ಕೊರಟಗೆರೆ : 

      ಕಾಟೇನಹಳ್ಳಿ ಕೆರೆ ಅಂಗಳದಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆಯ ಮೇಲೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪಿಎಸೈ ಮಹಾಲಕ್ಷ್ಮೀ ನೇತೃತ್ವದ ಪೊಲೀಸರ ತಂಡ 12ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

      ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಕಾಟೇನಹಳ್ಳಿ ಕೆರೆ ಅಂಗಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ 12ಜನ ಜೂಜು ಕೋರರಿಂದ 1ಲಕ್ಷ 11ಸಾವಿರ ನಗದನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ದೊಡ್ಡಬಳ್ಳಾಪುರ, ತ್ಯಾಮಗೊಂಡ್ಲು, ದಾಸಬ್‍ಪೇಟೆ, ತುಮಕೂರು ಮತ್ತು ಕೊರಟಗೆರೆ ಮೂಲದ ದೇವರಾಜು, ಶಿವರಾಜು, ಶ್ರೀನಿವಾಸ, ನರಸೀಯಪ್ಪ, ನಾರಾಯಣ, ಕುಮಾರ, ಸಂಜೀವರಾಜು, ನಾಗರಾಜು, ಮಂಜಣ್ಣ, ರೇಣುಕಾಮೂರ್ತಿ, ವಾಹಿದ್, ಕೃಷ್ಣಪ್ಪ ಬಂಧಿತ ಆರೋಪಿಗಳು. ಇನ್ನೂಳಿದ ಕೆಂಪ, ಸಂಜು, ಪ್ರಜ್ವಲ್ ಎಂಬ 3ಜನರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

       ದಾಳಿ ಮಾಡಿದ ಕೋಳಾಲ ಪಿಎಸೈ ಮಹಾಲಕ್ಷ್ಮೀ, ಸಿಬ್ಬಂದಿಗಳಾದ ಮಂಜುನಾಥ, ರಮೇಶ್, ಲಕ್ಷ್ಮೀಕಾಂತಯ್ಯ, ರಾಮು, ರವಿಕುಮಾರ್, ಮಧುಕುಮಾರ್, ಶ್ರೀಕಾಂತನಾಯ್ಕ, ಪುಟ್ಟಸ್ವಾಮಿ, ಶಂಬುಲಿಂಗೇಶ್, ಜಯರಾಮು ನೇತೃತ್ವದ ತಂಡವನ್ನು ತುಮಕೂರು ಎಸ್ಪಿ ಡಾ.ಕೋನವಂಶಿಕೃಷಿ ಅಭಿನಂದಿಸಿದ್ದಾರೆ. ಕೋಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 21 times, 1 visits today)