BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ
  • ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು
  • ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ
  • ಅನಿಲಗಳ ಅಕ್ರಮ ದಾಸ್ತಾನು: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
  • ೧೫ ಲಕ್ಷ ರೂ. ವಿಮೆ ಕ್ಲೆ0ಮ್ ಚೆಕ್ ವಿತರಣೆ
  • ರಸ್ತೆ ಒತ್ತುವರಿ ವಿವಾದ ಬಗೆಹರಿಸಿದ ಅಧಿಕಾರಿಗಳು
  • ಯುವ ಮನಸ್ಸುಗಳನ್ನು ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಅಗತ್ಯ: ಹಾಲಪ್ಪ
  • ಕಾ0ಗ್ರೆಸ್ ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸುವ ಕೆಲಸ ಮಾಡಿಲ್ಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು ನಗರದವರೆಗೆ ಮೆಟ್ರೋ ರೈಲು ಚಿಂತನೆ: ಡಿಸಿಎಂ
Trending

ತುಮಕೂರು ನಗರದವರೆಗೆ ಮೆಟ್ರೋ ರೈಲು ಚಿಂತನೆ: ಡಿಸಿಎಂ

By News Desk BenkiyabaleUpdated:December 17, 2018 4:45 pm

 ತುಮಕೂರು :

      ತುಮಕೂರು ನಗರದವರೆಗೂ ಮೆಟ್ರೋ ರೈಲು ಸಾರಿಗೆಯನ್ನು ವಿಸ್ತರಿಸಲು ಚಿಂತನೆ ನಡೆಸಿದ್ದು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅನಗತ್ಯ ಕಾಮಗಾರಿಗಳನ್ನು ತೆಗೆದುಕೊಳ್ಳದೆ ರಸ್ತೆ, ಚರಂಡಿ ಸೇರಿದಂತೆ ಅತ್ಯಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದು ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರು ಇಂದಿಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ತುಮಕೂರು ನಗರದಲ್ಲಿಂದು ವರ್ತುಲ ರಸ್ತೆಯ ಜೀರ್ಣೋದ್ದಾರ, ಸ್ಮಾರ್ಟ್ ರಸ್ತೆ ನಿರ್ಮಾಣಗಳಿಗೆ ಶಂಕುಸ್ಥಾಪನೆ, ಸ್ಮಾರ್ಟ್ ಲಾಂಜ್ ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದ 195 ಕೋಟಿ ರೂ. ವೆಚ್ಚ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಅವರು ಮಾತನಾಡಿದರು.

Displaying vv tumkur (1).JPG

      ಮೆಟ್ರೊ ರೈಲನ್ನು ತುಮಕೂರು ನಗರದವರೆಗೂ ವಿಸ್ತರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ತುಮಕೂರು ನಗರದಲ್ಲಿ ಪ್ರತಿದಿನ 50 ಸಾವಿರ ಜನ ಓಡಾಡುತ್ತಾರೆ ಮೆಟ್ರೊ ವಿಸ್ತರಣೆ ನಮ್ಮ ಕನಸು. ವೈಫೈ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳು ತುಮಕೂರಿನಲ್ಲಿ ಸಿಗುವಂತಾಗಬೇಕು. ಕಳೆದ 2 ವರ್ಷದಿಂದ ಪುಸ್ತಕದಲ್ಲಿಯೇ ಇದ್ದ ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಸ್ಮಾರ್ಟ್ ಎಂದಾಕ್ಷಣ ಏನೊ ಹೊಸ ಚಮತ್ಕಾರ ಎಂದು ಭಾವಿಸಬೇಕಿಲ್ಲ, ಎಲ್ಲಾ ಮೂಲಸೌಕರ್ಯ ಒಳಗೊಂಡಿರುವ ನಗರವಾಗಬೇಕು ಹಳ್ಳಿ, ಪಟ್ಟಣ ಹಾಗೂ ನಗರದಲ್ಲೂ ಒಂದೇ ರೀತಿ ಮೂಲಭೂತ ಸೌಕರ್ಯ ಇರಬೇಕು ಎಂದರು.

      2006ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಈ ಚಿಂತನೆ ಆರಂಭವಾಯಿತು, ಪ್ರಧಾನಿ ಮೋದಿಯವರು ಶೇ.100ರಷ್ಟು ಹಣ ನೀಡಬಹುದಿತ್ತು, ಆದರೆ ರಾಜ್ಯಕ್ಕೂ ಜವಾಬ್ಧಾರಿ ಇರಲಿ ಎಂಬ ಕಾರಣಕ್ಕೆ ರಾಜ್ಯದಿಂದಲೂ ಶೇ.50ರಷ್ಟು ಪಾಲು ಪಡೆದಿದ್ದಾರೆ. ತುಮಕೂರು ನಗರದಲ್ಲಿ ರಸ್ತೆ ಹಾಗೂ ಚರಂಡಿಗಳಾಗಬೇಕು, ಚಿಕ್ಕಪೇಟೆ, ಬಾರ್‍ಲೈನ್ ರಸ್ತೆಗಳು ಇಂದಿಗೂ ಕಿರಿದಾಗಿವೆ. ನಗರದ ಮುಖ್ಯರಸ್ತೆಯೇ ಕಳಪೆಯಾಗಿದೆ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿಯೇ ತುಮಕೂರು ಅತೀ ಹೆಚ್ಚು ಹಿಂದುಳಿದಿದೆ. ಇಲ್ಲಿಯ ರಸ್ತೆ ಚರಂಡಿಗಳು ಅಭಿವೃದ್ಧಿಯಾಗಬೇಕಿವೆ ಎಂದು ಅವರು ಹೇಳಿದರು.

Displaying vv tumkur (4).JPG

      ರಾಮನಗರ, ಕೋಲಾರ ನಗರಗಳಿಗಿಂತ ತುಮಕೂರು ನಗರವು ಬೆಂಗಳೂರು ನಗರಕ್ಕೆ ಪರ್ಯಾಯವಾಗಿದ್ದು, ಸೂಕ್ತವಾಗಿದೆ. ತುಮಕೂರು ಶರವೇಗದಲ್ಲಿ ಬೆಳೆಯುತ್ತಿದೆ, ಭವಿಷ್ಯವಿದೆ ಹಾಗಾಗಿ, ಸ್ಥಳೀಯರು ಬಳಸಿಕೊಳ್ಳಬೇಕು. ತುಮಕೂರು ಎಜುಕೇಷನ್ ಹಬ್, ಹೆಬ್ಬಾಕ, ಮರಳೂರು ಕೆರೆಗಳ ಸಾಮಥ್ರ್ಯ ಹೆಚ್ಚಿಸಿಕೊಂಡು ನಗರಕ್ಕೆ ನೀರು ಪೂರೈಕೆ ಮಾಡಲು ಬಳಸಿಕೊಳ್ಳಬೇಕು ಎಂದರು.

      ಬೆಂಗಳೂರು ನಗರದಲ್ಲಿ 1.30ಕೋಟಿ ಜನರಿದ್ದಾರೆ ಮೂಲಸೌಕರ್ಯ ಒದಗಿಸುವುದು ಕಷ್ಟವಾಗಿದೆ. ತುಮಕೂರು ನಗರದಲ್ಲಿ ದುಭಾರಿ ಖರ್ಚುಮಾಡಿ ಕಾರ್ಯಕ್ರಮ ರೂಪಿಸಬೇಡಿ, ಯೋಜನೆ ತಡವಾಗಿರುವುದನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿ ಗೆ ಸೂಚಿಸಿದ್ದೇನೆ. ಗುಣಮಟ್ಟದ ಕೆಲಸವಾಗಬೇಕು, ಸುಮ್ನನೆ ಸುಣ್ಣ ಬಳಿಯುವ ಕೆಲಸವಾಗಬಾರದು ಎಂದು ಅವರು ಹೇಳಿದರು.

      ನಗರಾಭಿವೃದ್ಧಿ ಸಚಿವ ಯು.ಟಿ.ಅಬ್ದುಲ್ ಖಾದರ್ ಮಾತನಾಡಿ, ನಗರದ ಆಸ್ತಿ ನಿರ್ಮಿಸುವ ಕೆಲಸ ಸ್ಮಾರ್ಟ್ ಸಿಟಿ ಯೋಜನೆಯಿಂದಾಗಬೇಕು. 2 ಸಾವಿರ ಕೋಟಿ ರೂ. ಮುಂದೆ 10 ಸಾವಿರ ಕೋಟಿ ಆಸ್ತಿಯಾಗಬೇಕು. ಬಂಡವಾಳ ಹಾಕಿದರೆ ಲಾಭ ಬರಬೇಕು ಹಾಗೆಯೇ ನಗರದಲ್ಲಿ ಆಸ್ತಿ ನಿರ್ಮಾಣ ಮಾಡಬೇಕು. ಆಲೋಚನೆಯಲ್ಲಿಯೂ ನಗರವಾಸಿಗಳು ಸ್ಮಾರ್ಟ್ ಆಗಲಿ, ನಗರಾಭಿವೃದ್ಧಿ ಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

      ಘನತ್ಯಾಜ್ಯದ ಬಗ್ಗೆಯೂ ಜಾಗೃತಿ ಅಗತ್ಯವಿದೆ, ಮೂಲಭೂತ ಸೌಕರ್ಯ ಕೇಳುವವರು ತೆರಿಗೆಯನ್ನು ಸರಿಯಾಗಿ ಕಟ್ಟಬೇಕು. ನಗರದಲ್ಲಿರುವ ಶ್ರೀಮಂತರೇ ಹೆಚ್ಚು ತೆರಿಗೆ ಉಳಿಸಿಕೊಂಡಿದ್ದಾರೆ ಇದನ್ನು ತಡಯಲೆಂದೇ ಹೊಸ ಕಾನೂನು ಜಾರಿಗೆ ತರುವ ಚಿಂತನೆಯಿದೆ ಎಂದು ಅವರು ಹೇಳಿದರು.
ವಸತಿ ನಿರ್ಮಿಸುವವರಿಗೆ ಯಾರಿಗೂ ಕಿರುಕುಳವಾಗದಂತೆ ನಿಯಮ ಸರಳೀಕೃತವಾಗಿಸಲಾಗುವುದು. ಆನ್ ಲೈನ್ ಅರ್ಜಿ ಹಾಕಿದರೆ ಒಂದು ತಿಂಗಳಲ್ಲಿ ಅನುಮತಿ ನೀಡುವ ಏಕ ಗವಾಕ್ಷಿ ಯೋಜನೆ ಮುಂದಿನ ಒಂದು ವಾರದಲ್ಲಿ ಜಾರಿಯಾಗಲಿದೆ ಎಂದು ತಿಳಿಸಿದರು.  

      ಜನಸಾಮಾನ್ಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಮೊಬೈಲ್ ಟವರ್ ಲಾಬಿಗೆ ಕಡಿವಾಣ ಹಾಕಲಾಗುವುದು. ಅಕ್ರಮ ಕಟ್ಟಡ ನಿರ್ಮಾಣಕ್ಕೆ ಪ್ರಚೋದನೆ ನೀಡುವ ಅಧಿಕಾರಿಗೂ ಶಿಕ್ಷೆ ಯಾಗುವ ಕಾನೂನು ಜಾರಿಯಾಗಲಿದೆ ಎಂದು ಅವರು ಹೇಳಿದರು.

      ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲು ಪರ್ಯಾಯ ನಗರವಾಗಿ ತುಮಕೂರು ಬೆಳೆಯಲೇಬೇಕು. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಬಳಸಿಕೊಳ್ಳಬೇಕು ಎಂದರು.

Displaying vv tumkur (4).JPG

 

     ಇಸ್ರೋ, ಎಚ್.ಎ.ಎಲ್. ತುಮಕೂರು ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ, ವೇಗವಾಗಿ ಬೆಳೆಯುತ್ತಿರುವ ತುಮಕೂರು ಸ್ಮಾರ್ಟ್ ಸಿಟಿಯಾಗಬೇಕು.

      ಪಾಸ್‍ಪೋರ್ಟ್ ಕಛೇರಿ ಆರಂಭವಾದ ಐದು ತಿಂಗಳಲ್ಲಿ ಹತ್ತು ಸಾವಿರ ಪಾಸ್‍ ಪೋರ್ಟ್ ಗಳನ್ನು ವಿತರಣೆ ಮಾಡಲಾಗಿದೆ. ಎಲ್ಲಾ ಪೂರಕ ಯೋಜನೆಗಳು ಇಡೀ ಜಿಲ್ಲೆ, ರಾಜ್ಯ, ದೇಶದ ಆಸ್ತಿಯಾಗಿ ತುಮಕೂರು ಸಿಟಿ ಬಿಂಬಿಸಿಕೊಳ್ಳಲಿದೆ, ತುಮಕೂರನ್ನು ವ್ಯವಸ್ಥಿತವಾಗಿ ನಿರ್ಮಿಸಲು ನಾಗರೀಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

      ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ತುಮಕೂರು ಆರೋಗ್ಯವಾಗಿರಲು ರಸ್ತೆ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ಆರೋಗ್ಯ ಶಿಕ್ಷಣ, ಬೀದಿದೀಪ ನಿರ್ವಹಣೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ. ಯಾವುದೇ ಕಾಮಗಾರಿ ಆರಂಭಿಸುವ ಮುನ್ನ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅವರಿಗೆ ಆ ವಾರ್ಡಿನ ಸಮಸ್ಯೆಯ ಅರಿವು ಇರುತ್ತದೆ. ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೆ ನಮ್ಮ ಸಹಕಾರವಿದೆ, ಡಿಸಿಎಂ ನಮ್ಮ ಜಿಲ್ಲೆಯವರೇ ಆಗಿದ್ದು ಬಳಸಿಕೊಳ್ಳೊಣ ಎಂದರು.

      ಸಮಾರಂಭದಲ್ಲಿ ಮಾಜಿ ಶಾಸಕ ಡಾ.ರಫೀಕ್ ಅಹಮದ್, ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿ.ಪಂ. ಸಿಇಒ ಅನ್ನಿಸ್ ಕೆ.ಜಾಯ್, ಪೊಲೀಸ್ ಅಧೀಕ್ಷಕಿ ಡಾ.ದಿವ್ಯಾ ಗೋಪಿನಾಥ್ ಮತ್ತಿತರರು ಹಾಜರಿದ್ದರು.

(Visited 23 times, 1 visits today)
Previous Articleಸಂತಶ್ರೇಷ್ಠ ಕನಕದಾಸರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು
Next Article ರಸ್ತೆ ನಿರ್ಮಾಣ : ನಾಗರಕಟ್ಟೆ, ದರ್ಗಾಗಳಿಗೆ ಪಾಲಿಕೆ ನೋಟೀಸ್ – ಜಿಲ್ಲಾಧಿಕಾರಿ
News Desk Benkiyabale

Related Posts

ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

July 14, 2026 5:01 pm news

ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು

July 14, 2026 4:07 pm news

ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ

July 14, 2026 4:02 pm news
ತಾಜಾ ಸುದ್ಧಿಗಳು

ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

July 14, 2026 5:01 pm

ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು

July 14, 2026 4:07 pm

ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ

July 14, 2026 4:02 pm

ಅನಿಲಗಳ ಅಕ್ರಮ ದಾಸ್ತಾನು: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

July 14, 2026 4:00 pm

೧೫ ಲಕ್ಷ ರೂ. ವಿಮೆ ಕ್ಲೆ0ಮ್ ಚೆಕ್ ವಿತರಣೆ

July 14, 2026 4:03 pm

ರಸ್ತೆ ಒತ್ತುವರಿ ವಿವಾದ ಬಗೆಹರಿಸಿದ ಅಧಿಕಾರಿಗಳು

July 14, 2026 3:56 pm
Our Youtube Channel
Our Picks

ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

July 14, 2026 5:01 pm

ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು

July 14, 2026 4:07 pm

ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ

July 14, 2026 4:02 pm

ಅನಿಲಗಳ ಅಕ್ರಮ ದಾಸ್ತಾನು: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

July 14, 2026 4:00 pm

೧೫ ಲಕ್ಷ ರೂ. ವಿಮೆ ಕ್ಲೆ0ಮ್ ಚೆಕ್ ವಿತರಣೆ

July 14, 2026 4:03 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

By News Desk BenkiyabaleJuly 14, 2026 5:01 pm

ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-೨೦೨೬ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ…

ಮದ್ಯ ವ್ಯಸನಿಗಳ ಬದುಕಿನಲ್ಲಿ ಹೊಸ ಬೆಳಕು

July 14, 2026 4:07 pm

ಶೈಕ್ಷಣಿಕ ಮೂಲಸೌಕರ್ಯಗಳು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕ

July 14, 2026 4:02 pm

ಅನಿಲಗಳ ಅಕ್ರಮ ದಾಸ್ತಾನು: ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

July 14, 2026 4:00 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.