ತುಮಕೂರು: ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು, ಸ್ವಾವಲಂಬಿ ಜೀವನವನ್ನು ತಮ್ಮದಾಗಿಸಿಕೊಂಡಾಗ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಕಂಡ ಕನಸು ನನಸಾಗಲಿದೆ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀಶ್ರೀಶಿವಶಿದ್ದೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದತ್ತಿ ಪ್ರಶಸ್ತಿ ಪ್ರಧಾನ, ರ್ಯಾಂಕ್ ವಿಜೇತರಿಗೆ ಪುರಸ್ಕಾರ,ಸ್ಪೂರ್ತಿ ಎನ್.ಎಸ್.ಎಸ್.,ಎನ್.ಸಿ.ಸಿ.,ರೆಡ್ಕ್ರಾಸ್ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದ ಅವರು,ಸ್ಪೂರ್ತಿ ಕಾರ್ಯಕ್ರಮ ಮಕ್ಕಳ ಅಭಿವ್ಯಕ್ತಿಗೆ ಒಳ್ಳೆಯ ವೇದಿಕೆಯಾಗಿದೆ.ನಾನು ಪಕ್ಕದ ಕಾಲೇಜಿನಲ್ಲಿಯೇ ಒದಿದ್ದು, ಅಲ್ಲಿನ ಅಭಿವ್ಯಕ್ತಿ ವೇದಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಪರಿಣಾಮ ನಿಮ್ಮ ಮುಂದೆ ನಿಂತು ಮಾತನಾಡುವಂತಹ ಆತ್ಮಸ್ಥೆöÊರ್ಯ ಹೊಂದಲು ಸಾಧ್ಯವಾಯಿತು ಎಂದರು.
ಒAದು ವಿದ್ಯಾಸಂಸ್ಥೆಯ ತೇರು ಸುಗಮವಾಗಿ ಸಾಗಬೇಕೆಂದರೆ, ಅದರ ಚಕ್ರಗಳಾಗಿರುವ ಬೋಧಕ ಮತ್ತು ಬೋಧಕೇತರ ವರ್ಗದವರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಸಿಬ್ಬಂದಿ ವರ್ಗ ಚನ್ನಾಗಿ ಕೆಲಸ ಮಾಡುತ್ತಿದೆ.ಕೇವಲ ವೇತನಕ್ಕಾಗಿ ಇಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಿಲ್ಲ.ಸೇವೆಯೇ ಅವರ ಆಶಯ ವಾಗಿದೆ. ಇದಕ್ಕೆ ನೀವುಗಳೇ ಸಾಕ್ಷಿ.ನಿಮ್ಮ ಉನ್ನತಿಯನ್ನು ಬಯಸುವ,ನಿಮ್ಮ ಯಶಸ್ಸನ್ನು ಸಂಭ್ರಮಿಸುವ ಇಬ್ಬರು ವ್ಯಕ್ತಿಗಳಲ್ಲಿ ಓಬ್ಬರು ನಮ್ಮ ತಂದೆ, ತಾಯಿ, ಮತ್ತೊಬ್ಬರು ಪಾಠ ಮಾಡಿದ ಗುರುಗಳು ಎಂದು ಶ್ರೀಶಿವಸಿದ್ದೇಶ್ವರಸ್ವಾಮೀಜಿ ನುಡಿದರು.
ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಕೆ.ನಂಜುAಡಪ್ಪ ಮಾತನಾಡಿ,ಶಿಕ್ಷಣ ಸಂಸ್ಥೆ ಎಂಬುದು ಒಂದು ಕುಟುಂಬ ವಿದ್ದ ಹಾಗೆ.ಇದರ ಬೆಳವಣಿಗೆಗೆ ಅನೇಕರು ಶ್ರಮವಹಿಸಿದ್ದಾರೆ.ಅವರೆಲ್ಲರನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ.ನಮ್ಮಲ್ಲಿ ಕೆಲಸ ಮಾಡಿ ನಿವೃತ್ತರಾದವರು ಕಾಲೇಜಿನ ಸಂಪರ್ಕ ಕಳೆದ ಕೊಳ್ಳಲು ಇಷ್ಟವಿಲ್ಲದೆ ದತ್ತಿ ನಿಧಿಗಳನ್ನು ನೀಡಿ ಕಾಲೇಜಿನ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ.ದತ್ತಿ ನಿಧಿಯಿಂದ ಪ್ರತಿಭಾವಂತರಿಗೆ ಪ್ರಶಸ್ತಿಗಳನ್ನು ನೀಡಿ,ಉಳಿದವರಿಗೆ ಸ್ಪೂರ್ತಿಯಾಗುವಂತೆ ಮಾಡಲಾಗಿದೆ.ಮೂವತ್ತು ಲಕ್ಷ ರೂಗಳ ದತ್ತಿ ನಿಧಿ ನಮ್ಮಲ್ಲಿದೆ.ಇದರ ಹಿಂದೆ ಸಂಯೋಜಕರಾದ ಡಾ.ಡಿ.ಎನ್.ಯೋಗೀಶ್ವರಪ್ಪ ಅವರ ಶ್ರಮವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಹೆಚ್.ಎಂ.ದಕ್ಷಿಣಮೂರ್ತಿ ಮಾತನಾಡಿ,ಪ್ರತಿವರ್ಷದಂತೆ ಈ ವರ್ಷವೂ ಕೂಡ,ಐವರು ರ್ಯಾಂಕ್ ವಿಜೇತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡು,ಇತರರಿಗೆ ಸ್ಪೂರ್ತಿ ಯಾಗುವಂತೆ ಮಾಡಲಾಗಿದೆ.ದತ್ತಿ ನಿಧಿಯಿಂದ ಹಲವಾರು ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ.೧೨ ಜನರು ಸ್ಥಾಪಿಸಿದ ಸುಮಾರು ೩೦ ಲಕ್ಷ ದತ್ತಿನಿಧಿಯಿಂದ ಪ್ರತಿ ವಿಭಾಗದ ಟಾರ್ಸ್ಗಳನ್ನು ಗುರುತಿಸಿ ೩೦ ವಿದ್ಯಾರ್ಥಿಗಳಿಗೆ ಗೌರವಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಇತರರಿಗೆ ಪ್ರೇರೆಪಣೆಯಾಗಲಿದೆ ಎಂದರು.
ಶ್ರೀಸಿದ್ದಗAಗಾ ಪದವಿಪೂರ್ವ ಕಾಲೇಜುಗಳ ಸಂಯೋಜಕರಾದ ಡಾ.ಡಿ.ಎನ್.ಯೋಗೀಶ್ವರಪ್ಪ ಪ್ರಾಸ್ತಾವಿಕ ಮಾತುಗಳ ನ್ನಾಡುತ್ತಾ,ಸಿದ್ದಗಂಗಾ ಮಠ೧೯೧೭ರಲ್ಲಿ ಸಂಸ್ಕೃತ ಪಾಠಶಾಲೆ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರ ಪ್ರವೇಶ ಪಡೆಯಿತು.೧೯೩೧ ರಲ್ಲಿ ಅದನ್ನು ಕಾಲೇಜಾಗಿ ಪರಿವರ್ತಿಸಲಾಯಿತು. ೧೯೪೧ರಲ್ಲಿ ಒಂದು ಪ್ರೌಢಶಾಲೆ ತೆರೆಯುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲಾಯಿತು.ತದನಂತರ ಆನೇಕ ಶಾಲೆಗಳು, ಕಾಲೇಜುಗಳು, ತರಬೇತಿ ಕಾಲೇಜುಗಳು ಆರಂಭಗೊAಡವು. ಇವುಗಳೆಲ್ಲವನ್ನು ಸೇರಿಸಿ ೧೯೬೫ರಲ್ಲಿ ಶ್ರೀಸಿದ್ದಗಂಗಾ ವಿದ್ಯಾಸಂಸ್ಥೆಯನ್ನು ಹುಟ್ಟು ಹಾಕಲಾಯಿತು.ಇಂದು ೧೩೦ ಶಾಲಾ, ಕಾಲೇಜುಗಳ ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಾಥಮಿಕ ಹಂತದಿAದ ಉನ್ನತ ಶಿಕ್ಷಣದವರೆಗೆ ನೀಡುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೇ ಉದ್ದೇಶವಾಗಿದೆ ಎಂದರು.
ವೇದಿಕೆಯಲ್ಲಿ ಗಾಯಕರಾದ ಪಂತಾಳೆ ರಕ್ಷಿತ್, ಐಕ್ಯೂಸಿ ಸಂಚಾಲಕರಾದ ಶೀಲಾ ಕೆ.ಪಿ,ಸ್ಪೂರ್ತಿ ಸಂಚಾಲಕರಾದ ಪಾವನ.ಬಿ.ಎಸ್, ಸಹ ಸಂಚಾಲಕರಾದ ನಯನ.ಕೆ.ಆರ್ ಮತ್ತಿತರರು ಪಾಲ್ಗೊಂಡಿದ್ದರು.