ಸಿಎಸ್ ಪುರ: 

      ಬಿಜೆಪಿ ಜೆಡಿಎಸ್ ಕಾರ್ಯಕರ್ತರ ದಿಕ್ಕಾರಗಳ ನಡುವೆ ಸಿಎಸ್ ಪುರ ದಲ್ಲಿ ಪೆÇಲೀಸ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದು ಯಾವ ರಾಜಕೀಯ ನಾಯಕರುಗಳನ್ನು ಹೋಗಬೇಕೆಂಬ ಪ್ರಶ್ನೆಗೆ ಪೆÇಲೀಸ್ ಅಧಿಕಾರಿಗಳೇ ಉತ್ತರಿಸಬೇಕಾಗುತ್ತದೆ.

      ರಾಜಕೀಯ ವ್ಯಕ್ತಿಗಳ ನಡುವೆ ನಡೆದಂತಹ ಸಂಘರ್ಷಕ್ಕೆ ನಾಗರಿಕರು ರೈತರುಗಳು ಸಂಕಷ್ಟಕ್ಕೀಡಾದ ಘಟನೆ ಸಿಎಸ್ ಪುರದಲ್ಲಿ ನಡೆದಿದೆ ನೆನ್ನೆ ಶಾಸಕ ಮಸಾಲೆ ಜಯರಾಮ್ ಮಗ ತೇಜು ಮೇಲೆ ನಡೆದ ಘಟನೆಯಿಂದ ಮಾಜಿ ಮತ್ತು ಹಾಲಿ ಶಾಸಕರುಗಳ ಹಿಂಬಾಲಕರು ಹಾಗೂ ಕಾರ್ಯಕರ್ತರುಗಳು ನಡುವೆ ದಿಕ್ಕಾರ ಗಳ ಸುರಿಮಳೆ ಸುರಿದ ಘಟನೆ ನಡೆದಿದ್ದು ರಾಜಕಾರಣಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿರುವ ಮಾಜಿ ಶಾಸಕ ಎಂಪಿ ಕೃಷ್ಣಪ್ಪ ವಿರುದ್ಧ ಬಿಜೆಪಿ ಕಾರ್ಯಕರ್ತರು ಒಂದೆಡೆ ಧಿಕ್ಕಾರ ಕೂಗುತ್ತಿದ್ದಾರೆ ಮತ್ತೊಂದೆಡೆ ಹಾಲಿ ಶಾಸಕ ಮಸಾಲೆ ಜಯರಾಮ್ ವಿರುದ್ಧ ಘೋಷಣೆಯನ್ನು ಇವರನ್ನು ನಿಯಂತ್ರಿಸಲು ಪೆÇಲೀಸರು ಹರಸಾಹಸ ಪಟ್ಟು ಎರಡು ಕಡೆಯ ಬೆಂಬಲಿಗರನ್ನು ಚದುರಿಸುವಲ್ಲಿ ಯಶಸ್ವಿಯಾದರು ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಮಾತನಾಡಿ ನನ್ನ ಅವಧಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಕಾರ್ಯಕರ್ತರುಗಳಿಗೆ ಈಗಿನ ಶಾಸಕ ಮಸಾಲೆ ಜಯರಾಮ್ ಸಂಗಡಿಗರು ಕಾರಣಕ್ಕಾಗಿ ಹಾಗೂ ಅಣ್ಣನ ಸಾವಿನ ತಿಥಿ ಮಾಡಲು ತುಮಕೂರಿನಿಂದ ತನ್ನ ವಾಹನದಲ್ಲಿ ಸಾಮಾನನ್ನು ತರುತ್ತಿದ್ದ ವ್ಯಕ್ತಿಯನ್ನು ಜೆಡಿಎಸ್ ಬೆಂಬಲಿತ ವ್ಯಕ್ತಿ ಎಂಬ ಕಾರಣಕ್ಕೆ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾರೆ ಎಂದು ಮಾಜಿ ಶಾಸಕ ಕೃಷ್ಣಪ್ಪ ತಿಳಿಸಿ ಇದರಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು.

        ಹಾಗೂ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿರುವುದು ವಿಷಾದನೀಯ ಎಂದು ತಿಳಿಸಿದರು ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಸಿಎಸ್ ಪುರ ವಿ ಎಸ್ ಎಸ್ ಎನ್ ಅಧ್ಯಕ್ಷ ನಾಗರಾಜು ಮುಖಂಡತ್ವದಲ್ಲಿ ಮಾಜಿ ಶಾಸಕರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು 2 ಗುಂಪುಗಳನ್ನು ಚದುರಿಸಲು ಪೆÇಲೀಸರು ಹರಸಾಹಸ ಪಡಬೇಕಾಯಿತು ಮುಖಂಡರು ಮಾತನಾಡಿಶಾಸಕರ ಮಗನ ಮೇಲೆ ಹಲ್ಲೆ ಮಾಡಿಸಿದಂತಹ ಎಂಟಿ ಕೃಷ್ಣಪ್ಪ ಹಾಗೂ ಅವರ ಹಿಂಬಾಲಕರಿಂದ ಆದಂತಹ ಘಟನೆಗೆ ಈಗಾಗಲೇ ಪೆÇಲೀಸ್ ಇಲಾಖೆಯು ಕ್ರಮ ಕೈಗೊಂಡಿದ್ದು ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಶಾಸಕ ಎಂ ಕೃಷ್ಣಪ್ಪನವರು ಈ ರೀತಿ ನಡೆಸುತ್ತಿದ್ದು ಆತನ ಮಗನ ಮೇಲೆ ಇದೇ ರೀತಿ ಹತ್ಯೆ ನಡೆಯುತ್ತಿದ್ದರೆ ಸುಮ್ಮನಿರುತ್ತಿದ್ದರೆ ಎಂದು ಪ್ರಶ್ನಿಸಿದ ಅವರು ಮುಂದಿನ ದಿನಗಳಲ್ಲಿ ಇಂತಹ ದೌರ್ಜನ್ಯಗಳು ಹಾಗೂ ದಬ್ಬಾಳಿಕೆಗಳು ನಡೆಯದಂತೆ ಪೆÇಲೀಸ್ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

 

(Visited 5 times, 1 visits today)