ತುಮಕೂರು :

      ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿಂದು 2021-22ನೇ ಸಾಲಿನ ಲಿಂಕ್ ಡಾಕ್ಯುಮೆಂಡ್ ಕಾರ್ಯಕ್ರಮ, 15ನೇ ಹಣಕಾಸು ಯೋಜನೆ ಸೇರಿ ವಿವಿಧ ಕಾಮಗಾರಿಗಳಿಗೆ 540 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಜಿಲ್ಲಾ ಪಂಚಾಯತಿ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾಗಿ ಕಾರ್ಯದರ್ಶಿ ಡಾ. ರಾಜೇಶ್ ಸಿಂಗ್ ಅನಮೋದನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ವಿವಿಧ ಸ್ಥಾಯಿ ಸಮಿತಿ ಮತ್ತು ಸಾಮಾನ್ಯ ಸಭೆಯ ಅಧ್ಯಕ್ಷವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಯಡಿ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖಾವಾರು ರೂಪಿಸಿರುವ ಕಾರ್ಯಕ್ರಮಗಳನ್ನು ತ್ವರಿತವಾಗಿ ಅನುμÁ್ಟನಗೊಳಿಸಬೇಕು ಎಂದರು.
ಶಾಲಾ ಮಕ್ಕಳಿಗಾಗಿ ರೂಪಿಸಿರುವ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಮಕ್ಕಳಿಗೆ ನೀಡಲಾಗುವ ಉಚಿತ ಆಹಾರ ಧಾನ್ಯಗಳ ವಿತರಣೆಗೆ ಸೂಕ್ತ ಕ್ರಮವಹಿಸಬೇಕು ಎಂದರಲ್ಲದೆ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಸತಿ ನಿಲಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು, ಅಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುವ ಹಾಸ್ಟೆಲ್‍ಗಳ ಸ್ಥಿತಿ ಗತಿಗಳನ್ನು ಗಮನಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿಶೇಷ ತರಗತಿಗಳನ್ನು ನಡೆಸಲು ಸೂಕ್ತ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ನಿದೇರ್ಶನ ನೀಡಿದರು.
ಜಿಲ್ಲೆಯಲ್ಲಿ ಕೃಷಿ ಇಲಾಖೆಯಡಿ ರೈತರಿಗೆ ನೀಡಲಾಗುವ ಬಿತ್ತನೆ, ಬೀಜ, ರಸಗೊಬ್ಬರ, ಬೆಳೆ ಪರಿಸ್ಥಿತಿ ಬಗ್ಗೆ ಮತ್ತು ಬೆಳೆಯಲಾಗುವ ಮಿಶ್ರ ಬೆಳೆಗಳ ಬಗ್ಗೆ ತಾಲ್ಲೂಕುವಾರು, ಅಂಕಿ ಅಂಶಗಳನ್ನು ಕ್ರೂಢೀಕರಿಸಬೇಕು. ಹಾಗೂ ತೋಟಗಾರಿಕೆ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ಪ್ರೋತ್ಸಾಹ ಧನ, ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ, ಹೂಳೆತ್ತುವುದು, ಕಾಲುವೆ ನಿರ್ವಹಣೆ ಸೇರಿದಂತೆ ನೀರಾವರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮ ಹಾಗೂ ಮೂಲಭೂತ ಸೌಕರ್ಯಗಳನ್ನು ಅನುμÁ್ಠನಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಲೆಂಕ್ ಡಾಕ್ಯುಮೆಂಟ್‍ನಡಿ ಲೋಕೋಪಯೋಗಿ ಇಲಾಖೆಗೆ 797,99 ಲಕ್ಷ ರೂ ಅಕ್ಷರ ದಾಸೋಹ-8879,93 ಲಕ್ಷ ರೂ., ಸಾಮಾನ್ಯ ಶಿಕ್ಷಣ-17397.12 ಲಕ್ಷ ರೂ., ಜನಶಿಕ್ಷಣ-60.11 ಲಕ್ಷ ರೂ., ಕ್ರೀಡಾ ಮತ್ತು ಯುವಜನ ಸೇವೆಗಳು-111.69 ಲಕ್ಷ ರೂ., ಕಲೆ ಮತ್ತು ಸಂಸ್ಕøತಿ 6 ಲಕ್ಷ ರೂ., ವೈದ್ಯಕೀಯ ಮತ್ತು ಜನಾರೋಗ್ಯ-5978 ಲಕ್ಷ ರೂ., ಕುಟುಂಬ ಕಲ್ಯಾಣ-3479.45 ಲಕ್ಷ ರೂ., ಆಯುಷ್ -593.85 ಲಕ್ಷ ರೂ., ಪರಿಶಿಷ್ಟ ಜಾತಿ ಕಲ್ಯಾಣ 2919.89 ಲಕ್ಷ ರೂ., ಪರಿಶಿಷ್ಟ ಪಂಗಡ ಕಲ್ಯಾಣ-1090.74 ಲಕ್ಷ ರೂ. ಹಿಂದುಳಿದ ವರ್ಗಗಳ ಕಲ್ಯಾಣ-5386.26 ಲಕ್ಷ ರೂ. ಅಲ್ಪಸಂಖ್ಯಾತರ ಕಲ್ಯಾಣ 499.83 ಲಕ್ಷ ರೂ., ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ-83.91 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ- 303,72 ಲಕ್ಷ ರೂ., ಕೃಷಿ-309.5 ಲಕ್ಷ ರೂ., ಭೂಸಾರ ಮತ್ತು ಜಲ ಸಂರಕ್ಷಣೆ-133.20 ಲಕ್ಷ ರೂ., ತೋಟಗಾರಿಕೆ-799.93 ಲಕ್ಷ ರೂ., ಪಶುಸಂಗೋಪನೆ-533.80 ಲಕ್ಷ ರೂ., ಮೀನುಗಾರಿಕೆ-188.82 ಲಕ್ಷ ರೂ., ಅರಣ್ಯ(ಸಾಮಾಜಿಕ)-996.47 ಲಕ್ಷ ರೂ. ಸಹಕಾರ-3 ಲಕ್ಷ ರೂ., ಆರ್.ಡಿ.ಪಿ.ಆರ್. 391.17 ಲಕ್ಷ ರೂ., ಸಣ್ಣ ನೀರಾವರಿ-204.05 ಲಕ್ಷ ರೂ., ರೇμÉ್ಮ -460.1. ಲಕ್ಷ ರೂ., ಗ್ರಾಮೀಣ ಮತ್ತು ಕೈಗಾರಿಕೆಗಳು- 112.88 ಲಕ್ಷ ರೂ., ಕೈಮಗ್ಗ ಮತ್ತು ಜವಳಿ 69.92 ಲಕ್ಷ ರೂ., ರಸ್ತೆ ಮತ್ತು ಸೇತುವೆಗಳು-731.12ಲಕ್ಷ ರೂ, ಇತರ ವಿಜ್ಞಾನ ಸಂಶೋಧನೆ-5.50 ಲಕ್ಷ ರೂ. ಸಚಿವಾಲಯ ಆರ್ಥಿಕ ಸೇವೆಗಳು- 87.57ಲಕ್ಷ ರೂ., ಕೃಷಿ ಮಾರುಕಟ್ಟೆಗೆ 4.41ಲಕ್ಷ ರೂ., 15ನೇ ಹಣಕಾಸು ಯೋಜನೆಗಾಗಿ 663.34 ಲಕ್ಷ ರೂ., ಜಿಲ್ಲಾ ಪಂಚಾಯತಿ ಅನಿಬರ್ಂಧಿತ ಅನುದಾನಕ್ಕಾಗಿ 693.56 ಲಕ್ಷ ರೂ ಸೇರಿದಂತೆ ಒಟ್ಟು 54058.29 ಲಕ್ಷ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 4 times, 1 visits today)