BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಚಿರತೆ
  • ಗರ್ಭಿಣಿ ಮಗಳನ್ನು ಕೊಂದ ತಂದೆಗೆ ಗಲ್ಲು ಶಿಕ್ಷೆ ನೀಡಿ: ಆಗ್ರಹ
  • ಚಿರತೆ ಹಾವಳಿ ತಡೆಗಟ್ಟಿ: ಮಾಜಿ ಶಾಸಕ
  • ಮಾದಕ ದ್ರವ್ಯ ಸೇವನೆ ಅಪಾಯಕಾರಿ
  • ಸಾಹಿತ್ಯಕ್ಕೆ ಮನುಷ್ಯನ ಗುಣವನ್ನು ಬದಲಾಯಿಸುವ ಶಕ್ತಿ ಇದೆ
  • ವೀರಶೈವ ಲಿಂಗಾಯತರು ಬೆರೆತು ಬಾಳಿದರೆ ಉಜ್ವಲ ಭವಿಷ್ಯವಿದೆ: ಶ್ರೀಗಳು
  • ಪಾವಗಡದಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ದಿವ್ಯ ಮೆರುಗು
  • ಜೈನ್ ಪಿಯು ಕಾಲೇಜಿನಲ್ಲಿ ವೇವ್ ಸೈನ್ಸ್ ಎಕ್ಸಪೋ-2025”
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪ್ರತಿಯೊಂದು ಇಟ್ಟಿಗೆಯೂ ಭವ್ಯ ಭಾರತದ ಬುನಾದಿಯಾಗಲಿ: ಜಪಾನಂದ ಸ್ವಾಮೀಜಿ
Trending

ಪ್ರತಿಯೊಂದು ಇಟ್ಟಿಗೆಯೂ ಭವ್ಯ ಭಾರತದ ಬುನಾದಿಯಾಗಲಿ: ಜಪಾನಂದ ಸ್ವಾಮೀಜಿ

By News Desk BenkiyabaleUpdated:August 06, 2020 6:44 pm

ಮಧುಗಿರಿ:

      ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಪ್ರತಿಯೊಂದು ಇಟ್ಟಿಗೆಯೂ ಭವ್ಯ ಭಾರತದ ಬುನಾದಿಯಾಗಿರಲೆಂದು ಪಾವಗಡ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದ ಮಹಾರಾಜ್ ತಿಳಿಸಿದರು.

      ಗುರುವಾರದಂದು ಪಟ್ಟಣದಲ್ಲಿರುವ ಕುಂಚಿಟಿಗ ಒಕ್ಕಲಿಗರ ಸಮುದಾಯ ಭವನದ ಅವರಣದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಹಕಾರದೊಂದಿಗೆ ಮಧುಗಿರಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಸುಮಾರು 712 ಅಡುಗೆ ಸಿಬ್ಬಂದಿಯವರಿಗೆ ದವಸ ಧಾನ್ಯ ಹಾಗೂ ಅಡುಗೆ ಎಣ್ಣೆಯ ಕಿಟ್‍ನ್ನು ವಿತರಣಾ ಸಮರಂಭದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.

      ಕೊರೊನಾದಿಂದಾಗಿ ಇಡೀ ದೇಶವೇ ಒಗ್ಗೂಡಿದ್ದು, ಅದೇ ರೀತಿಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದಿಂದ ಭಾವೈಕ್ಯತೆ ಮೂಡಲು ನಾಂದಿ ಹಾಡಿದೆ ಎಂದರು. ಪ್ರತಿಯೊಬ್ಬ ನಾಗರಿಕನು ಸರ್ಕಾರ ಮತ್ತು ಸರ್ಕಾರಿ ನೌಕರರನ್ನು ದೂಷಿಸುವುದು ತರವಲ್ಲ, ಪ್ರಸ್ತುತ ದೇಶ ಸಂಕಷ್ಟದ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳು ಸೇನಾನಿಯಂತೆ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದು ,ಅವರೂ ಸಹ ಮನುಷ್ಯರೆಂದು ಜನರು ಭಾವಿಸಬೇಕಾಗಿದೆ, “ಬಿಂದುವಿನಲ್ಲಿ ಸಿಂಧುವನ್ನು ಹುಡುಕಬೇಕೇ ಹೊರತು, ಸಿಂಧುವಿನಲ್ಲಿ ಬಿಂದು ಹುಡುಕುವ ಕೆಲಸವಾಗ ಬಾರದೆಂದರು’.

      ದಕ್ಷ ಅಧಿಕಾರಿಗಳು ದೇಶದ ಅಪರಂಜಿಗಳು ಮತ್ತು ಅನನ್ಯ ರತ್ನಗಳು ಅಂಥವರನ್ನು ಸರ್ಕಾರ ತಡವಾಗಿ ಗುರುತಿಸುತ್ತದೆ. ಕರೋನಾ ಬಗ್ಗೆ ಯಾರೂ ಭಯಪಡಬೇಡಿ, ಧೈರ್ಯವಾಗಿರಿ ದೇವತಾ ಪ್ರಾರ್ಥನೆ ಮತ್ತು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಹಾಗೂ ಸ್ವಯಂ ಸ್ವಚ್ಛತೆಯ ಬಗ್ಗೆ ಆದ್ಯತೆ ನೀಡದಾಗ ನಮ್ಮನ್ನು ಬಿಟ್ಟು ಹೋಗುತ್ತದೆ ಎಂದರು.

      ಮಧುಗಿರಿ ಉಪ ವಿಭಾಗದಲ್ಲಿ ಉಪವಿಭಾಧಿಕಾರಿ, ಡಿವೈಎಸ್ಪಿ, ಡಿಡಿಪಿಐ ,ತಹಸೀಲ್ದಾರ್, ವೈದ್ಯರು ,ಶಿಕ್ಷಕರು ,ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಕರೋನಾ ವಾರಿಯರ್ಸ್ ಗಳಾಗಿ ಕರೋನಾ ಹರಡದಂತೆ ಟೊಂಕಕಟ್ಟಿ ಹೋರಾಡುತ್ತಿದ್ದಾರೆ. ಮಧುಗಿರಿಯಲ್ಲಿರುವ ಕರೋನಾ ಕೇರ್ ಸೆಂಟರ್ ರೆಸಾರ್ಟ್ ಮಾದರಿಯಂತಿರುವುದೆ ಇದಕ್ಕೆಲ್ಲ ಸಾಕ್ಷಿಯಾಗಿದೆ ಎಂದರು. ವೈದ್ಯರು ಮತ್ತು ಶಿಕ್ಷಕರು ದೇಶದ ಆಸ್ತಿಯಾಗಿದ್ದು ,ದೇಶದ ಪ್ರಗತಿಯನ್ನು ಷೇರುಪೇಟೆಯ ಮಾರುಕಟ್ಟೆಯಿಂದ ಅಳೆಯಲು ಸಾಧ್ಯವಿಲ್ಲ. ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ದೇಶವನ್ನು ಸದೃಢರನ್ನಾಗಿಸುವ ಶಕ್ತಿ ಅಡಗಿದೆ ಎಂದರು.

      ಅನುದಾನ ರಹಿತ ಖಾಸಗಿ ಶಾಲೆಯ ಶಿಕ್ಷಕರ ಬದುಕು ಅತಂತ್ರ ಸ್ಥಿತಿ ತಲುಪಿದ್ದು ಅಂಥಹವರಿಗೆ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ ಎಂದರು.

      ಅಡುಗೆ ಸಹಾಯಕರು ಶಾಲೆಯಲ್ಲಿನ ಮಕ್ಕಳನ್ನು ತಮ್ಮ ಮಕ್ಕಳಂತೆ ಉಪಚರಿಸಿ ದಾಸೋಹ ನೀಡುತ್ತಿದ್ದು ಇಂದು ಅವರ ಬದುಕು ಸಂಕಷ್ಟದಲ್ಲಿರುವುದನ್ನು ಅರಿತು ತಾಲ್ಲೂಕಿನ 712 ಅಕ್ಷರ ದಾಸೋಹ ಸಿಬ್ಬಂದಿಗೆ ಇನ್ಫೋಸಿಸ್ ನೆರವಿನಿಂದ ದಿನಸಿ ಕಿಟ್ಟು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊರಟಗೆರೆ ತಾಲ್ಲೂಕಿನಲ್ಲಿನ ಸಿಬ್ಬಂದಿಗೂ ವಿತರಿಸಲಾಗುವುದೆಂದರು.

       ಡಿಡಿಪಿಐ ಎಂ.ರೇವಣಸಿದ್ದಪ್ಪ ಮಾತನಾಡಿ, ರಾಮಕೃಷ್ಣಾಶ್ರಮದಿಂದ ಪಾವಗಡ ತಾಲೂಕಿನಲ್ಲಿರುವ ಐದು ಸಾವಿರ ವಿದ್ಯಾರ್ಥಿಗಳಿಗೆ ಶಕ್ತಿವರ್ಧಕ ಹಾಲಿನ ಪೌಡರ್, ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ತಲಾ ಎರಡು ಮಾಸ್ಕ್ ಗಳಂತೆ 3600 ಮಾಸ್ಕ್ ಗಳ ವಿತರಣೆ, ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಐಎಸ್‍ಐ ಮಾರ್ಕಿನ ಕುಡಿಯುವ ನೀರು ವಿತರಣೆ ಮಾಡಿದ್ದನ್ನು ಶ್ಲಾಘಿಸಿದರು.

      ಡಿವೈಎಸ್ಪಿ ಎಂ. ಪ್ರವೀಣ್ ಮಾತನಾಡಿ, ಸ್ವಾಮಿಗಳ ಸಮಾಜ ಸೇವೆಯಲ್ಲಿ ತೊಡಗಿರುವುದನ್ನು ಪ್ರತಿನಿತ್ಯ ಮಾಧ್ಯಮದ ಮೂಲಕ ತಿಳಿಯಬಹುದಾಗಿದೆ. ಸರ್ಕಾರ ಮತ್ತು ಜನರ ನಡುವೆ ಮಠಮಾನ್ಯಗಳು, ಮಂದಿರಗಳು ,ಆಶ್ರಮಗಳು ಕೊಂಡಿಯಾಗಿ ಕೆಲಸ ಮಾಡುತ್ತಿರುವುದರ ಜೊತೆಗೆ ಸರ್ಕಾರ ಕೆಲಸ ಸರಿಯಾಗಿ ಮಾಡದಿದ್ದಾಗ ಎಚ್ಚರಿಸುವುದನ್ನು ಮರೆತಿಲ್ಲ, ತಮ್ಮ ವ್ಯಾಪ್ತಿಯ ಕೊರಟಗೆರೆ ತಾಲ್ಲೂಕಿನಲ್ಲಿ ಇರುವ ಅಕ್ಷರದಾಸೋಹ ಸಿಬ್ಬಂದಿಗೆ ದಿನಸಿ ಕಿಟ್ ವಿಚಾರಣೆ ಮಾಡುವಂತೆ ಮನವಿ ಮಾಡಿದರು .

      ತಹಶಿಲ್ದಾರರಾದ ಡಾ.ಜಿ.ವಿಶ್ವನಾಥ್ ಪ್ರಸ್ತಾವಿಕ ನುಡಿಗಳಲ್ಲಿ ಮಧುಗಿರಿಯಲ್ಲೂ ಶ್ರೀ ರಾಮಕೃಷ್ಣ ಸೇವಾಶ್ರಮದ ಕೇಂದ್ರ ಪ್ರಾರಂಬಿಸುವಂತೆ ಮನವಿ ಮಾಡಿದರು.

ಕ್ಷೇತ್ರಶಿಕ್ಷಣಾದಿಕಾರಿ ರಂಗಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಎಚ್. ವೆಂಕಟೇಶಯ್ಯ , ಕಾರ್ಯದರ್ಶಿ ನಟರಾಜು,ಬಿಆರ್ ಸಿ ಅನಂದ್,ಅಕ್ಷರ ದಾಸೋಹ ದ ಅಧಿಕಾರಿಗಳಾದ ಪದ್ಮಾವತಮ್ಮ,ಕೆ.ಎನ್.ಹನುಮಂತರಾಯ,ಅಧ್ಯಕ್ಷೆ ಮಂಗಳಮ್ಮ,ಪಾವಗಡದಿಂದ ಅಗಮಿಸಿದ್ದ ನಿರಂಜನ್,ಎ.ಗೋಪಿ,ನಾಗೇಶ್,ಪಿಇಒ ಬಸವರಾಜು,ಪುಟ್ಟಸ್ವಾಮಿ,ಮಧುಗಿರಿ ರಕ್ತದಾನಿ ಶಿಕ್ಷಕರ ಸ್ನೇಹ ಬಳಗದ ಎಚ್.ಆರ್. ಶಶಿಕುಮಾರ್ ಕೆಂಪೆಗೌಡ,ಕೆ.ಎಸ್. ಉಮಾಶಂಕರ್, ಈ .ಶ್ರೀಧರ್, ಹರಿಪ್ರಸಾದ್ ,ಟಿ.ಡಿ.ನರಸಿಂಹ ಮೂರ್ತಿ, ಎಚ್.ಎಸ್. ಶಿವಕುಮಾರ್ ,ಇಸಿಒಗಳಾದ ಜಯರಾಮ್ ,ಅಶ್ವತ್ ನಾರಾಯಣ್ ಹಾಜರಿದ್ದರು.

 

(Visited 9 times, 1 visits today)
Previous Articleತುಮಕೂರು : 69 ಮಂದಿಗೆ ಕೋವಿಡ್-19 ಸೋಂಕು ದೃಢ!!
Next Article ಇಡೀ ವಿಶ್ವವೇ ಶ್ರೀರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸಿದೆ
News Desk Benkiyabale

Related Posts

ಡಿ. 12 ರಿಂದ 24ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

December 12, 2025 3:48 pm ತುಮಕೂರು

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ: ಶೇ. ೬೦.೭೧ರಷ್ಟು ಪ್ರಗತಿ

December 12, 2025 3:25 pm ತುಮಕೂರು

ಸರ್ಕಾರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಡಿಸಿ ಸೂಚನೆ

December 08, 2025 4:21 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಚಿರತೆ

December 26, 2025 3:16 pm
ಇತರೆ ಸುದ್ಧಿಗಳು

ಗರ್ಭಿಣಿ ಮಗಳನ್ನು ಕೊಂದ ತಂದೆಗೆ ಗಲ್ಲು ಶಿಕ್ಷೆ ನೀಡಿ: ಆಗ್ರಹ

December 26, 2025 3:15 pm
ಇತರೆ ಸುದ್ಧಿಗಳು

ಚಿರತೆ ಹಾವಳಿ ತಡೆಗಟ್ಟಿ: ಮಾಜಿ ಶಾಸಕ

December 26, 2025 3:13 pm
ಇತರೆ ಸುದ್ಧಿಗಳು

ಮಾದಕ ದ್ರವ್ಯ ಸೇವನೆ ಅಪಾಯಕಾರಿ

December 26, 2025 3:12 pm
ಇತರೆ ಸುದ್ಧಿಗಳು

ಸಾಹಿತ್ಯಕ್ಕೆ ಮನುಷ್ಯನ ಗುಣವನ್ನು ಬದಲಾಯಿಸುವ ಶಕ್ತಿ ಇದೆ

December 26, 2025 3:11 pm
ಇತರೆ ಸುದ್ಧಿಗಳು

ವೀರಶೈವ ಲಿಂಗಾಯತರು ಬೆರೆತು ಬಾಳಿದರೆ ಉಜ್ವಲ ಭವಿಷ್ಯವಿದೆ: ಶ್ರೀಗಳು

December 26, 2025 2:47 pm
Our Youtube Channel
Our Picks

ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಚಿರತೆ

December 26, 2025 3:16 pm

ಗರ್ಭಿಣಿ ಮಗಳನ್ನು ಕೊಂದ ತಂದೆಗೆ ಗಲ್ಲು ಶಿಕ್ಷೆ ನೀಡಿ: ಆಗ್ರಹ

December 26, 2025 3:15 pm

ಚಿರತೆ ಹಾವಳಿ ತಡೆಗಟ್ಟಿ: ಮಾಜಿ ಶಾಸಕ

December 26, 2025 3:13 pm

ಮಾದಕ ದ್ರವ್ಯ ಸೇವನೆ ಅಪಾಯಕಾರಿ

December 26, 2025 3:12 pm

ಸಾಹಿತ್ಯಕ್ಕೆ ಮನುಷ್ಯನ ಗುಣವನ್ನು ಬದಲಾಯಿಸುವ ಶಕ್ತಿ ಇದೆ

December 26, 2025 3:11 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಕೊನೆಗೂ ಸೆರೆ ಸಿಕ್ಕ ನರಭಕ್ಷಕ ಚಿರತೆ

By News Desk BenkiyabaleDecember 26, 2025 3:16 pm

ತುರುವೇಕೆರೆ: ತಾಲೂಕಿನ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಎರಡನೇ ಚಿರತೆಯನ್ನು…

ಗರ್ಭಿಣಿ ಮಗಳನ್ನು ಕೊಂದ ತಂದೆಗೆ ಗಲ್ಲು ಶಿಕ್ಷೆ ನೀಡಿ: ಆಗ್ರಹ

December 26, 2025 3:15 pm

ಚಿರತೆ ಹಾವಳಿ ತಡೆಗಟ್ಟಿ: ಮಾಜಿ ಶಾಸಕ

December 26, 2025 3:13 pm

ಮಾದಕ ದ್ರವ್ಯ ಸೇವನೆ ಅಪಾಯಕಾರಿ

December 26, 2025 3:12 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.