
ತುಮಕೂರು: ಕನ್ನಡ ಪುಸ್ತಕಲೋಕದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿರುವ ಭವ್ಯ ಸಾಹಿತ್ಯಿಕ ಹಬ್ಬ ವೀರಲೋಕ ಪುಸ್ತಕ ಸಂತೆಯ ಐದನೇ ಆವೃತ್ತಿಯು ಈ ಬಾರಿ ಜ್ಞಾನ ನಗರಿ ತುಮಕೂರಿನಲ್ಲಿ ಅತ್ಯಂತ ವೈಭವದಿಂದ ಆಯೋಜನೆಗೊಂಡಿದೆ. ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ದಿವ್ಯ ಆಶೀರ್ವಾದಗಳೊಂದಿಗೆ, ತುಮಕೂರು ಜಿಲ್ಲಾಡಳಿತ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ಸಹಕಾರದಲ್ಲಿ, ಶ್ರೀ ಆರ್. ಕೆ. ಶ್ರೀನಿವಾಸ ಅವರ ನೇತೃತ್ವ ಹಾಗೂ ವೀರಕಪುತ್ರ ಶ್ರೀನಿವಾಸ ಅವರ ರೂವಾರಿತನದಲ್ಲಿ ಈ ಸಾಹಿತ್ಯದ ಬೃಹತ್ ಜಾತ್ರೆ ನಡೆಯಲಿದೆ. ದಿನಾಂಕ ೨೦೨೬ರ ಜೂನ್ ೨೬, ೨೭ ಮತ್ತು ೨೮ರಂದು ತುಮಕೂರಿನ ಪ್ರಸಿದ್ಧ ಅಮಾನಿಕೆರೆಯ ‘ಗಾಜಿನ ಮನೆ’ಯಲ್ಲಿ ಬೆಳಿಗ್ಗೆ ೧೦:೦೦ ಗಂಟೆಯಿAದ ರಾತ್ರಿ ೯:೦೦ ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶದೊಂದಿಗೆ ಈ ಸಂತೆ ಜರುಗಲಿದೆ.
ಈ ಹಿಂದಿನ ಆವೃತ್ತಿಯು ಬೆಂಗಳೂರಿನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಎರಡು ಲಕ್ಷಕ್ಕೂ ಹೆಚ್ಚು ಪುಸ್ತಕ ಪ್ರೇಮಿಗಳು ಭೇಟಿ ನೀಡಿ, ಬರೋಬ್ಬರಿ ಮೂರು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವ್ಯಾಪಾರ ವಹಿವಾಟು ನಡೆಸಿ ಇತಿಹಾಸ ನಿರ್ಮಿಸಿತ್ತು. ಇದೀಗ ಸಾಹಿತ್ಯ ಸಂಸ್ಕöÈತಿಯ ತವರೂರಾದ ತುಮಕೂರಿನಲ್ಲಿ ನಡೆಯಲಿರುವ ಈ ಸಂತೆಗೆ ಜಿಲ್ಲೆ ಹಾಗೂ ನಾಡಿನ ಮೂಲೆಮೂಲೆಗಳಿಂದ ಒಂದು ಲಕ್ಷಕ್ಕೂ ಅಧಿಕ ಓದುಗರು ಆಗಮಿಸುವ ನಿರೀಕ್ಷೆಯಿದೆ. ಓದುಗರ ಜ್ಞಾನದ ಹಸಿವನ್ನು ನೀಗಿಸಲು ಈ ಬಾರಿ ೬೦ಕ್ಕೂ ಹೆಚ್ಚು ಜ್ಞಾನದಾಯಕ ಪುಸ್ತಕ ಮಳಿಗೆಗಳು ಹಾಗೂ ೪೦ಕ್ಕೂ ಹೆಚ್ಚು ವೈವಿಧ್ಯಮಯ ವಾಣಿಜ್ಯ ಮಳಿಗೆಗಳನ್ನು ಸಜ್ಜುಗೊಳಿಸಲಾಗುತ್ತಿದ್ದು, ಇಡೀ ಆವರಣವು ಕನ್ನಡದ ಹಬ್ಬದ ಕಳೆಯನ್ನು ತುಂಬಲಿದೆ. ಜೊತೆಗೆ ಫುಡ್ ಕೋರ್ಟ್, ಮಕ್ಕಳಿಗೆ ಆಟದ ಮೈದಾನ ಕೂಡ ಇರಲಿದೆ. ನಾಡಿನ ಮೂಲೆಮೂಲೆಯಿಂದ ೧೫೦ಕ್ಕೂ ಹೆಚ್ಚು ಪ್ರಸಿದ್ಧ ಲೇಖಕರು ಈ ಸಂತೆಗೆ ಆಗಮಿಸುತ್ತಿದ್ದು, ಒಟ್ಟು ೩೦ ನೂತನ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.
ಜೂನ್ ೨೬ರ ಬೆಳಿಗ್ಗೆ ೧೦:೦೦ ಗಂಟೆಗೆ ಗಾಜಿನ ಮನೆಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭವು ನಾಡಿನ ಶ್ರೇಷ್ಠ ಗಣ್ಯರ ಸಮ್ಮುಖ ದಲ್ಲಿ ಜರುಗಲಿದೆ. ಶ್ರೀ ಸಿದ್ದಗಂಗಾ ಮಠದ ಅಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸ ಲಿದ್ದಾರೆ. ಹಿರಿಯ ಸಾಹಿತಿ ಗಳಾದ ಡಾ. ಹಂಪ ನಾಗರಾಜಯ್ಯ (ಹಂಪನಾ) ಅವರು ಸಮಾರಂಭವನ್ನು ಉದ್ಘಾಟಿಸಲಿದ್ದು, ಸಾಂಸ್ಕöÈತಿಕ ಚಿಂತಕರಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಭುವನೇಶ್ವರಿ ಪುತ್ತಳಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಪುಸ್ತಕ ಸಂತೆಯನ್ನು ಮಾನ್ಯ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಉದ್ಘಾಟಿಸಲಿದ್ದು, ವಾಣಿಜ್ಯ ಮಳಿಗೆಗಳನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಶ್ರೀ ಜಿ. ಬಿ. ಜ್ಯೋತಿ ಗಣೇಶ್ ವಹಿಸಲಿದ್ದು, ವಿಶೇಷ ಪ್ರತಿನಿಧಿ ಶ್ರೀ ಟಿ. ಬಿ. ಜಯಚಂದ್ರ, ಕೆಎಸ್ ಆರ್ಟಿಸಿ ಅಧ್ಯಕ್ಷರಾದ ಶ್ರೀ ಎಸ್. ಆರ್. ಶ್ರೀನಿವಾಸ ಮತ್ತು ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ಚಿದಾನಂದ ಗೌಡ, ಶ್ರೀ ಆರ್. ರಾಜೇಂದ್ರ ರಾಜಣ್ಣ, ಹಾಗೂ ಶ್ರೀ ಡಿ. ಟಿ. ಶ್ರೀನಿವಾಸ ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ. ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ್ ಹಾಗೂ ಜಿ.ಪಂ. ಸಿಇಒ ಶ್ರೀಮತಿ ಬಿ. ವಿ. ಅಶ್ವಿಜ ಉಪಸ್ಥಿತರಿರಲಿದ್ದಾರೆ.
ಜೂನ್ ೨೮ರ ಸಂಜೆ ೬:೦೦ ಗಂಟೆಗೆ ಈ ಮೂರು ದಿನಗಳ ಅಕ್ಷರ ಜಾತ್ರೆಗೆ ಅರ್ಥಪೂರ್ಣ ತೆರೆ ಬೀಳಲಿದೆ. ತುಮಕೂರಿನ ಶ್ರೀ ರಾಮಕೃಷ್ಣ ಆಶ್ರಮದ ಪೂಜ್ಯ ವೀರೇಶಾನಂದ ಸ್ವಾಮೀಜಿಗಳು ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಮಾಜಿ ಸಚಿವರು ಹಾಗೂ ಶಾಸಕರಾದ ಶ್ರೀ ಕೆ.ಎನ್. ರಾಜಣ್ಣ ಅವರು ಬಹುಮಾನ ವಿತರಣೆ ಮಾಡಲಿದ್ದು, ಖ್ಯಾತ ವಿದ್ವಾಂಸರಾದ ಶ್ರೀ ಮಲ್ಲೇಪುರಂ ಜಿ. ವೆಂಕಟೇಶ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕರಾದ ಅಗ್ರಹಾರ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲೆಯ ಜನಪ್ರಿಯ ಶಾಸಕರುಗಳಾದ ಶ್ರೀ ಸುರೇಶ್ ಗೌಡ, ಸಿ. ಬಿ., ಸುರೇಶ್ ಬಾಬು, ಕೆ. ಷಡಕ್ಷರಿ, ಎಂ. ಟಿ. ಕೃಷ್ಣಪ್ಪ, ಎಚ್. ಟಿ. ರಂಗನಾಥ್, ಎಚ್., ವಿ. ವೆಂಕಟೇಶ್ ಮತ್ತು ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್ ಎಂ ಭಾಗವಹಿಸಲಿದ್ದಾರೆ.
“ಮಕ್ಕಳನ್ನು ಅಕ್ಷರ ಹಾಗೂ ಜ್ಞಾನದ ಬೆಳಕಿಗೆ ಕರೆತನ್ನಿ” ಎನ್ನುವ ಆಶಯದೊಂದಿಗೆ ಆಯೋಜಿತವಾಗಿರುವ ಈ ಮಹಾ ಸಂತೆಗೆ ತುಮಕೂರು ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಸಮಸ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕನ್ನಡದ ಹಬ್ಬವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ. ಯಾವುದೇ ಪುಸ್ತಕಗಳ ಮಾಹಿತಿಗಾಗಿ ೭೦೨೨೧೨೨೧೨೧ / ೮೮೬೧೨೧೨೧೭೨ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.

