ಕೊರಟಗೆರೆ


ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 1120ನೇ ಮದ್ಯವರ್ಜನ ಶಿಬಿರವನ್ನು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮುರುಳೀಧರ ಹಾಲಪ್ಪ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಗಳಾದರೂ ತಮ್ಮ ಕುಟುಂಬಕ್ಕೆ ಅಲ್ಲಿ ಬಡವ ಶ್ರೀಮಂತ ಎಂದು ಬರುವುದಿಲ್ಲ, ಮದ್ಯಪಾನ, ಧೂಮಪಾನ ಇತರೆ ದುಶ್ಚಟಗಳಿಗೆ ದಾಸರಾದರೆ ಅವರ ಕುಟುಂಬ ಬೀದಿ ಪಾಲಾಗುತ್ತದೆ. ಅದರಲ್ಲೂ ಬಡ ಕುಟುಂಬಗಳು ಪ್ರತಿನಿತ್ಯ ಕೂಲಿ ಮಾಡಿ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ದಿನೇಶ್.ಡಿ ಅವರು ಮಾತನಾಡಿ, ಶ್ರೀ ಪರಮಪೂಜ್ಯರ ಕನಸು ಬಡ ಕುಟುಂಬಗಳು ಸಂತೋಷದಿಂದ ಜೀವನ ಸಾಗಿಸಬೇಕು, ಕುಟುಂಬದ ಸದಸ್ಯರು ಯಾವ ರೀತಿ ಇರಬೇಕು ಎನ್ನುವುದನ್ನು ಆಲೋಚಿಸಿದರು, ಅವರ ಆಲೋಚನೆಯಲ್ಲಿ ಮೊದಲು ಬಂದದ್ದೇ ಬಡ ಕುಟುಂಬದ ಅದೆಷ್ಟೊ ಮನೆಗಳ ಯಜಮಾನರು ಇತ್ತೀಚಿನ ಗಂಡು ಮಕ್ಕಳು ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ದುಶ್ಚಟಗಳಿಗೆ ದಾಸರಾಗಿದ್ದಾರೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮದ್ಯವರ್ಜನ ಶಿಬಿರದ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಮಾತನಾಡಿದರು.
ನಿಮ್ಮನ್ನು ನೋಡಿ ಅನೇಕ ಜನರು ನಿಮ್ಮನ್ನ ಆಡಿಕೊಳ್ಳುತ್ತಾರೆ, ನಿಮ್ಮ ಮಕ್ಕಳನ್ನು ಕುಡುಕನ ಮಕ್ಕಳು ಎಂದು ನಿಂದಿಸುತ್ತಾರೆ, ಆ ಮಕ್ಕಳ ಮನಸ್ಸು ಎಷ್ಟು ನೋಯುತ್ತದೆ ಎನ್ನುವುದನ್ನು ಯೋಚಿಸಿ, ಮುಂದೆ ನಿಮ್ಮ ಮಕ್ಕಳು ನಿಮ್ಮ ದಾರಿಯನ್ನು ಹಿಡಿದರೆ ಏನು ಮಾಡುತ್ತೀರಾ, ಮಧ್ಯವರ್ಜನ ಶಿಬಿರದಲ್ಲಿ 8 ದಿನಗಳ ಕಾಲ ಸ್ವಲ್ಪ ಕಷ್ಟ ಎನಿಸಿದರು ನಿಮ್ಮ ಮುಂದಿನ 80 ವರ್ಷಗಳ ಜೀವನ ಸುಖಮಯವಾಗಿರುತ್ತದೆ, ತಾವೆಲ್ಲರೂ ಸಹಕರಿಸಿ ಶಿಬಿರವನ್ನ ಯಶಸ್ವಿಗೊಳಿಸಿ ನಿಮ್ಮ ಕುಟುಂಬದ ಜೊತೆ ಸಂತೋಷವಾಗಿರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಾಲಕೃಷ್ಣ ಎಂ, ಮೇಲ್ವಿಚಾರಕ ರವೀಂದ್ರ ಬಿ, ಸಂಘದ ಅಧ್ಯಕ್ಷ ಕೆ ವಿ ಪುರುಷೋತ್ತಮ್, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಟರಾಜ್, ಬೆಸ್ಕಾಂ ನಿವೃತ್ತ ನೌಕರ ಪರ್ವತಯ್ಯ, ವೇದಿಕೆಯ ಸದಸ್ಯರಾದ ಎಲ್ ರಾಜಣ್ಣ, ಟಿ.ಕೆ ಜಗದೀಶ್, ನೂತನ ಸದಸ್ಯ ಮಮತಾ, ಸಿಬಿರಾಧಿಕಾರಿ ನಂದ ಕುಮಾರ್, ಆರೋಗ್ಯ ಸಹಾಯಕಿ ಶ್ರೀಮತಿ ಪ್ರೆಸಿಲ್ಲಾ ಡಿಸೋಜಾ, ಸಹ ಕಾರ್ಯದರ್ಶಿ ಜಗದೀಶ್ ಕೆ.ಬಿ, ಬೀದಿಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಕಲೀಮ್ ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಎಲ್ಲಾ ಮಹಿಳಾ ಸದಸ್ಯರು ಹಾಗೂ ಮದ್ಯವರ್ಜನ ತ್ಯಜಿಸಲು ಬಂದ ಸಹಸ್ರಾರು ಜನರು ಹಾಜರಿದ್ದರು.

(Visited 6 times, 1 visits today)