ತುಮಕೂರು :

ಶಿಂಷಾ ಜಲಾನಯನ ಪ್ರದೇಶದಲ್ಲಿ
ಆಗಸ್ಟ್ 26ರಿಂದ ಸುರಿಯುತ್ತಿರುವ ಭಾರಿ ಮಳೆಗೆ ಜಲಾಶಯದ
ಒಳಹರಿವು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮಾರ್ಕೋನಹಳ್ಳಿ

ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡುವ ಕಾರಣ
ಅಣೆಕಟ್ಟೆ ಕೆಳಭಾಗದ ಮತ್ತು ನದಿ ಪಾತ್ರದ
ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ತಮ್ಮ
ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ
ಸ್ಥಳಾಂತರಗೊಳ್ಳುವಂತೆ ಹೇಮಾವತಿ ನಾಲಾವಿಭಾಗದ
ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಸ್ತುತ ಮಾರ್ಕೋನಹಳ್ಳಿ ಜಲಾಶಯಕ್ಕೆ ಬರುವ
ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ಶಿಂಷಾ ನದಿಗೆ ಹೆಚ್ಚುವರಿ
ನೀರನ್ನು ಹೊರ ಬಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಯ
ಕೆಳಭಾಗದ ಹಾಗೂ ನದಿ ಪಾತ್ರದ ಪ್ರದೇಶದಲ್ಲಿ ಬರುವ
ಹಳ್ಳಿಗಳಾದ ಮಾರ್ಕೋನಹಳ್ಳಿ, ಹನುಮಾಪುರ, ಕೆಟಿ ಪಾಳ್ಯ,
ಬೆಟ್ಟಹಳ್ಳಿ, ಪಡುವಗೆರೆ ಕೊಡವತ್ತಿ, ಕೀಲಾರ, ಅಂಚಿಪುರ,
ದೊಡ್ಡಕಲ್ಲಹಳ್ಳಿ, ಚಂದನಹಳ್ಳಿ, ಯಡವಾಣಿ, ಕಗ್ಗಲಾಪುರ
ಶಾನುಭೋಗನಹಳ್ಳಿ, ವಳಗೆರೆಪುರ, ಕಾಡಶೆಟ್ಟಿಹಳ್ಳಿ ಹಾಗೂ
ಇತರೆ ಎಲ್ಲಾ ಹಳ್ಳಿಗಳ ಸಾರ್ವಜನಿಕರು ಮತ್ತು ಜಾನುವಾರು ಹಾಗೂ
ಆಸ್ತಿ-ಪಾಸ್ತಿ ವಗೈರೆಗಳನ್ನು ಸುರಕ್ಷಿತ ಪ್ರದೇಶಗಳಿಗೆ
ಸ್ಥಳಾಂತರ ಮಾಡಿಕೊಳ್ಳುವಂತೆ ಎಡೆಯೂರು ಕಾವೇರಿ ನೀರಾವರಿ
ನಿಗಮ ನಿಯಮಿತ ಹೇಮಾವತಿ ನಾಲಾ ವಿಭಾಗದ ಕಾರ್ಯಪಾಲಕ
ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 2 times, 1 visits today)