ತುಮಕೂರು


ಕೊರಟಗೆರೆ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ಯಶಸ್ವಿಯನ್ನು ಕಂಡಿತು.
ಮಧುಗಿರಿ, ಕೊರಟಗೆರೆ ಕ್ಷೇತ್ರದಲ್ಲಿ ಜನತಾದಳ ಭದ್ರಕೋಟೆಯಾಗಿ ಜನ ಆಶೀರ್ವಾದ ಮಾಡಿದ್ದಾರೆ.
ಕೆಲ ಕಾರಣಾಂತರಗಳಲ್ಲಿ ಸೋಲುಂಟಾಗಿದೆ. ಅದು ಕೊರಟಗೆರೆ ಮತದಾರರ ಸೋಲಲ್ಲ.
ಅದು ಬೇರೆ ರೀತಿ ಇದೆ, ಅದರ ಹಿನ್ನೆಲೆ ನನಗೆ ಗೊತ್ತು.
ಕಳೆದ ಬಾರಿಯ ಲೋಪ ಸರಿಪಡಿಸುವುದಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಸುಧಾಕರ್ ಲಾಲ್ ಜನತೆ ಆಶೀರ್ವಾದದಿಂದ ಗೆಲ್ತಾರೆ ಎಂದು ಎಚ್‍ಡಿ ಕುಮಾರಸ್ವಾಮಿ ನುಡಿದರು.
ಕಾಂಗ್ರೆಸ್‍ನಲ್ಲಿ ದಲಿತ ಸಿಎಂ ಕೂಗು ವಿಚಾರ.
ಸಿಎಂ ಅನ್ನು ಯಾರು ಮಾಡ್ತಾರೆ, ಎಲ್ಲಿಂದ ಮಾಡ್ತಾರೆ, ಅವರು ಪಾರ್ಟಿ ಅಧ್ಯಕ್ಷರಿದ್ದಾಗಲೇ ಮಾಡಲಿಲ್ಲ.
ಪಾರ್ಟಿ ಅಧ್ಯಕ್ಷರಾಗಿ ಪಕ್ಷನ್ನು ಅಧಿಕಾರಕ್ಕೆ ತರಲು ಹೊರಟಾಗ, ಅವರನ್ನು ಜೆಡಿಎಸ್ ನವ್ರು ಸೋಲಿಸಿದ್ರಾ ?
ಕಾಂಗ್ರೆಸ್ ನವರೇ ಸೋಲಿಸಿದ್ರು ಅಂತ ಅವರೇ ಹೇಳ್ತಾರೆ. ಅವರು ಏನ್ ಮಾಡ್ತಾರೆ ಅಂತ ನನಗೆ ಗೊತ್ತಿಲ್ಲ. ಸುಧಾಕರ್ ಲಾಲ್ ಅವರು ಅತ್ಯಂತ ಸಭ್ಯ, ಜನತೆ ಜೊತೆಗೆ ಬೆರೆತು ಕೆಲಸ ಮಾಡ್ತಾರೆ.
ಉತ್ತಮವಾದ ಹೆಸರಿಟ್ಟಿ ಕೊಂಡಿರುವ ಅಭ್ಯರ್ಥಿ ಎಂದರು.
ಅವರನ್ನು ಗೆಲ್ಲಿಸಬೇಕೆಂದು ಜನತೆ ನಿರ್ಧಾರ ಮಾಡಿಕೊಂಡಿದ್ದಾರೆ. ಬೆಳಗಾವಿ ಗಡಿ ವಿವಾದ
ಸಿಎಂ ಮತ್ತು ಮಹರಾಷ್ಟ್ರ ಸಚಿವರ ನಡುವಿನ ನಾಟಕ ಏನಿದೆ ಅಂತ ಅವರೇ ಉತ್ತರ ಕೊಡಬೇಕು. ಅವರು ನಮ್ಮವ್ರೆ, ಕನ್ನಡ ಭಾಷೆ ಮಾತನಾಡುವವರು, ಕರ್ನಾಟಕಕ್ಕೆ ನಮ್ಮನ್ನು ತೆಗೆದುಕೊಳ್ಳಿ ಅಂತ ಹೇಳ್ತಿದ್ದಾರೆ.
ಸಾಂಗ್ಲಿ ಭಾಗದ 18 -20 ಹಳ್ಳಿ ರೈತರು ಹಾಗೂ ಜನರ ಬೇಡಿಕೆ ಒಂದು ಭಾಗ.
ಇವತ್ತು ಅಲ್ಲಿನ ಜನರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿ, ಕರ್ನಾಟಕದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಆದರೆ ಅದೇ ಸ್ಪೀಡು ನಮ್ಮ ರಾಜ್ಯದೊಳಗೆ, ನಮಗೆ ಟ್ಯಾಕ್ಸ್ ಕಟ್ಟುತ್ತಿದ್ದಾರಲ್ಲ ಜನರ ಹಳ್ಳಿಗಳಲ್ಲಿ ಕುಡಿಯಲು ಪರಿಶುದ್ಧ ನೀರಿಲ್ಲ. ಇಲ್ಲಿಯೂ ಅದೇ ಮೂತುವರ್ಜಿ ವಹಿಸಿ ಕೊಳ್ಳಪ್ಪ ಅಂತ ಹೇಳ್ತೀನಿ. ಪರಮೇಶ್ವರ್ ವಿಚಾರ ಹೇಳಲ್ಲ, ನಮ್ಮ ಅಭ್ಯರ್ಥಿ ಗೆಲ್ಲಬೇಕು. ನಾನು ಸ್ಪಷ್ಟವಾದ ಬಹುಮತ ಪಡಿಬೇಕು ಅಂದ್ರೆ, ನನ್ನ ಅಭ್ಯರ್ಥಿಗಳು ಗೆಲ್ಲಲೇ ಬೇಕಲ್ವಾ. ಆ ದೃಷ್ಟಿಯಿಂದ ನಾವು ಕೆಲಸ ಮಾಡಬೇಕು. ಕೊರಟಗೆರೆ ಕ್ಷೇತ್ರದ ಗೊಂದಿಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

(Visited 1 times, 1 visits today)