BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ
  • ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ
  • ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 
  • ನರೇಗಾ ಯೋಜನೆ: ೧ ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ: ಸಿಇಓ ಸೂಚನೆ
  • ಇಲಾಖೆಯಿಂದ ಸವಲತ್ತುಗಳನ್ನು ಪಡೆದುಕೊಂಡು ಅದುನಿಕ ಕೃಷಿಗೆ ಹೆಚ್ಚು ಒತ್ತು ನೀಡಿ: ಶಾಸಕ
  • ಮೇ ೧೩ರಂದು ಕೆಎನ್‌ಆರ್ ಅಮೃತ ಮಹೋತ್ಸವ
  • ಕಾರ್ಮಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳಿ
  • ವಿದ್ಯಾರ್ಥಿಗಳು ಸಂಸ್ಕಾರ ಗುಣ ಬೆಳೆಸಿಕೊಳ್ಳಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗುಬ್ಬಿ : ಕೆ.ಎಂ.ಎಫ್. ಪಶು ಆಹಾರ ಘಟಕದಲ್ಲಿ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು!!
Trending

ಗುಬ್ಬಿ : ಕೆ.ಎಂ.ಎಫ್. ಪಶು ಆಹಾರ ಘಟಕದಲ್ಲಿ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು!!

By News Desk BenkiyabaleUpdated:April 23, 2020 6:13 pm

ತುಮಕೂರು:

      ಗುಬ್ಬಿಯ ಕೆ.ಎಂ.ಎಫ್. ಪಶು ಆಹಾರ ಘಟಕದಲ್ಲಿ ಕರ್ತವ್ಯದಲ್ಲಿದ್ದ ಗುತ್ತಿಗೆ ಕಾರ್ಮಿಕ ಮಹಿಳೆ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

      ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾದ ಪಟ್ಟಣದ ಹೊರವಲಯದ ಕರೇಕಲ್ಲುಬಾರೆ ಬಡಾವಣೆಯ ಮಂಗಳಮ್ಮ(30) ಘಟಕದಲ್ಲಿನ ಹೊಸ ಯೂನಿಟ್‍ನಲ್ಲಿನ ಹೊಸ ಯಂತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ದೊಡ್ಡ ಗಾತ್ರದ ಮೋಟಾರ್ ಬೆಲ್ಟ್ ಗೆ ಸಿಲುಕಿದ ಮಂಗಳಮ್ಮ ತೀವ್ರ ಅಸ್ವಸ್ಥರಾದರು. ಗುಬ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ತಕ್ಷಣ ಆತಂಕದಲ್ಲಿದ್ದ ಘಟಕದಲ್ಲಿದ್ದ ನೂರಾರು ಕಾರ್ಮಿಕರು ಹಾಗೂ ಮೃತ ಮಂಗಳಮ್ಮ ಅವರ ಸಂಬಂಧಿಕರು ಕಾರ್ಖಾನೆ ಮುಂಭಾಗ ಗೇಟ್ ಬಳಿ ಪ್ರತಿಭಟನೆಗೆ ಮುಂದಾದರು. ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಸಾಥ್ ನೀಡಿದ ಕಾರ್ಮಿಕರು ಮಂಗಳಮ್ಮ ಸಾವಿಗೆ ನ್ಯಾಯ ಕೊಡುವಂತೆ ಆಗ್ರಹಿಸಿದರು.

      ಮೃತ ಮಹಿಳೆ ಪತಿ ಗಾರೆ ಕೆಲಸ ಮಾಡುತ್ತಿದ್ದು, ಎಂಟು ವರ್ಷದ ಮಗಳಿದ್ದಾಳೆ. ಸ್ಥಳದಲ್ಲಿ ಮಂಗಳಮ್ಮ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. 

      ಕಾರ್ಮಿಕ ಮಂಗಳಮ್ಮ ಅವರ ಸಾವಿಗೆ ಅಲ್ಲಿನ ಮೇಲ್ವಿಚಾರಕರು ಹಾಗೂ ಘಟಕದ ಮುಖ್ಯ ವ್ಯವಸ್ಥಾಪಕರು ಕಾರಣ ಎಂದು ಆಕ್ರೋಶ ಹೊರಹಾಕಿದ ನೂರಾರು ಹೊರಗುತ್ತಿಗೆ ಕಾರ್ಮಿಕರು ದಿಢೀರ್ ಪ್ರತಿಭಟನೆ ನಡೆಸಿದರು.

       ಒಂದು ತಾಸು ಪ್ರತಿಭಟನೆ ನಡೆಸಿದ ಕಾರ್ಮಿಕರ ಬಳಿ ಪೊಲೀಸರು ಆಗಮಿಸಿದ ಬಳಿಕ ಘಟಕದಿಂದ ಹೊರ ಬಂದ ಘಟಕದ ಮುಖ್ಯ ವ್ಯವಸ್ಥಾಪಕರು ಘಟನೆಯ ಸಮಜಾಯಷಿ ನೀಡಲು ಮುಂದಾದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಪಂ ಸದಸ್ಯ ಈರಣ್ಣ ದಲಿತ ಮಹಿಳಾ ಕಾರ್ಮಿಕ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇಡೀ ಕುಟುಂಬಕ್ಕೆ ಅಧಾರವಾಗಿದ್ದ ಮಂಗಳಮ್ಮ ಅವರ ಸಾವು ಅನ್ಯಾಯವಾಗಿದೆ. ತುಂಬಾ ಅಪಾಯಕಾರಿಯಾದ ಮೋಟಾರ್ ಬಳಿ ಜೋಳ ಸುರಿಯುವ ಕೆಲಸ ಮಹಿಳೆಯರು ಮಾಡುವಂತಿಲ್ಲ. ಅಂತಹ ಅಪಾಯ ಸ್ಥಳಕ್ಕೆ ಮಂಗಳಮ್ಮ ಅವರನ್ನು ಕಳುಹಿಸಿದ ಮೇಲ್ವಿಚಾರಕರ ವಿರುದ್ದ ಕ್ರಮವಹಿಸಬೇಕು. ಮಂಗಳಮ್ಮ ಕುಟುಂಬಕ್ಕೆ 20 ಲಕ್ಷ ರೂಗಳ ಪರಿಹಾರ ನೀಡಬೇಕು. ಜತೆಗೆ ಆಕೆಯ ಎಂಟು ವರ್ಷದ ಮಗಳಿಗೆ ಶಿಕ್ಷಣ ಒದಗಿಸಿ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು.

        145 ಮಂದಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಕೆಎಂಎಫ್ ಮೂಲ ಸಂಸ್ಥೆ ಅಥವಾ ಗುತ್ತಿಗೆ ನಡೆಸುವ ಸಂಸ್ಥೆ ಗುತ್ತಿಗೆ ಕಾರ್ಮಿಕರಿಗೆ ಮೂಲ ವ್ಯವಸ್ಥೆ ಕಲ್ಪಿಸಿಲ್ಲ. ಆರೋಗ್ಯ ಕಾರ್ಡ್ ವಿತರಣೆ ಮಾಡಿಲ್ಲ. ಅವರ ವೇತನದಲ್ಲಿ ಕಡಿತಗೊಳ್ಳುವ ಪಿಎಫ್ ಹಾಗೂ ಇಎಸ್‍ಐ ಹಣದ ಮಾಹಿತಿ ತಿಳಿದಿಲ್ಲ. ಕೋವಿಡ್ 19 ತುರ್ತು ಸ್ಥಿತಿಯಲ್ಲಿ ಯಾವುದೇ ಸುರಕ್ಷತೆ ಕಾಪಾಡದೇ ಎಂದಿನಂತೆ ಎಲ್ಲಾ ಕಾರ್ಮಿಕರಿಂದ ದುಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಾವನ್ನಪ್ಪುವ ಕಾರ್ಮಿಕರಿಗೆ ವಿಶೇಷ ವಿಮೆ ನೀಡಬೇಕು. ಲಕ್ಷಾಂತರ ರೂಗಳು ದೊರೆಯಬೇಕು. ನೂರಾರು ಮಂದಿ ಮಹಿಳಾ ಸಿಬ್ಬಂದಿ ಇರುವಲ್ಲಿ ವಿಶೇಷ ಸಮಿತಿಗಳ ರಚನೆ ಮಾಡಿ ಸಂರಕ್ಷಣೆ ನೀಡಬೇಕು. ಆದರೆ ಯಾವುದೇ ನಿಯಮ ಪಾಲಿಸದೇ ಸರ್ಕಾರ ಸ್ವಾಮ್ಯದ ಈ ಘಟಕ ಈ ರೀತಿ ವರ್ತಿಸಿರುವುದು ಸರಿಯಲ್ಲ. ಮೃತ ಮಂಗಳಮ್ಮ ಅವರಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ಇಲ್ಲಿನ ಕಾರ್ಮಿಕರ ಹಿತ ಕಾಯಲು ವಿಶೇಷ ಭತ್ಯೆ, ಸಮಿತಿ ರಚನೆ ಮಾಡಬೇಕು ಎಂದು ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳಾದ ಸುಬ್ರಹ್ಮಣ್ಯ, ಷಣ್ಮುಖ ಒತ್ತಾಯಿಸಿದರು.

      ನಂತರ ಸ್ಥಳಕ್ಕೆ ಧಾವಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ತುಮಕೂರು ಹಾಲು ಒಕ್ಕೂಟ ಅಧ್ಯಕ್ಷ ಮಹಾಲಿಂಗಯ್ಯ, ನಿರ್ದೇಶಕ ಚಂದ್ರಶೇಖರ್, ಘಟಕದ ಮುಖ್ಯ ವ್ಯವಸ್ಥಾಪಕ ಚಂದ್ರಶೇಖರ್, ಗುತ್ತಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮೃತ ಮಂಗಳಮ್ಮ ಅವರ ಕುಟುಂಬಕ್ಕೆ ಘಟಕ ಹಾಗೂ ಗುತ್ತಿಗೆ ಸಂಸ್ಥೆಯಿಂದ ಒಟ್ಟು 18 ಲಕ್ಷ ರೂಗಳ ಪರಿಹಾರ ನೀಡುವ ಜತೆಗೆ ಆಕೆಯ ಮಗುವಿಗೆ ಶಿಕ್ಷಣ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಶಾಸಕರನ್ನು ಮುತ್ತಿಗೆ ಹಾಕಿದ ನೂರಾರು ಕಾರ್ಮಿಕರು ಅಲ್ಲಿನ ಖಾಯಂ ನೌಕರರಿಂದ ಆಗುವ ದೌರ್ಜನ್ಯವನ್ನು ಬಿಚ್ಚಿಟ್ಟರು. ವಾಸ್ತಾವಾಂಶ ಅರಿತ ಶಾಸಕರು ಮುಂದಿನ ಸೋಮವಾರ ಗುತ್ತಿಗೆದಾರರು ಹಾಗೂ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲಿನ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಿ ಕಾರ್ಮಿಕರ ಸೌಕರ್ಯವನ್ನು ಸರ್ಕಾರದಿಂದ ಹಾಗೂ ಕೆಎಂಎಫ್‍ನಿಂದ ಒದಗಿಸುವ ಭರವಸೆ ನೀಡಿದ ಬಳಿಕ ಕಾರ್ಮಿಕರು ಧರಣಿ ಹಿಂಪಡೆದರು.

      ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಟಿ.ಭೈರಪ್ಪ, ಪಪಂ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ, ಎಪಿಎಂಸಿ ಸದಸ್ಯ ಲಕ್ಷ್ಮೀರಂಗಯ್ಯ, ಸಿದ್ದರಾಜು, ಬಿಲ್ಲೇಪಾಳ್ಯ ನರಸಿಂಹಮೂರ್ತಿ, ದಸಂಸ ಸಂಚಾಲಕ ಜಿ.ಸಿ.ನರಸಿಂಹಮೂರ್ತಿ, ಶಿವಲಿಂಗಯ್ಯ ಇತರರು ಇದ್ದರು.

 

 

 

 

(Visited 35 times, 1 visits today)
Previous Articleಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತದೆ – ಸಚಿವ ಸುರೇಶ್ ಕುಮಾರ್
Next Article ಮಾಜಿ ಶಾಸಕ ಬಿ.ಸುರೇಶ್ ಗೌಡರಿಂದ ಉಚಿತ ತರಕಾರಿ, ರೇಷನ್ ಕಿಟ್ ವಿತರಣೆ!!
News Desk Benkiyabale

Related Posts

ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ

May 06, 2025 3:24 pm ತುಮಕೂರು

ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ

May 06, 2025 3:23 pm ತುಮಕೂರು

ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 

May 06, 2025 3:22 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ

May 06, 2025 3:24 pm
ತುಮಕೂರು

ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ

May 06, 2025 3:23 pm
ತುಮಕೂರು

ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 

May 06, 2025 3:22 pm
ತುಮಕೂರು

ನರೇಗಾ ಯೋಜನೆ: ೧ ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ: ಸಿಇಓ ಸೂಚನೆ

May 06, 2025 3:21 pm
ತುಮಕೂರು

ಇಲಾಖೆಯಿಂದ ಸವಲತ್ತುಗಳನ್ನು ಪಡೆದುಕೊಂಡು ಅದುನಿಕ ಕೃಷಿಗೆ ಹೆಚ್ಚು ಒತ್ತು ನೀಡಿ: ಶಾಸಕ

May 06, 2025 3:20 pm
ತುಮಕೂರು

ಮೇ ೧೩ರಂದು ಕೆಎನ್‌ಆರ್ ಅಮೃತ ಮಹೋತ್ಸವ

May 06, 2025 3:18 pm
Our Youtube Channel
Our Picks

ಎಸ್‌ಎಸ್‌ಎಲ್‌ಸಿಯ ಫಲಿತಾಂಶ: ಹರಿಪ್ರಿಯಾಳ ಉತ್ತಮ ಸಾಧನೆ

May 02, 2025 2:34 pm

ಮಾತು ಕೃತಿಗೆ ಬಂದಾಗ ವ್ಯಕ್ತಿಗೆ ಗೌರವ

April 30, 2025 4:11 pm

ಕಾಯಕವೇ ಕೈಲಾಸ ಎಂದು ಸಾರಿದವರು ಬಸವಣ್ಣ

April 30, 2025 4:09 pm

ಮೇ೫: ಆಟೋ ಚಾಲಕ, ಕಾರ್ಮಿಕರ ನೋಂದಣಿ ಅಭಿಯಾನ

April 30, 2025 4:08 pm

ಸರ್ವ ಜನಾಂಗಗಳ ನಾಯಕ ಬಸವಣ್ಣ: ತಹಶೀಲ್ದಾರ್

April 30, 2025 4:06 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police police naveen Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

ಆರೋಗ್ಯ ರಕ್ಷಣೆಯ ಬಗ್ಗೆ ವಿಶೇಷ ಕಾರ್ಯಾಗಾರ

By News Desk BenkiyabaleMay 06, 2025 3:24 pm

ತುಮಕೂರು: ಆಸ್ಪತ್ರೆಗಳಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ, ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಪರಿಸರಕ್ಕೆ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ನಿಯಮಗಳು…

ಮೇ ೧೩ ರಂದು ಅಭಿನಂದನಾ ಗ್ರಂಥ ಬಿಡುಗಡೆ

May 06, 2025 3:23 pm

ಒಳ ಮೀಸಲಾತಿ ಸಮೀಕ್ಷೆ ಸಾರ್ವಜನಿಕರು ಸಹಕರಿಸಿ: ಜಿಲ್ಲಾಧಿಕಾರಿ 

May 06, 2025 3:22 pm

ನರೇಗಾ ಯೋಜನೆ: ೧ ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ: ಸಿಇಓ ಸೂಚನೆ

May 06, 2025 3:21 pm
News by Date
May 2025
M T W T F S S
 1234
567891011
12131415161718
19202122232425
262728293031  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.