ತುಮಕೂರು


ಜವಾಬ್ದಾರಿಯುತ ನಾಗರಿಕರಾಗಿ ಸಮುದಾಯಗಳ ಆರೋಗ್ಯ, ಸುರಕ್ಷತೆ ಮತ್ತು ನೈರ್ಮಲ್ಯವನ್ನು ಕಾಪಾಡಲು ಹಾಗೂ ಸಮಾಜದ ಅಗತ್ಯತೆಗಳನ್ನು ಅರ್ಥಮಾಡಿಕೊಂಡು ಅಗತ್ಯ ನೆರವು ನೀಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಇಂದು ನಗರದ ಎಂಪ್ರೆಸ್ ಕಾಲೇಜ್‍ನ ಆವರಣದಲ್ಲಿ, ದಿ ಪಾರ್ವಡ್ ಪೌಂಡೇಷನ್ ಬೆಂಗಳೂರು ಇವರು ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದ ಅವರು, ಶುದ್ಧ ಕುಡಿಯುವ ನೀರನ್ನು ಪಡೆಯುವುದು ಮನುಷ್ಯನ ಮೂಲಭೂತ ಅಗತ್ಯಗಳಲ್ಲಿ ಪ್ರಮುಖವಾದದ್ದು, ಈ ಸರ್ಕಾರಿ ಕಾಲೇಜ್‍ಗೆ ಜಿಲ್ಲೆಯ ವಿವಿಧ ಭಾಗಗಳÀ 3 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಈ ನೀರಿನ ಘಟಕದ ಸ್ಥಾಪನೆಯಿಂದ ವಿಧ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ, ಶುದ್ದ ನೀರಿನ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಬಹುದಾಗಿದ್ದು, ಇದಕ್ಕಾಗಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ದಿ ಪಾರ್ವಡ್ ಪೌಂಡೇಷನ್ ಬೆಂಗಳೂರು ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ, ಸಿಎಸ್.ಆರ್ ಅನುದಾನವನ್ನು ಸಮಾಜಕ್ಕೆ ಉಪಯೋಗವಾಗುವ ಇಂತಹ ಸುಸ್ಥಿರ ಮತ್ತು ಅರ್ಥಪೂರ್ಣವಾದ ಯೋಜನೆಗಳಿಗೆÉ ಬಳಸಿಕೊಳ್ಳಬೇಕು, ಇಂತಹ ಕಾರ್ಯಗಳೂ ಸಮಾಜಕ್ಕೆ ಸದಾ ಕೊಡುಗೆಯನ್ನು ನೀಡುತ್ತವೆ, ಸರ್ಕಾರದ ಜತೆಗೆ ಸರ್ಕಾರೇತರ ಸಂಘ, ಸಂಸ್ಥೆಗಳು ಇದೇ ರೀತಿ ನೆರವಾಗಲು ಮುಂದೆ ಬಂದರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೌಢಶಾಲೆಯ 500ಕ್ಕೂ ವಿಧ್ಯಾರ್ಥಿನಿಯರಿಗೆ ಸರ್ಕಾರದ ವತಿಯಿಂದ ಉಚಿತ ಶೂ ಮತ್ತು ಸಾಕ್ಸ್ ಗಳನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ನೀಡಿದರು.
ನೂತನವಾಗಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕವು ಗಂಟೆಗೆ 250 ಲೀಟರ್ ಪೂರೈಕೆ ಮಾಡುವ ಸಾಮಥ್ರ್ಯವನ್ನು ಹೊಂದಿದ್ದು, 1000ಲೀಟರ್ ನೀರು ಸಂಗ್ರಹಣ ಸಾಮಥ್ರ್ಯ ಹೊಂದಿದೆ, ಕನಿಷ್ಠ 4-ಹಂತದ ಶುದ್ಧೀಕರಣ ವ್ಯವಸ್ಥೆಯನ್ನು ಹೊಂದಿದೆ. ಸುಧಾರಿತ ಘಕಟವು ನೈಜ ಸಮಯದಲ್ಲಿ ನೀರನ್ನು ಶುದ್ಧೀಕರಿಸುವ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಶುದ್ಧೀಕರಿಸಿದ ನೀರಿನ ಉನ್ನತ ಗುಣಮಟ್ಟವನ್ನು ತಿಳಿಸಲು “ಒಟ್ಟು ಕರಗಿದ ಘನವಸ್ತುಗಳು (ಟಿಡಿಎಸ್), ಪಿಎಚ್ ಮೌಲ್ಯದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ, ದಟ್ಟಣೆಯನ್ನು ನಿವಾರಿಸಲು ಈ ಘಟಕಕ್ಕೆ ಹಲವು ಕಡೆ ನೀರು ಪೂರೈಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದಲ್ಲದೆ, ಘಟಕವು, ವಿದ್ಯುತ್ ಬ್ಯಾಕಪ್, ತ್ಯಾಜ್ಯ ನೀರಿನ ನಿರ್ವಹಣೆ ಮಾಡುವ ವ್ಯವಸ್ಥೆ ಹೊಂದಿದೆ. ಘಟಕವು ಬಹುಕಾಲ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು 03 ವರ್ಷಗಳ ಘಟಕ ನಿರ್ವಹಣೆಯನ್ನು ಸಂಸ್ಥೆಯೆ ಮಾಡಲಿದೆ, ಇದೇ ರೀತಿ ನಮ್ಮ ಬದ್ಧತೆ ಮುಂದುವರೆಯಲಿದ್ದು, ಸಮಾಜ ಸುಧಾರಣೆಗೆ ಶ್ರಮಿಸುತ್ತೇವೆ ಎಂದು ದಿ ಪಾರ್ವಡ್ ಪೌಂಡೇಷನ್‍ನ ಜಿ.ವಿ ಕೃಷ್ಣ ಹೇಳಿದರು.
ಡಾ ಎ.ಒ ನರಸಿಂಹಮೂರ್ತಿ ಇತಿಹಾಸ ಉಪನ್ಯಾಸಕರು ಸ್ವಾಗತಿಸಿದರು,
ಡಾ. ಹೆಚ್ ಎಂಸದಾಶಿವಯ್ಯ ಅರ್ಥಶಾಸ್ತ್ರ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು,
ರಾಮಣ್ಣ ಅಂಗ್ಲ ಶಿಕ್ಷಕರು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಎಂಪ್ರೆಸ್ ಕಾಲೇಜ್ ಪ್ರಾಚಾರ್ಯ ಷಣ್ಮುಖ ಎಸ್, ಉಪ ಪ್ರಾಚಾರ್ಯ ಶಿವಾಜಿರಾವ್, ದಿ ಪಾರ್ವಡ್ ಪೌಂಡೇಷನ್ ಸಂಸ್ಥೆಯ ರಾಮ್ ಪ್ರಕಾಶ್, ಮಾರುತಿ ಇಂಟರ್ ನ್ಯಾಷನಲ್ ಸ್ಕೂಲ್‍ನ ಕಾರ್ಯದರ್ಶಿ ಜಿ.ವಿ ಶ್ರೀನಿವಾಸ, ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 1 times, 1 visits today)