BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪ್ರಶಸ್ತಿ ಮುಖ್ಯವಲ್ಲ ಪಾಲ್ಗೊಳ್ಳುವಿಕೆಯೇ ಭಾಗ್ಯ: ಬಿ.ಆರ್ ಮಂಜುನಾಥ್
  • ಕಲ್ಪತರು ಉತ್ಸವ-ಪ್ರಗತಿಪರ ರೈತರಿಗೆ ಗೌರವಾರ್ಪಣೆ
  • ಭೂಮಿಯು ವ್ಯಾಪಾರದ ವಸ್ತುವಲ್ಲ: ಪ್ರೊ. ರಾಜೇಂದ್ರ ಚೆನ್ನಿ
  • ನಾನು ಎನ್ನುವ ಸ್ವಾರ್ಥ ಬಿಟ್ಟು ನಾವು ಎನ್ನುವ ನಿಸ್ವಾರ್ಥತೆ ಬೆಳಸಿಕೊಳ್ಳಿ
  • ಬಂಜಾರ ಸಂಸ್ಕೃತಿ ಉಳಿವಿಗೆ ನಗರದಲ್ಲಿ ಅದ್ಧೂರಿ ಜಿಲ್ಲಾ ಮಟ್ಟದ ಕಲಾ ಮೇಳ
  • ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಜಿ.ಬಿ.ಜ್ಯೋತಿಗಣೇಶ್
  • ಏತ ನೀರಾವರಿ ಯೋಜನೆಗೆ ಹೆಚ್ಚುವರಿ ಅನುದಾನ ನೀಡುವಂತೆ ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯ
  • ಹಿಂದೆ ಗುರು ಮುಂದೆ ಗುರಿ ಇದ್ದರೆ ಸಾಧನೆ ಸಾದ್ಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಂಸತ್ ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿ ಪ್ರತಿಭಟನೆ
ತುಮಕೂರು ಜಿಲ್ಲಾ ಸುದ್ಧಿಗಳು

ಸಂಸತ್ ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿ ಪ್ರತಿಭಟನೆ

By News Desk BenkiyabaleUpdated:November 30, 2018 4:53 pm

 ತುಮಕೂರು:

     ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಅಡಿಯಲ್ಲಿ 200ಕ್ಕೂ ಹೆಚ್ಚು ರೈತಕೂಲಿಕಾರರ ಸಂಘಟನೆಗಳು ದೆಹಲಿಯಲ್ಲಿ ನಡೆಸಿದ ನವೆಂಬರ್ 29 ಮತ್ತು 30ರ ಹೋರಾಟವನ್ನು ಬೆಂಬಲಿಸಿ ತುಮಕೂರು ನಗರದ ಸ್ವಾತಂತ್ರ್ಯ ಚೌಕದಲ್ಲಿ ರೈತ-ಕಾರ್ಮಿಕ, ವಿದ್ಯಾರ್ಥಿ-ಯುವಜನ, ಕಲಾವಿದರು ಒಳಗೊಂಡಂತೆ ಪ್ರತಿಭಟನೆ ನಡೆಸಲಾಯಿತು.

      ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಸತ್ ವಿಶೇಷ ಅಧಿವೇಶನವನ್ನು ಕರೆದು ಮೋದಿಯವರು ಚುನಾವಣೆಗೆ ಮುಂಚೆ ನೀಡಿದ ಭರವಸೆಯ ಭಾಗವಾಗಿ ರೈತರ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚಕ್ಕೆ ಶೇಕಡ 50ರಷ್ಟು ಲಾಭದ ಖಾತ್ರಿ ಕಾನೂನು, ರೈತಸ್ನೇಹಿ ವಿಮಾ ಯೋಜನೆ, ಕೃಷಿ ಅಭಿವೃದ್ಧಿಗೆ ಮಾಡಿರುವ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಿ ಸಾಲಮುಕ್ತಿ ಕಾಯಿದೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕೆಂದು ಒತ್ತಾಯಿಸಲಾಯಿತು.

      ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕ ಕೆ.ದೊರೈರಾಜ್ ಅವರ ಭರವಸೆಗಳಿಂದಲೇ ಜನರ ಬದುಕನ್ನು ಉಳಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವ ಬದಲು ಜನರ ಐಕ್ಯತೆಯನ್ನು ಒಡೆಯುವುದಕ್ಕೆ ತಮ್ಮ ಅಧಿಕಾರವನ್ನು ಮೀಸಲಿಟ್ಟಂತೆ ಕಾಣುತ್ತಿದೆ. 2019ರ ಚುನಾವಣೆ ಸಮೀಪಿಸುತ್ತಿದ್ದು ವಿಶೇಷ ಅಧಿವೇಶನ ಕರೆದು ರೈತ-ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಈಗಲಾದರೂ ಮುಂದಾಗಬೇಕು. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ವಿದ್ಯಾರ್ಥಿಗಳು, ವೈದ್ಯರು ಸೇರಿದಂತೆ ಎಲ್ಲಾ ವಿಭಾಗದ ಜನರ ಬೆಂಬಲವನ್ನು ಪಡೆದು ಐತಿಹಾಸಿಕ ಹೋರಾಟವಾಗಿರುವುದನ್ನು ಮೋದಿಯು ಮನಗಂಡು ಆದ್ಯತೆ ನೀಡಬೇಕೆಂದರು.

     ಎಐಕೆಎಸ್ ಪರವಾಗಿ ಮಾತನಾಡಿದ ಕಂಬೇಗೌಡ ವಿದೇಶ ಸುತ್ತಾಟದಲ್ಲಿ ತೊಡಗಿ ಹುಸಿ ಭರವಸೆಗಳನ್ನು ಮೋದಿ ಸರ್ಕಾರ ನೀಡುವುದನ್ನು ಮೊದಲು ನಿಲ್ಲಿಸಬೇಕು. ಜನರ ಸಮಸ್ಯೆಗಳು ಪರಿಹರಿಸಿ ದೇಶದ ಅಭಿವೃದ್ದಿಗೆ ಹೆಚ್ಚು ಗಮನ ಕೊಡಬೇಕೆಂದರು.
ಸಾಮಾಜಿಕ ಹೋರಾಟಗಾರ ಸಿ.ಯತಿರಾಜು ಮಾತನಾಡಿ, ಕೃಷಿ ಬಿಕ್ಕಟ್ಟನ್ನು ಬಗೆಹರಿಸಲು ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರದೆ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಮಾಣ ಪತ್ರ ಸಲ್ಲಿಸಿ ಜಾರಿಗೆ ತರಲು ಸಾಧ್ಯವೆಂದು ಹೇಳಿ ರೈತರಿಗೆ ದ್ರೋಹ ಮಾಡಲಾಗಿದೆ. ಆತ್ಮಹತ್ಯೆಗಳು ಮುಂದುವರಿದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಸಾವುಗಳನ್ನು ಸಹ ಮೋದಿ ಆಡಳಿತದಲ್ಲಿ ದಾಖಲಾಗುತ್ತಿಲ್ಲ. ಕೃಷಿ ಉತ್ಪನ್ನಕ್ಕೆ ಲಾಭದಾಯಕ ಕಾಯಿದೆಯನ್ನು ತಂದು ಎಪಿಎಂಸಿಗಳಲ್ಲಿ ಅವುಗಳನ್ನು ಸಂಗ್ರಹಿಸುವ ವ್ಯವಸ್ಥೆ ಬಂದರೆ ಮಾತ್ರ ರೈತರ ಉಳಿವು ಸಾಧ್ಯವೆಂದರು.

      ಕೃಷಿಕ ಸಮಾಜ ನವದೆಹಲಿ ಮುಖಂಡ ಸುರೇಶ್ ಮಾತನಾಡಿ ಹಳ್ಳಿಗಳು ವೃದ್ಧಾಶ್ರಮವಾಗುವುದನ್ನು ತಪ್ಪಿಸಿ ರೈತರ ಸಂಕಷ್ಟಗಳ ಪರಿಹಾರಕ್ಕೆ ಪ್ರಧಾನಿಗಳು ಮುಂದಾಗಬೇಕೆಂದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ ಇಂದು ರಾಜ್ಯಾದ್ಯಂತ ಸಂಘಟನೆಗಳು ದೆಹಲಿಯ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಯ ಭಾಗವಾಗಿ ರೈತರ ಸಮಸ್ಯೆಗಳ ಪರಿಹಾರವೇ ಎಲ್ಲಾ ಸಮಸ್ಯೆಗಳ ಪರಿಹಾರವಾದಂತೆ. ಆದ್ದರಿಂದ ಕೃಷಿಯ ಬಿಕ್ಕಟ್ಟುಗಳಿಗೆ ಆರ್ಥಿಕ ನೀತಿಗಳೇ ಪ್ರಮುಖವಾಗಿದ್ದು ಅವುಗಳನ್ನು ಸರಿಯಾಗಿ ಜಾರಿ ಮಾಡದಿದ್ದರೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಲಾಭಕ್ಕಿಂತ ನಷ್ಟವೇ ಆಯಿತು. ವಿಮಾ ಕಂತುಗಳನ್ನು ಕಟ್ಟಿಸಿಕೊಂಡ ಕಾರ್ಪೋರೇಟ್ ಕಂಪನಿಗಳು ರೈತರ ಹಣವನ್ನು ದೋಚಲು ಅವಕಾಶ ಕೊಟ್ಟಂತಾಗಿದೆ. ಇಂತಹ ತಪ್ಪು ನೀತಿಗಳನ್ನು ಸರಿಪಡಿಸುವ ಭಾಗವಾಗಿ ಸಂಸತ್ ಅಧಿವೇಶನವನ್ನು ತಕ್ಷಣವೇ ನಡೆಸಬೇಕಾಗಿದೆ ಎಂದರು.

      ಕಲಾವಿದರಾದ ದೇವರಾಜ್ ಮೆಳೇಹಳ್ಳಿ ಮಾತನಾಡಿ, ದೇವರುಗಳು, ಪ್ರತಿಮೆಗಳ ನಿರ್ಮಾಣದಲ್ಲಿ ಸಾವಿರಾರು ಕೋಟಿ ಹಣ ವ್ಯಯವಾಗುತ್ತಿದೆ. ಇಂತಹ ಹಣವನ್ನು ಗ್ರಾಮ ರಾಜ್ಯಗಳನ್ನು ಕಟ್ಟಲು ಬಳಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ಪಕ್ಷz ಕಾರ್ಯದರ್ಶಿ ಗಿರೀಶ್, ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ, ಬಿ.ಉಮೇಶ್, ಎಐಕೆಎಸ್ ಶಶಿಕಾಂತ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿದರು.

      ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘದ ರವೀಶ್, ಸಿಐಟಿಯು ಮುಖಂಡ ಸೈಯದ್ ಮುಜೀಬ್, ಲೋಕೇಶ್, ಶಂಕರಪ್ಪ ಎಐಟಿಯುಸಿ ಮುಖಂಡರಾದ ಸೀನಪ್ಪ, ಅಶ್ವತ್ಥನಾರಾಯಣ ವಹಿಸಿದ್ದರು.

(Visited 19 times, 1 visits today)
Previous Articleಕ್ಷೇತ್ರದಲ್ಲಿ ಶಾಸಕರ ಅಧಿಕಾರದ ಬಗ್ಗೆ ಚರ್ಚೆ
Next Article ಕೊಳವೆ ಮಾರ್ಗದಲ್ಲಿ ಕೊಳಚೆ ಹಾಗೂ ಹುಳವಿರುವ ನೀರು!!
News Desk Benkiyabale

Related Posts

ನಗರದ ವಿವಿಧೆಡೆ ಉಪಲೋಕಾಯುಕ್ತರಿಂದ ಬಿರುಸಿನ ಕಾರ್ಯಾಚರಣೆ

November 15, 2025 4:32 pm ತುಮಕೂರು

ಸಮಾಜದಲ್ಲಿ ತಾಂಡವಾಡುತ್ತಿರುವ ಅಜ್ಞಾನ ಹೋಗಿ ಸುಜ್ಞಾನ ಬರಲಿ: ಸ್ವಾಮೀಜಿ

November 10, 2025 2:20 pm ತುಮಕೂರು

ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ವಿದ್ಯಾರ್ಥಿಗಳ ಲಕ್ಷಣ

November 10, 2025 2:15 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಪ್ರಶಸ್ತಿ ಮುಖ್ಯವಲ್ಲ ಪಾಲ್ಗೊಳ್ಳುವಿಕೆಯೇ ಭಾಗ್ಯ: ಬಿ.ಆರ್ ಮಂಜುನಾಥ್

November 20, 2025 3:09 pm
ಇತರೆ ಸುದ್ಧಿಗಳು

ಕಲ್ಪತರು ಉತ್ಸವ-ಪ್ರಗತಿಪರ ರೈತರಿಗೆ ಗೌರವಾರ್ಪಣೆ

November 20, 2025 3:08 pm
ಇತರೆ ಸುದ್ಧಿಗಳು

ಭೂಮಿಯು ವ್ಯಾಪಾರದ ವಸ್ತುವಲ್ಲ: ಪ್ರೊ. ರಾಜೇಂದ್ರ ಚೆನ್ನಿ

November 20, 2025 3:07 pm
ಇತರೆ ಸುದ್ಧಿಗಳು

ನಾನು ಎನ್ನುವ ಸ್ವಾರ್ಥ ಬಿಟ್ಟು ನಾವು ಎನ್ನುವ ನಿಸ್ವಾರ್ಥತೆ ಬೆಳಸಿಕೊಳ್ಳಿ

November 20, 2025 3:05 pm
ಇತರೆ ಸುದ್ಧಿಗಳು

ಬಂಜಾರ ಸಂಸ್ಕೃತಿ ಉಳಿವಿಗೆ ನಗರದಲ್ಲಿ ಅದ್ಧೂರಿ ಜಿಲ್ಲಾ ಮಟ್ಟದ ಕಲಾ ಮೇಳ

November 20, 2025 2:14 pm
ಇತರೆ ಸುದ್ಧಿಗಳು

ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಜಿ.ಬಿ.ಜ್ಯೋತಿಗಣೇಶ್

November 20, 2025 2:13 pm
Our Youtube Channel
Our Picks

ಪ್ರಶಸ್ತಿ ಮುಖ್ಯವಲ್ಲ ಪಾಲ್ಗೊಳ್ಳುವಿಕೆಯೇ ಭಾಗ್ಯ: ಬಿ.ಆರ್ ಮಂಜುನಾಥ್

November 20, 2025 3:09 pm

ಕಲ್ಪತರು ಉತ್ಸವ-ಪ್ರಗತಿಪರ ರೈತರಿಗೆ ಗೌರವಾರ್ಪಣೆ

November 20, 2025 3:08 pm

ಭೂಮಿಯು ವ್ಯಾಪಾರದ ವಸ್ತುವಲ್ಲ: ಪ್ರೊ. ರಾಜೇಂದ್ರ ಚೆನ್ನಿ

November 20, 2025 3:07 pm

ನಾನು ಎನ್ನುವ ಸ್ವಾರ್ಥ ಬಿಟ್ಟು ನಾವು ಎನ್ನುವ ನಿಸ್ವಾರ್ಥತೆ ಬೆಳಸಿಕೊಳ್ಳಿ

November 20, 2025 3:05 pm

ಬಂಜಾರ ಸಂಸ್ಕೃತಿ ಉಳಿವಿಗೆ ನಗರದಲ್ಲಿ ಅದ್ಧೂರಿ ಜಿಲ್ಲಾ ಮಟ್ಟದ ಕಲಾ ಮೇಳ

November 20, 2025 2:14 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಪ್ರಶಸ್ತಿ ಮುಖ್ಯವಲ್ಲ ಪಾಲ್ಗೊಳ್ಳುವಿಕೆಯೇ ಭಾಗ್ಯ: ಬಿ.ಆರ್ ಮಂಜುನಾಥ್

By News Desk BenkiyabaleNovember 20, 2025 3:09 pm

ತುಮಕೂರು: ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವೇ ಹೊರತು ಪ್ರಶಸ್ತಿ ಮುಖ್ಯವಲ್ಲ ಕ್ರೀಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲೆಯನ್ನು ಪ್ರತಿನಿಧಿಸುವ ಹಾಗೆ ನೀವು ಆಯ್ಕೆಯಾದಾಗಲೇ…

ಕಲ್ಪತರು ಉತ್ಸವ-ಪ್ರಗತಿಪರ ರೈತರಿಗೆ ಗೌರವಾರ್ಪಣೆ

November 20, 2025 3:08 pm

ಭೂಮಿಯು ವ್ಯಾಪಾರದ ವಸ್ತುವಲ್ಲ: ಪ್ರೊ. ರಾಜೇಂದ್ರ ಚೆನ್ನಿ

November 20, 2025 3:07 pm

ನಾನು ಎನ್ನುವ ಸ್ವಾರ್ಥ ಬಿಟ್ಟು ನಾವು ಎನ್ನುವ ನಿಸ್ವಾರ್ಥತೆ ಬೆಳಸಿಕೊಳ್ಳಿ

November 20, 2025 3:05 pm
News by Date
November 2025
M T W T F S S
 12
3456789
10111213141516
17181920212223
24252627282930
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.