬ್ಬಿಯಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ
  • ಸರ್ಕಾರದ ವಿರುದ್ಧ ಹೋರಾಟ
  • ವಿವಿಧೆಡೆ ಡೀಸಿ ದಿಢೀರ್ ಭೇಟಿ: ಪರಿಶೀಲನೆ
  • ಸೈನಿಕರಿಗೆ ಆರು ಎಕರೆ ಮೀಸಲು ಶಾಸಕ ಎಸ್. ಆರ್. ಶ್ರೀನಿವಾಸ್
  • ರೈತರಿಗೆ ಹೈನುಗಾರಿಕೆ ವರದಾನ: ಶಾಸಕ ಟಿ.ಬಿ.ಜಯಚಂದ್ರ ಹೇಳಿಕೆ
  • ಡಿ. ೦೬ ರಿಂದ ೧೧ರವರೆಗೆ ಮೈಸೂರು ಚಲೋ
  • ‘ಪ್ರಬುದ್ಧ ಲೇಖನಗಳ ಜ್ಞಾನಗುಚ್ಛ ದೇವರಕಣ ಕೃತಿ’
  • ವೈಚಾರಿಕ ಪ್ರಜ್ಞೆಯ ಕವಿ ಕುವೆಂಪು: ಎಂ.ನಾಗೇ0ದ್ರಪ್ಪ ಅಭಿಪ್ರಾಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರಿನಲ್ಲಿ ಐಎಂಎ ಮಾದರಿ ವಂಚನೆ  : ಕೋಟ್ಯಾಂತರ ರೂ. ವಂಚನೆ ಆರೋಪ
Trending

ತುಮಕೂರಿನಲ್ಲಿ ಐಎಂಎ ಮಾದರಿ ವಂಚನೆ  : ಕೋಟ್ಯಾಂತರ ರೂ. ವಂಚನೆ ಆರೋಪ

By News Desk BenkiyabaleUpdated:June 15, 2019 6:15 pm

ತುಮಕೂರು :

      ಬೆಂಗಳೂರಿನ ಐಎಂಎ ಪ್ರಕರಣ ಮಾದರಿಯಲ್ಲಿ ತುಮಕೂರಿನಲ್ಲೂ ಸಾರ್ವಜನಿಕರಿಂದ ಕೋಟ್ಯಾಂತರ ರೂ ಸಂಗ್ರಹಿಸಿ ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ. ನಗರದ ಹೆಚ್‍ಎಂಎಸ್ ಶಾದಿ ಮಹಲ್ ಕಾಂಪ್ಲೆಕ್ಸ್‍ನಲ್ಲಿ ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್ ಎಂಬ ಹೆಸರಿನ ಕಛೇರಿ ತೆರೆದು ಅಸ್ಲಾಂ ಪಾಷಾ ಎಂಬುವವರು ಸಾರ್ವಜನಿಕರಿಂದ 250ರಿಂದ 300 ಕೋಟಿ ರೂ ಸಂಗ್ರಹಿಸಿ ನಾಪತ್ತೆಯಾಗಿದ್ದಾರೆ.

      ಆತ ದುಬಾಯ್‍ನಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಹಣ ತೊಡಗಿಸಿರುವ ಯಾರೂ ಈವರೆಗೆ ಪೊಲೀಸರಿಗೆ ದೂರು ನೀಡಿಲ್ಲ. 3-4 ತಿಂಗಳಿನಿಂದ ಕಛೇರಿ ಬಾಗಿಲು ತೆರೆದಿಲ್ಲ. ಹಣ ಹೂಡಿಕೆ ಮಾಡಿದವರು ದಿಕ್ಕು ತೋಚದೆ ಕಚೇರಿ ಬಳಿ ಬಂದು ಹೋಗುತ್ತಿದ್ದಾರೆ. ಶುಕ್ರವಾರ ಕೂಡಾ ನೂರಾರು ಜನ ಈ ಕಛೇರಿ ಮುಂದೆ ಜಮಾಯಿಸಿದ್ದರು

      ತುಮಕೂರು ನಿವಾಸಿಯಾದ ಅಸ್ಲಾಂ ಪಾಷಾ 3-4 ವರ್ಷದಿಂದ ಹೆಚ್‍ಎಂಎಸ್ ಶಾದಿ ಮಹಲ್ ಕಾಂಪ್ಲೆಕ್ಸ್‍ನಲ್ಲಿ ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್ ಕಛೇರಿ ಆರಂಭಿಸಿ, ತಾನು ವಿವಿಧ ವಾಹನ ಕಂಪನಿಗಳ ಜೊತೆ ಬಂಡವಾಳ ಹೂಡಿಕೆಯ ಒಡಂಬಡಿಕೆ ಮಾಡಿಕೊಂಡಿದ್ದು, ತಮ್ಮೊಂದಿಗೆ ಹಣ ಹೂಡಿಕೆ ಮಾಡುವವರಿಗೆ ಬರುವ ಲಾಭಾಂಶ ಹಂಚುವುದಾಗಿ ಪ್ರಚಾರ ಮಾಡಿದ್ದರು, ಅದನ್ನು ನಂಬಿ ಹಲವರು ಹಣ ಹೂಡಿಕೆ ಮಾಡಿದ್ದರು ಎಂದು ಮುಖಂಡ ನಿಸಾರ್ ಅಹಮದ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

      ಹಣ ಹೂಡಿಕೆ ಮಾಡಿದವರಿಗೆ ಒಂದೂವರೆ ವರ್ಷ ಕಾಲ ಒಂದು ತಿಂಗಳಿಗೆ ಒಂದು ಲಕ್ಷ ರೂ.ಗೆ 5ರಿಂದ 7 ಸಾವಿರ ರೂ. ನಂತೆ ಲಾಭದ ಹಣ ಎಂದು ವಿತರಿಸಿದರು. ಸರಳವಾಗಿ ಹಣ ಮಾಡಬಹುದು ಎಂದು ನಂಬಿ 500ರಿಂದ 600 ಜನ ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್‍ನಲ್ಲಿ ಹೂಡಿಕೆ ಮಾಡಿದರು.

      ಅದಾಗಿ, ಕೆಲ ದಿನಗಳ ನಂತರ ಏಳು ತಿಂಗಳಿಗೆ ಹೂಡಿಕೆಯ ಎರಡರಷ್ಟು ಹಣ ನೀಡುವುದಾಗಿ ನಂಬಿಸಲಾಯಿತು, ಅದಾಗಿ ಆರು ತಿಂಗಳಾಗಿ, ಇನ್ನೊಂದು ತಿಂಗಳಲ್ಲಿ ಪಾವತಿಸಿದ ಹಣದ ಡಬಲ್ ಮೊತ್ತ ಪಡೆಯಬಹುದು ಎನ್ನುವಾಗ ಅಸ್ಲಾಂ ಪಾಷಾ ಹೊಸಾ ಸ್ಕೀಂ ತಂದು ಅದರ ಪ್ರಕಾರ 4ತಿಂಗಳ, 10 ದಿನದಲ್ಲಿ ಹಣ ಡಬಲ್ ನೀಡುವ ಆಫರ್ ಕೊಟ್ಟರು. ನಾಲ್ಕೇ ತಿಂಗಳಲ್ಲಿ ಎರಡರಷ್ಟು ಹಣ ಪಡೆಯಬಹುದು ಎಂದು ಆವರೆಗೆ ತೊಡಗಿಸಿದ್ದ ಪೂರ್ಣ ಹಣವನ್ನೂ ಅಲ್ಲೇ ಮುಂದುವರೆಸಿದ್ದರು ಎಂದು ನಿಸಾರ್ ಅಹಮದ್ ಹೇಳಿದರು.

      ತುಮಕೂರು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಭಾಗಗಳ ಮುಸ್ಲೀಂ ಬಾಂಧವರು ಇಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದಾರೆ. ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಸ್ಲಾಂ ಪಾಷಾ ಈಗ ದುಬಾಯ್‍ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಹೆಂಡತಿ ಮಕ್ಕಳು ತುಮಕೂರಿನಲ್ಲಿದ್ದಾರೆ. ಆದರೆ ಅವರು ಈ ಬಗ್ಗೆ ತಮಗೇನೂ ತಿಳಿದಿಲ್ಲ ಎನ್ನುತ್ತಾರೆ, ಆದರೆ ಹಣ ಕಳೆದುಕೊಂಡವರು ಕಂಗಾಲಾಗಿದ್ದಾರೆ ಎಂದು ಹೇಳಿದರು.

      ಕಳೆದ ಫೆಬ್ರವರಿ ತಿಂಗಳಿನಲ್ಲಿ ಅಸ್ಲಾಂ ಪಾಷಾ ಹಣ ತೆಗೆದುಕೊಂಡು ದುಬಾಯಿಗೆ ಹೋಗಿದ್ದಾರೆ. ಹಣ ಹೂಡಿಕೆ ಮಾಡಿದವರು ಆತಂಕಕ್ಕೊಳಗಾಗಿದ್ದಾರೆ. ಹೂಡಿಕೆದಾರರೆಲ್ಲಾ ಪೊಲೀಸರಿಗೆ ದೂರು ನೀಡಲಿದ್ದು, ಪೊಲೀಸರು ಆತನ್ನು ಪತ್ತೆ ಮಾಡಿ ಕರೆತಂದು ಸಾರ್ವಜನಿಕರ ಹಣ ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿದರು.

       ಈ ನಡುವೆ ಅಸ್ಲಾಂ ಪಾಷಾ ಆಡಿಯೊ, ವೀಡಿಯೋ ಮೆಸೇಜ್ ಕಳುಹಿಸಿದ್ದು, ಆರ್ಥಿಕವಾಗಿ ತಾನು ತೊಂದರೆಗೊಳಗಾಗಿದ್ದು, ಸದ್ಯ ದುಬಾಯಿನಲ್ಲಿದ್ದೀನಿ, 2-3 ತಿಂಗಳು ಅವಕಾಶ ಮಾಡಿಕೊಟ್ಟರೆ ಹೂಡಿಕೆದಾರರಿಗೆ ಹಣ ನೀಡುವುದಾಗಿ ಹೇಳಿದ್ದಾರೆ, ಅಲ್ಲದೆ, ಈಝಿ ಮೈಂಡ್ ಮಾರ್ಕೆಟಿಂಗ್ ಇಂಡಿಯಾ ಲಿಮಿಟೆಡ್ ಕಛೇರಿಯ ಮೇನೇeರ್ ಶುಮಾಸ್ ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಅಸದ್ ಎಂಬುವವರಿಗೆ 5 ಕೋಟಿ ರೂ ಕೊಟ್ಟಿದ್ದೇನೆ ಅವರಿಂದ ಹಣ ಪಡೆಯುವುದು ಎಂದು ಮೆಸೇಜ್‍ನಲ್ಲಿ ತಿಳಿಸಿದ್ದಾರೆ ಎಂದು ನಿಸಾರ್ ಅಹಮದ್ ಹೇಳಿದರು.

       ಇದೊಂದು ವಂಚನೆ ಪ್ರಕರಣ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರವಾಗಿ ತನಿಖೆ ನಡೆಸಿದರೆ, ಎಷ್ಟು ಜನ, ಎಷ್ಟು ಹಣವನ್ನು ಇಲ್ಲಿ ತೊಡಗಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಹಣ ತೊಡಗಿಸಿದ ಅಮಾಯಕರಿಗೆ ನ್ಯಾಯ ದೊರಕಿಸಬೇಕು, ಆರೋಪಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು.ಮುಖಂಡರಾದ ವಜೀರ್ ಸಾಬ್, ಅಬೀಬುಲ್ಲಾ ಸಾಬ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

(Visited 14 times, 1 visits today)
Previous Articleಕುಡಿಯುವ ನೀರಿನ ಕಾಮಗಾರಿ ವಿಳಂಬ : ಅಧಿಕಾರಿಗಳ ಮೇಲೆ ಕ್ರಮಕ್ಕೆ ಡಿಸಿಎಂ ಸೂಚನೆ
Next Article ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಮುಷ್ಕರ
News Desk Benkiyabale

Related Posts

ವಿವಿಧೆಡೆ ಡೀಸಿ ದಿಢೀರ್ ಭೇಟಿ: ಪರಿಶೀಲನೆ

December 03, 2025 4:09 pm ತುಮಕೂರು

ನಗರದ ವಿವಿಧೆಡೆ ಉಪಲೋಕಾಯುಕ್ತರಿಂದ ಬಿರುಸಿನ ಕಾರ್ಯಾಚರಣೆ

November 15, 2025 4:32 pm ತುಮಕೂರು

ಸಮಾಜದಲ್ಲಿ ತಾಂಡವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ: ಸ್ವಾಮೀಜಿ

November 10, 2025 2:20 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಡಿಸೆಂಬರ್ ೫ರಂದು ಗುಬ್ಬಿಯಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

December 04, 2025 4:05 pm
ಇತರೆ ಸುದ್ಧಿಗಳು

ಸರ್ಕಾರದ ವಿರುದ್ಧ ಹೋರಾಟ

December 04, 2025 4:02 pm
ತುಮಕೂರು

ವಿವಿಧೆಡೆ ಡೀಸಿ ದಿಢೀರ್ ಭೇಟಿ: ಪರಿಶೀಲನೆ

December 03, 2025 4:09 pm
ಇತರೆ ಸುದ್ಧಿಗಳು

ಸೈನಿಕರಿಗೆ ಆರು ಎಕರೆ ಮೀಸಲು ಶಾಸಕ ಎಸ್. ಆರ್. ಶ್ರೀನಿವಾಸ್

December 03, 2025 2:37 pm
ಇತರೆ ಸುದ್ಧಿಗಳು

ರೈತರಿಗೆ ಹೈನುಗಾರಿಕೆ ವರದಾನ: ಶಾಸಕ ಟಿ.ಬಿ.ಜಯಚಂದ್ರ ಹೇಳಿಕೆ

December 03, 2025 2:36 pm
ಇತರೆ ಸುದ್ಧಿಗಳು

ಡಿ. ೦೬ ರಿಂದ ೧೧ರವರೆಗೆ ಮೈಸೂರು ಚಲೋ

December 03, 2025 2:10 pm
Our Youtube Channel
Our Picks

ಡಿಸೆಂಬರ್ ೫ರಂದು ಗುಬ್ಬಿಯಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

December 04, 2025 4:05 pm

ಸರ್ಕಾರದ ವಿರುದ್ಧ ಹೋರಾಟ

December 04, 2025 4:02 pm

ಸೈನಿಕರಿಗೆ ಆರು ಎಕರೆ ಮೀಸಲು ಶಾಸಕ ಎಸ್. ಆರ್. ಶ್ರೀನಿವಾಸ್

December 03, 2025 2:37 pm

ರೈತರಿಗೆ ಹೈನುಗಾರಿಕೆ ವರದಾನ: ಶಾಸಕ ಟಿ.ಬಿ.ಜಯಚಂದ್ರ ಹೇಳಿಕೆ

December 03, 2025 2:36 pm

ಡಿ. ೦೬ ರಿಂದ ೧೧ರವರೆಗೆ ಮೈಸೂರು ಚಲೋ

December 03, 2025 2:10 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಡಿಸೆಂಬರ್ ೫ರಂದು ಗುಬ್ಬಿಯಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

By News Desk BenkiyabaleDecember 04, 2025 4:05 pm

ತುಮಕೂರು: ಕರ್ನಾಟಕ ಸಾಹಿತ್ಯ ಅಕಾಡೆ ಮಿಯ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ ೫ರಂದು ಸಂಜೆ ೪ ಗಂಟೆಗೆ ಜಿಲ್ಲೆಯ…

ಸರ್ಕಾರದ ವಿರುದ್ಧ ಹೋರಾಟ

December 04, 2025 4:02 pm

ವಿವಿಧೆಡೆ ಡೀಸಿ ದಿಢೀರ್ ಭೇಟಿ: ಪರಿಶೀಲನೆ

December 03, 2025 4:09 pm

ಸೈನಿಕರಿಗೆ ಆರು ಎಕರೆ ಮೀಸಲು ಶಾಸಕ ಎಸ್. ಆರ್. ಶ್ರೀನಿವಾಸ್

December 03, 2025 2:37 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.