ತುಮಕೂರು

ಜಿಲ್ಲಾ ಅಲ್ಪಸಂಖ್ಯಾತರ ನಿಗಮದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಮತ್ತು ತಳ್ಳುವ ಗಾಡಿಗಳು, ಬಿಸಿಲಿನ ಛತ್ರಿಗಳನ್ನು ನೀಡುವಂತೆ ಒತ್ತಾಯಿಸಿ ತುಮಕೂರು ಪುಟ್‍ಪಾತ್ ವ್ಯಾಪಾರಿಗಳ ಸಂಘ (ಸಿಐಟಿಯು) ನೇತೃತ್ವದಲ್ಲಿ ವ್ಯಾಪಾರಿಗಳು ಮನವಿ ಸಲ್ಲಿಸಿದರು. ಸಾವಿರಾರು ಬೀದಿ ಬದಿ ವ್ಯಾಪಾರಿಗಳು ಜನಸಾಮಾನ್ಯರಿಗೆ ಕೈಗೆ ಎಟುಕುವ ದರದಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯಗಳು, ತಳ್ಳುವ ಗಾಡಿ ನೀಡುವಂತೆ ಕೆಎಂಡಿಸಿ ಜಿಲ್ಲಾ ವ್ಯವಸ್ಥಾಪಕರಿಗೆ ಸಂಘದ ಅಧ್ಯಕ್ಷರಾದ ರಾಜಶೇಖರ್, ರವಿಕುಮಾರ್, ಜಿ.ಜಗದೀಶ್, ಎನ್.ಮುತ್ತುರಾಜ್, ವಸೀಂ ಅಕ್ರಂ, ಶ್ರೀಧರ್, ಲಕ್ಷ್ಮಮ್ಮ, ಎಂ.ಡಿ.ಅಕ್ರಮ್, ಅತೀಕ್ ಅಹಮದ್ ಸೇರಿದಂತೆ ಇತರರಿದ್ದರು.

(Visited 1 times, 1 visits today)