ತುರುವೇಕೆರೆ


ತಾಲೂಕಿನ ತಂಡಗ ಗ್ರಾಮಪಂಚಾಯ್ತಿ ಯ ನೂತನ ಉಪಾಧ್ಯಕ್ಷರಾಗಿ ಕೋಳಾಲ ಕ್ಷೇತ್ರದ ಸದಸ್ಯ ಕೆ.ಆರ್.ರೇಣುಕುಮಾರ್ ರವರು ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಉಪಾಧ್ಯಕ್ಷರ ಚುನಾವಣೆಗೆ ಕೆ.ಆರ್.ರೇಣುಕುಮಾರ್ ಮತ್ತು ಚನ್ನಬಸವೇಗೌಡ ನಾಮಪತ್ರ ಸಲ್ಲಿಸಿದ್ದರು. ತಹಸೀಲ್ದಾರ್ ರೇಣುಕುಮಾರ್ ರವರು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಒಟ್ಟು 15 ಸದಸ್ಯರಿರುವ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಕೆ.ಆರ್.ರೇಣುಕುಮಾರ್ ರವರಿಗೆ 8 ಮತ್ತು ಚನ್ನಬಸವೇಗೌಡರಿಗೆ 5 ಮತಗಳು ಲಭಿಸಿತು. 2 ಮತಗಳು ಅಸಿಂಧುಗೊಂಡವು.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ದಿಲೀಪ್ ರವರು ರಾಜೀನಾಮೆ ನೀಡಿದ್ದರಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾಗಿರುವ ಮಾರಪ್ಪನಹಳ್ಳಿಯ ಗಂಗಮ್ಮ ಮುಂದುವರೆದಿದ್ದಾರೆ.
ಪಿಡಿಓ ಭೈರಪ್ಪ, ಕಾರ್ಯದರ್ಶಿ ಶ್ರೀನಿವಾಸ್ ಮತ್ತು ಕಂದಾಯಾಧಿಕಾರಿ ರಂಗಸ್ವಾಮಿ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಸದಸ್ಯರುಗಳಾದ ರಂಗನಹಳ್ಳಿ ಆರ್.ಬಿ.ಮಂಜುನಾಥ್, ಚಂದ್ರಾಪುರ ಹರೀಶ್ ಕುಮಾರ್, ಕೋಳಾಲದ ಕಲಾವತಿ ಮಹಾಲಿಂಗಯ್ಯ, ಮಾರಪ್ಪನಹಳ್ಳಿಯ ಮಂಜುಳಾ ಪುಟ್ಟಣ್ಣ, ತಂಡಗದ ರೇಖಾಮಣಿ ಬಸವರಾಜು, ಕೋಳಾಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೋಳಾಲ ರಘು ಸೇರಿದಂತೆ ಹಲವರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.

(Visited 1 times, 1 visits today)