
ತುಮಕೂರು: ನಗರದಲ್ಲಿ ತುಮಕೂರು ಸೆಂಟ್ರಲ್ ಮತ್ತು ತುಮಕೂರು ರೋಟರಿ ಈಸ್ಟ್ ವತಿಯಿಂದ ಅಂತಾರಾಷ್ಟಿçÃಯ ಕ್ಯಾನ್ಸರ್ ದಿನದ ಪ್ರಯುಕ್ತ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ನಡೆಸಲಾಯಿತು.
ಈ ಕ್ಯಾನ್ಸರ್ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ರೋಟರಿ-೩೧೯೨ ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್ ಅವರು, ಭಾರತದಲ್ಲಿ ೯ ರಿಂದ ೧೪ ವರ್ಷದ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಗರ್ಭಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಹೆಣ್ಣು ಮಕ್ಕಳು ಜಾಗೃತರಾಗಿ ಪರೀಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
೯ ವರ್ಷದಿಂದ ೧೪ ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಅರಿವು ಜಾಥಾ ನಡೆಸಲಾಗುತ್ತಿದೆ. ಈ ಜಾಥಾ ಮೂಲಕ ಸಾರ್ವಜನಿಕರಿಗೂ ಸಹ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ಕಂಡು ಬರುತ್ತಿರುವ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಈ ಕ್ಯಾನ್ಸರ್ ನಿವಾರಣೆಗೆ ವ್ಯಾಕ್ಸಿನೇಷನ್ ಸಹ ಬಂದಿದೆ ಎಂದು ತಿಳಿಸಿದರು. ರೋಟರಿ ಹಿಂದಿನ ಗೌರ್ನರ್ ಆಶಾ ಪ್ರಸನ್ನಕುಮಾರ್ ಮಾತನಾಡಿ, ಕ್ಯಾನ್ಸರ್ ಹೆಸರು ಕೇಳಿದರೆ ಎಲ್ಲರಿಗೂ ಭಯ ಮೂಡುತ್ತದೆ. ಹಾಗಾಗಿ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಾರೆ. ಈ ಭಯದ ಮನೋಭಾವವನ್ನು ಬಿಟ್ಟು ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಂಡರೆ ಗುಣಮುಖರಾಗಬಹುದು ಎಂದು ಹೇಳಿದರು.
೯ ರಿಂದ ೧೪ ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ತಿಳುವಳಿಕೆ ನೀಡುವುದು ಅಗತ್ಯವಾಗಿದೆ. ಈಗಾಗಲೇ ಗರ್ಭಕಂಠದ ಕ್ಯಾನ್ಸರ್ ನಿವಾರಣೆಗಾಗಿ ವ್ಯಾಕ್ಸಿನೇಷನ್ ಸಹ ಬಂದಿದೆ. ರೋಟರಿ ವತಿಯಿಂದ ಉಚಿತವಾಗಿ ವ್ಯಾಕ್ಸಿನ್ ಕೊಡಿಸಲಾಗುತ್ತಿದೆ ಎಂದರು.
ಈ ವ್ಯಾಕ್ಸಿನೇಷನ್ ತೆಗೆದುಕೊಂಡರೆ ಜೀವನ ಪರ್ಯಂತ ಕ್ಯಾನ್ಸರ್ ಬರುವುದಿಲ್ಲ. ಇದನ್ನು ಮನಗಂಡು ಹೆಣ್ಣು ಮಕ್ಕಳು ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷ÷್ಯ ಮಾಡಬಾರದು ಎಂದು ತಿಳಿಸಿದರು. ಎಲ್ಲ ಹೆಣ್ಣು ಮಕ್ಕಳಿಗೆ ವ್ಯಾಕ್ಸಿನೇಷನ್ ಹಾಕುವ ವಿಚಾರದಲ್ಲಿ ರೋಟರಿ ಸಹಕಾರ ನೀಡುತ್ತಿದೆ. ಇದನ್ನು ಎಲ್ಲ ಹೆಣ್ಣು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ನಗರದ ಎಸ್ಐಟಿ ಕಾಲೇಜು ಮುಂಭಾಗದಿAದ ಆರಂಭವಾದ ಕ್ಯಾನ್ಸರ್ ಜಾಗೃತಿ ಜಾಥಾವು ಬಿ.ಹೆಚ್. ರಸ್ತೆ ಮೂಲಕ ಸಾಗಿ ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗ ಮುಕ್ತಾಯಗೊಂಡಿತು. ಈ ಜಾಗೃತಿ ಜಾಥ ಸಾಗಿದ ಮಾರ್ಗದುದ್ದಕ್ಕೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ಜಾಥಾದಲ್ಲಿ ಡಿಹೆಚ್ಓ ಡಾ. ಚಂದ್ರಶೇಖರ್, ತುಮಕೂರು ರೋಟರಿ ಸೆಂಟ್ರಲ್ ಅಧ್ಯಕ್ಷ ರಾಮಶೇಷಗಿರಿರಾವ್, ತುಮಕೂರು ರೋಟರಿ ಈಸ್ಟ್ ಅಧ್ಯಕ್ಷರಾದ ಶಶಿಧರ್, ರೋಟರಿ ಸಿರಾ ಗೇಟ್ ಚಂದ್ರಶೇಖರ್, ರೋಟೇರಿಯನ್ಗಳಾದ ಸುರೇಶ್, ಶ್ರೀಹರಿ, ಮಲ್ಲೇಶಯ್ಯ, ಕಿಶೋರ್, ನಾಗರಾಜಶೆಟ್ಟಿ, ಚಿಕ್ಕೇಗೌಡ, ನಾಗರತ್ನ ಹಾಗೂ ವಿವಿಧ ನರ್ಸಿಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.





