Author: News Desk Benkiyabale

ತುಮಕೂರು: ಮುಂಬರುವ ಬಜೆಟ್ ಅಧಿವೇಶನದಲ್ಲಿ ಒಳಮೀಸಲಾತಿ ಖಾತ್ರಿ ಪಡಿಸಿ, ಸಂಪೂರ್ಣ ಒಳಮೀ ಸಲಾತಿಗೆ ಒತ್ತಾಯಿಸಿ ಫೆ.೨೩ ರಂದು ರಾಜ್ಯದಾದ್ಯಂತ ಎಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದು ತುಮ ಕೂರಿನಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ವತಿ ಯಿಂದ ಸಭೆಯನ್ನು ಆಯೋಜಿಸಲಾಗಿತ್ತು. ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಬಸವರಾಜ ಕೌತಾಳ್ ಮಾತನಾಡಿ,ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಒಳಮೀಸಲಾತಿ ಹೋರಾಟಕ್ಕೆ ನಾವು ತಾರ್ತಿಕ ಅಂತ್ಯ ಕೊಟ್ಟಿದ್ದೇವೆ ಎಂಬ ಭ್ರಮೆಯಲ್ಲಿದೆ.ಆದರೆ ಇದು ಶುದ್ದ ಸುಳ್ಳು,31 ವರ್ಷಗಳಿಂದ ನಮ್ಮ ಹೋರಾಟಕ್ಕೆ ಇಂದಿಗೂ ಪರಿಪೂರ್ಣ ನ್ಯಾಯ ದೊರೆಕಿಲ್ಲ.ಹಲವು ಬಾರಿ ಭೇಟಿ ಮಾಡಿದಾಗಲು ನಾವು ಎಲ್ಲವನ್ನು ಮಾಡಿ ಮುಗಿಸಿದ್ದೇವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಒಳಮೀಸಲಾತಿ ಜಾರಿಗೆಯಾಗಿದೆ ಇನ್ನೇನು ಎಂಬ ಆಲೋಚನೆಯಲ್ಲಿಯೇ ಮಾದಿಗ ಸಮುದಾಯವೂ ಇದೆ. ಆದರೆ ಒಳಗೆ ಹಳ್ಳ ಹಿಡಿದಿದೆ.ಜಾರಿ ಸಂದರ್ಭದಲ್ಲಿ ಆಗುವ ತೊಂದ ರೆಗಳು, ಇದರ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ವಿರೋಧಾಭ್ಯಾಸಗಳು, ಆರಂಭವಷ್ಟೇ,ಹಾಗಾಗಿ ಇನ್ನೂ ಸಂಘರ್ಷ ಮುಂದುವರೆದಿದೆ,ಮು0ದುವರೆಯಲಿ ದೆ.ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಹೋರಾಟ ನಡೆಸ…

Read More

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಗ್ರಾಮದ ಶ್ರೀ ಬೇಡರ ಕಣ್ಣಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಅರತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಹೆಣ್ಣು ಮಕ್ಕಳು ಸಾಂಪ್ರಾದಾಯಿಕ ಉಡುಗೆತೊಟ್ಟು ಮೆರವಣಿಗೆಯೊಂದಿಗೆ ಸಾಗಿ ಬೇಡರ ಕಣ್ಣಪ್ಪನಿಗೆ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಬೇಡರ ಕಣ್ಣಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಓಬಳಯ್ಯ ಮಾತನಾಡಿ, ಮಹಾಶಿವಾರಾತ್ರಿ ಹಬ್ಬದ ಅಂಗವಾಗಿ ಪ್ರತಿವರ್ಷ ಸಮುದಾಯದ ಹೆಣ್ಣುಮಕ್ಕಳಿಂದ ಆರತಿ ಸೇವೆ ಕಾರ್ಯಕ್ರಮ ನಡೆಯುತ್ತದೆ, ಬೇಡರ ಕಣ್ಣಪ್ಪ ಸ್ವಾಮಿ ಸಮುದಾಯ ಭವನ ಕೆಲಸ ಪೂರ್ಣಗೊಂಡಿದ್ದು, ಭೋಜನ ಕೊಠಡಿಗಳು ಆಗಬೇಕಿದ್ದು, ಗೃಹ ಸಚಿವರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ತಾ.ಪ0 ಮಾಜಿ ಉಪಾಧ್ಯಕ್ಷೆ ಕವಿತಮ್ಮ ನರಸಪ್ಪ ಮಾತನಾಡಿ, ಸುಮಾರು ೩೦ ವರ್ಷಗಳಿಂದ ಮಹಾಶಿವಾರಾತ್ರಿ ಹಬ್ಬದಂದು ಉಪವಾಸ ಮುಗಿಸಿ ಮಾರನೇ ದಿನ ಸಮುದಾಯದ ಹೆಣ್ಣುಮಕ್ಕಳಿಂದ ಆರತಿ ಸೇವೆ ಕಾರ್ಯಕ್ರಮ ನಡೆಯಲಿದೆ, ಕಾರ್ತೀಕ ಮಾಸದಲ್ಲಿಯೂ ಈ ಸೇವೆ ನಡೆಯಲಿದೆ. ಭಕ್ತರಿಗೆ ಅವಶ್ಯಕತೆಯಿರುವ ದಾಸೋಹ ಭವನ ನಿರ್ಮಾಣಕ್ಕೆ ಗೃಹಸಚಿವರು ವಿಶೇಷ ಆಸಕ್ತಿ ತೋರಿದ್ದಾರೆ ಎಂದರು. ಈ…

Read More

ತುಮಕೂರು: ಪ್ರತಿಯೊಬ್ಬರು ಖಾದಿ ಬಟ್ಟೆಗಳನ್ನು ಧರಿಸುವ ಮೂಲಕ ನೇಕಾರ ಸಮುದಾಯಕ್ಕೆ ಉತ್ತೇಜನ ನೀಡಬೇಕು ಎಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಹೇಳಿದರು. ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಅಭಿ ವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು (ಕೈಮಗ್ಗ) ಜವಳಿ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾ ಮಂಡಳ ನಿ., ಕಾವೇರಿ ಹ್ಯಾಂಡ್‌ಲೂಮ್ಸ್, ಬೆಂಗಳೂರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿ.ಪಂ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ೧೪ ದಿನಗಳ ಕಾಲ ಏರ್ಪಡಿಸಲಾಗಿರುವ ರಾಜ್ಯ ಹಾತ್‌ಕರ್ಗಾ ವಿಶೇಷ ಕೈಮಗ್ಗ ಮೇಳ ವಸ್ತç ಭಂಡಾರ-೨೦೨೬ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೇಕಾರರು ಬಹಳ ಕಷ್ಟಪಟ್ಟು ಬಟ್ಟೆಗಳನ್ನು ನೇಯ್ಗೆ ಮಾಡುತ್ತಾರೆ. ಅವರು ನೇಯ್ಗೆ ಮಾಡುವ ಬಟ್ಟೆಗಳನ್ನು ಪ್ರತಿಯೊಬ್ಬರೂ ಖರೀದಿಸಿ ತೊಟ್ಟರೆ ಆ ಸಮುದಾಯದ ಬೆಳವಣಿಗೆಗೆ ಸಹಕರಿಸಿದಂತಾಗುತ್ತದೆ. ಹಾಗಾಗಿ ನಾವೆ ಲ್ಲರೂ ಹೆಚ್ಚು ಹೆಚ್ಚು ಖಾದಿ ಬಟ್ಟೆಗಳನ್ನು ಧರಿಸಲು ಮುಂದಾಗಬೇಕು ಎಂದರು. ವ್ಯಕ್ತಿತ್ವದಲ್ಲಿ ತೂಕ ಇದ್ದರೆ ನಾವು ತೊಡುವ ಬಟ್ಟೆಗೂ ಮೌಲ್ಯ…

Read More

ತುಮಕೂರು: ಜಿಲ್ಲೆಯ ಪ್ರತಿ ತಾಲೂಕು ಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳ ವಿವರ ಮತ್ತೆ ಸರ್ಕಾರದ ಬೊಕ್ಕಸಕ್ಕೆ ಬರುತ್ತಿರುವ ವಾರ್ಷಿಕ ಆ ದಾಯದ ವಿವರ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸೂಕ್ತವಾದ ಗಾಡ್ಗೀಳ್ ಕಾನೂನು ಜಾರಿಗೆ ತರುವಂತೆ ಆಮ್‌ಆದ್ಮೀ ಪಕ್ಷ ಒತ್ತಾಯಿಸಿದೆ. ಗಣಿ ಕಂಪನಿಗಳ ವಿವರ ಮತ್ತು ಪ್ರತಿ ಗಣಿ ಕಂಪೆನಿಗಳಿAದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿರುವ ರಾಜಸ್ವದ ವಿವರವನ್ನು ನೀಡುವಂತೆ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತುಮಕೂರು ಇವರಿಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್ ಎ. ಜಯರಾಮಯ್ಯ ಅವರು ಒತ್ತಾಯಿಸದ್ದಾರೆ. ಪ್ರತಿ ಗಣಿಗಾರಿಕೆಗಳಿಂದ ಪ್ರತಿನಿತ್ಯ ಎಷ್ಟು ಪ್ರಮಾ ಣದಲ್ಲಿ ಸಾಮಗ್ರಿಗಳನ್ನು ಉತ್ಪಾದಿಸ ಲಾಗುತ್ತದೆ ಮತ್ತು ನಿಯಮಾನುಸಾರ ಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟಕಗಳನ್ನ ಬಳಸಲಾ ಗುತ್ತದೆ ಎಂಬ ವಿವರವನ್ನು ನೀಡಬೇಕು ಕಲ್ಲು ಗಣಿಗಾರಿಕೆಯಿಂದ ರೈತರ ವ್ಯವಸಾಯ ,ರೇಷ್ಮೆ, ಅಡಿಕೆ, ತೆಂಗು, ರಾಗಿ ಬೆಳೆಗಳಿಗೆ ಹಾನಿ ಸೇರಿದಂತೆ ಹೈನುಗಾರಿಕೆಗೂ ಅಪಾರ ಹಾನಿ ಉಂಟಾಗುತ್ತಿದ್ದು ಜಲ ಮೂಲಗಳು ರಸ್ತೆಗಳು ರೈತರ…

Read More

ಹುಳಿಯಾರು: ಹುಳಿಯಾರಿನ ಗ್ರಾಮದೇವತೆ ಶ್ರೀ ಹುಳಿಯಾರಮ್ಮ ದೇವಿಯವರ ೧೩ ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮುಂಜಾನೆ ಏರ್ಪಡಿಸಿದ್ದ ಕಳಸೋತ್ಸವವು ವೈಭ ವದಿಂದ ನೆರವೇರಿತು. ಹುಳಿಯಾರು ಗ್ರಾಮದೇವತೆ ದುರ್ಗಮ್ಮನವರು , ಹುಳಿಯಾರು ಕೆಂಚಮ್ಮದೇವಿ, ಸೋಮಜ್ಜನಪಾಳ್ಯದ ಅಂತರಘಟ್ಟೆ ಅಮ್ಮನವರು, ಗೌಡಗೆರೆ ದುರ್ಗಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವಿ, ,ಕೆ.ಸಿ.ಪಾಳ್ಯದ ಅಂತರಘಟ್ಟೆ ಅಮ್ಮ ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡು ಭೇಟಿ ನಂತರ ಕಳಸೋತ್ಸವ ಆರಂಭವಾಯಿತು. ಹುಳಿಯಾರು ಕೆರೆ ಮೈದುಂಬಿದ್ದರಿAದ ಕೆರೆಯಲ್ಲಿ ಸ್ಥಾಪಿಸಲಾಗುತ್ತಿದ್ದ ಕಲಶವನ್ನು ಹುಳಿಯಾರ ಮ್ಮನವರ ಮೂಲಗುಡಿಯ ಬಳಿ ಸ್ಥಾಪಿಸಲಾಯಿತು. ಅಲ್ಲಿಂದ ಪಟ್ಟಣದಲ್ಲಿನ ಹುಳಿಯಾರಮ್ಮನ ದೇವ ಸ್ಥಾನದವರೆವಿಗೂ ಐವತ್ತಕ್ಕೂ ಹೆಚ್ಚು ಕಳಸಗಳ ಉತ್ಸವವು ಮಂಗಳವಾದ್ಯ ಹಾಗೂ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಉತ್ಸವದಲ್ಲಿ ಕೋಡಿಪಾಳ್ಯ, ಲಿಂಗಪ್ಪನಪಾಳ್ಯ, ಕಾಮಶೆಟ್ಟಿಪಾಳ್ಯ, ಹುಳಿಯಾರು, ಕೇಶವಾಪುರ ಹಾಗೂ ಸೋಮಜ್ಜನಪಾಳ್ಯ ಗ್ರಾಮಗಳ ಹೆಣ್ಣು ಮಕ್ಕಳು ಭಕ್ತಿ ಪೂರ್ವಕವಾಗಿ ಶ್ರೀ ಹುಳಿಯಾರಮ್ಮನವರ ಕಳಸವನ್ನು ತಲೆ ಮೇಲೆ ಹೊತ್ತು ನಡೆಮುಡಿಯೊಂದಿಗೆ ಮೂಲ ಸ್ಥಾನಕ್ಕೆ ಆಗಮಿಸಿದರು. ಈ ಕಳಸೋತ್ಸವವು ಮಂಗಳವಾದ್ಯಗಳೊAದಿಗೆ ಶ್ರೀ…

Read More

ತಿಪಟೂರು: ನಗರದ ತಾಲ್ಲೂಕು ಪಂಚಾಯಿತಿ ಸಭಾಂಗ ಣದಲ್ಲಿ ಜನವರಿ ಅಂತ್ಯಕ್ಕೆ ಸಂಬ0ಧಿಸಿದ0ತೆ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಯೋಜನೆಗಳ ಅಧ್ಯಕ್ಷ ಎಮ್.ಎನ್.ಕಾಂತರಾಜು ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಸಭೆಯಲ್ಲಿ ಶಿಶು ಯೋಜನಾಧಿಕಾರಿ ಮಾತನಾಡಿ, ೨೦೨೩ರ ಆಗಸ್ಟ್ನಲ್ಲಿ ಆರಂಭವಾದ ಗೃಹಲಕ್ಷ್ಮಿ ಯೋಜನೆ ಮೂಲಕ ಆರಂಭದಲ್ಲಿ ೪೯,೪೦೮ ಫಲಾನುಭವಿಗಳಿದ್ದು, ಪ್ರಸ್ತುತ ೫೩,೬೨೫ ಫಲಾನುಭವಿಗಳಿಗೆ ಪ್ರತಿ ತಿಂಗಳು ಸರಾಸರಿ ರೂ ೧೦.೭೩ ಲಕ್ಷ ಮೊತ್ತವನ್ನು ವಿತರಿಸಲಾಗುತ್ತಿದೆ. ಇದುವರೆಗೆ ತಾಲೂಕಿಗೆ ಒಟ್ಟು ರೂ.೨೫೩.೮೪ ಕೋಟಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇದೀಗಾಗಲೇ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ೭೮೮ ಸದಸ್ಯರು ಮರಣ ಹೊಂದಿರುವ ಮಾಹಿತಿ ಸಂಗ್ರಹಿಸ ಲಾಗು ತ್ತಿದ್ದು, ಪಂಚ ಗ್ಯಾರಂಟಿ ಯೋಜನೆಯಡಿ ಹೋಬಳಿ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸಿ, ಬಂದ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ, ೫೮,೨೬೭ ಮಹಿಳಾ ಪ್ರಧಾನ ಮತ್ತು ೨,೫೨೮ ಪುರುಷ ಪ್ರಧಾನ ಪಡಿತರ ಚೀಟಿಗಳು ಸೇರಿ ಒಟ್ಟು ೬೧,೦೧೬ ಪಡಿತರ ಚೀಟಿಗಳು ಇದೆ ಎಂದು ತಿಳಿಸಿದರು. ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ…

Read More

ಕೊರಟಗೆರೆ: ಶಿಕ್ಷಕರಿಗೆ ಹಾಗೂ ಶಿಕ್ಷಕರೇತರ ಪದವಿಧರರಿಗೆ ಸಮಸ್ಯೆಗಳು ಬಹಳಷ್ಟು ಹತ್ತಿರದಿಂದ ಕಂಡಿದ್ದು, ಅವರ ಸಮಸ್ಯೆಗಳನ್ನ ಪರಿಹರಿಸಲು ನನಗೆ ಒಂದು ಅವಕಾಶ ನೀಡಿ ಎಂದು ಆಗ್ನೇಯ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಹೊಳವನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಬೇಟಿ ನೀಡಿ ಮತಯಾಚನೆ ಮಾಡಿ ಮಾತನಾಡಿದರು. ನಾನು ಸಾಕಷ್ಟು ವರ್ಷದಿಂದ ಕಾಂಗ್ರೆಸ್ ಪಕ್ಷವನ್ನ ಸಂಘಟನೆ ಮಾಡಿಕೊಂಡು ಬಂದಿದ್ದೇನೆ. ಈ ಬಾರಿ ನಮ್ಮ ನಾಯಕರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಆಶಿರ್ವಾದದಿಂದ ಆಗ್ನೇಯ ಪದವಿಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾನೆ. ದೇಶ ಹಾಗೂ ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಅನೇಕ ಯುವಕರು ಹಾಗೂ ಯುವತಿಯರು ಬಡತನದಲ್ಲಿರದ್ದರು ಸಹ ಉತ್ತಮ ವ್ಯಾಸಂಗ ಮಾಡಿದರೂ ಕೆಲಸ ಇಲ್ಲದೆ ಹಾಗೆ ಉಳಿದ್ದಾರೆ. ನನಗೆ ನಿಮ್ಮ ಅಮೂಲ್ಯವಾದ ಒಂದು ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಂಡಿ ಎಂದು ಮನವಿ ಮಾಡಿದರು. ನಗರ ಬ್ಲಾಕ್ ಕಾಂಗ್ರೆಸ್…

Read More

ತುಮಕೂರು: ಕೇಂದ್ರ ಸರ್ಕಾರಕ್ಕೆ ರೈತ-ಕಾರ್ಮಿಕ-ಜನವಿರೋಧಿ ನೀತಿಗಳನ್ನು ಕೈಬಿಡಲು ಒತ್ತಾಯಿಸಿ. ೨೦೨೬ ಫೆಬ್ರವರಿ ೧೨ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ದೇಶವ್ಯಾಪ್ತಿ ಉತ್ಪಾದನೆ ಮತ್ತು ಸೇವೆ ಸ್ಥಗಿತ ಮಾಡಿ ಬಂದ್ ಮಾಡಲು ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿ ಸಮಿತಿ ತೀರ್ಮಾನ ಮಾಡಿರುವುದರಿಂದ ತುಮಕೂರು ನಗರದ ಜನಚಳುವಳಿಕೇಂದ್ರದಲ್ಲಿ ಪ್ರಚಾರಂದೋಲನಕ್ಕೆ ಸಿಐಟಿಯು ರಾಜ್ಯ ಉಪಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರು ಸೈಯದ್ ಮುಜೀಬ್ ರವರು ಚಾಲನೇ ನೀಡುವ ಮೂಲಕ ಕೇಂದ್ರದಲ್ಲಿ ೩ ನೇ ಬಾರಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರವು ೨೦೨೫ ನವೆಂಬರ್ ನಾಲ್ಕು ಲೇಬರ್ ಜಾರಿಗೊಳಿಸುವುದಾಗಿ ೨೧ ರಂದು ಕೋಡ್‌ಗಳನ್ನು ಘೋಷಿಸಿದೆ. ನಂತರ ೨೦೨೫ ಡಿಸೆಂಬರ್ ೩೦ ರಂದು ನಾಲ್ಕು ಕೋಡ್‌ಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ೨೦೨೬ ರಿಂದ ಏಪ್ರಿಲ್ ೧ ರಿಂದ ದೇಶಾದ್ಯಂತ ಈ ನಾಲ್ಕು ಕೋಡ್‌ಗಳು ಕಾರ್ಯಚರಣೆಗೆ ಬರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ವ್ಯಾಪಕವಾದ ಪ್ರಚಾರವನ್ನು ಕೈಗೊಂಡಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ವಿರೋಧಿಸಿ ದೇಶದ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು…

Read More

ಚಿಕ್ಕನಾಯಕನಹಳ್ಳಿ: ಕೆರೆಗಳಲ್ಲಿ ತಮ್ಮ ಹೊಲ ತೋಟಗಳಿಗೆ ಮಣ್ಣು ಹೊಡೆದುಕೊಳ್ಳು ರೈತರು, ಗ್ರಾಮಸ್ಥರು, ಜೆಸಿಬಿ, ಟ್ರಾಕ್ಟರ್ ಮಾಲೀಕರುಗಳು ಸೇರಿ ಕೆರೆ ಅಭಿವೃದ್ದಿ ಸಮಿತಿ ಮಾಡಿಕೊಳ್ಳುವ ಮೂಲಕ ರೈತರು ಕಾನೂನು ರೀತಿಯಲ್ಲಿ ವೈಜ್ಞಾನಿಕವಾಗಿ ಎಷ್ಟು ಮಣ್ಣನ್ನು ತೆಗೆಯಬೇಕು ಎಂಬುದನ್ನು ಆ ಸಮಿತಿಯೊಂದಿಗೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ತೀರ್ಮಾನ ಮಾಡಿ ಕಾನೂನು ರೀತಿಯಲ್ಲಿ ಕೆರೆಯ ಮಣ್ಣನ್ನು ಹೊಡೆದುಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲ್ಲೂಕಿನ ಕೆರೆಗಳಲ್ಲಿ ಮಣ್ಣು ಮತ್ತು ಮರಳು ತೆಗೆಯುತ್ತಿರುವ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿರುವ ೩೮ ಕೆರೆಗಳಿಗೂ ಆಯಾ ಕೆರೆಗಳ ಗ್ರಾಮದ ಹಾಗೂ ಸುತ್ತಮುತ್ತಲ ರೈತರ ಮುಖಂಡರನ್ನೊಳಗೊ0ಡ ಕೆರೆ ಅಭಿವೃದ್ದಿ ಸಮಿತಿಯನ್ನು ಮಾಡಿಕೊಂಡು ರೈತರ ಹೊಲ ತೋಟಗಳಿಗೆ ಅಗತ್ಯವಿರುವಂತಹ ಮಣ್ಣನ್ನು ಹೊಡೆದುಕೊಳ್ಳಲು ನಿಮ್ಮಲ್ಲೇ ತೀರ್ಮಾನ ಮಾಡಿಕೊಳ್ಳಿ, ಕಾನೂನು ರೀತಿಯ ಮಾನದಂಡಗಳನ್ನು ಇಟ್ಟು ಕೊಂಡು ಮಣ್ಣನ್ನು ತೆಗೆಯಿರಿ ಇದಕ್ಕೆ ಸಂಬ0ಧ ಪಟ್ಟಂತೆ ರೈತರಿಗೆ ಅನುಕೂಲ ಮಾಡಿಕೊಡಿ ಎಂದ ಅವರು ಪ್ರತಿ ಕೆರೆಯ ಸಮಿತಿಯನ್ನು…

Read More

ತುಮಕೂರು: ಜಿಲ್ಲೆಯಾದ್ಯಂತ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಸಂದರ್ಭದಲ್ಲಿ ಗ್ರಾಮೀಣಭಾಗದ ಕಾರ್ಯ ನಿರತ ಪತ್ರಕರ್ತರನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ನಿರ್ದೇಶನ ನೀಡಿದರು. ನಗರದಲ್ಲಿ ಸೋಮವಾರ ಕೆಯುಡಬ್ಲೂಜೆ ಜಿಲ್ಲಾಧ್ಯಕ್ಷ ಎಲ್​.ಯೋಗೇಶ್​ ನೇತೃತ್ವದ ನಿಯೋಗವು ಜಿಲ್ಲೆಯ ಗ್ರಾಮೀಣಭಾಗದ ಕಾರ್ಯನಿರತ ಪತ್ರಕರ್ತರಿಗೆ ಆಶ್ರಯ ಯೋಜನೆ ಅಡಿ ನಿವೇಶನ ಹಂಚುವ ವೇಳೆ ಪರಿಗಣಿ ಸಬೇಕೆಂಬ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವ್ಯಾಪ್ತಿಗೆ ಒಳಪಡುವ ಸದಸ್ಯರಿದ್ದು, ಅವರನ್ನು ಗುರುತಿಸಿ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ಸೂಚಿಸಿದರು. ಸಂಘವು ಒದಗಿಸುವ ತಾಲೂಕುವಾರು ಪತ್ರಕರ್ತರ ಪಟ್ಟಿಯನ್ನು ಜಿಲ್ಲಾಡಳಿತ ಗಮನದಲ್ಲಿರಿಸಿಕೊಂಡು ಆದ್ಯತೆ ಮೇರೆಗೆ ನಿವೇಶನ ನೀಡಬೇಕು. ಜಿಲ್ಲಾ ಕೇಂದ್ರದಲ್ಲಿ ನಿವೇಶನ ನೀಡಲು ಸಾಧ್ಯವಿಲ್ಲ. ಹಾಗಾಗಿ, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಪತ್ರಕರ್ತರ ಹೆಸರನ್ನು ಗ್ರಾಮಸಭೆ ಮುಂದಿಡುವ ಪಟ್ಟಿಯಲ್ಲಿ ಸೇರಿಸಿ ಕ್ರಮವಹಿಸಲು ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಜಯನುಡಿ ಜಯಣ್ಣ,…

Read More