BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ
  • ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ
  • ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ
  • ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ
  • ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ
  • ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ
  • ಕನಿಷ್ಠ ವೇತನ ಪರಿಷ್ಕೃರಣೆ ಆದೇಶ ಜಾರಿ ಮಾಡಲು ಒತ್ತಾಯಿಸಿ ಪ್ರತಿಭಟನೆ
  • ಅಲೆಮಾರಿಗಳಿಗೆ ಮನೆ ಕಟ್ಟಿಕೊಡುವಂತೆ ಶಾಸಕರಿಗೆ ಮನವಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ
Trending

ಯೌವನಕ್ಕೆ “ವಿವೇಕಾನಂದದೀಕ್ಷೆ’’ ಕೊಡಿ

By News Desk BenkiyabaleUpdated:September 19, 2020 6:23 pm

   ಪಿತೃವಾಕ್ಯ ಪರಿಪಾಲನೆಗಾಗಿ ರಾಮ ಕಾಡಿಗೆ ಹೋದ. ಪ್ರಪಂಚದಾದ್ಯಂತ ರಾಮನಿಗೆ ಬಹುದೊಡ್ಡ ಹೆಸರು ಬಂತು. ಮಾತೃವಾಕ್ಯ ಪರಿಪಾಲನೆಗಾಗಿ ಗಣಪತಿ ತಲೆದಂಡವಾಗಿಸಿಕೊಂಡ. ವಿಶ್ವದಾದ್ಯಂತ ಗಣಪತಿಗೆ ದೊಡ್ಡ ಹೆಸರು ಬಂತು. ಆತ ಪ್ರಥಮಪೂಜಿತನಾದ, ಪ್ರಥಮವಂದಿತನಾದ.

     ಮಾದಕ ಪದ-ಪದಾರ್ಥಗಳ ಗುಲಾಮರಾಗಿ, ಮತ್ತವುಗಳ ದಾಸಾನುದಾಸರಾಗಿ ಹೋಗಿರುವ ಮತ್ತು ಮಾದಕದ್ರವ್ಯಗಳ ಸೇವನೆಯನ್ನು ದಿನನಿತ್ಯದ ಜೀವನದಲ್ಲಿ ಕಡ್ಡಾಯವಾಗಿಸಿಕೊಂಡಿರುವ ಯುವಕರನ್ನು ಕುರಿತು ನಾವು ಒಂದು ಪ್ರಶ್ನೆಯನ್ನು ಕೇಳಲಿಚ್ಛಿಸುತ್ತೇವೆ.

     “ಅದಾರ ವಾಕ್ಯಪರಿಪಾಲನೆಗಾಗಿ ನೀವು ನಮ್ಮ ಬದುಕನ್ನು ಕಾಡಾಗಿಸಿಕೊಳ್ಳುತ್ತಿದ್ದೀರಿ? ಅದಾವ ಪುರುಷಾರ್ಥಕ್ಕಾಗಿ ನೀವು ನಿಮ್ಮ ತಲೆಯನ್ನು ತಲೆದಂಡವಾಗಿಸಿಕೊಳ್ಳುತ್ತಿದ್ದೀರಿ? ಅದಾವ ಕಾರಣಕ್ಕಾಗಿ ನೀವು ನಿಮ್ಮ ಬದುಕಿಗೆ ನಶಾದೀಕ್ಷೆಯನ್ನು ಕೊಟ್ಟುಕೊಂಡಿದ್ದೀರಿ?
ನೀವು ಡ್ರಗ್ಸ್ ದಾಸರಾಗಿ, ನಶಾದಾಸರಾಗಿ ದೈನಂದಿನ ಬದುಕಿನೊಂದಿಗೆ ಸಹಜವಾಗಿರದೆ ಬೇರೊಂದು ಲೋಕದಲ್ಲಿ ಕಳೆದುಹೋಗಿರುವುದನ್ನು ಕಂಡು ನಿಮ್ಮ ತಂದೆ, ತಾಯಿಗಳ ಜೀವನ ಅದೆಷ್ಟೊಂದು “ವಿಲವಿಲ’’ ಎನ್ನುತ್ತದೆ ಎಂಬ ಅರಿವು ನಿಮಗಿದೆಯಾ?’’
ನೀವು ವ್ಯಸನಾಧೀನರಾದಾಗ, ನೀವು ಮಾದಕದ್ರವ್ಯಗಳ ದಾಸಾನುದಾಸರಾದಾಗ ನಿಮ್ಮ ತಂದೆ, ತಾಯಿಗಳು ಆ ದಶರಥ ಮಹಾರಾಜ ಶ್ರೀರಾಮಚಂದ್ರ ಕಾಡಿಗೆ ಹೋಗುವಾಗ ಅದೆಷ್ಟು ಸಂಕಟಪಟ್ಟನೋ ಅದಕ್ಕಿಂತಲೂ ಹೆಚ್ಚು ಸಂಕಟವನ್ನು ಅನುಭವಿಸುತ್ತಾರೆ. ಅವರು ನಿಮ್ಮನ್ನು ನೋಡಿ ಅದೆಷ್ಟು ತ್ರಸ್ತ, ಸಂತ್ರಸ್ತರಾಗುತ್ತಾರೆಂಬುದು ನಿಮಗೆ ಗೊತ್ತಾ?

UN report: Smoking and drinking linked to recreational drug use by the youth  — MercoPress
    ಸುಖಲೋಲುಪನಾದ ಯಯಾತಿ ಮಹಾರಾಜ ತನ್ನ ಮಗ ಪುರುವಿಗೆ ಯೌವನವನ್ನು ದಾನವಾಗಿ ಕೇಳುತ್ತಾನೆ. ಪುರು ಒಳ್ಳೆಯ ಮಗ. ಆತ ತನ್ನ ತಂದೆಗೆ ತನ್ನ ಯೌವನವನ್ನೇ ಧಾರೆ ಎರೆಯುತ್ತಾನೆ. ತಂದೆಗೆ ಯೌವನವನ್ನು ಧಾರೆ ಎರೆದ ಪುರು ಇತಿಹಾಸವಾಗುತ್ತಾನೆ.
ನೀವು ಅದಾರಿಗೆ ನಿಮ್ಮ ಯೌವನವನ್ನು ಧಾರೆ ಎರೆಯುತ್ತಿದ್ದೀರಿ? ಅದೇಕೆ ನಿಮ್ಮ ಯೌವನವನ್ನು ಮತ್ತು ಯೌವನದ ಸುಖವನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ?
ಯೌವನವೆಂಬ “ಅಮೂಲ್ಯ ರತ್ನ’’ ನಿಮ್ಮ ಕೈಯಲ್ಲಿದೆ. ಅದನ್ನೇಕೆ ಸುಖಾಸುಮ್ಮನೇ ಕೊಚ್ಚೆ, ಕೊಳಚೆಗೆ ಎಸೆಯುತ್ತಿದ್ದೀರಿ?
ಯೌವನವೆಂಬ ಅತ್ಯಮೂಲ್ಯ ರತ್ನವನ್ನು ಕಿರೀಟದಲ್ಲಿರಿಸಬೇಕು. ಅದಕ್ಕೆ “ಶಿರೋಧಾರ್ಯ’’ ಗೌರವವನ್ನು ಕೊಟ್ಟುಕೊಂಡಿರಬೇಕು. ನಿಮ್ಮ ಯೌವನವನ್ನು ನೀವು ಸುಂದರವಾದ ತೋಟವನ್ನಾಗಿಸಬೇಕು. ಅದನ್ನು ನಿಮ್ಮಗಳ ಯೌವನದ ಸುಖವನ್ನು ಕತ್ತರಿಸಿಹಾಕುವ ಮತ್ತು ನಿಮ್ಮ ತಂದೆ, ತಾಯಿಗಳ ನೆಮ್ಮದಿಯನ್ನು ತಿಂದುಹಾಕುವ ಕೀಟವನ್ನಾಗಿಸಬಾರದು.

      ನಿಮ್ಮ ಯೌವನ ಸುಂದರವಾದ “ಪಾರ್ಕ್’’ ಆಗಬೇಕು. ಅದನ್ನು ದುಶ್ಚಟ, ದುವ್ರ್ಯಸನ, ದುರಾಚಾರ, ಮಾದಕದ್ರವ್ಯಗಳ “ಪಾರ್ಕಿಂಗ್ ಲಾಟ್’’ ಆಗಿಸಬಾರದು. ನಿಮ್ಮ ಯೌವನವದು ಮಾದಕದ್ರವ್ಯಗಳ “ಅಡ್ಡಾ’’ ಆಗಬಾರದು.

     ನೀವುಗಳು ನಿಮ್ಮ ಯೌವನಕ್ಕೆ ಯತಿದೀಕ್ಷೆಯನ್ನು ಕೊಟ್ಟುಕೊಂಡಿರಬೇಕು. ಯೌವನಕ್ಕೆ ಯಯಾತಿದೀಕ್ಷೆಯನ್ನು ಕೊಟ್ಟುಕೊಂಡಿರುವುದು ಬೇಡ.
ನಿಮ್ಮ ಯೌವನ, ಚಿರಾಯುವಾಗಬೇಕು; ಅದು ಚಿರಂಜೀವಿಯಾಗಬೇಕು. ಯೌವನಕ್ಕೆ ಚಿರಂಜೀವಿದೀಕ್ಷೆಯನ್ನು ಕೊಟ್ಟುಕೊಂಡಿರಬೇಕು. ನಿಮ್ಮ ಯೌವನಕ್ಕೆ ವಿವೇಕಾನಂದದೀಕ್ಷೆಯನ್ನು ಕೊಟ್ಟುಕೊಂಡಿರಬೇಕು.

     ಸ್ವಾಮಿ ವಿವೇಕಾನಂದರು ತಮ್ಮ ಯೌವನಕ್ಕೆ ಚಿರಂಜೀವಿದೀಕ್ಷೆಯನ್ನು ಕೊಟ್ಟುಕೊಂಡಿದ್ದರು. ಇದು ಕಾರಣವಾಗಿಯೇ, “ಯೌವನ’’ ಎಂಬ ಪದ ಕಿವಿಗೆ ಬೀಳುತ್ತಲೇ ವಿವೇಕಾನಂದರ ಮುಖ ನಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ. ಶಂಕರಾಚಾರ್ಯರು ತಮ್ಮ ಯೌವನಕ್ಕೆ ಚಿರಂಜೀವಿದೀಕ್ಷೆಯನ್ನು ಕೊಟ್ಟುಕೊಂಡಿದ್ದರು. ಆದ್ದರಿಂದಲೇ, “ಯೌವನ’’ ಎಂಬ ಪದವನ್ನು ಕೇಳುತ್ತಲೇ ನಮ್ಮಗಳಿಗೆ ಶಂಕರಾಚಾರ್ಯರು ನೆನಪಾ ಗುತ್ತಾರೆ.

     ಅಕ್ಕ, ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ…., ಇತ್ಯಾದಿ ಇವರೆಲ್ಲ ಮಹಾನುಭಾವರು ತಮ್ಮ ಯೌವನಕ್ಕೆ ಚಿರಂಜೀವಿದೀಕ್ಷೆಯನ್ನು ಕೊಟ್ಟುಕೊಂಡಿದ್ದ ಕಾರಣ ದಿಂದಾಗಿಯೇ ಈಗಲೂ ಸಹ ಅಮರರಾಗಿ ಉಳಿದಿದ್ದಾರೆ.
ಯುವಕರೇ,
ನಿಮಗೆ ನೀವೇ ಗುರುವಾಗಬೇಕು. ನಿಮ್ಮ ಅರಿವೇ ನಿಮ್ಮ ಗುರುವಾಗಬೇಕು. ನಿಮ್ಮೊಳಗಿನ ಅರಿವೇ ನಿಮ್ಮನ್ನು ತಿದ್ದಬೇಕು, ತೀಡಬೇಕು. ಅದುವೇ ನಿಮಗೆ ತಿಳುವಳಿಕೆ ಹೇಳಬೇಕು.

       ನೀವು ಅಶಿಕ್ಷಿತರಲ್ಲ. ನೀವು ಓದಿಲ್ಲವೆಂದಲ್ಲ. ನೀವು ಚೆನ್ನಾಗಿ ಓದಿದ್ದೀರಿ. ಎಸ್. ಎಸ್. ಎಲ್. ಸಿ.’ ಪಿ.ಯು.ಗಳಲ್ಲಿ ಒಳ್ಳೆಯ “ಮಾಕ್ರ್ಸ್’’ ತೆಗೆದಿದ್ದೀರಿ. ನಿಮ್ಮ ಅಪ್ಪ, ಅಮ್ಮ “ನಮ್ಮ ಮಗ ಎಸ್. ಎಸ್. ಎಲ್. ಸಿ.- ಯಲ್ಲಿ 90% ಮಾಕ್ರ್ಸ್ ತೆಗೆದಿದ್ದಾನೆ’’, “ನಮ್ಮ ಮಗಳು ಪಿ. ಯು.ನಲ್ಲಿ 95% “ಮಾಕ್ರ್ಸ್’’ ತೆಗೆದಿದ್ದಾಳೆ’’ ಎಂದು ಬಂಧು-ಬಾಂಧವರ ಮುಂದೆ ಎದೆಯುಬ್ಬಿಸಿ ಹೇಳಿಕೊಂಡು ಬಂದಿದ್ದಾರೆ. ಅದನ್ನು ಜ್ಞಾಪಿಸಿಕೊಳ್ಳಿ.
ಸ್ಕೂಲು, ಹೈಸ್ಕೂಲ್‍ನಲ್ಲಿ ಚೆನ್ನಾಗಿದ್ದ ನೀವು ಕಾಲೇಜ್‍ಗೆ ಬರುತ್ತಲೇ ಅದೇಕೆ ಕೆಟ್ಟುಹೋಗುತ್ತೀರಿ?
ಸ್ಕೂಲು, ಹೈಸ್ಕೂಲ್‍ವರೆಗೆ “ಅಪ್ಪನ ಮಗ’’, “ಅಮ್ಮನ ಮಗ’’ ಆಗಿದ್ದ ನೀವು ಕಾಲೇಜ್‍ಗೆ ಬರುತ್ತಲೇ ಅದೇಕೆ “ಬ್ಯಾಡ್ ಬಾಯ್’’, “ಸ್ಯಾಡ್ ಗರ್ಲ್’’ ಆಗುತ್ತೀರಿ?
ನಿಮಗಾರೂ ಬುದ್ಧಿ ಹೇಳುವುದಿಲ್ಲ. ಎಲ್ಲರ ಬುದ್ಧಿಗಿಂತಲೂ ನಿಮ್ಮ ಬುದ್ಧಿ ಚುರುಕಾಗಿದೆ.
ನಿಮಗೆ ನೀವೇ ಬುದ್ಧಿ ಹೇಳಿಕೊಳ್ಳಬೇಕು.
ನೀವು ದಡ್ಡರಾಗಿದ್ದರೆ, ಅವಿದ್ಯಾವಂತರಾಗಿದ್ದರೆ ಬೇರೆಯವರಿಂದ ಬುದ್ಧಿ ಹೇಳಿಸಬಹುದಿತ್ತು. ಆದರೆ ನೀವು ನಿಮ್ಮ ಅಪ್ಪ, ಅಮ್ಮನಿಗಿಂತಲೂ ಚೆನ್ನಾಗಿ ಓದಿದ್ದೀರಿ. ನಿಮ್ಮ ಕಂಪ್ಯೂಟರ್ ಕೈಗೆ ಕೊಟ್ಟರೆ ಅರ್ಧಗಂಟೆಯಲ್ಲಿ ಜಗತ್ತನ್ನು ಸುತ್ತಿಸಿಕೊಂಡು ಬರುತ್ತೀರಿ. ನಿಮ್ಮಲ್ಲಿ ಅದ್ಭುತ ಶಕ್ತಿ ಇದೆ. ಆ ದೇವರೊಬ್ಬನನ್ನು ಹೊರತುಪಡಿಸಿದರೆ “ಕರ್ತುಂ, ಅಕರ್ತುಂ, ಅನ್ಯಥಾ ಕರ್ತುಂ’’ ಶಕ್ತಿ ಇರುವುದು ನಿಮ್ಮಲ್ಲಿ ಮಾತ್ರ!! ನಿಮ್ಮಲ್ಲಿನ ಯೌವನದಲ್ಲಿ ಏನೆಲ್ಲ ಶಕ್ತಿ ಇದೆ, ಏನೆಲ್ಲ ಸಾಮಥ್ರ್ಯವಿದೆ.

ನಮ್ಮ ದಾಸವರೇಣ್ಯರು,
“ಮಾನವಜನ್ಮ ದೊಡ್ಡದು, ಇದನು ಹಾನಿಮಾಡಬೇಡಿ ಹುಚ್ಚಪ್ಪಗಳಿರಾ’’ ಎಂದು ಹೇಳಿದ ಹಾಗೆ, ನಾವೂ ಸಹ ನಿಮಗೆ,
“ಯೌವನವೆಂಬುವುದಿದು ತುಂಬ ದೊಡ್ಡದು, ಇದನು ಹಾನಿಮಾಡಬೇಡಿ ಹುಚ್ಚಪ್ಪಗಳಿರಾ’’ ಎಂದು ಹೇಳಬಯಸುತ್ತೇವೆ.
ಯುವಕರೇ,
ನಿಮಗೆಲ್ಲ ತುಂಬ ಕಳಕಳಿಯಿಂದ ಹೇಳುತ್ತೇವೆ.

      ನೀವು ಕನಕದಾಸ, ಪುರಂದರದಾಸ, ತುಳಸೀದಾಸ, ಸೂರದಾಸರ ಹಾಗೆ ಆಗುವುದಾದರೆ ಆಗೋಣವಾಗಲಿ. ನಾವು ತುಂಬ ಸಂತೋಷಪಡುತ್ತೇವೆ. ನಾವಷ್ಟೇ ಅಲ್ಲ, ನಿಮ್ಮ ತಂದೆ, ತಾಯಿ, ನಿಮ್ಮ ಬಂಧು-ಮಿತ್ರರು,
ನಿಮ್ಮ ಕುಟುಂಬ, ನಿಮ್ಮ ಸುತ್ತಮುತ್ತಲಿರುವ ಜನಗಳು ಕೂಡ ಸಂತೋಷಪಡುತ್ತಾರೆ.

      ಅದೊಂದು ವೇಳೆ, ನೀವು ಕನಕದಾಸ, ಪುರಂದರದಾಸ, ತುಳಸೀದಾಸರ, ಸೂರದಾಸ ಆಗದಿದ್ದರೂ ಪರವಾ ಇಲ್ಲ. ನೀವು ಡ್ರಗ್‍ದಾಸರಂತೂ ಆಗಲೇಬೇಡಿ. ನೀವು ಡ್ರಗ್ಸ್‍ದಾಸರಾಗಬೇಡಿ. ನೀವುಗಳು ಬೇಸೂರ್‍ದಾಸರಾಗಬೇಡಿ.
ನಿಮ್ಮ ಯೌವನವೇ ನಿಮ್ಮ ಆಸ್ತಿಯಾಗಲಿ. ನಿಮ್ಮ ಯೌವನವನ್ನು ನೀವು ಆಸ್ತಿಯಾಗಿಸಬೇಕು.
ಅದು ಬರೀ ಮೋಜು, ಮಜಾ, ಮಸ್ತಿಯಾಗುವುದು ಬೇಡ.
ನಿಮ್ಮ ಯೌವನವನ್ನು ಆಸ್ತಿಯಾಗಿಸಿಕೊಳ್ಳಿ. ನಿಮ್ಮ ಯೌವನವನ್ನು ನಿಮ್ಮ ಅಪ್ಪ, ಅಮ್ಮ, ಅಜ್ಜ, ಮುತ್ತಜ್ಜ ಮಾಡಿದ ಆಸ್ತಿಯನ್ನು ಕಳೆಯುವುದಕ್ಕಾಗಿ ಮತ್ತು ಕಳೆದುಹಾಕುವುದಕ್ಕಾಗಿ ಬಳಸಬೇಡಿ.
ನಿಮ್ಮ ಯೌವನವದು ಅಗ್ರಹಾರದತ್ತ ಮುಖ ಮಾಡಿಕೊಂಡಿರಬೇಕು.
ಅದು ಪರಪ್ಪನ ಅಗ್ರಹಾರದತ್ತ ಮುಖಮಾಡಿಕೊಂಡಿರುವುದು ಬೇಡ.
“ಒಳ್ಳೆಯದು ಕೊನೆತನಕ; ಕೆಟ್ಟದ್ದು ಜೈಲು ಕಂಬಿಯ ತನಕ’’ ಎಂಬುವುದು ನಿಮಗೆ ಗೊತ್ತಿರಲಿ.
ನೀವು ಯುವಕರು ವಿವೇಚನೆಯೊಂದಿಗೆ “ಸಪ್ತಪದಿ’’ ತುಳಿಯುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿವೇಚನೆಗೆ ವಿಚ್ಛೇದನಕೊಟ್ಟುಕೊಂಡಿರುವುದಕ್ಕೆ ನೀವುಗಳು ಯೋಚಿಸಬಾರದು.

ಕೊನೆಯದಾಗಿ ಒಂದು ಮಾತು,
ಯುವಕರೇ, ನೀವು ನಿಮ್ಮ ಕಣ್ಣುಗಳಿಗೆ ಬರೀ ಕನ್ನಡಕವನ್ನು ಹಾಕಿಕೊಂಡರೆ ಸಾಲದು.
ನೀವು ನಿಮ್ಮ ಕಣ್ಣೊಳಗೆ ಕನಸುಗಳನ್ನು ಹಾಕಿಕೊಳ್ಳಬೇಕು. ನೀವು ಕನ್ನಡಕಗಳಿಂದ ಜಗತ್ತನ್ನು ನೋಡಬಾರದು.
ನೀವು ನಿಮ್ಮ ಕನಸುಗಳ ಮೂಲಕ ಜಗತ್ತನ್ನು ನೋಡಬೇಕು. ನೀವು ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲು ನಿಮ್ಮಲ್ಲಿನ ಯೌವನವನ್ನು “ಅಹರ್ನಿಶಿ’’ ದುಡಿಸಬೇಕು; ಮತ್ತದನ್ನು “ಅಹರ್ನಿಶಿ’’ ದಣಿಸಬೇಕು.

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

(Visited 15 times, 1 visits today)
Previous Articleಡ್ರಗ್ಸ್-ಲವ್ ಜಿಹಾದ್ ಸುಳ್ಳು ಸುದ್ದಿ ಹಬ್ಬಿಸಿದ್ದ ವ್ಯಕ್ತಿ ಬಂಧನ!!
Next Article ಮಧುಗಿರಿ : ಭೀಕರ ಅಪಘಾತ ; ಸ್ಥಳದಲ್ಲೆ ಮೂವರ ದುರ್ಮರಣ!!
News Desk Benkiyabale

Related Posts

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm news
ತಾಜಾ ಸುದ್ಧಿಗಳು
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm
news

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm
news

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm
news

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
news

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
news

ತುಮಕೂರಿಗೆ ಆಗಮಿಸಿದ ರಾಜೀವ್ ಸದ್ಬಾವನ ರಥಯಾತ್ರೆ

August 11, 2026 4:53 pm
Our Youtube Channel
Our Picks

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

August 12, 2026 5:37 pm

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm

ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಸುರೇಶ್ ಗೌಡ ಆಕ್ರೋಶ

August 12, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಚಿವ ಬಿ.ನಾಗೇಂದ್ರ ವಿರುದ್ಧ ಪಿತೂರಿಗೆ ವಾಲ್ಮೀಕಿ ಸಮಾಜ ಖಂಡನೆ

By News Desk BenkiyabaleAugust 12, 2026 5:37 pm

ತುಮಕೂರು: ವಾಲ್ಮೀಕಿ ಸಮಾಜದ ನಾಯಕರು, ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ…

ಉದ್ಯಮ ಸಂಸ್ಥೆ ಜೊತೆ ಎಸ್‌ಎಸ್‌ಐಟಿ ಒಡಂಬಡಿಕೆ

August 12, 2026 5:35 pm

ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ: ಜನರು ಗುಳೆ ಹೋಗುವುದನ್ನು ತಪ್ಪಿಸಿ

August 12, 2026 5:33 pm

ಒಂದೇ ನಲ್ಲಿಯಲ್ಲಿ ೧೦೦ ಮನೆಯವರು ನೀರು ಹಿಡಿಯುವ ದುಸ್ಥಿತಿ

August 12, 2026 5:30 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.