ಕೊರಟಗೆರೆ:

      ಅಬಕಾರಿ ನಿಯಮಗಳಿಗೆ ವಿರುದ್ಧವಾಗಿ ಸ್ವಾಧೀನತೆ, ಸಾಗಾಣಿಕೆ, ಮಾರಾಟ ಇತ್ಯಾದಿಗಳಲ್ಲಿ ಜಪ್ತಿ ಮಾಡಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಮದ್ಯದ ಸಿಟ್ರಾ ಪಾಕೇಟ್‍ಗಳನ್ನು ಅಬಕಾರಿ ಆವರಣದಲ್ಲಿ ಸೋಮವಾರ ನಾಶಪಡಿಸಲಾಯಿತು.

      ಕೊರಟಗೆರೆ ಅಬಕಾರಿ ವಲಯ ಕಚೇರಿ ಆವರಣದಲ್ಲಿ ಮಧುಗಿರಿ ಅಬಕಾರಿ ಉಪಅಧೀಕ್ಷಕ ಸುಭಾಶ್‍ಚಂದ್ರ ನೇತೃತ್ವದೊಂದಿಗೆ ತುಮಕೂರು ಕೆಎಸ್‍ಬಿಸಿಎಲ್ ವ್ಯವಸ್ಥಾಪಕ ಹೆಚ್.ಎಂ.ಗೌಡ, ಕೊರಟಗೆರೆ ಅಬಕಾರಿ ನಿರೀಕ್ಷಕ ರಾಮಮೂರ್ತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಸುಮಾರು 50ಸಾವಿರ ಮೌಲ್ಯದ 66.09 ಲೀಟರ್ ಮದ್ಯವನ್ನು ನಾಶಪಡಿಸಿದ್ದಾರೆ.

      2019-20ನೇ ಸಾಲಿನ ಲೋಕಸಭಾ ಚುನಾವಣೆ ವೇಳೆಯಲ್ಲಿ ಅಕ್ರಮವಾಗಿ ಮದ್ಯ ಶೇಖರಣೆ ಮತ್ತು ಸಾಕಾಣಿಕೆ ಮಾಡುತ್ತಿದ್ದ ದಾಳಿ ನಡೆಸಿ ವಶಪಡಿಸಿಕೊಳ್ಳಲಾದ ಮಧ್ಯವನ್ನು ಸೋಮವಾರ ಮಧ್ಯಾಹ್ನ ಕಚೇರಿ ಆವರಣದಲ್ಲಿ ನಾಶಪಡಿಸಲಾಗಿದೆ. ಕಚೇರಿ ಆವರಣದಲ್ಲಿ ಗುಂಡಿ ತೋಡಿ ಅದರಲ್ಲಿ ಮಧ್ಯದ ಸಿಟ್ರಾ ಪಾಕೇಟ್ ಹರಿದು ಮದ್ಯವನ್ನು ಸುರಿದು ಅಬಕಾರಿ ಇಲಾಖೆ ನಾಶಪಡಿಸಿದ್ದಾರೆ.

      ಅಬಕಾರಿ ಇಲಾಖೆಯ ಉಪನೀರಿಕ್ಷಕ ಅರುಣಕುಮಾರ್, ವೈಷ್ಣವಿ, ಕಂದಾಯ ಇಲಾಖೆಯ ನಕುಲ್, ಅಬಕಾರಿ ಸಿಬ್ಬಂದಿಗಳಾದ ಮಂಜುಳ, ಮಲ್ಲಿಕಾರ್ಜುನ್, ಪುಪ್ಪಲತಾ, ಕೊಂಡಪ್ಪ ಸೇರಿದಂತೆ ಇತರರು ಇದ್ದರು.

(Visited 20 times, 1 visits today)