BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ
  • ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
  • ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ
  • ಮಾನವ ಹಕ್ಕುಗಳನ್ನು ಗೌರವಿಸಿ: ಧರ್ಮಾಂಜಿ
  • ಕಾರ್ಮಿಕ ಇಲಾಖೆಯಲ್ಲಿ ಬೀದಿಬದಿ ವ್ಯಾಪಾರಿಗಳು ನೋಂದಾಯಿಸಿಕೊಳ್ಳಿ: ದೊಡ್ಡ ಅವಲಪ್ಪ ಸಲಹೆ
  • ಅನರ್ಹ ಬಿಪಿಎಲ್ ಕಾರ್ಡುದಾರರು ಎಪಿಎಲ್‌ಗೆ ಬದಲಾಯಿಸಿಕೊಳ್ಳಲು ಎಡಿಸಿ ತಿಪ್ಪೇಸ್ವಾಮಿ ಸಲಹೆ
  • ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
  • ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » 4 ವರ್ಷ 8 ತಿಂಗಳ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ
Trending

4 ವರ್ಷ 8 ತಿಂಗಳ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

By News Desk BenkiyabaleUpdated:February 22, 2021 7:48 pm

ತುಮಕೂರು:

     5 ವರ್ಷದ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ಮತ್ತು ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ. ಕಳೆದ ತಿಂಗಳು ಓಪನ್ ಹಾರ್ಟ್ ಸರ್ಜರಿ ಮಾಡಿ ಸಫಲವಾಗಿದ್ದ ವೈದ್ಯರ ತಂಡ ಇದೀಗ ಮಕ್ಕಳ ಹೃದಯ ರೋಗ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳುವ ಮೂಲಕ ತುಮಕೂರಿನಂತಹ ಪ್ರದೇಶದಲ್ಲಿ ಸೂಕ್ಷ್ಮ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಬಹುದೆಂಬುದನ್ನು ಸಾದರಪಡಿಸಿದ್ದಾರೆ.

      ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಲ್ಲೂರ್ ಗ್ರಾಮದ ಕೃಷಿಕ ಹಾಗೂ ಹಿಂದುಳಿದ ವರ್ಗದ ಕುಟುಂಬದ 4 ವರ್ಷ 8 ತಿಂಗಳ ಮಗು (ರಂಜಿತ್–ಹೆಸರು ಬದಲಾಯಿಸಲಾಗಿದೆ) ವಿಗೆ ನಡೆಸಲಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಸಾಮಾನ್ಯ ವಾರ್ಡ್‍ನಲ್ಲಿ ಚೇತರಿಸಿಕೊಳ್ಳುತ್ತಿದೆ.

      ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ‘ಕಾರ್ಡಿಯಾಕ್ ಫ್ರಾಂಟಿ¬ಡಾ’ ಸಂಸ್ಥೆಯ ನಿರ್ದೇಶಕ ಡಾ.ತಮೀಮ್‍ಅಹಮದ್, ಡಾ.ನವೀನ್, ಡಾ.ಸುರೇಶ್, ಡಾ.ನಾಗಾರ್ಜುನ, ವಿವೇಕ್, ಜಾನ್, ಡಾ.ನಿಖಿತ ನೇತೃತ್ವದ ತಂಡ ಮಗುವಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಸಫಲವಾಗಿದೆ ಎಂದು ವಿಭಾಗದ ಸಿಇಒ ಡಾ. ಪ್ರಭಾಕರ್ ತಿಳಿಸಿದ್ದಾರೆ.

      ಸೊಲ್ಲಾಪುರ ಮತ್ತು ಬೆಂಗಳೂರಿನಲ್ಲಿ ತಪಾಸಣೆಗೊಳಗಾಗಿದ್ದ ಮಗುವಿಗೆ ಓಪನ್ ಹಾರ್ಟ್ ಸರ್ಜರಿ ಮಾಡಬೇಕೆಂಬ ವೈದ್ಯರು ಸಲಹೆ ನೀಡಿದ್ದರು. ಆದರೆ ಆರ್ಥಿಕ ಮುಗ್ಗಟ್ಟು ಮತ್ತು ಕರೋನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಪೋಷಕರು ಚಿಂತಕ್ರಾಂತರಾಗಿದ್ದರು. ಆಗ ಮಾಧ್ಯಮದಿಂದ ಸಿಕ್ಕ ಮಾಹಿತಿಯನ್ನು ಆಧರಿಸಿ ಒಂದು ವಾರದ ಹಿಂದೆ ತುಮಕೂರಿನ ಸಿದ್ಧಾರ್ಥ ಹಾರ್ಟ್ ಸೆಂಟರ್‍ಗೆ ತಪಾಸಣೆಗೆ ಮಗುವಿನೊಂದಿಗೆ ಪೋಷಕರು ಬರುತ್ತಾರೆ.

      ರಾಜ್ಯದ ಬೇರೆ ಕಡೆಗಳಲ್ಲಿ ನೀಡಲಾಗಿದ್ದ ತಪಾಸಣೆಯ ವಿವರಗಳನ್ನು ಪಡೆದ ಆಸ್ಪತ್ರೆಯ ವೈದ್ಯರ ತಂಡ ಓಪನ್ ಹಾರ್ಟ್ ಸರ್ಜರಿ ಬದಲಾಗಿ ಪಿಡಿಎ ಡಿವೈಸ್ ಕ್ಲೋಸರ್ ಚಿಕಿತ್ಸೆ (ಕಾಂಜೆನೈಟಲ್) ಮೂಲಕ ಗುಣಪಡಿಸಲಾಗಿದೆ. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಲಿದೆ.

      ಮಗು ಹುಟ್ಟುವ ಸಂದರ್ಭದಲ್ಲಿ (ಅಂದರೆ ಮಗು ಗರ್ಭಕೋಶದಲ್ಲಿದ್ದಾಗ ತೆರದಿರುವ ನರ ಹುಟ್ಟಿದ ತಕ್ಷಣ ಮುಚ್ಚಿಕೊಳ್ಳಬೇಕು) ಹೃದಯಕ್ಕೆ ಹೊಂದಿಗೊಂಡಿರುವ ನರವೊಂದು ಮುಚ್ಚಿಕೊಳ್ಳಬೇಕು. ಅದು ಮುಚ್ಚಿಕೊಳ್ಳದಿದರೆ ರಕ್ತದ ಹರಿವಿಕೆಯಲ್ಲಿ ಒತ್ತಡ ಉಂಟಾಗಿ ಶ್ವಾಸಕೋಸಕ್ಕೆ ತೊಂದರೆಯಾಗುತ್ತಿತ್ತು. ಈ ರೀತಿ ಸಮಸ್ಯೆಯನ್ನು ಹಾವೇರಿಯ 5 ವರ್ಷದ ಮಗು ಕೂಡ ಎದುರಿಸಿತ್ತು. ಮಗು ಎದುರಿಸುತ್ತಿದ ನರದ (ರಕ್ತನಾಳದ) ಸಮಸ್ಯೆ ಕುರಿತು ತಂಡ ಸಮಾಲೋಚನೆ ನಡೆಸಿ ಓಪನ್ ಹಾರ್ಟ್ ಸರ್ಜರಿಗೆ ಬದಲಾಗಿ ಆಧುನಿಕ ಉಪಕರಣದ ಮೂಲಕ ಓಪನ್ ಆಗಿದ್ದ ನರವನ್ನು ಶಸ್ತ್ರಚಿಕಿತ್ಸೆಯ ಮೂಲಕ ಮುಚ್ಚಿ ರೋಗವನ್ನು ಗುಣಪಡಿಸಲಾಗಿದೆ. ಇದಕ್ಕೆ ಈಗ ಚಿಕಿತ್ಸೆ ನೀಡಿದ್ದರಿಂದ ಮಗುವಿನ ಮುಂದಿನ ಬೆಳವಣಿಗೆ ಉತ್ತಮವಾಗಿರುತ್ತದೆ ಮತ್ತು ಸಾಮಾನ್ಯವಾಗಿರುತ್ತದೆ ಎಂದು ಡಾ.ತಮೀಮ್ ಅಹಮದ್ ಹೇಳಿದ್ದಾರೆ.

ಚಿಕಿತ್ಸೆ ಮತ್ತು ನಂತರದ ಬೆಳವಣಿಗೆ ಕುರಿತು ಮಾತನಾಡಿದ ಮಗುವಿನ ಪೋಷಕರು ಬೆಂಗಳೂರಿಗೆ ಹೋಗದೆ ತುಮಕೂರಿಗೆ ಬಂದಿದ್ದು ನಮಗೆ ಸಮಯ ಮತ್ತು ಹಣದ ಹೊರೆತಪ್ಪಿತು. ಆಸ್ಪತ್ರೆ ವ್ಯವಸ್ಥೆ ಮತ್ತು ವೈದ್ಯರ ಸೇವೆ ತೃಪ್ತಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

      ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಚಾಲನೆ: ಅಂತರಾಷ್ಟ್ರೀಯ ಹೃದಯ ಶಸ್ತ್ರಚಿಕಿತ್ಸೆಯ ದಿನಾಚರಣೆಯ ಸಂದರ್ಭದಲ್ಲಿ ಸಿದ್ದಾರ್ಥ ಹಾರ್ಟ್‍ಸೆಂಟರ್ ಮತ್ತು ಕಾರ್ಡಿಯಾಕ್ ಪ್ರಾಂಟಿಡ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳಿಗೆ ಹೃದಯಚಿಕಿತ್ಸೆ ಮಾಡುವ ಯಶಸ್ವಿ ಮಹತ್ವದ ಯೋಜನೆಗೆ ಈ ಚಿಕಿತ್ಸೆ ಮುನ್ನುಡಿ ಬರೆದಿದೆ ಎಂದು ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ‘ಕಾರ್ಡಿಯಾಕ್ ಫ್ರಾಂಟಿ¬ಡಾ’ ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮದ್ ತಿಳಿಸಿದ್ದಾರೆ.

      ಚಿಕ್ಕ ಮಕ್ಕಳಲ್ಲಿ ಜನ್ಮಜಾತ (ಕಾಂಜೆನೈಟಲ್) ರೋಗ ಹೆಚ್ಚಾಗಿದ್ದು. ಭಾರತದಲ್ಲಿ ಪ್ರತಿವರ್ಷ 1 ಲಕ್ಷ 80 ಸಾವಿರ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ. ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಕೇವಲ 25.000 ಮಕ್ಕಳಿಗೆ ಚಿಕಿತ್ಸೆ ದೊರೆಯುತ್ತದೆ. ಇದನ್ನು ಕಂಡ ಸಿದ್ದಾರ್ಥ ಸಂಸ್ಥೆ ಗ್ರಾಮಾಂತರ ಪ್ರದೇಶದಲ್ಲಿ ಹೃದಯ ರೋಗದಂತಹ ಸೂಕ್ಷ್ಮ ರೋಗಗಳಿಗೆ ಪರಿಹಾರ ದೊರಕಿಸುವ ನಿಟ್ಟನಲ್ಲಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಪರಮೇಶ್ವರ ದಂಪತಿಗಳಿಂದ ಆರೋಗ್ಯ ವಿಚಾರಣೆ: ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ 5 ವರ್ಷದ ಮಗುವಿನ ಆರೋಗ್ಯವನ್ನು ಶ್ರೀ ಸಿದ್ಧಾರ್ಥ ಪುಟ 2 ಕ್ಕೆ

(Visited 6 times, 1 visits today)
Previous Articleಗ್ರಾಮೀಣ ಜನರಿಗೆ ಸರ್ಕಾರಿ ಯೋಜನೆಗಳ ಮಾಹಿತಿ ತಲುಪಿಸುವುದೇ ಗ್ರಾಮ ವಾಸ್ತವ್ಯದ ಸದುದ್ದೇಶ
Next Article ಕೆ.ಸಿ.ಪಾಳ್ಯ ನೀರಿನ ಘಟಕ ದುರಸ್ಥಿ ಮಾಡಿ
News Desk Benkiyabale

Related Posts

ಸರ್ಕಾರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ ಡಿಸಿ ಸೂಚನೆ

December 08, 2025 4:21 pm ತುಮಕೂರು

ರಾತ್ರಿ 8 ರವರೆಗೂ ಪಡಿತರ ವಿತರಣೆ

December 08, 2025 4:18 pm ತುಮಕೂರು

ಅಂಬೇಡ್ಕರ್ ವಿಚಾರಧಾರೆಗಳನ್ನು ಅನುಸರಿಸಿ

December 08, 2025 4:12 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ

December 11, 2025 4:30 pm
ಇತರೆ ಸುದ್ಧಿಗಳು

ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

December 11, 2025 4:29 pm
ಇತರೆ ಸುದ್ಧಿಗಳು

ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ

December 11, 2025 4:27 pm
ಇತರೆ ಸುದ್ಧಿಗಳು

ಮಾನವ ಹಕ್ಕುಗಳನ್ನು ಗೌರವಿಸಿ: ಧರ್ಮಾಂಜಿ

December 11, 2025 4:26 pm
ಇತರೆ ಸುದ್ಧಿಗಳು

ಕಾರ್ಮಿಕ ಇಲಾಖೆಯಲ್ಲಿ ಬೀದಿಬದಿ ವ್ಯಾಪಾರಿಗಳು ನೋಂದಾಯಿಸಿಕೊಳ್ಳಿ: ದೊಡ್ಡ ಅವಲಪ್ಪ ಸಲಹೆ

December 11, 2025 4:24 pm
ಇತರೆ ಸುದ್ಧಿಗಳು

ಅನರ್ಹ ಬಿಪಿಎಲ್ ಕಾರ್ಡುದಾರರು ಎಪಿಎಲ್‌ಗೆ ಬದಲಾಯಿಸಿಕೊಳ್ಳಲು ಎಡಿಸಿ ತಿಪ್ಪೇಸ್ವಾಮಿ ಸಲಹೆ

December 11, 2025 4:23 pm
Our Youtube Channel
Our Picks

ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ

December 11, 2025 4:30 pm

ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

December 11, 2025 4:29 pm

ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ

December 11, 2025 4:27 pm

ಮಾನವ ಹಕ್ಕುಗಳನ್ನು ಗೌರವಿಸಿ: ಧರ್ಮಾಂಜಿ

December 11, 2025 4:26 pm

ಕಾರ್ಮಿಕ ಇಲಾಖೆಯಲ್ಲಿ ಬೀದಿಬದಿ ವ್ಯಾಪಾರಿಗಳು ನೋಂದಾಯಿಸಿಕೊಳ್ಳಿ: ದೊಡ್ಡ ಅವಲಪ್ಪ ಸಲಹೆ

December 11, 2025 4:24 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಮಾನವೀಯ ಮೌಲ್ಯ ಎತ್ತಿ ಹಿಡಿದ ಸಂವಿಧಾನ

By News Desk BenkiyabaleDecember 11, 2025 4:30 pm

ಕುಣಿಗಲ್: ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಪ್ರತಿಯೊಬ್ಬ ನಾಗರೀಕರ ಹಕ್ಕುಗಳನ್ನು ಗೌರವಿಸಬೇಕು. ಭಾರತೀಯ ಸಂವಿಧಾನವು…

ಕ್ರಷರ್ ನಿರ್ಮಾಣಕ್ಕೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

December 11, 2025 4:29 pm

ಯುವಕರು ನಶೆಗೆ ಬಲಿಯಾಗದಿರಿ ಬಲಿಯಾಗಲು ಬಿಡದಿರಿ: ಪಿಎಸ್‌ಐ

December 11, 2025 4:27 pm

ಮಾನವ ಹಕ್ಕುಗಳನ್ನು ಗೌರವಿಸಿ: ಧರ್ಮಾಂಜಿ

December 11, 2025 4:26 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.