ತುಮಕೂರು


ನಗರದ ಹೆಚ್.ಎಂ.ಎಸ್.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹೆಚ್.ಎಂ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಪಿಅಹಮದ್ ಅವರ ನೇತೃತ್ವದಲ್ಲಿ ನಡೆದ ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮದಲ್ಲಿ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಕೆಲವು ಔಷಧಿಯುಕ್ತ ಹಾಗೂ ಸಾಮಾನ್ಯ ಬಳಕೆಯಲ್ಲಿ ಉಪಯೋಗಕ್ಕೆ ಬರುವ ಸಸ್ಯಗಳನ್ನು ನೆಡುವ ಮೂಲಕ ಅಭಿಯಾನಕ್ಕೆ ಮುನ್ನುಡಿ ಬರೆದರು.
ಔಷದಿ ಸಸ್ಯಗಳ ಬೆಳೆಸಲು ಚಾಲನೆ ನೀಡಿದ ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಪಿಅಹಮದ್ ಮಾತನಾಡಿ,ಮನುಷ್ಯ ಇಂದು ರೋಗ ರುಜಿನಗಳಿಲ್ಲದ ಬದುಕಬೇಕೆಂದರೆ ಆತ ಪ್ರಕೃತಿಯ ಮೊರೆ ಹೋಗಬೇಕಾಗುತ್ತದೆ.ವಾಯು ಮಾಲೀನ್ಯ ನಮ್ಮೆಲ್ಲರನ್ನು ಕಾಡುತ್ತಿದೆ.ಇದು ತೊಲಗಬೇಕೆಂದರೆ ನಾವುಗಳು ಹೆಚ್ಚು ಹೆಚ್ಚ ಗಿಡ ಮರಗಳನ್ನು ಬೆಳೆಸಬೇಕಾಗಿದೆ.ಅದರಲ್ಲಿಯೂ ಔಷಧಿ ಸಸ್ಯಗಳನ್ನು ಬೆಟ್ಟ, ಗುಡ್ಡ, ಕಾಡು ಮೇಡುಗಳಲ್ಲಿ ಬೆಳೆಸಿ, ಪರಿಸರದಲ್ಲಿನ ವಾಯು ಮಾಲಿನ್ಯವನ್ನು ತಡೆಯಲು ಮುಂದಾಗೋಣ. ಈ ನಿಟ್ಟಿನಲ್ಲಿ ಗೋಗ್ರಿನ್, ಗ್ರಿನ್ ವ್ಯಾಲಿ ಅಭಿಯಾನ ಅತ್ಯಂತ ಮಹತ್ವದ್ದು ಎಂದರು.
ಹೆಚ್.ಎಂ.ಎಸ್.ಐ.ಟಿ ಪ್ರಾಂಶುಪಾಲರಾದ ಡಾ.ಕವಿತಾ ಮಾತನಾಡಿ,ಗಿಡಗಳು,ಮರಗಳು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ ಮಾನವನಿಗೆ ಸಮೃಧ್ಧಿ ಜೀವನವನ್ನು ಒದಗಿಸುತ್ತವೆ. ಮಾನವರು ಸಹ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ ಕೆಲಸಗಳನ್ನು ಮಾಡಬೇಕೆಂದು ಪ್ರಕೃತಿಯ ಸಂದೇಶವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿನ್ ಅಕಾಡೆಮಿಕ್ ಡಾ|| ಮಂಜುನಾಥಗೌಡ ರವರು, ಬೋಧಕ ಹಾಗೂ ಇತರೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

(Visited 1 times, 1 visits today)