BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ‘ಜ್ಞಾನ ವೃದ್ಧಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ಓದುವ ಹವ್ಯಾಸ ಸಹಕಾರಿ’
  • ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ
  • ಕ್ರೀಡೆ ಮನುಷ್ಯನಿಗೆ ಜೀವನದ ಪಾಠ ಕಲಿಸುತ್ತದೆ
  • ಶಿಕ್ಷಣವೆಂದರೆ ಮಗುವಿನ ಸರ್ವತೋಮುಖ ಬೆಳವಣಿಗೆ
  • ನಗರದ ವಿವಿಧೆಡೆ ಉಪಲೋಕಾಯುಕ್ತರಿಂದ ಬಿರುಸಿನ ಕಾರ್ಯಾಚರಣೆ
  • ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಂಸ್ಕಾರ ಮುಖ್ಯ
  • ಮಕ್ಕಳ ರಕ್ಷಣಾ ಕಾಯ್ದೆ ಬಗ್ಗೆ ಜಾಗೃತಿ ಅವಶ್ಯಕ
  • ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ದಿಗ್ವಿಜಯ: ಸಂಭ್ರಮ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಜನಮನ್ನಣೆ ಪಡೆಯುವಲ್ಲಿ ಪತ್ರಿಕೆ ಕಾರ್ಯ ಶ್ಲಾಘನೀಯ : ಮಸಾಲೆ ಜಯರಾಮ್
Trending

ಜನಮನ್ನಣೆ ಪಡೆಯುವಲ್ಲಿ ಪತ್ರಿಕೆ ಕಾರ್ಯ ಶ್ಲಾಘನೀಯ : ಮಸಾಲೆ ಜಯರಾಮ್

By News Desk BenkiyabaleUpdated:March 13, 2021 6:06 pm

ತುಮಕೂರು:

     ದಿನಪತ್ರಿಕೆಗಳು ಸಮಾಜಮುಖಿಯಾಗಿದ್ದರೆ ಮಾತ್ರ ಜನಮನ್ನಣೆ ಸಿಗಲು ಸಾಧ್ಯ ಈ ನಿಟ್ಟಿನಲ್ಲಿ ಬೆಂಕಿಯಬಲೆ ಪತ್ರಿಕೆ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಮಸಾಲೆ ಜಯರಾಂ ಅಭಿಪ್ರಾಯಪಟ್ಟರು.

      ನಗರದ ಕೆಇಬಿ ಇಂಜನಿಯರ್ಸ್ ಸಂಘ ಕಚೇರಿಯಲ್ಲಿ ನಡೆದ ಬೆಂಕಿಯ ಬಲೆ ಪತ್ರಿಕೆಯ 17 ನೇ ವಾರ್ಷಿಕೋತ್ಸವ ಹಾಗೂ ಹಿಂಗ್ಯಾಕೆ ಕಿರುಚಿತ್ರ ಬಿಡುಗಡೆ ಮತ್ತು ಬಡ ಮಕ್ಕಳಿಗೆ ವಸ್ತ್ರ ವಿಸ್ತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

     ಸದಾ ಚಟುವಟಿಕೆಯಿಂದ ಇರುವ ಧನಂಜಯ ಅವರು, ಈ ಹಿಂದೆ ತುರುವೇಕೆರೆಯಲ್ಲಿ ಮಹಿಳೆಯರಿಗಾಗಿ ಕಾರ್ಯಕ್ರಮ ನಿರ್ವಹಿಸಿ, ತೇಜು ಮಸಾಲೆಯನ್ನು ಪರಿಚಯಿಸಿದ್ದರು, ಶಾಸಕನಾಗಿ ಉತ್ತಮ ಕಾರ್ಯಗಳನ್ನು ನಿರ್ವಹಿಸಲು ಸಲಹೆ ನೀಡುವ ಮೂಲಕ ಪರೋಕ್ಷವಾಗಿ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಪತ್ರಿಕೋಧ್ಯಮದಲ್ಲಿ ಯಾವುದಕ್ಕೂ ಅಂಜದೆ ದಿಟ್ಟತನದಿಂದ ಸುದ್ದಿ ಬರೆಯುವಲ್ಲಿ ಧನಂಜಯವರ ಸಾಧನೆ ಮೆಚ್ಚುವಂತಹದ್ದು. ಪ್ರತಿ ಕ್ಷಣ ಒಂದಿಲ್ಲೊಂದು ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪತ್ರಿಕಾ ರಂಗದಲ್ಲಿ ತನ್ನದೆ ಆದ ಮೌಲ್ಯವನ್ನು ಉಳಿಸಿಕೊಂಡು ಬರವಣಿಗೆಯಲ್ಲಿ ಭಿನ್ನತೆ ಹೊಂದಿರುವುದು ಬೆಂಕಿಯ ಬಲೆಯ ವಿಶಿಷ್ಟತೆ ಎಂದರು.

      ಬೆಂಕಿಯಬಲೆ ಪತ್ರಿಕೆ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಅವರು, ಜನಮುಖಿ ಪತ್ರಿಕೆಯೊಂದಿಗೆ ಕಿರುಚಿತ್ರ ಮಾಡಿರುವುದು ಶ್ಲಾಘನೀಯ, ಪತ್ರಿಕೆ ನಡೆಸುವುದು ಕಷ್ಟಕರ ಇಂತಹ ಸಂದರ್ಭದಲ್ಲಿ ಪತ್ರಿಕೆಯನ್ನು ಕೊಂಡು ಓದುವವರ ಸಂಖ್ಯೆ ಹೆಚ್ಚಬೇಕು ಆಗ ಮಾತ್ರ ಪತ್ರಿಕೆಗಳು ಉಳಿಯಲು ಸಾಧ್ಯ ಎಂದರು.

      ಕಿರುಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಮೈಸೂರು ರಮಾನಂದ್ ಅವರು ಕಿರುಚಿತ್ರಕ್ಕೆ ಜಾಗತಿಕ ಮನ್ನಣೆ ಇದೆ, ಇದರಿಂದ ಹಿರಿತೆರೆಗೆ ಅವಕಾಶ ಸಿಗುತ್ತಿತ್ತು, ಇಂದಿನ ಡಿಜಿಟಲ್ ಯುಗದಲ್ಲಿ ಕಿರುಚಿತ್ರಗಳಿಗೆ ಉತ್ತಮ ಅವಕಾಶ ಇದೆ, ರಿಯಾಲಿಟಿ ಷೋಗಳಿಂತ ಕಡಿಮೆ ಇಲ್ಲದ ಅವಕಾಶ ಈಗ ಕಿರುಚಿತ್ರಗಳಿಗಿದೆ ಎಂದರು.

      ದೇಶದಲ್ಲಿ ಕೊರೊನಾ ತಾಂಡವವಾಡುತ್ತಿದ್ದು ಪ್ರತಿಯೊಬ್ಬರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಪತ್ರಿಕಾ ಮಾಧ್ಯಮ ನಮ್ಮನ್ನು ಬೆಳೆಸುವುದರೊಂದಿಗೆ ಜನ ಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರನ್ನು ಓಡಿಸಲು ಪತ್ರಿಕೆಗಳ ಪಾತ್ರ ಮಹತ್ವದ್ದು, ನಾಲ್ಕು ಅಂಗಗಳ ನಡುವೆ ಪತ್ರಿಕೋದ್ಯಮ ವಿಶಿಷ್ಟವಾಗಿದೆ, ಇದೇ ನಿಟ್ಟಿನಲ್ಲಿ ಸದಾ ಒಂದಿಲ್ಲೊಂದು ಕಾರ್ಯದಲ್ಲಿ ನಿರತರಾಗಿ ಪತ್ರಿಕಾ ರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಧನಂಜಯ ದೈರ್ಯ ಮೆಚ್ಚುವಂತಹದ್ದು. ಮೊದಲಿನಿಂದಲೂ ಯಾವುದೇ ಭಯವಿಲ್ಲದೆ ಹಲವು ಭ್ರಷ್ಟರ ಬಗ್ಗೆ ನಿರ್ಭೀಯವಾಗಿ ಸುದ್ದಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಡಿಜಿಟಲ್ ಮಾಧ್ಯಮಗಳ ಭರಾಟೆಯಲ್ಲಿ ಪತ್ರಿಕೆ ನಡೆಸುವುದು ಸಾಹಸ ಈ ಹಂತದಲ್ಲಿ ಬೆಂಕಿಯ ಬಲೆ ಪತ್ರಿಕೆಯನ್ನು ನಡೆಸುವ ಮೂಲಕ ಕಿರುಚಿತ್ರ ನಿರ್ಮಿಸಿರುವುದು ಸಂತಸದ ವಿಷಯ ಎಂದು ಹೇಳಿದರು. 2020ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳ ಗೆಲುವು ಸೋಲಿನ ಲೆಕ್ಕಾಚಾರ ಹಾಕುವಲ್ಲಿ ಜನರ ನಡುವೆ ನೇರವಾಗಿ ಸಂದರ್ಶನ ನಡೆಸಿದ ಕೀರ್ತಿ ಧನಂಜಯವರದ್ದು.ಜಿಲ್ಲೆಯಲ್ಲಿ ನಿಖರವಾಗಿ ಯಾರ ಬಗ್ಗೆ ಬೇಕಾದರೂ ಬರೆಯಬಲ್ಲ ಛಾತಿ ಇರುವುದು ಧನಂಜಯ ಅವರಿಗೆ ಮಾತ್ರ, ರಾಜಕೀಯ ವಿಶ್ಲೇಷಣೆ ಸೇರಿದಂತೆ ಎಲ್ಲ ವಿಚಾರಗಳಲ್ಲಿಯೂ ಪ್ರಬುದ್ಧತೆ ಇದೆ, ಜನರಿಗೆ ಬೇಕಿರುವ ಮಾಹಿತಿಯನ್ನು ಕಿರುಚಿತ್ರಗಳ ಮೂಲಕ ನೀಡುವಂತಾಗಲಿ, ಸಂಶೋಧನೆ ಮಾಡಿ ಕಿರುಚಿತ್ರಗಳನ್ನು ತಯಾರಿಸುವಂತೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಕಿರುಚಿತ್ರ ನಿರ್ಮಿಸಿದ ಬೆಂಕಿಯ ಬಲೆ ಪತ್ರಿಕೆಯ ಸಂಪಾದಕ ಧನಂಜಯರವರಿಗೆ ಅಭಿನಂದನೆ ಎಂದರು. ಕಾರ್ಯಕ್ರಮದಲ್ಲಿ ‘ಹಿಂಗ್ಯಾಕೆ’ ಕಿರುಚಿತ್ರ ಮತ್ತು ಬೆಂಕಿಯಬಲೆ ವಿಶೇಷಾಂಕದಲ್ಲಿ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸಲಾಯಿತು.

(Visited 29 times, 1 visits today)
Previous Articleಶೈಕ್ಷಣಿಕ ಸಂಸ್ಥೆ ಹಾಗು ಸರ್ಕಾರಿ ಕಛೇರಿಗಳನ್ನು ತಂಬಾಕು ಮುಕ್ತ ಮಾಡಿ : ಡಿಸಿ
Next Article ಪಾಲಿಕೆ – ಸ್ಮಾರ್ಟ್‍ಸಿಟಿ ಕಾಮಗಾರಿಗಳು ಸಂಪೂರ್ಣ ಕಳಪೆ
News Desk Benkiyabale

Related Posts

ನಗರದ ವಿವಿಧೆಡೆ ಉಪಲೋಕಾಯುಕ್ತರಿಂದ ಬಿರುಸಿನ ಕಾರ್ಯಾಚರಣೆ

November 15, 2025 4:32 pm ತುಮಕೂರು

ಸಮಾಜದಲ್ಲಿ ತಾಂಡವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ: ಸ್ವಾಮೀಜಿ

November 10, 2025 2:20 pm ತುಮಕೂರು

ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ವಿದ್ಯಾರ್ಥಿಗಳ ಲಕ್ಷಣ

November 10, 2025 2:15 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

‘ಜ್ಞಾನ ವೃದ್ಧಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ಓದುವ ಹವ್ಯಾಸ ಸಹಕಾರಿ’

November 17, 2025 4:49 pm
ಇತರೆ ಸುದ್ಧಿಗಳು

ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ

November 17, 2025 4:48 pm
ಇತರೆ ಸುದ್ಧಿಗಳು

ಕ್ರೀಡೆ ಮನುಷ್ಯನಿಗೆ ಜೀವನದ ಪಾಠ ಕಲಿಸುತ್ತದೆ

November 17, 2025 4:47 pm
ಇತರೆ ಸುದ್ಧಿಗಳು

ಶಿಕ್ಷಣವೆಂದರೆ ಮಗುವಿನ ಸರ್ವತೋಮುಖ ಬೆಳವಣಿಗೆ

November 15, 2025 4:33 pm

ನಗರದ ವಿವಿಧೆಡೆ ಉಪಲೋಕಾಯುಕ್ತರಿಂದ ಬಿರುಸಿನ ಕಾರ್ಯಾಚರಣೆ

November 15, 2025 4:32 pm
ಇತರೆ ಸುದ್ಧಿಗಳು

ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಂಸ್ಕಾರ ಮುಖ್ಯ

November 15, 2025 4:31 pm
Our Youtube Channel
Our Picks

‘ಜ್ಞಾನ ವೃದ್ಧಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ಓದುವ ಹವ್ಯಾಸ ಸಹಕಾರಿ’

November 17, 2025 4:49 pm

ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ

November 17, 2025 4:48 pm

ಕ್ರೀಡೆ ಮನುಷ್ಯನಿಗೆ ಜೀವನದ ಪಾಠ ಕಲಿಸುತ್ತದೆ

November 17, 2025 4:47 pm

ಶಿಕ್ಷಣವೆಂದರೆ ಮಗುವಿನ ಸರ್ವತೋಮುಖ ಬೆಳವಣಿಗೆ

November 15, 2025 4:33 pm

ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಂಸ್ಕಾರ ಮುಖ್ಯ

November 15, 2025 4:31 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

‘ಜ್ಞಾನ ವೃದ್ಧಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ಓದುವ ಹವ್ಯಾಸ ಸಹಕಾರಿ’

By News Desk BenkiyabaleNovember 17, 2025 4:49 pm

ತುಮಕೂರು: ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಓದುವುದರಿಂದ ಜ್ಞಾನ ಬೆಳೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ…

ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ

November 17, 2025 4:48 pm

ಕ್ರೀಡೆ ಮನುಷ್ಯನಿಗೆ ಜೀವನದ ಪಾಠ ಕಲಿಸುತ್ತದೆ

November 17, 2025 4:47 pm

ಶಿಕ್ಷಣವೆಂದರೆ ಮಗುವಿನ ಸರ್ವತೋಮುಖ ಬೆಳವಣಿಗೆ

November 15, 2025 4:33 pm
News by Date
November 2025
M T W T F S S
 12
3456789
10111213141516
17181920212223
24252627282930
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.