ತುಮಕೂರು:

ಬ್ರಕೀದ್ ಹಬ್ಬ ಹಿನ್ನೆಲೆಯಲ್ಲಿ ಮಾಂಸಕ್ಕಾಗಿ ಗೋವುಗಳನ್ನು ಕಡಿಯಲು ಯತ್ನಿಸಿದ ಮೂವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಅಮೃತೂರು ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಮೃತೂರು ಸಮೀಪದ ಬಿಸಿನೆಲೆ ಅರಣ್ಯ ಪ್ರದೇಶದಲ್ಲಿ 16 ಹಸುಗಳು ಹಾಗೂ 13 ಕೋಣಗಳನ್ನು ತೆಗೆದುಕೊಂಡು ಹೋಗಿ ಹತ್ಯ ಮಾಡಲು ಯತ್ನಿಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಡಿವೈಎಸ್ ಪಿ ನೇತೃತ್ವದಲಲಿ ರಮೇಶ್ ಹಾಗೂ ಸರ್ಕಲ್ ಇನ್ಸೆಪೆಕ್ಟರ್ ಗುರುಪ್ರಸಾದ್ ತಂಡ ನೇತೃತ್ವದಲ್ಲಿ ದಾಳಿ ನಡೆಸಿ, 15 ಹಸುಗಳು ಹಾಗೂ 13 ಕೋಣಗಳನ್ನು ರಕ್ಷಿಸಲಾಗಿದೆ.

ಪೆÇಲೀಸರು ಸ್ಥಳಕ್ಕೆ ಧಾವಿಸುವ ವೇಳೆಗಾಗ್ಲೇ ಒಂದು ಹಸುವನ್ನು ಹತ್ಯೆಮಾಡಿ ಮಾಂಸವನ್ನು ತುಂಡುತಾಂಡಾಗಿಸಿದ್ದರು, ಗೋವುಗಳನ್ನು ಕಡಿಯುತ್ತಿದ್ದ ಜಗದೀಶ್, ಮಂಜುನಾಥ್ ಹಾಗೂ ಶಿವು ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಜಾನುವಾರುಗಳನ್ನು ಸಾಗಿಸಲು ಬಳಸಿದ್ದ ಇಂದು ಟಾಟಾ ಏಸ್ ಹಾಗೂ ಎರಡು ಬೈಕ್‍ಗಳು ಜೊತೆಗೆ ಹಸುವಿನ ಮಾಂಸವನ್ನು ವಶ ಪಡಿಸಿದ್ದಾರೆ. ಅಮೃತೂರು ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

(Visited 15 times, 1 visits today)