ತುಮಕೂರು:


ಗ್ರಾಮಾಂತರ ಪನ್ನಸಂದ್ರ ಗ್ರಾಮದಲ್ಲಿ ನೂತನ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ಭಾಗವಹಿಸಿ ದೇವಾಲಯದ ಅಭಿವೃದ್ಧಿಗೆ 2,00,000 ಲಕ್ಷ ಹಣವನ್ನು ವೈಯಕ್ತಿಕವಾಗಿ ನೀಡಿದರು.
ಈ ಹಿಂದೆ ದೇವಾಲಯದ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ 2,00,000 ಲಕ್ಷ ಹಣವನ್ನು ಸಹ ವೈಯಕ್ತಿಕವಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ಈ ದೇವಾಲಯಕ್ಕೆ ಮಾನ್ಯ ಸುರೇಶ್ ಗೌಡರು ನೀಡಿರುತ್ತಾರೆ.
ಅದೇ ರೀತಿ ಈ ಗ್ರಾಮಕ್ಕೆ ಶಾಸಕರಾಗಿದ್ದ ಸಂದರ್ಭದಲ್ಲಿ 40,00000 ಲಕ್ಷ ಸ್ವಂತ ಹಣದಿಂದ ಸಿ.ಸಿ ರಸ್ತೆ ಮತ್ತು ಚರಂಡಿಯನ್ನು ನಿರ್ಮಾಣ ಮಾಡಿಸಿ ಜನರ ಮನ ಗೆದ್ದ ಸುರೇಶ್ ಗೌಡರವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಹೊನ್ನುಡಿಕೆ ಜಿಲ್ಲಾ ಪಂಚಾಯಿತಿ ಬಿಜೆಪಿ ಮುಖಂಡರಾದ ಸಿದ್ದೇಗೌಡ್ರು, ಸುಮಿತ್ರಾ ಅಕ್ಕ, ಪಾಪಣ್ಣ, ಮಂಜಣ್ಣ, ಸುರೇಶ್, ಪ್ರಕಾಶ್, ಪಟೇಲರು ರಂಗಸ್ವಾಮಯ್ಯ, ಶ್ರೀನಿವಾಸ್, ಜಯಕ್ಕ ಗ್ರಾಮದ ಹಿರಿಯ ಮುಖಂಡರು, ತಾಯಂದಿರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

(Visited 6 times, 1 visits today)