ತುಮಕೂರು

????????????????????????????????????

ಕೇಂದ್ರ ಸರ್ಕಾರವು ಬೀಡಿ ಕಾರ್ಮಿಕರ ನಿಜವಾದ ಬೇಡಿಕೆಗಳನ್ನು ಪರಿಹರಿಸಬೇಕು ಮತ್ತು ಸರ್ಕಾರದ ನಿಲುವುಗಳನ್ನು ಬಹಿರಂಗಗೊಳಿಸಬೇಕು. ಉದ್ಯೋಗ ಕಳೆದುಕೊಳ್ಳುವವರಿಗೆ ಆರ್ಥಿಕನೆರವು ನೀಡುವ, ಪರ್ಯಾಯ ಉದ್ಯೋಗದ ಯೋಜನೆಯನ್ನು ಪ್ರಕಟಿಸಬೇಕು. ನೋಂದಣಿಯಾಗದ/ಅಕ್ರಮ ಬೀಡಿ ಉತ್ಪಾದನೆಯನ್ನು ತಕ್ಷಣವೇ ನಿಲ್ಲಿಸಬೇಕು. ಬೀಡಿ ಕಾರ್ಮಿಕರಿಗೆ ಏಕರೂಪದ ರಾಷ್ಟೀಯ ಕನಿಷ್ಠ ವೇತನವನ್ನು ಪ್ರತಿ ಸಾವಿರ ಬೀಡಿ ಸುತ್ತಲು ರೂ.395/-, ತುಟ್ಟಿಭತ್ಯೆ @ 0.5 ಪೈಸೆ ಪ್ರತಿ ಪಾಯಿಂಟ್‍ಗೆ ನೀಡಬೇಕು ,ಬೀಡಿ ರೋಲರ್ಗಳನ್ನು ಹೊರತುಪಡಿಸಿ ಉಳಿದ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ 21,000/- ರೂ.ವೇತನ ನಿಗಧಿ ಮಾಡಬೇಕು,ಮಾರುವ ಮತ್ತು ಕೊಳ್ಳುವ ,ಉಪ-ಗುತ್ತಿಗೆ ವ್ಯವಸ್ಥೆಯನ್ನು ರದ್ದುಪಡಿಸಬೇಕು ಕಾರ್ಮಿಕರನ್ನು ನೇರವಾಗಿ ಪ್ರಧಾನ ಉದ್ಯೋಗ ದಾತರು ಮತ್ತು ಖಾತೆ ಸಂಖ್ಯೆಗಳು ನಿಜವಾದ ಕಾರ್ಮಿಕರ ಹೆಸರಿನಲ್ಲಿರಬೇಕು. ಬೀಡಿ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಹಣ ನೀಡುತ್ತಿರುವ ಬೀಡಿ ಉದ್ಯಮದಲ್ಲಿ ಸೆಸ್ ಅನ್ನು ಮರುಸ್ಥಾಪಿಸಿಬೇಕು. ಸರ್ಕಾರ/ ಮಾಲಕರು ಎಲ್ಲ ಬೀಡಿ ಕಾರ್ಮಿಕರಾಗಿ ಆರೋಗ್ಯ ಬಗ್ಗೆ ವಿಶೇಷ ಜವಾಬ್ದಾರಿಯನು ತೆಗೆದುಕೊಳ್ಳಬೇಕು.ಎಲ್ಲಾ ಬೀಡಿ ಕಾರ್ಮಿಕರಿಗೆ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಹಾಗೂ ಎಲ್ಲಾರಿಗೆ ಆರೋಗ್ಯ ಸೌಲಭ್ಯಗಳನ್ನು ನೀಡಬೇಕು ಮುಂದುವರಿಸಿ. ಇಲ್ಲದಿದ್ದರೆ, ಅವರನ್ನು ಇಎಂಸಿ ಸದಸ್ಯರನ್ನಾಗಿ ಪರಿಗಣಿಸಬೇಕು. ಈ ಸಂದರ್ಭದಲ್ಲಿ ಕಾರ್ಮಿಕರ ಕೊಡುಗೆ ಚಂದಾದಾರಿಕೆಯಾಗಿ ಸರಕಾರದ ನಿಧಿಯಿಂದ ನೀಡಬೇಕು. ಎಲ್ಲಾ ರಾಜ್ಯ ಸರ್ಕಾರಗಳು ಬೀಡಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಬೀಡಿ ಮತ್ತು ಸಿಗಾರ್ ಕಾಯ್ದೆ 1966 ಇಲ್ಲದಂತೆ ಮಾಡುವ ಕ್ರಮ ನಿಲ್ಲಿಸಬೇಕು, ಎಲ್ಲಾ ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ, ಲಾಗ್‍ಬುಕ್, ಬೋನಸ್, ಪಿ.ಎಫ್. ಎಲ್ಲಾ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕನಿಷ್ಠ ಪಿಂಚಣಿ ಮಾಸಿಕ 3000 ರೂಪಾಯಿಗಳನ್ನು ತಕ್ಷಣವೇ ಪ್ರಾರಂಭಿಸಿ. ತುಟ್ಟಿಭತ್ಯೆಯನ್ನು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲಾ ಬೀಡಿ ಕಾರ್ಮಿಕರ ಸಂಘ. ರಿ. ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ದಿ;21-03-2023 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು,
ರಾಜ್ಯದ ಬೀಡಿ ಕಾರ್ಮಿಕರಿಗೆ ಕಳೆದ 5 ವರ್ಷಗಳಿಂದ ಅಧಿ ಸೂಚಿತ ಕನಿಷ್ಟ ಕೂಲಿ ಜಾರಿಯಾಗಿಲ್ಲ. ಮಾಲಿಕರು ಕೋರ್ಟ ಮೇಟ್ಟಿಲೇರಿದ್ದಾರೆ, ರಾಜ್ಯದ ಪರವಾಗಿ ವಕೀಲರು ಸೂಕ್ತವಾಗಿ ಪ್ರತಿನಿಧಿಸದೆ ವಿಚಾರಣೆ ಹಾಗೆ ಬಾಕಿಉಳಿದೆ. ಸರ್ಕಾರ ಈ ನಿರ್ಲಕ್ಷತೆಯು ಮಾಲಿಕರಿಗೆ ಅನುಕೂಲ ಮಾಡಿ ಕೋಡಲು ಎಂಬ ಗುಮಾನಿ ಮೂಡಿದೆ.,ಈ ಹಿನ್ನೆಲೆ ಸರ್ಕಾರ ತಕ್ಷಣ ಕ್ರಮಕ್ಕೆ ಪ್ರತಿಭಟನಾಕಾರರು ಅಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸೈಯದ್ ಮುಜೀಬ್ ಅವರು ಜಿಲ್ಲೆಯಲ್ಲಿ ಕೃಷಿಕೂಲಿಕಾರ ನಂತದಲ್ಲಿ ಅತಿ ಹೆಚ್ಚು ಇರುವ ಬೀಡಿ ಕಾರ್ಮಿಕರಿಗೆ ಸರ್ಕಾರ ಪರ್ಯಾಯ ರೂಪಿಸಿಲ್ಲ. ದಶಕಗಳಿಂದ ಇದನ್ನು ನಂಬಿ ಬದುಕು ನಡೆಸುತ್ತಿರುವವರಿಗೆ ಸಂಕಷ್ಟಕ್ಕೆ ಸಿಲುಕಿದೆ,ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲು ಆಗ್ರಹಿಸಿದರು.
ಸಿಪಿಐ [ಎಂ] ನ ರಾಜ್ಯ ಕಾರ್ಯಧರ್ಶಿ ಕಾಂ.ಯು. ಬಸವರಾಜು ಅವರು ಮಾತನಾಡಿ ಬೀಡಿ ಕಾರ್ಮಿಕರಿಗೆ ಪರ್ಯಾಯ ರೂಪಿಸಿಸಲು ಹಣ ನೀಡದ ಕೇಂದ್ರ ರಾಜ್ಯ ಸರ್ಕಾರಗಳು ಶ್ರಿಮಂತ ಬಂಡವಾಳಗಾರರಿಗೆ 10 ಲಕ್ಷ ಕೋಟಿ ನೇರವು ನೀಡಿದೆ. ಜನ ಇದನ್ನು ಅರಿತು ಇವರನ್ನು ಸೋಲಿಸಲು ಕರೆ ನೀಡಿದರು. ಸಂಘದ ಖಜಾಂಚಿ ಎನ್.ಕೆ ಸುಬ್ರಮಣ್ಯ ಅವರು ಮಾತನಾಡಿ ತಮ್ಮ ಸಂಬಳ- ಸಾರಿಗೆ ಲಕ್ಷಗಳಲ್ಲಿ ಪಡೆಯುವ ಶಾಸಕರು ಬೀಡಿ ಕಾರ್ಮಿಕರಿಗೆ ಮಾಸಿಕ ಪಿಂಚಳಿ 3000 ರೂ ನಿಡಲು ಹಿಂಜರಿಕೆ ಯಾಕೆಂದು ಪ್ರಶ್ನಿಸಿದರು .

(Visited 3 times, 1 visits today)