ತುರುವೇಕೆರೆ: ತಾಲೂಕಿನ ಮೈಕ್ರೋ ಫೈನಾನ್ಸ್ ನವರು ಬಲವಂತದಿAದ ಸಾಲ ವಸೂಲಿ ಹಾಗೂ ಸಾಲ ವಸೂಲಿ ನೆಪದಲ್ಲಿ ಬೆದರಿಕೆ ಮತ್ತು ಜಾತಿ ನಿಂದನೆ ಮಾಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಂಘಟನಾ ಸಂಚಾಲಕ ಕುಂದೂರು ಮುರುಳಿ ಖಂಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಖಾಸಗಿ ಫೈನಾನ್ಸ್ ಗಳು ನೀಡುತ್ತಿರುವ ಸಾಲಕ್ಕೆ ರಿಸರ್ವ ಬ್ಯಾಂಕ್ ನಿಯಮವನ್ನು ಮೀರಿ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಈ ಹಣಕಾಸು ಸಂಸ್ಥೆಗಳಲ್ಲಿ ಸಾಲಗಾರರು ಪಡೆದಿರುವ ಸಾಲವನ್ನು ಪ್ರತಿ ವಾರ ಕಟ್ಟಲೇಬೇಕೆಂದು ಸೂಚಿಸಲಾಗುತ್ತಿದೆ. ಅಲ್ಲದೇ ಮಹಿಳಾ ಸಂಘದಲ್ಲಿ ಸಾಲಕ್ಕೆ ಎಲ್ಲರೂ ಹೊಣೆಗಾರರು ಎಂದು ಹೇಳಲಾಗುತ್ತಿದೆ. ಇದು ಅಕ್ರಮ. ಇದು ರಿಸರ್ವ್ ಬ್ಯಾಂಕಿನ ನಿಯಮಕ್ಕೆ ತದ್ವಿರುದ್ದವಾಗಿದೆ ಮತ್ತು ಬಲವಂತದಿAದ ಸಾಲ ವಸೂಲಿ ಮಾಡಬಾರದೆಂದು ಸರ್ಕಾರ ಸುಗ್ರೀವಾಜ್ಞೆ ತಂದಿದ್ದರೂ ಸಹ ಇಲ್ಲಿಯ ಕೆಲವು ಪೈನಾನ್ಸ್ಗಳು ಬಲವಂತವಾಗಿ ಸಾಲ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಾತಿ ನಿಂದನೆ ಕೇಸು ದಾಖಲು: ಸಾಲ ವಸೂಲು ಮಾಡುವ ವೇಳೆ ಸಾಲ ಬಾಕಿ ಉಳಿಸಿಕೊಂಡಿದ್ದ ಮಹಿಳೆಯ ಮನೆ ಬಳಿ ತೆರಳಿ ಜಾತಿ ನಿಂದನೆ ಮಾಡಿದ್ದಲ್ಲದೇ ಮಾನಸಿಕವಾಗಿ ಅವಮಾನ ಮಾಡಿದ್ದಾರೆಂದು ಆರೋಪಿಸಿ ತಾಲೂಕಿನ ಮಾಚೇನಹಳ್ಳಿಯ ಮಂಜುಳಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೫ ಮಂದಿ ಸಂಘಟಕರ ವಿರುದ್ಧ ದೂರು ನೀಡಿದ್ದ ಹಿನ್ನಲೇ ತಾಲೂಕಿನ ದಂಡಿನಶಿವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದನಕ್ಕೆ ಆಗ್ರಹ: ಸಾಲ ವಸೂಲಿ ವೇಳೆ ಜಾತಿ ನಿಂದನೆ ಮಾಡಿ ಮಾನಸಿಕವಾಗಿ ನೋವು ನೀಡಿರುವ ಶೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಟಕರನ್ನು ಕೂಡಲೇ ಬಂಧಿಸಬೇಕು. ತಪ್ಪಿದಲ್ಲಿ ದಂಡಿನಶಿವರ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ದೂರುದಾರೆ ಮಂಜುಳಾ, ಡೊಂಕಿಹಳ್ಳಿ ರಾಮಯ್ಯ, ಬಿಗನೇನಹಳ್ಳಿ ಪುಟ್ಟರಾಜು, ಯರೇಕಟ್ಟೆ ರಮೇಶ್, ಬೀಚನಹಳ್ಳಿ ರಾಮಣ್ಣ, ಮೋಹನ್ ಕುಮಾರ್, ಚಿಕ್ಕನಾಯಕನಹಳ್ಳಿ ಮಂಜುನಾಥ್, ಕಿರಣ್ ಕುಮಾರ್, ಯಗಚಿಕಟ್ಟೆ ಮೂರ್ತಿ, ಧರ್ಮಗೊಂಡನಹಳ್ಳಿ ಕುಮಾರಯ್ಯ, ಚಂದ್ರಶೇಖರ್, ಜಗದೀಶ್, ಸೋಮಶೇಖರ್, ಸುರೇಶ್, ಬಡಾವಣೆ ಶಿವಣ್ಣ ಇತರರು ಇದ್ದರು.
(Visited 1 times, 1 visits today)