
ತುಮಕೂರು: ಜಿಲ್ಲೆಯ ಪ್ರತಿ ತಾಲೂಕು ಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳ ವಿವರ ಮತ್ತೆ ಸರ್ಕಾರದ ಬೊಕ್ಕಸಕ್ಕೆ ಬರುತ್ತಿರುವ ವಾರ್ಷಿಕ ಆ ದಾಯದ ವಿವರ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸೂಕ್ತವಾದ ಗಾಡ್ಗೀಳ್ ಕಾನೂನು ಜಾರಿಗೆ ತರುವಂತೆ ಆಮ್ಆದ್ಮೀ ಪಕ್ಷ ಒತ್ತಾಯಿಸಿದೆ.
ಗಣಿ ಕಂಪನಿಗಳ ವಿವರ ಮತ್ತು ಪ್ರತಿ ಗಣಿ ಕಂಪೆನಿಗಳಿAದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿರುವ ರಾಜಸ್ವದ ವಿವರವನ್ನು ನೀಡುವಂತೆ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತುಮಕೂರು ಇವರಿಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್ ಎ. ಜಯರಾಮಯ್ಯ ಅವರು ಒತ್ತಾಯಿಸದ್ದಾರೆ.
ಪ್ರತಿ ಗಣಿಗಾರಿಕೆಗಳಿಂದ ಪ್ರತಿನಿತ್ಯ ಎಷ್ಟು ಪ್ರಮಾ ಣದಲ್ಲಿ ಸಾಮಗ್ರಿಗಳನ್ನು ಉತ್ಪಾದಿಸ ಲಾಗುತ್ತದೆ ಮತ್ತು ನಿಯಮಾನುಸಾರ ಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟಕಗಳನ್ನ ಬಳಸಲಾ ಗುತ್ತದೆ ಎಂಬ ವಿವರವನ್ನು ನೀಡಬೇಕು ಕಲ್ಲು ಗಣಿಗಾರಿಕೆಯಿಂದ ರೈತರ ವ್ಯವಸಾಯ ,ರೇಷ್ಮೆ, ಅಡಿಕೆ, ತೆಂಗು, ರಾಗಿ ಬೆಳೆಗಳಿಗೆ ಹಾನಿ ಸೇರಿದಂತೆ ಹೈನುಗಾರಿಕೆಗೂ ಅಪಾರ ಹಾನಿ ಉಂಟಾಗುತ್ತಿದ್ದು ಜಲ ಮೂಲಗಳು ರಸ್ತೆಗಳು ರೈತರ ಮನೆಗಳು ಸಹ ಹಾನಿಯಾಗುತ್ತಿರುವ ಘಟನೆಗಳು ಜರುಗುತ್ತಿವೆ ಎಲ್ಲ ದುರ್ಘಟನೆಗಳನ್ನ ಗಮನದಲ್ಲಿಟ್ಟು ಕೊಂಡ ಆಮ್ ಆದ್ಮಿ ಪಕ್ಷ ರಾಜ್ಯಾದ್ಯಂತ ಅನಧಿಕೃತ ಗಣಿ ಕಂಪನಿಗಳ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಿದೆ ಎಂದು ತಿಳಿಸಿದರು..
ರೈತ ಕುಟುಂಬಗಳಿಗೆ ಗಣಿಗಾರಿಕೆಯ ಮಾಲೀ ಕತ್ವ ನೀಡಿ ಉಳ್ಳವರು ಹೊರ ರಾಜ್ಯದವರು ಸ್ಥಳೀಯವಾಗಿ ಗಣಿಗಾರಿಕೆಗಳನ್ನ ಆರಂಭಿಸುತ್ತಿದ್ದು ಇದಕ್ಕೆ ರಾಜಕೀಯ ಪಕ್ಷಗಳು ಮತ್ತು ಅಧಿಕಾರಿಗಳ ಬೆಂಬಲವೂ ಇರುತ್ತದೆ ಹೀಗಾಗಿ ರಾಜ್ಯದ ಬಕ್ಕಸಕ್ಕೆ ನಷ್ಟವೂ ಕೂಡ ಆಗುತ್ತಿದೆ ಈ ಕಾರಣದಿಂದಾಗಿ ಆಯಾ ಗಣಿಗಾರಿಕೆ ವ್ಯಾಪ್ತಿಯ ರೈತ ಕುಟುಂಬಗಳಿಗೆ ಗ್ರಾಮಗಳ ಜನಸಾಮಾನ್ಯರ ಸಹಭಾಗಿತ್ವದಲ್ಲಿ ಸರ್ಕಾರವೇ ಗಣಿಗಾರಿಕೆ ಕಂಪನಿ ರಚಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು ಕಾನೂನಿನ ಪರದಿಯಲ್ಲಿ ಗಣಿಗಾರಿಕೆ ನಡೆಸಲು ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಸರ್ಕಾರ ರಾಜಸ್ವವು ಹೆಚ್ಚಾಗುತ್ತದೆ ಜೊತೆಗೆ ಸ್ಥಳೀಯವಾಗಿ ಗಣಿ ಸಮಸ್ಯೆಗಳು ತಲೆ ದೋರು ವುದಿಲ್ಲ ಹಾಗಾಗಿ ಸರ್ಕಾರವನ್ನು ಒತ್ತಾಯಿಸಲು ಅವ ಶ್ಯಕತೆ ಇರುವ ಪೂರಕ ದಾಖಲೆಗಳ ಸಂಗ್ರ ಹಕ್ಕಾಗಿ ಹಯಾಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮನವಿ ನೀಡಿದ್ದು ಎಲ್ಲಾ ಗಣಿಗಾರಿಕೆಗಳ ವಿವರ ರಾಜಸ್ವ ಸಂಗ್ರಹ ಸಾಮಾಗ್ರಿ ಸರಬರಾಜಿನ ವಿವರ ನೀಡುವಂತೆ ಕೋರಿದ್ದು ಸರ್ಕಾರ ರೈತರ ಜನಸಾಮಾನ್ಯರ ಹಿತಕಾಯಲು ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದು ನೈಸರ್ಗಿಕ ಸಂಪತ್ತು ಜನಸಾಮಾನ್ಯರ ಸರ್ಕಾರದ ಪಾಲಾಗಬೇಕೆ ವಿನಃ ಬಲಾಡ್ಯರ ಪಾಲಾಗಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎನ್ .ರಾಮಾಂಜಿನಪ್ಪ, ತಿಮಪ್ಪ, ವೆಂಕಟ ಸ್ವಾಮಿ, ಗೋವಿಂದರಾಜು, ಹನುಮಂತ, ಆಂಜ ನೇಯಲು ಸೇರಿದಂತೆ ಇತರರು ಉಪಸ್ಥಿತರಿದ್ದರು.





