ತುಮಕೂರು


ಸಮಾಜಕ್ಕಾಗಿ ದುಡಿದವರನ್ನು ಈ ಜಗತ್ತು ಎಂದಿಗೂ ಮರೆಯುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿಗತ ಬೆಳವಣಿಗೆಯ ಜೊತೆಗೆ, ಈ ಸಮಾಜದ ಅಭಿವೃದ್ದಿಗೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರ್ ತಿಳಿಸಿದ್ದಾರೆ.
ನಗರದ ಏಂಪ್ರೆಸ್ ಮಹಿಳಾ ಪದವಿಪೂರ್ವ ಕಾಲೇಜಿನ ಸಾಂಸ್ಕøತಿಕ, ಕ್ರೀಡೆ,ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್,ಎನ್.ಎಸ್.ಎಸ್.ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡುತಿದ್ದ ಅವರು,ಸಮಾಜದ ಏಳಿಗೆಗಾಗಿ ದುಡಿದಂತಹ ಮಹಾತ್ಮಗಾಂಧಿ, ಬುದ್ದ,ಬಸವ,ಅಂಬೇಡ್ಕರ್, ಅಬ್ದುಲ್ ಕಲಾಂ ಇಂತಹವರನ್ನು ನಾಡಿನ ಜನತೆ ಇಂದಿಗೂ ಸ್ಮರಿಸುತ್ತಿದ್ದಾರೆ. ಹಾಗಾಗಿ ಮಕ್ಕಳು ಇವರುಗಳನ್ನು ಆದರ್ಶವಾಗಿಟ್ಟುಕೊಂಡು ಸಮಾಜಸೇವೆಯಲ್ಲಿ ತೊಡಗುವಂತೆ ಸಲಹೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಉತ್ತಮ ಅಂಕದ ಜೊತೆಗೆ, ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಿದೆ. ಆಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ.ಉತ್ತಮ ಅಂಕಗಳು ನಿಮಗೆ ಒಳ್ಳೆಯ ಉದ್ಯೋಗ, ಕೈತುಂಬ ವೇತನ ದೊರಕಿಸಬಹುದು. ಹಾಗೂ ಒಳ್ಳೆಯ ವ್ಯಕ್ತಿತ್ವ ನೀವು ಮಾಡುವ ಕೆಲಸದಲ್ಲಿ ಉನ್ನತ್ತಿಗೆ ಹೋಗಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಅಂಕಗಳ ಜೊತೆಗೆ, ಒಳ್ಳೆಯ ವ್ಯಕ್ತಿತ್ವ ರೂಢಿಸಿಕೊಳ್ಳುವಂತೆ ಪಿಯು ಡಿಡಿಪಿಐ ಗಂಗಾಧರ್ ಕರೆ ನೀಡಿದರು.
ಕಲಾಶ್ರೀ ಡಾ.ಲಕ್ಷಣದಾಸ್ ಮಾತನಾಡಿ,1985ರಿಂದ ಇದುವರೆಗೂ ಒಂದಿಲೊಂದು ರೀತಿಯಲ್ಲಿ ಈ ಕಾಲೇಜಿಗೂ ನನಗೂ ಅವಿನಾಭಾವ ಸಂಬಂಧವಿದೆ.ಬ್ರಿಟಿಷರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಏಂಪ್ರೆಸ್(ಚಕ್ರವರ್ತಿನಿ) ಎಂಬ ಹೆಸರಿನಲ್ಲಿ ಈ ಶಾಲೆ ತೆರೆದಿದ್ದು, ದೇಶದಲ್ಲಿ ಈ ಹೆಸರಿನಿಂದ ಕರೆಯಲ್ಪಡುತ್ತಿರುವ ಏಕೈಕ ಶಾಲೆ ಇದಾಗಿದೆ.ಸಾವಿರಾರು ವಿದ್ಯಾರ್ಥಿನಿಯರು ಇಲ್ಲಿಂದು ಕಲಿತು, ದೇಶದ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತಿದ್ದಾರೆ.ತುಮಕೂರು ನಗರ ಹಾಗೂ ಸುತ್ತಮುತ್ತ ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿಯೇ ಈ ಶಾಲೆ ಕಾರ್ಯನಿರ್ವಹಿಸುತ್ತಿದ್ದು,ಮಕ್ಕಳು ತಮ್ಮ ಪೋಷಕರ ಆಶಯವನ್ನು ಅರಿತು, ಗುರುಗಳ ಮಾರ್ಗದರ್ಶನದಲ್ಲಿ ಅವುಗಳನ್ನು ಈಡೇರಿಸಲು ಪ್ರಯತ್ನಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಏಂಪ್ರೆಸ್ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್.ಷಣ್ಮುಖ ಮಾತನಾಡಿ,ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿಯೇ ಮೀಸಲಿರುವ ನಮ್ಮ ಏಂಪ್ರೆಸ್ ಶಾಲೆಯಲ್ಲಿ 2500 ಮಕ್ಕಳು ಕಲಿಯುತ್ತಿದ್ದು,ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಎಲ್ಲಾ ಮಕ್ಕಳಿಗೂ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ.ಈ ಬಾರಿಯ ದ್ವಿತೀಯ ಪಿಯು ಪರೀಕ್ಷಾ ಪದ್ದತಿ ಬದಲಾಗಿದ್ದು, ಇದಕ್ಕೆ ಬೇಕಾದ ತರಭೇತಿಯನ್ನು ಎಲ್ಲಾ ದ್ವಿತಿಯ ಪಿಯು ಮಕ್ಕಳಿಗೆ ನೀಡಿ, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಮಕ್ಕಳು ಇದನ್ನು ಅರ್ಥ ಮಾಡಿಕೊಂಡು ಚಾಚು ತಪ್ಪದೆ ಎಲ್ಲಾ ತರಗತಿಗಳನ್ನು ಕೇಳಿ ಹೆಚ್ಚಿನ ಅಂಕ ಪಡೆದು ಶಾಲೆಗೆ ಕೀರ್ತಿತರಬೇಕೆಂಬ ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಸಾಂಸ್ಕøತಿಕ, ಕ್ರೀಡೆ, ಎನ್.ಎಸ್.ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ಸೇವಾದಳ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕøತರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ಕೆ.ಸಿ.ರಾಧ,ಸದಸ್ಯರಾದ ನವೀನ್‍ಕುಮಾರ್ ಆರ್, ಉಪನ್ಯಾಸಕ ರಾದ ಡಾ.ಹೆಚ್.ಎಂ.ಸದಾಶಿವಯ್ಯ,ಶ್ರೀಮತಿ ಆಶಾ,ಆರ್.ಬಿ.ಚಂದ್ರಶೇಖರ್,ಎ.ಜಿ.ಪ್ರಸನ್ನ,ಡಾ.ಎ.ಓ.ನರಸಿಂಹ ಮೂರ್ತಿ, ಶ್ರೀಮತಿ ಸೌಭಾಗ್ಯ, ಶಿವಪ್ಪ, ಪ್ರಕಾಶ್, ಹಾಗೂ ಎಲ್ಲಾ ಉಪನ್ಯಾಸಕರು ಭಾಗವಹಿಸಿದ್ದರು.ಸಾಂಸ್ಕøತಿಕ ಸಮಾರಂಭದ ಸಮಾರೋಪದ ಹಿನ್ನೇಲೆಯಲ್ಲಿ ಹೆಣ್ಣು ಮಕ್ಕಳು ಸೀರೆಯುಟ್ಟು ಕಂಗೋಳಿಸಿದರೆ, ಶಿಕ್ಷಕರು ಪಂಚೆ, ಶಲ್ಯ ತೊಟ್ಟು ವಿಶೇಷವಾಗಿ ಕಂಡು ಬಂದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

(Visited 1 times, 1 visits today)