
ಕೊರಟಗೆರೆ: ತೋಟದ ಮನೆಯಲ್ಲಿದ್ದ ವೃದ್ದೆಯ ಕೈ ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆಮಾಡಿ ಮೈಮೇಲಿದ್ದ ಚಿನ್ನಾಭರಣ ದೋಚಿದ್ದ ಕಳ್ಳರನ್ನು ಕೊರಟಗೆರೆ ಸಿಪಿಐ ಪುರುಷೋತ್ತಮ ಮತ್ತು ಪಿಎಸೈ ತಿರ್ಥೇಶ್ ನೇತೃತ್ವದ ಪೊಲೀಸರ ತಂಡ ಕೇರಳದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆಗ್ರಾಪA ವ್ಯಾಪ್ತಿಯ ದಾಸಾಲುಕುಂಟೆ ಗ್ರಾಮದ ಮುದ್ದಯ್ಯನ ಮದಡಿ ರತ್ನಮ್ಮ(೬೮) ಕೊಲೆಯ ಆರೋಪಿಗಳನ್ನು ಪೊಲೀಸರು ಎಡೆಮುರಿ ಕಟ್ಟಿ ಜೈಲಿಗೆ ರವಾನಿಸಿ ಕೃತ್ಯಕ್ಕೆ ಬಳಸಿದ ದ್ವೀಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಬೆ.ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಬೆಟ್ಟದ ಹೊಸಹಳ್ಳಿಯ ಗಂಗಾಧರ್ (೨೪) ಮತ್ತು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮರಾಠಿ ಪಾಳ್ಯದ ಸೂರ್ಯ(೨೫) ಕೊಲೆ ಪ್ರಕರಣದ ಆರೋಪಿಗಳಾಗಿದ್ದು ಹೆಚ್ಚಿನ ವಿಚಾರಣೆಗೆ ಇಬ್ಬರನ್ನು ನ್ಯಾಯಾಲಯದ ಆದೇಶದ ಮೇಲೆ ಪೊಲೀಸರು ಮರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಗಂಗಾಧರ್ ಮತ್ತು ಸೂರ್ಯ ಮೂಲತಃ ಬಟ್ಟೆ ವ್ಯಾಪಾರಿ.ಆರೋಪಿಗಳನ್ನು ಪತ್ತೇ ಹತ್ತಲು ಕೊರಟಗೆರೆ ಪಟ್ಟಣದ ಸಿಸಿಟಿವಿಯೇ ಪೊಲೀಸರಿಗೆ ಸಾಕ್ಷಿ ನೀಡಿದೆ. ಸಿಸಿಟಿವಿಯ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರ ತಂಡ ೫ದಿನ ಹಗಲು ರಾತ್ರಿ ಕಾರ್ಯಚರಣೆ ನಡೆಸಿ ಕೇರಳ ರಾಜ್ಯದ ತಿರುವಂತನಪುರA ಜಿಲ್ಲೆಯ ಕೊಟ್ಟಾಕರಿಯ ತೋಟದ ಮನೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ತುಮಕೂರು ಎಸ್ಪಿ ಅಶೋಕ್.ಕೆ.ವಿ ಮಾರ್ಗದರ್ಶನ, ಮಧುಗಿರಿ ಡಿವೈಎಸ್ಪಿ ಮಂಜುನಾಥ ಮಾರ್ಗ ಸೂಚನೆಯಲ್ಲಿ ಕೊರಟಗೆರೆ ಸಿಪಿಐ ಪುರುಷೋತ್ತಮ್, ಮಧುಗಿರಿ ಸಿಪಿಐ ಹನುಮಂತರಾಯಪ್ಪ ನೇತೃತ್ವದಲ್ಲಿ ಪಿಎಸೈ ತೀರ್ಥೇಶ್, ಅಭಿಷೇಕ್, ಸುನಿಲ್, ಐರೋಗಡಿ, ರವೀಂದ್ರ, ಮುತ್ತುರಾಜು ಮತ್ತು ರಾಮಕೃಷ್ಣಯ್ಯ, ದೊಡ್ಡಲಿಂಗಯ್ಯ ಪೊಲೀಸರ ತಂಡ ಕಾರ್ಯಚರಣೆ ನಡೆಸಿದೆ. ಕೊರಟಗೆರೆ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

