ಚಿಕ್ಕನಾಯಕನಹಳ್ಳಿ :

     ಕೊರೊನಾ ಲಾಕ್ ಡೌನ್ ಹಲವಾರು ಜನರ ಬದುಕಿನಲ್ಲಿ ನುಂಗಲಾರದ ತುತ್ತಾಗಿದ್ದು. ಅನೇಕರ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದೆ. ತಾಲೂಕಿನಲ್ಲಿ ಹಲವಾರು ಜನ ಬಡವರು ಒಪ್ಪತ್ತಿನ ಊಟಕ್ಕೂ ಯೋಚನೆ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

       ಅದೇ ರೀತಿ ಪಟ್ಟಣದ ನೆಹರು ಸರ್ಕಲ್ ಬಳಿ ಹಸಿವಿನಿಂದ ಕೂತಿದ್ದ ಅಜ್ಜಿಯನ್ನು ಗಮನಿಸಿದ ಪಿಎಸ್‍ಐ ಹರೀಶ್ ರವರು ಅಜ್ಜಿಗೆ ತಿಂಡಿ ಹಾಗೂ ಬ್ರೆಡ್ ವ್ಯವಸ್ಥೆಯನ್ನು ಮಾಡಿಕೊಟ್ಟರು. ಇವರ ಈ ಕಾರ್ಯಕ್ಕ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ

(Visited 78 times, 1 visits today)