BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ
  • ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ
  • ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 
  • ನರೇಗಾ ಯೋಜನೆ: ೧ ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ: ಸಿಇಓ ಸೂಚನೆ
  • ಇಲಾಖೆಯಿಂದ ಸವಲತ್ತುಗಳನ್ನು ಪಡೆದುಕೊಂಡು ಅದುನಿಕ ಕೃಷಿಗೆ ಹೆಚ್ಚು ಒತ್ತು ನೀಡಿ: ಶಾಸಕ
  • ಮೇ ೧೩ರಂದು ಕೆಎನ್‌ಆರ್ ಅಮೃತ ಮಹೋತ್ಸವ
  • ಕಾರ್ಮಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಿ
  • ವಿದ್ಯಾರ್ಥಿಗಳು ಸಂಸ್ಕಾರ ಗುಣ ಬೆಳೆಸಿಕೊಳ್ಳಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು :  ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಜಿಲ್ಲೆಯ ಪಾತ್ರ ಮಹತ್ವಪೂರ್ಣವಾಗಿದೆ
Trending

ತುಮಕೂರು :  ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಜಿಲ್ಲೆಯ ಪಾತ್ರ ಮಹತ್ವಪೂರ್ಣವಾಗಿದೆ

By News Desk BenkiyabaleUpdated:April 06, 2021 6:27 pm

ತುಮಕೂರು: 

      ಕ್ವಿಟ್ ಇಂಡಿಯಾ ಚಳುವಳಿ ಯಲ್ಲಿ ತುಮಕೂರು ಜಿಲ್ಲೆಯ ಪಾತ್ರ ಮಹತ್ವ ದ್ದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದರು.

      ನಗರದ ಸ್ವಾತಂತ್ರ್ಯ ಚೌಕದಲ್ಲಿಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಾಗೂ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ನೆನಪಿನ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧೀಜಿಯವರಿಗೆ ‘ನುಡಿನಮನ’ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಉಪ್ಪಿನ ಸತ್ಯಾಗ್ರಹದಲ್ಲಿ ಮುಂದಾಳತ್ವ ವಹಿಸಿದ್ದ ಗಾಂಧೀಜಿ ಅವರಿಗೆ ನಮನ ಸಲ್ಲಿಸುವ ಮೂಲಕ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ರಾಷ್ಟ್ರಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯ ಕ್ರಮದ ಭಾಗವಾಗಿ ಪ್ರತಿ ವಾರವೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

      ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಪಾಲಿಕೆ ಆಯುಕ್ತೆ ರೇಣುಕಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್.ಕೆ, ಡಿಡಿಪಿಯು ನರಸಿಂಹಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ, ಸುರೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಸ್ವಾತಂತ್ರ್ಯ ಚೌಕದ ಮಹತ್ವ:

1942ರ ಸೆ.14ರಂದು ನಡೆದ ಕ್ವಿಟ್ ಇಂಡಿಯಾ ಚಳುವಳಿ ಭಾಗವಾಗಿ ತುಮಕೂರಿನ ಸ್ವಾತಂತ್ರ್ಯ ಚೌಕದಲ್ಲಿ 1000 ಜನ ಸೇರಿ ಚಳುವಳಿ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಚಳುವಳಿದಾರರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಗೆ ರಾಮಚಂದ್ರ, ಮಂಡಿಪೇಟೆ ಗಂಗಣ್ಣ, ಸಂತೇಪೇಟೆ ನಂಜುಂಡಪ್ಪ ಹುತಾತ್ಮರಾಗಿ ದ್ದರೆಂಬುದು ಈ ಸ್ವಾತಂತ್ರ್ಯ ಚೌಕದ ಮಹತ್ವ.

75 ವಾರಗಳ ಕಾಲ ನಿರಂತರ ಕಾರ್ಯಕ್ರಮ:

      2022ರ ಆ.15ರಂದು ನಡೆಯುವ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ವಾರಗಳ ಕಾಲ ನಿರಂತರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಜಿಲ್ಲಾಡಳಿತವು 2022ರ ಅ. 15ರವರೆಗೂ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದೆ.

ಈಗಾಗಲೇ ತುಮಕೂರು ನಗರದ ಚೌಕದಿಂದ ಆರಂಭವಾಗಿರುವ ನುಡಿ ನಮನ ಕಾರ್ಯಕ್ರಮವು 2021ರ ಏ, 9ರಂದು ನಗರದ ಸರ್ಕಾರಿ ಹೈಸ್ಕೂಲ್ ಮೈದಾನದ ಗಾಂಧಿ ಭವನ, ಏಪ್ರಿಲ್ 14, 25; ಮೇ 14; ಜೂ.5, 21; ಆ.15, 23; ಸೆ.15; ಅ.2; ನ.1, 14; ಡಿ.3, 29 ಮತ್ತು 2022ರ ಜ.24,26; ಫೆ.19; ಮಾ.8; ಜು.6 ಹಾಗೂ ಆ.15 ರಂದು ಜಿಲ್ಲಾ ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

      ಅದೇ ರೀತಿ 2021ರ ಏ.20; ಜು.1; ಸೆ.7; ನ.17 ಹಾಗೂ 2022ರ ಏ.20; ಜು.20 ರಂದು ಚಿಕ್ಕನಾಯಕನಹಳ್ಳಿ, 2021ರ ಏ.28; ಜು.15; ಸೆ.3; ನ.10 ಹಾಗೂ 2022ರ ಜ.19; ಏ.13; ಜು.13ರಂದು ತಿಪಟೂರು, 2021ರ ಮೇ.6; ಜು.8; ನ.24 ಹಾಗೂ 2022ರ ಫೆ.3; ಏ.27; ಜು.27ರಂದು ಪಾವಗಡ, 2021ರ ಮೇ.19; ಜು.23; ಸೆ.22; ಡಿ.1 ಹಾಗೂ 2022ರ ಫೆ.9; ಮೇ.4; ಆ.3 ರಂದು ತುರುವೇಕೆರೆ, 2021ರ ಮೇ.24; ಜು.29; ಅ.4; ಡಿ.8 ಹಾಗೂ 2022ರ ಫೆ.14, ಮೇ.11; ಆ.10ರಂದು ಗುಬ್ಬಿ, 2021ರ ಜೂ.10; ಆ.9; ಅ.11; ಡಿ.22 ಹಾಗೂ 2022ರ ಮಾ.2; ಜೂ.8 ರಂದು ಮಧುಗಿರಿ, 2021ರ ಜೂ.16; ಅ.22 ಹಾಗೂ 2022ರ ಜೂ.15ರಂದು ಕೊರಟಗೆರೆ, 2021ರ ಜೂ.23; ಅ.27 ಹಾಗೂ 2022ರ ಜ.5; ಮಾ.16ರಂದು ಕುಣಿಗಲ್, 2021ರ ಆ.4; ಸೆ.29; ಡಿ.15 ಹಾಗೂ 2022ರ ಫೆ.23, ಜೂ.22 ರಂದು ಶಿರಾ, 2021ರ ಅ.1 ಹಾಗೂ 2022ರ ಜ.12; ಏ.6ರಂದು ತುಮಕೂರಿನಲ್ಲಿ ನುಡಿನಮನ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿಯವರಿಗೆ ನಮನ, ಶ್ರಮದಾನ, ದೇಶಭಕ್ತಿಗೀತೆ ಗಾಯನ, ಪಾದಯಾತ್ರೆ, ಕಾಲೇಜು ವಿದ್ಯಾರ್ಥಿಗಳಿಂದ ಪ್ರಭಾತ್ ಪೇರಿ, ಉಪನ್ಯಾಸ, ಸ್ವಚ್ಚತೆ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

(Visited 16 times, 1 visits today)
Previous Articleಹುಳಿಯಾರು :  ರಾಗಿ ಖರೀದಿ ಅವಧಿ ವಿಸ್ತರಣೆ
Next Article ತುಮಕೂರು : ವಾರ್ಡ್ ಹಂತದಲ್ಲಿ ಸಾರ್ವಜನಿಕರಿಗೆ ವ್ಯಾಕ್ಸಿನೇಷನ್ ಬಗ್ಗೆ ಅರಿವು
News Desk Benkiyabale

Related Posts

ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ

May 06, 2025 3:24 pm ತುಮಕೂರು

ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ

May 06, 2025 3:23 pm ತುಮಕೂರು

ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 

May 06, 2025 3:22 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ

May 06, 2025 3:24 pm
ತುಮಕೂರು

ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ

May 06, 2025 3:23 pm
ತುಮಕೂರು

ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 

May 06, 2025 3:22 pm
ತುಮಕೂರು

ನರೇಗಾ ಯೋಜನೆ: ೧ ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ: ಸಿಇಓ ಸೂಚನೆ

May 06, 2025 3:21 pm
ತುಮಕೂರು

ಇಲಾಖೆಯಿಂದ ಸವಲತ್ತುಗಳನ್ನು ಪಡೆದುಕೊಂಡು ಅದುನಿಕ ಕೃಷಿಗೆ ಹೆಚ್ಚು ಒತ್ತು ನೀಡಿ: ಶಾಸಕ

May 06, 2025 3:20 pm
ತುಮಕೂರು

ಮೇ ೧೩ರಂದು ಕೆಎನ್‌ಆರ್ ಅಮೃತ ಮಹೋತ್ಸವ

May 06, 2025 3:18 pm
Our Youtube Channel
Our Picks

ಎಸ್‌ಎಸ್‌ಎಲ್‌ಸಿಯ ಫಲಿತಾಂಶ: ಹರಿಪ್ರಿಯಾಳ ಉತ್ತಮ ಸಾಧನೆ

May 02, 2025 2:34 pm

ಮಾತು ಕೃತಿಗೆ ಬಂದಾಗ ವ್ಯಕ್ತಿಗೆ ಗೌರವ

April 30, 2025 4:11 pm

ಕಾಯಕವೇ ಕೈಲಾಸ ಎಂದು ಸಾರಿದವರು ಬಸವಣ್ಣ

April 30, 2025 4:09 pm

ಮೇ೫: ಆಟೋ ಚಾಲಕ, ಕಾರ್ಮಿಕರ ನೋಂದಣಿ ಅಭಿಯಾನ

April 30, 2025 4:08 pm

ಸರ್ವ ಜನಾಂಗಗಳ ನಾಯಕ ಬಸವಣ್ಣ: ತಹಶೀಲ್ದಾರ್

April 30, 2025 4:06 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police police naveen Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ

By News Desk BenkiyabaleMay 06, 2025 3:24 pm

ತುಮಕೂರು: ಆಸ್ಪತ್ರೆಗಳಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ, ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಪರಿಸರಕ್ಕೆ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ನಿಯಮಗಳು…

ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ

May 06, 2025 3:23 pm

ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 

May 06, 2025 3:22 pm

ನರೇಗಾ ಯೋಜನೆ: ೧ ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ: ಸಿಇಓ ಸೂಚನೆ

May 06, 2025 3:21 pm
News by Date
May 2025
M T W T F S S
 1234
567891011
12131415161718
19202122232425
262728293031  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.