ತುಮಕೂರು


ವಿಮಾ ನಿಯಂತ್ರಣ ಪ್ರಾಧಿಕಾರನ ಉದ್ದೇಶಿತ ನೂತನ ನಿಯಮಗಳು ವಿಮಾ ಪ್ರತಿನಿಧಿಗಳಿಗೆ ಹಾಗೂ ವಿಮಾ ರಂಗಕ್ಕೆ ತೀವ್ರ ಮಾರಕವಾಗಲಿದೆ. ಅದ್ದರಿಂದ ಈ ಕುರಿತು Iಖಆಂ ಚೇರ್ಮನ್ ಹಾಗೂ ಕೇಂದ್ರದ ಅರ್ಥ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್
ಅವರಿಗೆ ಪತ್ರ ಬರೆಯಲು ಕೋರಿ ತುಮಕೂರು ಸಂಸದ ಶ್ರೀ ಜಿ.ಎಸ್.ಬಸವರಾಜ್ ಅವರಿಗೆ ಎಲ್.ಐ.ಸಿ.ಅಭಿವೃದ್ಧಿ ಅಧಿಕಾರಿಗಳ ಸಂಘದ ಮುಖಂಡರು ಮನವಿ ಸಲ್ಲಿಸಿದರು.
ಇಡೀ ದೇಶದಾದ್ಯಂತ 25 ಲಕ್ಷಕ್ಕೂ ಹೆಚ್ಚು ವಿಮಾ ಪ್ರತಿನಿಧಿಗಳು ಕೆಲಸ ನಿರ್ವಹಿಸುತ್ತಿದ್ದು, ಕೇವಲ ಒಂದು ಪಾಲಿಸಿ ಮಾಡಲು ಪ್ರತಿ ದಿನ 7/8 ಜನರನ್ನು , ಕನಿಷ್ಠ ನಾಲ್ಕೈದು ಬಾರಿ ಆದರೂ ಭೇಟಿ ನೀಡಿ, ವಿಮಾ ರಕ್ಷಣೆಯನ್ನು ಒದಗಿಸುತ್ತಿದ್ದಾರೆ. ನಂತರ ರಿನಿವಲ್ ಪ್ರೀಮಿಯಂ ಕಟ್ಟಿಸಲು ಸಂಪರ್ಕಿಸಿ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಲು ಪ್ರಯತ್ನ ಪಡುತ್ತಾರೆ. ಕೋವಿಡ್ ನ ಸಮಯದಲ್ಲಿ ತಮ್ಮ ಜೀವ ಭಯವನ್ನು ಬಿಟ್ಟು, ವಿಮಾ ಪ್ರತಿನಿಧಿಗಳು ಜನರಿಗೆ ವಿಮಾ ರಕ್ಷಣೆ ನೀಡಲು ಹಾಗೂ ಕ್ಲೈಮ್ ಪಾವತಿಸಲು ನೆರವಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ , ವಿಮಾ ನಿಯಂತ್ರಣ ಪ್ರಾಧಿಕಾರ ಅವರಿಗೆ ನೀಡುವ ಕಮಿಷನ್ ಅನ್ನು ಮ್ಯಾನೇಜ್ಮೆಂಟ್ ವೆಚ್ಚದೊಳಗೆ ಸೇರಿಸಲು ವಿಮಾ ಕಂಪನಿಗಳಿಗೆ ಸೂಚಿಸಿದೆ. ಇದು ವಿಮಾ ಪ್ರತಿನಿಧಿಗಳ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಮೂಲಕ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಇನ್ನೂ ಹೆಚ್ಚಾಗಲು ಕಾರಣವಾಗಲಿದೆ. ಉದ್ದೇಶಿತ *ಬಿಮಾ ಸುಗಮ* ವ್ಯವಸ್ಥೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಎಲ್.ಐ.ಸಿ.ಅಭಿವೃದ್ಧಿ ಅಧಿಕಾರಿಗಳ ಸಂಘದ ಬೆಂಗಳೂರು ವಿಭಾಗದ ಜಂಟಿ ಕಾರ್ಯದರ್ಶಿ ಗಳಾದ ಎಸ್.ಆನಂದ ಮೂರ್ತಿ ಹಾಗೂ ಆರ್.ಪ್ರಸನ್ನ ಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತುಮಕೂರು ಶಾಖೆ 1 ರ ಅಧ್ಯಕ್ಷರಾದ ಎಂ.ಎಸ್ ಭಟ್, ಕಾರ್ಯದರ್ಶಿ ಚಂದ್ರಶೇಖರಯ್ಯ, ತುಮಕೂರು ಶಾಖೆ 2 ರ ಅಧ್ಯಕ್ಷರಾದ ಎಸ್.ಕೆ.ಗಿರಿರಾಜು, ಕಾರ್ಯದರ್ಶಿ ಸತ್ಯ ಚಿದಾನಂದ , ಕೊರಟಗೆರೆ ಶಾಖೆಯ ದಿವಾಕರ್, ತಿಪಟೂರು ಶಾಖೆಯ ಎಸ್.ಜಿ.ಎಸ್.ಪ್ರಸನ್ನ, ತುಮಕೂರಿನ ಅಭಿವೃದ್ಧಿ ಅಧಿಕಾರಿಗಳಾದ ಎಸ್. ಜಿ.ಭಟ್ ಸಿದ್ದರಾಮ ಪ್ರಸನ್ನ , ದಯಾನಂದ ಸ್ವಾಮಿ, ಅರುಣ್ ಪವಾರ್, ಸಚಿನ್, ಮುರಳಿ, ಹಿಮಾಂಶು ಕುಮಾರ್ ಮತ್ತು ಮುನಿರಾಜು ಮುಂತಾದವರು ಭಾಗವಹಿಸಿದ್ದರು.

(Visited 1 times, 1 visits today)