ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಕಸಾಪ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಮುಖಂಡರಾದ ಸ್ವದೇಶಿ ವಿಶ್ವನಾಥ್, ಜಿಲ್ಲಾ ಸಮಿತಾ ಸಮಾಜದ ಅಧ್ಯಕ್ಷ ಮಂಜೇಶ್, ತಾಲ್ಲೂಕು ಅಧ್ಯಕ್ಷ ಕಟ್ವೆಲ್ ರಂಗನಾಥ್, ಜಿಲ್ಲಾ ವಾದ್ಯಗಾರರ ಸಂಘದ ಅಧ್ಯಕ್ಷ ಗಂಗಾಧರ್, ಸತ್ಯನಾರಾಯಣ್, ಬೆಸ್ಟೆಕ್ಸ್ ರಾಮರಾಜು, ಸೀತಾರಾಮಯ್ಯ ಸೇರಿದಂತೆ ಸಮುದಾಯದ ಮುಖಂಡರುಗಳ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ೧೨ನೇ ಶತಮಾನದ ವಚನ ಚಳವಳಿಯ ನೇತೃತ್ವ ವಹಿಸಿದ್ದ ಹಲವು ಮಹನೀಯರು ಜಯಂತಿಗಳನ್ನು ಸರಕಾರ ಆಚರಿಸುತಿದ್ದು,ಅವರಲ್ಲಿ ಬಸವಣ್ಣ ನವರ ಬಲಗೈ ಬಂಟನAತಿದ್ದ ಶಿವಶರಣ ಹಡಪದ ಅಪ್ಪಣ್ಣ ನವರು ಒಬ್ಬರು.ಯಾರನ್ನು ಬೆಳಗ್ಗೆ ಎದ್ದು ನೋಡಬಾರದು ಎಂಬ ಮೌಢ್ಯ ಸಮಾಜದಲ್ಲಿ ತುಂಬಿತ್ತೋ, ಅದೇ ಸಮಾಜಕ್ಕೆ ಸೇರಿದ ಹಡಪದ ಅಪ್ಪಣ್ಣ ಅವರನ್ನು ತಮ್ಮ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿಕೊಂಡಿದ್ದ ಬಸವಣ್ಣ, ತನ್ನನ್ನು ನೋಡುವ ಮೊದಲು ಹಡಪದ ಅಪ್ಪಣ್ಣ ಅವರ ಬಳಿ ಹೋಗಿ, ಒಪ್ಪಿಗೆ ಪಡೆದು ಬರುವಂತಹ ನೀತಿ ರೂಪಿಸಿದ್ದರು.ಇದು ತಳ ಸಮುದಾಯಗಳಿಗೆ ಸಮಾನತೆ ಕಲ್ಪಿಸಲು ಜಗಜ್ಯೋತಿ ಬಸವೇಶ್ವರು ಕಂಡುಕೊAಡ ಮಾರ್ಗ ಎಂದರು.
೧೨ನೇ ಶತಮಾನದ ವಚನ ಚಳವಳಿಯ ಕಾಲದಲ್ಲಿದ್ದ ಶೂನ್ಯ ಸಿಂಹಾಸನದಲ್ಲಿ ಅಲ್ಲಮಪ್ರಭು ಸೇರಿದಂತೆ ಎಲ್ಲಾ ಸಮುದಾಯದ ಜನರಿಗೆ ಅವಕಾಶವಿತ್ತು. ನಾನು ಎಂಬ ಅಹಂ ಬಿಟ್ಟು, ಸಮಾಜದ ಏಳಿಗೆಗಾಗಿ ದುಡಿದ ಎಲ್ಲರೂ ಮಹನೀಯರೇ ಎಂಬುದು ಶೂನ್ಯ ಸಿಂಹಾಸನದ ಪ್ರಮುಖ ಉದ್ದೇಶವಾಗಿತ್ತು.ಮೌಢ್ಯತೆಯ ವಿರುದ್ದ ಹೋರಾಡುತ್ತಲೇ, ಮೌಢ್ಯವನ್ನು ಜನರ ಮನಸ್ಸಿನಿಂದ ಕಿತ್ತು ಹಾಕಲು ೨೫೧ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದರು. ಅವರ ಪತ್ನಿ ನೀಲಮ್ಮ ಸಹ ವಚನಕಾರತಿಯಾಗಿದ್ದರು.ಸಮಾನತೆ, ಕಾಯಕ, ದಾಸೋಹದ ಮೇಲೆ ನಂಬಿಕೆ ಇಟ್ಟಿದ್ದ ಹಡಪದ ಅಪ್ಪಣ್ಣ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಡಾ.ಎನ್.ತಿಪ್ಪೇಸ್ವಾಮಿ ನುಡಿದರು.
ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ವಚನಚಳವಳಿಯಲ್ಲಿದ್ದ ಬಹುತೇಕರು ಕಾಯಕ ಮತ್ತು ದಾಸೋಹ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು.ಹಡಪದ ಅಪ್ಪಣ್ಣ ಎರಡರಲ್ಲಿಯೂ ಪ್ರಸಿದ್ದಿ ಪಡೆದಿದ್ದರು.ಅವರ ವಚನಗಳಲ್ಲಿರುವ ಪ್ರಕರತೆ,ಅವರು ಬಸಣ್ಣನವರ ಸಂದೇಹ ವಾಹಕರಾಗಿ ಮಾಡಿದ ಕೆಲಸ ಅವಿಸ್ಮರಣೀಯ.ಭಕ್ತಿಯಿಲ್ಲದ ಪೂಜೆ, ದುಡಿಮೆ ಇಲ್ಲದ ನೈವೆಧ್ಯ ಭಗವಂತನಿಗೆ ಸಲ್ಲದು ಎಂದು ಜಗತ್ತಿಗೆ ಸಾರಿ, ಡಾಂಬಿಕ ಭಕ್ತಿಯನ್ನು ಅಲ್ಲಗಳೆದವರು ಹಡಪದ ಅಪ್ಪಣ್ಣ.ಹಾಗಾಗಿಯೇ ಶಿವಶರಣರು ಕಾಯಕವೇ ಕೈಲಾಸ ಎಂದು ನಂಬಿದ್ದರು ಎಂದರು.
ತುಮಕೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಕಟ್ವೆಲ್ ರಂಗನಾಥ್ ಮಾತನಾಡಿ,ಜಿಲ್ಲಾಡಳಿತ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಅದ್ದೂರಿಯಾಗಿ ಅಲ್ಲದಿದ್ದರೂ ಅತ್ಯಂತ ಸರಳ ಮತ್ತು ಅರ್ಥ ಪೂರ್ಣವಾಗಿ ಆಚರಿಸುತ್ತಿದೆ. ಸಮುದಾಯಗಳು ಒಗ್ಗೂಡಲು ಕಾರಣವಾಗಿದೆ.ಇದಕ್ಕಾಗಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸವಿತಾ ಸಮಾಜ ಮತ್ತು ಹಡಪದ ಸಮಾಜದ ಕುಲಕಸುಬು ಒಂದೇ ಆಗಿದ್ದರೂ ಆಚಾರ, ವಿಚಾರ ಬೇರೆ ಬೇರೆ ಇದೆ.ರಾಜ ಮಹಾರಾಜರ ಕಾಲದಿಂದಲೂ ಹಡಪದ ಸಮುದಾಯದ ಜನರನ್ನು ತಮ್ಮ ಆಪ್ತ ಸಹಾಯಕರಾಗಿ ನೇಮಿಸಿಕೊಳ್ಳುವುದು ವಾಡಿಕೆ.ಅದು ಇಂದಿನ ಜನಪ್ರತಿನಿಧಿಗಳ ಕಾಲದಲ್ಲಿಯೂ ಮುಂದುವರೆದಿದೆ.ಇದಕ್ಕೆ ಪ್ರಮುಖ ಕಾರಣ, ಸೆಲ್ಯೂನ್ಗಳಿಗೆ ಎಲ್ಲಾ ವರ್ಗದ ಜನರು ಬರುವುದರಿಂದ ಎಲ್ಲಾ ರೀತಿಯ ಮಾಹಿತಿಯೂ ಇವರಿಗೆ ತಿಳಿದಿರುತ್ತದೆ ಎಂಬುದಾಗಿದೆ.ಒAದು ಊರಿನ ಸೆಲೂನ್ ಆ ಊರಿನ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಸ್ಥಿತಿಗಳ ತಿಳಿಸುವ ಮಾಹಿತಿ ಕೇಂದ್ರವಾಗಿವೆ ಎಂದರು.
ಬೆಸ್ಟೇಕ್ಸ್ ರಾಮರಾಜು ಹಡಪದ ಅಪ್ಪಣ್ಣ ಅವರ ವಚನ ವಾಚಿಸಿದರು. ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸುರೇಶಕುಮಾರ್, ನಾಗೇಂದ್ರ, ಪಾರ್ಥಸಾರಥಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)





