BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ದೇಶದ ಭದ್ರತೆ, ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ: ತಜ್ಞರ ಅಭಿಮತ
  • ಸಿದ್ಧಲಿ0ಗೇಶ್ವರ ಸಮಗ್ರವಚನ ಸಾಹಿತ್ಯ ಲೋಕಾರ್ಪಣೆ
  • ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ
  • ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ
  • ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
  • ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ
  • ಮಾನವ ಹಕ್ಕುಗಳನ್ನು ಗೌರವಿಸಿ: ಧರ್ಮಾಂಜಿ
  • ಕಾರ್ಮಿಕ ಇಲಾಖೆಯಲ್ಲಿ ಬೀದಿಬದಿ ವ್ಯಾಪಾರಿಗಳು ನೋಂದಾಯಿಸಿಕೊಳ್ಳಿ: ದೊಡ್ಡ ಅವಲಪ್ಪ ಸಲಹೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಂಸದರ ಅವಹೇಳನ ಮಾಡಿದ ಸಚಿವ ಶ್ರೀನಿವಾಸ್ ವಿರುದ್ಧ ಬಿಜೆಪಿ ಆಕ್ರೋಶ!!
Trending

ಸಂಸದರ ಅವಹೇಳನ ಮಾಡಿದ ಸಚಿವ ಶ್ರೀನಿವಾಸ್ ವಿರುದ್ಧ ಬಿಜೆಪಿ ಆಕ್ರೋಶ!!

By News Desk BenkiyabaleUpdated:July 04, 2019 6:47 pm

ತುಮಕೂರು :

      ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಆರ್ ಶ್ರೀನಿವಾಸ್ ಅವರು ಸಂಸದ ಜಿ ಎಸ್ ಬಸವರಾಜು ಅವರನ್ನು ಅವಹೇಳನಾಕಾರಿಯಾಗಿ ನಿಂದಿಸಿದ್ದಾರೆಂದು ಆಪಾದಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸಂಸ್ಕೃತಿ ಇಲ್ಲದ ಶ್ರೀನಿವಾಸ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

      ಸಂಸದ ಜಿ ಎಸ್ ಬಸವರಾಜು ಅವರನ್ನು ಬಫೂನ್ ಎಂದು ಏಕ ವಚನದಲ್ಲಿ ನಿಂದಿಸಿದ್ದನ್ನು ಖಂಡಿಸಿದ ಕಾರ್ಯಕರ್ತರು, ಸಾಮಾಜಿಕ ಪ್ರಜ್ಞೆಯ ಅರಿವಿಲ್ಲದ, ಸಚಿವ ಸ್ಥಾನಕ್ಕೆ ಅನರ್ಹರಂತೆ ನಡೆದುಕೊಳ್ಳುವ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸದರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

      ಕೆಲ ಕಾಲ ಬಿಜಿಎಸ್ ವೃತ್ತದಲ್ಲಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಸಚಿವರ ವರ್ತನೆ ಖಂಡಿಸಿದರು.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ. ಎಂ ಆರ್ ಹುಲಿನಾಯ್ಕರ್, ಸಚಿವ ಶ್ರೀನಿವಾಸ್ ಅವರು ಸಂಸದರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವುದು ಖಂಡನಾರ್ಹ, 5 ಬಾರಿ ಸಂಸದರಾಗಿ, ಜನಪರ ಕಾಳಜಿ ಹೊಂದಿರುವ ರಾಜಕೀಯ ಮುತ್ಸದ್ದಿ ಜಿ ಎಸ್ ಬಸವರಾಜು ಅವರನ್ನು ಟೀಕಿಸಿರುವುದು ಶಿಕ್ಷಣ ಮಂತ್ರಿಗೆ ತಕ್ಕದ್ದಲ್ಲ ಎಂದರು.

       ಶ್ರೀನಿವಾಸ್ ತಮ್ಮ ಹೇಳಿಕೆ ಹಿಂಪಡೆಯಬೇಕು, ಮುಂದೆ ಇಂತಹ ಭಾಷೆ ಬಳಸದಂತೆ ಎಚ್ಚರವಹಿಸಬೇಕು. ವ್ಯಕ್ತಿನಿಂದನೆ ಮಾಡುವುದು ಅವರಿಗೆ ಶೋಭೆ ತರುವಂತಾದ್ದಲ್ಲ ಎಂದರು.

       ಜಿಲ್ಲೆಗೆ ಹೇಮಾವತಿ ನೀರು ತರುವ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಜಿ ಎಸ್ ಬಸವರಾಜು ಅವರು, ನಾಲೆಗೆ ಭೇಟಿ ನೀಡಿ ಅದರ ದುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ಅದರ ದುರಸ್ಥಿತಿ ಒತ್ತಾಯಿಸಿದ್ದಾರೆ, ಹಲವಾರು ಅಭಿವೃದ್ಧಿ ಕಾರ್ಯಗಳು ಕಾರ್ಯಗತಗೊಳ್ಳಲು ಕಾರಣಕರ್ತರಾಗಿದ್ದಾರೆ ಇಂತಹವರ ಬಗ್ಗೆ ಅವಹೇಳನಾಕಾರಿ ಮಾತನಾಡಿರುವುದು ಸರಿಯಲ್ಲ ಎಂದು ಡಾ. ಹುಲಿನಾಯ್ಕರ್ ಹೇಳಿದರು.

      ಮುಖಂಡ ದಿಲಿಪ್ ಕುಮಾರ್ ಮಾತನಾಡಿ, ನಾಲ್ಕು ಬಾರಿ ಗುಬ್ಬಿ ಶಾಸಕರಾದ ನೀವು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂಬುದನ್ನು ಜನರಿಗೆ ತಿಳಿಸಿ ಎಂದರು.

       ಜಿ ಎಸ್ ಬಸವರಾಜು ಅವರು ಗುಬ್ಬಿಯಲ್ಲಿ ಹೆಚ್‍ಎಎಲ್ ಸ್ಥಾಪನೆಗೊಳ್ಳಲು ಹೆಚ್ಚು ಕಾರಣರಾಗಿದ್ದಾರೆ, ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಆದರೆ ನೀವು ಬರೀ ಟೇಪ್ ಕಟ್ ಮಾಡಿಕೊಂಡು ಬಫೂನ್ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ಸಚಿವ ಶ್ರೀನಿವಾಸ್ ರನ್ನು ಟೀಕಿಸಿದರು.

     ಮಂತ್ರಿಯಾಗಿ ಹೇಮಾವತಿ ನೀರು ತರಲು ಕಾಳಜಿವಹಿಸಲಿಲ್ಲ, ಬೋರ್ ವೆಲ್ ಹಾಕಿಸುವಾಗಲ್ಲೂ, ರಸ್ತೆ ಮಾಡಿಸುವಲ್ಲೂ ಪಕ್ಷ ಬೇಧ ಮಾಡುತ್ತೀರಿ. ರಾಮನಗರ ಜಿಲ್ಲೆಗೆ ನಮ್ಮ ಪಾಲಿನ ನೀರು ಹರಿಸುವ ಹೇಮಾವತಿ ಎಕ್ಸ್ ಪ್ರೆಸ್ ಚಾನಲ್‍ಗೆ ವಿರೋಧ ಮಾಡಲಿಲ್ಲ ಎಂದು ಹೇಳಿದರು.

      ಮುಖಂಡ ಜಿ ಎನ್ ಬೆಟ್ಟಸ್ವಾಮಿ ಮಾತನಾಡಿ, ಜಿ ಎಸ್ ಬಸವರಾಜು ನಿಮಗೆ ಎಷ್ಟು ಸಹಾಯ ಮಾಡಿದ್ದಾರೆ ಎಂದು ನಿಮ್ಮ ತಂದೆಯನ್ನು ಕೇಳಿ, ಎಂದು ಸಚಿವ ಶ್ರೀನಿವಾಸ್ ಗೆ ಹೇಳಿದ ಅವರು, ಎಣ್ಣೆ ಅಳೆಯೋರನ್ನು, ಕೆಟ್ಟ ನಡತೆಯವರನ್ನು ಶಿಕ್ಷಣ ಮಂತ್ರಿ ಮಾಡಿದ್ದು ರಾಜ್ಯದ ದುರಂತ, ಸಂಸ್ಕೃತಿಯೇ ಇಲ್ಲದವರು ಶಿಕ್ಷಣ ಮಂತ್ರಿಯಾಗಿರುವುದು ನಮ್ಮ ದುರ್ದೈವ ಎಂದರು.ದೇವೇಗೌಡರು ಸೋತರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಲೋಕಸಭಾ ಚುನಾವಣೆ ವೇಳೆ ಹೇಳಿದ್ದ ಶ್ರೀನಿವಾಸ್ ಅದರಂತೆ ನಡೆದುಕೊಂಡು ಶಾಸಕ ಸ್ಥಾನ ತ್ಯಜಿಸಲಿ ಎಂದರು.

      ಮುಖಂಡ ಬಿ ಬಿ ಮಹದೇವಯ್ಯ ಮಾತನಾಡಿ, ಸಂಸದರಾಗಿ ಗೆದ್ದ ಜಿ ಎಸ್ ಬಸವರಾಜು ಹೇಗೆ ಹೇಮಾವತಿ ನೀರು ಬಿಡಿಸುತ್ತಾರೊ ಎಂದು ಹೇಳಿದ ಶ್ರೀನಿವಾಸ್, ಒಬ್ಬ ಜವಾಬ್ದಾರಿ ಸಚಿವನಾಗಿ ನಡೆದುಕೊಳ್ಳದ ಇವರು ಮಂತ್ರಿಯಾಗಿ ಉಳಿದಿರುವುದು ನಾಚಿಕೆಗೇಡು, ನಾಲಗೆ ಹರಿಬಿಡುತ್ತಾ ಮಾತನಾಡುವ ಶ್ರೀನಿವಾಸ್ ಸಚಿವರಾಗಲು ನಾಲಾಯಕ್ ಎಂದರು.ವೀರಶೈವರು, ಗೊಲ್ಲರು, ದಲಿತ ಸಮಾಜವನ್ನು ಒಡೆಯುವ ಮೂಲಕ ಚುನಾವಣೆಯಲ್ಲಿ ಗೆದ್ದರೇ ಹೊರತು ವೈಯಕ್ತಿಕ ವರ್ಚಸ್ಸಿನಿಂದಲ್ಲ ಎಂದರು.

      ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ನಗರಪಾಲಿಕೆ ಸದಸ್ಯರಾದ ಸಿ ಎನ್ ರಮೇಶ್, ಬಿ ಜಿ ಕೃಷ್ಣಪ್ಪ, ಮಲ್ಲಿಕಾರ್ಜುನಯ್ಯ, ಮಂಜುಳಾ, ಗಿರಿಜಾ, ಮುಖಂಡರಾದ ಸರೋಜಗೌಡ, ಧನಿಯಾಕುಮಾರ್, ಹೆಬ್ಬೂರು ರಂಗಯ್ಯ, ಹೊನ್ನೇಶ್ ಕುಮಾರ್ ಶಿವರುದ್ರಯ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

(Visited 13 times, 1 visits today)
Previous Articleಬಿರುಗಾಳಿಗೆ ವಿದ್ಯುತ್ ಕಂಬ ಉರುಳಿ ಹಸು ಸಾವು!!
Next Article ಜಿಲ್ಲಾಧಿಕಾರಿಗಳ ಖಾತೆಯಲ್ಲಿ 12 ಕೋಟಿ : ಸಚಿವ ದೇಶಪಾಂಡೆ
News Desk Benkiyabale

Related Posts

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ

December 12, 2025 3:25 pm ತುಮಕೂರು

ಸರ್ಕಾರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಡಿಸಿ ಸೂಚನೆ

December 08, 2025 4:21 pm ತುಮಕೂರು

ರಾತ್ರಿ 8 ರವರೆಗೂ ಪಡಿತರ ವಿತರಣೆ

December 08, 2025 4:18 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ದೇಶದ ಭದ್ರತೆ, ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ: ತಜ್ಞರ ಅಭಿಮತ

December 12, 2025 3:29 pm
ಇತರೆ ಸುದ್ಧಿಗಳು

ಸಿದ್ಧಲಿ0ಗೇಶ್ವರ ಸಮಗ್ರವಚನ ಸಾಹಿತ್ಯ ಲೋಕಾರ್ಪಣೆ

December 12, 2025 3:27 pm
ತುಮಕೂರು

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ

December 12, 2025 3:25 pm
ಇತರೆ ಸುದ್ಧಿಗಳು

ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ

December 11, 2025 4:30 pm
ಇತರೆ ಸುದ್ಧಿಗಳು

ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

December 11, 2025 4:29 pm
ಇತರೆ ಸುದ್ಧಿಗಳು

ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ

December 11, 2025 4:27 pm
Our Youtube Channel
Our Picks

ದೇಶದ ಭದ್ರತೆ, ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ: ತಜ್ಞರ ಅಭಿಮತ

December 12, 2025 3:29 pm

ಸಿದ್ಧಲಿ0ಗೇಶ್ವರ ಸಮಗ್ರವಚನ ಸಾಹಿತ್ಯ ಲೋಕಾರ್ಪಣೆ

December 12, 2025 3:27 pm

ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ

December 11, 2025 4:30 pm

ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

December 11, 2025 4:29 pm

ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ

December 11, 2025 4:27 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ದೇಶದ ಭದ್ರತೆ, ಭವಿಷ್ಯಕ್ಕಾಗಿ ಇಂದಿನ ವಿದ್ಯಾರ್ಥಿಗಳು ಸಂಶೋಧನೆಗಳನ್ನು ನಡೆಸಬೇಕಿದೆ: ತಜ್ಞರ ಅಭಿಮತ

By News Desk BenkiyabaleDecember 12, 2025 3:29 pm

ತುಮಕೂರು: ತಾಂತ್ರಿಕವಾಗಿ ದೇಶ ಬೆಳೆಯುತ್ತಿದ್ದು “ಕೃತಕ ಬುದ್ಧಿಮತ್ತೆ’  ತಂತ್ರಜ್ಞಾನದಿ0ದಾಗಿ ಇನ್ಮಿಲ್ಲದ ಸಂಶೋಧ ನೆಗಳನ್ನು ನಡೆಯುತ್ತಿವೆ. ಬಾಹ್ಯಕಾಶ, ಆರೋಗ್ಯ, ತಂತ್ರಜ್ಞಾನ ಸೇರಿದಂತೆ…

ಸಿದ್ಧಲಿ0ಗೇಶ್ವರ ಸಮಗ್ರವಚನ ಸಾಹಿತ್ಯ ಲೋಕಾರ್ಪಣೆ

December 12, 2025 3:27 pm

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ

December 12, 2025 3:25 pm

ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ

December 11, 2025 4:30 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.