BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೆಎನ್‌ಆರ್‌ಗೆ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಒತ್ತಾಯ
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಠ್ಯ ವಿಷಯಗಳಲ್ಲಿ ನೈಪುಣ್ಯತೆ ಅಗತ್ಯ
  • “ವಿದ್ಯಾರ್ಥಿ ದಿಸೆಯಿಂದಲೇ ಸಂಶೋಧನಾಸಕ್ತಿ ಬೆಳೆಸಿಕೊಳ್ಳಿ”
  • ಇ-ಸ್ವತ್ತು ಕುರಿತು ಪಿಡಿಓಗಳಿಗೆ ತರಬೇತಿ
  • ಬರಗೂರು-ಬೆಳಗುಲಿ ಕಾಲೇಜಿಗೆ ವಾಣಿಜ್ಯ ಉಪನ್ಯಾಸಕರ ಹುದ್ದೆ ಮಂಜೂರು ಮಾಡಿ
  • ರಾಜಕಾರಣ, ಮಾಧ್ಯಮ ಸಮಾಜದ ಎರಡು ಕಣ್ಣುಗಳಂತೆ
  • ರಂಗ ಚಟುವಟಿಕೆಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿವೆ
  • ಪ್ರತಿಯೋಬ್ಬರು ಕನ್ನಡ ಭಾಷಾ ಪ್ರೇಮ ಬೆಳೆಸಿಕೊಳ್ಳಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದೇವೆಗೌಡರ ವಿರುದ್ಧ ಗೊಲ್ಲರ ಮುನಿಸು-ಕುರುಬರ ಕನಸು!
Trending

ದೇವೆಗೌಡರ ವಿರುದ್ಧ ಗೊಲ್ಲರ ಮುನಿಸು-ಕುರುಬರ ಕನಸು!

By News Desk BenkiyabaleUpdated:March 25, 2019 7:39 pm

ತುಮಕೂರು:

     ತುಮಕೂರು ಲೋಕಸಭಾ ಕ್ಷೇತ್ರ ರಾಷ್ಟ್ರ ರಾಜಕಾರಣದಲ್ಲಿ ಗಮನಸೆಳೆಯುತ್ತಿದೆ. ಕಾರಣ ಜೆಡಿಎಸ್ ನ ವರಿಷ್ಠ ಹೆಚ್.ಡಿ.ದೇವೆಗೌಡರು ತುಮಕೂರಿನಿಂದ ಆಯ್ಕೆ ಬಯಸಿ ಸ್ಪರ್ಧೆ ಗಿಳಿದಿರುವುದು ಒಕ್ಕಲಿಗರ ಪರಮೋಚ್ಛ ನಾಯಕನೆಂದು ಬಿಂಬಿತವಾಗಿರುವ ದೇವೆಗೌಡರು ತನ್ನ ಕುಟುಂಬ ರಾಜಕಾರಣದಿಂದಲೇ ಹೆಸರುವಾಸಿಯಾದವರು.

      ತನ್ನ ಮೊಮ್ಮಕ್ಕಳಿಗಾಗಿ ಕ್ಷೇತ್ರ ಬಿಟ್ಟು ತುಮಕೂರಿನಲ್ಲಿ ಸ್ಪರ್ಧೆಗಿಳಿದಿರುವ ದೊಡ್ಡ ಗೌಡರು ಸ್ಥಳೀಯ ಜೆಡಿಎಸ್ ನಾಯಕರ ಹಾಗೂ ಮುಖಂಡರ ಆಂತರಿಕ ಕ್ರೋದಾಗ್ನಿಗೆ ತುತ್ತಾಗಿಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾರಣ ಗೌಡರು ಇಲ್ಲಿ ಆಯ್ಕೆಯಾಗಿಬಿಟ್ಟರೆ ಹಾಸನದ ರಾಜಕಾರಣದ ರೀತಿಯಲ್ಲಿ ಹಿಡಿತ ಸಾಧಿಸುತ್ತಾರೆ, ಸ್ಥಳೀಯ ನಾಯಕರಿಗೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ ಎನ್ನುವುದು ಕೆಲವರ ಅಭಿಪ್ರಾಯ ದೇವೆಗೌಡರ ಸ್ಪರ್ಧೆಯಿಂದ ಬೇಸತ್ತಿರುವ ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದ ಉಳಿವಿಗಾಗಿ ಹಾಗೂ ತಮ್ಮ ಮುಂದಿನ ರಾಜಕೀಯ ಅಸ್ತಿತ್ವಕ್ಕಾಗಿ ಚಿಂತಸುವ ಅನಿವಾರ್ಯತೆ ಎದುರಾಗಿದೆ.

      ರಾಜ್ಯ ಕಾಂಗ್ರೆಸ್ ನಾಯಕರ ಮೈತ್ರಿ ಸ್ಥಳೀಯ ಮುಖಂಡರ ಆಂತರಿಕ ವೈಶಮ್ಯಗಳನ್ನು ಶಮನ ಮಾಡಲು ಸಾಧ್ಯವಿಲ್ಲ ಆದ್ದರಿಂದ ಮೇಲ್ನೋಟಕ್ಕೆ ಮಾತ್ರ ಹಾಗಿದ್ದೇವೆ ಎನ್ನುವವರೇ ಹೆಚ್ಚು ಒಕ್ಕಲಿಗರ ಪರಮೋಚ್ಚ ನಾಯಕ ದೇವೆಗೌಡರು ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯರವರನ್ನು ರಾಜಕೀಯವಾಗಿ ನಿರ್ನಾಮ ಮಾಡಲು ಹೊರಟಿದ್ದರು ಎಂದು ರಾಜ್ಯವ್ಯಾಪಿ ಗೌಡರ ವಿರುದ್ದ ಕುರುಬ ಸಮುದಾಯ ಕೆಂಡಾಮಂಡಲವಾಗಿತ್ತು. ನಂತರದ ದಿನಗಳಲ್ಲಿ ಜೆಡಿಎಸ್ ವಿರುದ್ದವಾಗಿ ತಮ್ಮ ನಿಲುವು ವ್ಯಕ್ತಪಡಿಸುತ್ತಿತ್ತು ಆದರೆ ಇದೀಗ ಜಿಲ್ಲೆಯಲ್ಲಿದ್ದ ಸಮುದಾಯದ ಏಕೈಕ ನಾಯಕ ಸಿ.ಬಿ.ಸುರೇಶ್ ಬಾಬು ರವರನ್ನು ಪಕ್ಷಕ್ಕಾಗಿ ದುಡಿಸಿಕೊಂಡು ಅಧಿಕಾರದಲ್ಲಿದ್ದು ತಿರಸ್ಕಾರ ಮಾಡಿದ್ದಾರೆ. ಹಾಗೂ ಅವರಿಗೆ ತಕ್ಕ ಸ್ಥಾನಮಾನ ನೀಡಿಲ್ಲ. ಎಂಪಿ ಟಿಕೇಟ್ ನೀಡುತ್ತೆವೆ ಎಂದು ಹೇಳಿ ಗೌಡರೇ ಬಂದದ್ದು ಮತ್ತೆ ಕುರುಬರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

      ಕಳೆದ ಲೋಕಸಭಾ ಚುನಾವಣೆಯಲ್ಲಿ ಗೊಲ್ಲ ಸಮುದಾಯದ ಕೃಷ್ಣಪ್ಪ ರವರನ್ನು ಕಣಕ್ಕಿಳಿಸಿದ ದೇವೆಗೌಡರು ಅವರ ಸಾವಿಗೆ ಕಾರಣರಾದರು ಎಂದು ಬಿಜೆಪಿ ಆಪಾದಿಸುತ್ತಿದೆ. ಜೆಡಿಎಸ್ ನಿಂದ ಸ್ಪರ್ಧಿಸಿರುವುದು ಗೊಲ್ಲ ಸಮುದಾಯದ ಕೃಷ್ಣಪ್ಪ ಎಂದು ತಿಳಿದು ಪಕ್ಷವನ್ನು ಮರೆತ ಒಕ್ಕಲಿಗ ಸಮುದಾಯ ಕಾಂಗ್ರೆಸ್ ನ ಮುದ್ದಹನುಮೇಗೌಡರನ್ನ ಬೆಂಬಲಿಸುವ ಮೂಲಕ ಹಿಂದುಳಿದ ವರ್ಗದ ಗೊಲ್ಲ ಸಮುದಾಯವನ್ನು ತುಳಿದು ತಾತ್ಸಾರದಿಂದ ನೋಡಿತ್ತು. ಇದರಿಂದ ಕೃಷ್ಣಪ್ಪ ಮನನೊಂದಿದ್ದರು. ಚುನಾವಣೆಯ ತೀರ್ಪು ಬರುವ ಮುನ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ತನ್ನ ಸಮುದಾಯದ ನಾಯಕನ ಸೋಲು ಮತ್ತು ಸಾವಿಗೆ ಒಕ್ಕಲಿಗರು ಕಾರಣ ಎಂದು ಜೆಡಿಎಸ್‍ನ ವಿರುದ್ದ ಕಿಡಿಕಾರಿದ ಯಾದವ ಸಮುದಾಯದ ಮುಖಂಡರು ಮುಂಬರುವ ದಿನಗಳಲ್ಲಿ ಜೆಡಿಎಸ್ ವಿರುದ್ದ ಮತಚಲಾಯಿಸುವ ನಿರ್ಧಾರವನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಕೈಗೊಂಡಿದ್ದರು. ಆದರೆ ಗೌಡರ ಸ್ಪರ್ಧೆ ಯಾದವರ ಸೇಡಿಗೆ ಕಾರಣವಾಗಬಹುದು ಎಂದು ಗೌಡರ ವಿರೋಧಿ ಪಡೆ ಲೆಕ್ಕಾಚಾರ ಹಾಕಿದೆ.

     ಕುರುಬ ಸಮುದಾಯ ಹಾಗೂ ಗೊಲ್ಲ ಸಮುದಾಯದ ನಿರ್ಣಾಯಕ ಮತಗಳು ಗೌಡರ ವಿರುದ್ದ ತಿರುಗಿಬೀಳುವ ಸಾಧ್ಯತೆಯಿರುವ ಕಾರಣ ಅದನ್ನು ಸರಿಪಡಿಸುವ ಪ್ರಯತ್ನಗಳು ವಿಫಲಗೊಂಡಿವೆ. ಹಿಂದುಳಿದ ವರ್ಗಗಳ ಅಪ್ಪುಗೆ ಸಾಧ್ಯವಿಲ್ಲದ ಕಾರಣ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಕಡಿಮೆ ಅಂತರದಲ್ಲಿ ಸೋತಿರುವ ಅಭ್ಯರ್ಥಿಗಳು ಬಹುತೇಕ ಪಾವಗಡದ ತಿಮ್ಮರಾಯಪ್ಪ, ಕೊರಟಗೆರೆಯ ಸುಧಾಕರ್ ಲಾಲ್, ಚಿಕ್ಕನಾಯಕನಹಳ್ಳಿ ಸುರೇಶ್ ಬಾಬು, ವಕ್ಕಲಿಗರ ಮತಗಳಿಂದ ವಂಚನೆಗೆ ಬಲಿಯಾದವರು. ಇದನ್ನು ಗಮನಿಸಿದ ಸಮುದಾಯಗಳು ಈ ಭಾರಿ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತವೆ.

(Visited 13 times, 1 visits today)
Previous Articleದೇವೆಗೌಡರ ನಾಮಪತ್ರ ಸಲ್ಲಿಕೆಗೂ ಮುನ್ನ ಅಪಸ್ವರ..?
Next Article ಸ್ವಕ್ಷೇತ್ರದಲ್ಲೇ ಡಿಸಿಎಂ ಪರಮೇಶ್ವರ್ ಒಬ್ಬಂಟಿ!
News Desk Benkiyabale

Related Posts

ನಗರದ ವಿವಿಧೆಡೆ ಉಪಲೋಕಾಯುಕ್ತರಿಂದ ಬಿರುಸಿನ ಕಾರ್ಯಾಚರಣೆ

November 15, 2025 4:32 pm ತುಮಕೂರು

ಸಮಾಜದಲ್ಲಿ ತಾಂಡವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ: ಸ್ವಾಮೀಜಿ

November 10, 2025 2:20 pm ತುಮಕೂರು

ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ವಿದ್ಯಾರ್ಥಿಗಳ ಲಕ್ಷಣ

November 10, 2025 2:15 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಕೆಎನ್‌ಆರ್‌ಗೆ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಒತ್ತಾಯ

November 18, 2025 2:00 pm
ಇತರೆ ಸುದ್ಧಿಗಳು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಠ್ಯ ವಿಷಯಗಳಲ್ಲಿ ನೈಪುಣ್ಯತೆ ಅಗತ್ಯ

November 18, 2025 1:53 pm
ಇತರೆ ಸುದ್ಧಿಗಳು

“ವಿದ್ಯಾರ್ಥಿ ದಿಸೆಯಿಂದಲೇ ಸಂಶೋಧನಾಸಕ್ತಿ ಬೆಳೆಸಿಕೊಳ್ಳಿ”

November 18, 2025 1:51 pm
ಇತರೆ ಸುದ್ಧಿಗಳು

ಇ-ಸ್ವತ್ತು ಕುರಿತು ಪಿಡಿಓಗಳಿಗೆ ತರಬೇತಿ

November 18, 2025 1:50 pm
ಇತರೆ ಸುದ್ಧಿಗಳು

ಬರಗೂರು-ಬೆಳಗುಲಿ ಕಾಲೇಜಿಗೆ ವಾಣಿಜ್ಯ ಉಪನ್ಯಾಸಕರ ಹುದ್ದೆ ಮಂಜೂರು ಮಾಡಿ

November 18, 2025 1:49 pm
ಇತರೆ ಸುದ್ಧಿಗಳು

ರಾಜಕಾರಣ, ಮಾಧ್ಯಮ ಸಮಾಜದ ಎರಡು ಕಣ್ಣುಗಳಂತೆ

November 18, 2025 1:47 pm
Our Youtube Channel
Our Picks

ಕೆಎನ್‌ಆರ್‌ಗೆ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಒತ್ತಾಯ

November 18, 2025 2:00 pm

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಠ್ಯ ವಿಷಯಗಳಲ್ಲಿ ನೈಪುಣ್ಯತೆ ಅಗತ್ಯ

November 18, 2025 1:53 pm

“ವಿದ್ಯಾರ್ಥಿ ದಿಸೆಯಿಂದಲೇ ಸಂಶೋಧನಾಸಕ್ತಿ ಬೆಳೆಸಿಕೊಳ್ಳಿ”

November 18, 2025 1:51 pm

ಇ-ಸ್ವತ್ತು ಕುರಿತು ಪಿಡಿಓಗಳಿಗೆ ತರಬೇತಿ

November 18, 2025 1:50 pm

ಬರಗೂರು-ಬೆಳಗುಲಿ ಕಾಲೇಜಿಗೆ ವಾಣಿಜ್ಯ ಉಪನ್ಯಾಸಕರ ಹುದ್ದೆ ಮಂಜೂರು ಮಾಡಿ

November 18, 2025 1:49 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಕೆಎನ್‌ಆರ್‌ಗೆ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಒತ್ತಾಯ

By News Desk BenkiyabaleNovember 18, 2025 2:00 pm

ತುಮಕೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆ.ಎನ್.ರಾಜಣ್ಣನವರನ್ನು ಮಂತ್ರಿಮ0ಡಲಕ್ಕೆ ಸೇರಿಸಿಕೊಂಡು, ಅವರ ಆಸಕ್ತಿಯ ಹಾಗೂ ಪರಿಣತಿ ಹೊಂದಿರುವ ಸಹಕಾರ ಖಾತೆಯನ್ನೇ…

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಠ್ಯ ವಿಷಯಗಳಲ್ಲಿ ನೈಪುಣ್ಯತೆ ಅಗತ್ಯ

November 18, 2025 1:53 pm

“ವಿದ್ಯಾರ್ಥಿ ದಿಸೆಯಿಂದಲೇ ಸಂಶೋಧನಾಸಕ್ತಿ ಬೆಳೆಸಿಕೊಳ್ಳಿ”

November 18, 2025 1:51 pm

ಇ-ಸ್ವತ್ತು ಕುರಿತು ಪಿಡಿಓಗಳಿಗೆ ತರಬೇತಿ

November 18, 2025 1:50 pm
News by Date
November 2025
M T W T F S S
 12
3456789
10111213141516
17181920212223
24252627282930
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.