BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತಿಪಟೂರಿನಲ್ಲಿ ವಿವಿಧ ಕಡೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ: ಅಧಿಕಾರಿಗಳಿಗೆ ಕಡಕ್ ಸೂಚನೆ
  • ಗಾಂಧೀ ವಿಚಾರಧಾರೆ ಎಂದಿಗೂ ಪ್ರಸ್ತುತ
  • ಬಿಸಿಯೂಟ ನೌಕರರನ್ನು ಸರಕಾರದ ಕಾರ್ಮಿಕರೆಂದು ಪರಿಗಣಿಸಿ
  • ಶಿಕ್ಷಣ ವ್ಯಾಪಾರ ಕ್ಷೇತ್ರವಾಗಿರುವುದು ಅಘಾತಕಾರಿ ಸಂಗತಿ
  • ಜಿಲ್ಲೆಯಲ್ಲಿ 40ಸಾವಿರಕ್ಕೂ ಹೆಚ್ಚು ಆಗ್ನೇಯ ಪದವೀಧರರು ಮತದಾರರ ಪಟ್ಟಿಗೆ ಸೇರ್ಪಡೆ: ಜಿಲ್ಲಾಧಿಕಾರಿ ಹೇಳಿಕೆ
  • ಮೈಸೂರು ವಿಭಾಗ ಅನುಮತಿಸಿದರೆ ಮಂಗಳೂರಿಗೆ ನೇರ ರೈಲು: ಭರವಸೆ
  • ಅರಣ್ಯ ಇಲಾಖೆಯ ಅಧಿಕಾರಿಗಳ ಕ್ರಮ ಖಂಡಿಸಿ ರೈತರು, ಮಹಿಳೆಯರಿಂದ ಪ್ರತಿಭಟನೆ
  • ಡಿ.29, 30ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸ್ಮಾರ್ಟ್ ಸಿಟಿ ಯೋಜನೆ: 22 ಕಾಮಗಾರಿಗಳು ಪೂರ್ಣ!
Trending

ಸ್ಮಾರ್ಟ್ ಸಿಟಿ ಯೋಜನೆ: 22 ಕಾಮಗಾರಿಗಳು ಪೂರ್ಣ!

By News Desk BenkiyabaleUpdated:June 25, 2019 6:53 pm

 ತುಮಕೂರು:

      ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ 22 ಕಾಮಗಾರಿಗಳು ಪೂರ್ಣಗೊಂಡಿದ್ದು, 47 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ತಿಳಿಸಿದರು.

      ಸ್ಮಾರ್ಟ್ ಸಿಟಿ ಕಛೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50 ಅನುಪಾತದ ಅನುದಾನದಲ್ಲಿ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪೈಕಿ ನಗರದಲ್ಲಿ 21.89 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಇ-ಟಾಯ್ಲೆಟ್, ಇಂಟರ್ ಮೀಡಿಯೇಟ್ ಪ್ಯಾರಾ ಟ್ರ್ಯಾನ್ಸಿಟ್ ಆಟೋ ಸ್ಟಾಂಡ್, ಸಿದ್ಧಗಂಗಾ ಬಸ್ ನಿಲ್ದಾಣದ ಮರು ನಿರ್ಮಾಣ, ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸ್ಮಾರ್ಟ್ ಪಾರ್ಕ್, ಕುಡಿಯುವ ನೀರು ಸರಬರಾಜು ಯೋಜನೆಗಳು, ಅಮಾನಿಕೆರೆಯಲ್ಲಿ ನರ್ಸರಿ ಅಭಿವೃದ್ಧಿ ಹಾಗೂ ಸ್ಮಾರ್ಟ್ ಲಾಂಜ್, ಸೋಲಾರ್ ಬೀದಿದೀಪ, ಅಮಾನಿಕೆರೆ ಒತ್ತುವರಿ ತೆರವು ಹಾಗೂ ಗಿಡ-ಮರ ಬೆಳೆಸುವ ಉಪ್ಪಾರ ಹಳ್ಳಿ ಫ್ಲೈಓವರ್, ಕೆಳಸೇತುವೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಒಟ್ಟು 22 ವಿವಿಧ ಸಣ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೆ 515.43 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ 47 ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, 255.40 ಕೋಟಿ ರೂ. ವೆಚ್ಚದ 17 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಹಾಗೂ ಈ 135.75 ಕೋಟಿ ರೂ. ವೆಚ್ಚದ 17 ಕಾಮಗಾರಿಗಳು ಡಿಪಿಆರ್ ಹಂತದಲ್ಲಿವೆ ಎಂದು ಅವರು ತಿಳಿಸಿದರು.

      ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯು ಒಟ್ಟು 1000 ಕೋಟಿ ರೂ.ಗಳ ವೆಚ್ಚದಲ್ಲಿ 5 ವರ್ಷಗಳ ಅವಧಿಯಲ್ಲಿ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ 270.73 ಕೋಟಿ ರೂ.ಗಳ ವೆಚ್ಚದ 5 ಯೋಜನೆಗಳನ್ನು ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಯೋಜನೆಗಳಾಗಿ ಹಾಗೂ 549 ಕೋಟಿ ರೂ. ವೆಚ್ಚದ 4 ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ ಶೈಕ್ಷಣಿಕ ಅಭಿವೃದ್ಧಿಗಾಗಿ 31ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಕೃತಿಕ ಪುನರುಜ್ಜೀವನ ಹಾಗೂ ಸಮಗ್ರ ಅಭಿವೃದ್ಧಿ ಕಾರ್ಯ, ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಆಡಿಟೋರಿಯಂ, ಪ್ರಯೋಗಾಲಯ, ಲೈಬ್ರರಿ, ಸ್ಮಾರ್ಟ್ ತರಗತಿ; 114.20ಕೋಟಿ ರೂ. ವೆಚ್ಚದಲ್ಲಿ ನಗರದ ವರ್ತುಲರಸ್ತೆ ಅಭಿವೃದ್ಧಿ; 245.42ಕೋಟಿ ರೂ. ವೆಚ್ಚದಲ್ಲಿ ಉತ್ತಮ ಪಾದಚಾರಿ ಮಾರ್ಗ, ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್, ಅಂಡರ್ ಗ್ರೌಂಡ್ ಡಕ್ಟಿಂಗ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್ ರಸ್ತೆಯನ್ನಾಗಿ ಪರಿವರ್ತನೆ; 59.59ಕೋಟಿ ರೂ. ವೆಚ್ಚದಲ್ಲಿ ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‍ಮೆಂಟ್ ಹಾಗೂ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್; 93.78ಕೋಟಿ ರೂ. ವೆಚ್ಚದಲ್ಲಿ ಹಳೆಯ ಬಸ್ ನಿಲ್ದಾಣ ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಬಹುಮಹಡಿ ಪಾರ್ಕಿಂಗ್, ಲಿಫ್ಟ್ ಸೌಲಭ್ಯ, ಎಸ್ಕಲೇಟರ್, ವಾಣಿಜ್ಯ ಮಳಿಗೆಗಳುಳ್ಳ ಬಸ್‍ನಿಲ್ದಾಣ; 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ, ಎಟಿಎಂ, ಕಾಫಿ ಶಾಪ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಹಾಗೂ ತುಮಕೂರು ಒನ್‍ನಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳುಳ್ಳ ಸ್ಮಾರ್ಟ್ ಲಾಂಜ್, 56 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್; 30.41ಕೋಟಿ ರೂ. ವೆಚ್ಚದಲ್ಲಿ ಅಮಾನಿಕೆರೆಯನ್ನು ಪ್ರವಾಸ ತಾಣವಾಗಿಸಲು ಸರ್ವಾಂಗೀಣ ಅಭಿವೃದ್ಧಿ; 56.55ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ಶುದ್ಧೀಕರಣ ಘಟಕ ಸೇರಿದಂತೆ ಅಮಾನಿಕೆರೆಗೆ ಹೇಮಾವತಿ ನೀರು ತುಂಬಿಸುವುದು; 25 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನಗಳ ಅಭಿವೃದ್ಧಿ; 49.97 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದ ಪುನರಭಿವೃದ್ಧಿ; 12.33 ಕೋಟಿ ರೂ. ವೆಚ್ಚದಲ್ಲಿ ಮಾರಿಯಮ್ಮ ನಗರ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು; ಸಾರ್ವಜನಿಕ ಮತ್ತು ಖಾಸಗಿ ಪಾಲುಗಾರಿಕೆಯಡಿ 60 ಕೋಟಿ ರೂ. ವೆಚ್ಚದಲ್ಲಿ ಹಳೆಯ ವಿನಾಯಕ ಮಾರುಕಟ್ಟೆ ಪ್ರದೇಶದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ನಿರ್ಮಾಣ; ಎಲ್‍ಇಡಿ ಬೀದಿ ದೀಪಗಳ ಅಳವಡಿಕೆ; ನಗರದ ಸೌಂದರ್ಯೀಕರಣ ಸೇರಿದಂತೆ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಸ್ಮಾರ್ಟ್ ಸಿಟಿ ಯೋಜನೆಯಡಿ ಅನುಷ್ಠಾನವಾಗುವ ಎಲ್ಲಾ ಕಾಮಗಾರಿಗಳನ್ನು ಪಾರದರ್ಶಕವಾಗಿ ಕೈಗೊಳ್ಳಲಾಗುತ್ತಿದ್ದು, ತುಮಕೂರು ನಗರವು 2ನೇ ಹಂತದಲ್ಲಿ ಗುರುತಿಸಿರುವ ಕರ್ನಾಟಕದ 4 ಸ್ಮಾರ್ಟ್ ಸಿಟಿಗಳ ಪೈಕಿ ಮೊದಲನೇ ಸ್ಥಾನದಲ್ಲಿ ಹಾಗೂ ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ 22ನೇ ಸ್ಥಾನದಲ್ಲಿದೆ. ಎಲ್ಲಾ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಕೈಗೊಳ್ಳಲಾಗುತ್ತಿದ್ದು, ಅಮಾನಿಕೆರೆ ಆವರಣದಲ್ಲಿ ನಿರ್ಮಿಸಿರುವ ಸ್ಮಾರ್ಟ್ ಲಾಂಜ್‍ಅನ್ನು ಉತ್ತಮ ನವೋತ್ಮಕ ಯೋಜನೆಯಾಗಿ ಗುರುತಿಸಿ ಇತ್ತೀಚೆಗೆ ಸ್ಮಾರ್ಟ್ ಸಿಟಿ ಇಂಡಿಯಾ ಅವಾರ್ಡ್ ದೊರೆತಿರುವುದರಿಂದ ಇದೇ ರೀತಿ ನಗರದ ಇನ್ನು 4 ವಿವಿಧ ಸ್ಥಳಗಳಲ್ಲಿ ಸ್ಮಾರ್ಟ್ ಲಾಂಜ್‍ಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಜೆಎಂಡಿ ಅಜಯ್ ವಿಠಲ್, ತಾಂತ್ರಿಕ ಸಲಹೆಗಾಗಿ ಪಿ.ಕೆ.ಸೈನಿ ಮತ್ತಿತರರು ಉಪಸ್ಥಿತರಿದ್ದರು.

(Visited 31 times, 1 visits today)
Previous Articleಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮ ಪಡಿಸಿಕೊಳ್ಳದಿದ್ದರೆ ಅನುದಾನಿತ ಶಾಲೆಗಳ ರದ್ದಿಗೆ ಸೂಚನೆ
Next Article ಹೆಬ್ಬೂರು ಠಾಣೆ ಸಬ್ ಇನ್‍ಸ್ಪೆಕ್ಟರ್ ಸೇರಿ ಹಲವರ ವರ್ಗಾವಣೆ
News Desk Benkiyabale

Related Posts

ನಗರದ ವಿವಿಧೆಡೆ ಉಪಲೋಕಾಯುಕ್ತರಿಂದ ಬಿರುಸಿನ ಕಾರ್ಯಾಚರಣೆ

November 15, 2025 4:32 pm ತುಮಕೂರು

ಸಮಾಜದಲ್ಲಿ ತಾಂಡವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ: ಸ್ವಾಮೀಜಿ

November 10, 2025 2:20 pm ತುಮಕೂರು

ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ವಿದ್ಯಾರ್ಥಿಗಳ ಲಕ್ಷಣ

November 10, 2025 2:15 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ತಿಪಟೂರಿನಲ್ಲಿ ವಿವಿಧ ಕಡೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ: ಅಧಿಕಾರಿಗಳಿಗೆ ಕಡಕ್ ಸೂಚನೆ

December 01, 2025 2:52 pm
ಇತರೆ ಸುದ್ಧಿಗಳು

ಗಾಂಧೀ ವಿಚಾರಧಾರೆ ಎಂದಿಗೂ ಪ್ರಸ್ತುತ

December 01, 2025 1:42 pm
ಇತರೆ ಸುದ್ಧಿಗಳು

ಬಿಸಿಯೂಟ ನೌಕರರನ್ನು ಸರಕಾರದ ಕಾರ್ಮಿಕರೆಂದು ಪರಿಗಣಿಸಿ

November 28, 2025 3:51 pm
ಇತರೆ ಸುದ್ಧಿಗಳು

ಶಿಕ್ಷಣ ವ್ಯಾಪಾರ ಕ್ಷೇತ್ರವಾಗಿರುವುದು ಅಘಾತಕಾರಿ ಸಂಗತಿ

November 28, 2025 3:49 pm
ಇತರೆ ಸುದ್ಧಿಗಳು

ಜಿಲ್ಲೆಯಲ್ಲಿ 40ಸಾವಿರಕ್ಕೂ ಹೆಚ್ಚು ಆಗ್ನೇಯ ಪದವೀಧರರು ಮತದಾರರ ಪಟ್ಟಿಗೆ ಸೇರ್ಪಡೆ: ಜಿಲ್ಲಾಧಿಕಾರಿ ಹೇಳಿಕೆ

November 28, 2025 3:47 pm
ಇತರೆ ಸುದ್ಧಿಗಳು

ಮೈಸೂರು ವಿಭಾಗ ಅನುಮತಿಸಿದರೆ ಮಂಗಳೂರಿಗೆ ನೇರ ರೈಲು: ಭರವಸೆ

November 28, 2025 3:45 pm
Our Youtube Channel
Our Picks

ತಿಪಟೂರಿನಲ್ಲಿ ವಿವಿಧ ಕಡೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ: ಅಧಿಕಾರಿಗಳಿಗೆ ಕಡಕ್ ಸೂಚನೆ

December 01, 2025 2:52 pm

ಗಾಂಧೀ ವಿಚಾರಧಾರೆ ಎಂದಿಗೂ ಪ್ರಸ್ತುತ

December 01, 2025 1:42 pm

ಬಿಸಿಯೂಟ ನೌಕರರನ್ನು ಸರಕಾರದ ಕಾರ್ಮಿಕರೆಂದು ಪರಿಗಣಿಸಿ

November 28, 2025 3:51 pm

ಶಿಕ್ಷಣ ವ್ಯಾಪಾರ ಕ್ಷೇತ್ರವಾಗಿರುವುದು ಅಘಾತಕಾರಿ ಸಂಗತಿ

November 28, 2025 3:49 pm

ಜಿಲ್ಲೆಯಲ್ಲಿ 40ಸಾವಿರಕ್ಕೂ ಹೆಚ್ಚು ಆಗ್ನೇಯ ಪದವೀಧರರು ಮತದಾರರ ಪಟ್ಟಿಗೆ ಸೇರ್ಪಡೆ: ಜಿಲ್ಲಾಧಿಕಾರಿ ಹೇಳಿಕೆ

November 28, 2025 3:47 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ತಿಪಟೂರಿನಲ್ಲಿ ವಿವಿಧ ಕಡೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ: ಅಧಿಕಾರಿಗಳಿಗೆ ಕಡಕ್ ಸೂಚನೆ

By News Desk BenkiyabaleDecember 01, 2025 2:52 pm

ತುಮಕೂರು: ಶನಿವಾರ ಬೆಳ್ಳಂ ಬೆಳಗ್ಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ, ಕೆ.ಎಸ್.ಆರ್.ಟಿ.ಸಿ…

ಗಾಂಧೀ ವಿಚಾರಧಾರೆ ಎಂದಿಗೂ ಪ್ರಸ್ತುತ

December 01, 2025 1:42 pm

ಬಿಸಿಯೂಟ ನೌಕರರನ್ನು ಸರಕಾರದ ಕಾರ್ಮಿಕರೆಂದು ಪರಿಗಣಿಸಿ

November 28, 2025 3:51 pm

ಶಿಕ್ಷಣ ವ್ಯಾಪಾರ ಕ್ಷೇತ್ರವಾಗಿರುವುದು ಅಘಾತಕಾರಿ ಸಂಗತಿ

November 28, 2025 3:49 pm
News by Date
December 2025
M T W T F S S
1234567
891011121314
15161718192021
22232425262728
293031  
« Nov    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.