BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೧೦೦೦ಕ್ಕೂ ಹೆಚ್ಚು ದರಖಾಸ್ತು ಪೋಡಿ ದುರಸ್ತಿ ಪೂರ್ಣಗೊಳಿಸಿ ಮೈಲುಗಲ್ಲು ತಲುಪಿದ ತುಮಕೂರು ಜಿಲ್ಲೆ: ಜಿಲ್ಲಾಧಿಕಾರಿ
  • ಮೌಲ್ಯಾಧಾರಿತ ಸಂಬ0ಧಗಳನ್ನು ಕಟ್ಟುವ ಶಿಕ್ಷಣವೇ ಶ್ರೇಷ್ಠ
  • ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು
  • ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ
  • ಹಡಪದ ಅಪ್ಪಣ್ಣ ಅವರ ನುಡಿಗಳು ಇಂದಿಗೂ ಪ್ರಸ್ತುತ
  • ನಗರದ ವಿವಿಧಡೆ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆ
  • ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಹಾಯವಾಣಿ ಸಂಖ್ಯೆ ಕಡ್ಡಾಯ: ಚಂದ್ರಶೇಖರ್ ಗೌಡ ಸೂಚನೆ
  • ರೈತ-ಕಾರ್ಮಿಕ ವಿರೋಧಿಸಿ ಪ್ರತಿಭಟನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಾವಲಿ ಹಕ್ಕಿ ಅಳಿವಿಗೆ ಕಾರಣವಾಗುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು
Trending

ಬಾವಲಿ ಹಕ್ಕಿ ಅಳಿವಿಗೆ ಕಾರಣವಾಗುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು

By News Desk BenkiyabaleUpdated:April 17, 2021 6:41 pm
??????

ಗುಬ್ಬಿ:

      ಅಪರೂಪದ ಬಾವಲಿ ಹಕ್ಕಿ ಸಂಕುಲ ಉಳಿಸಲು ಅವುಗಳ ವಾಸಸ್ಥಾನವಾದ ಎರಡು ಬೃಹತ್ ಮರಗಳನ್ನು ಕಡಿಯದಂತೆ ನ್ಯಾಯಾಲಯದ ಆದೇಶವಿದ್ದರೂ ಹಠಕ್ಕೆ ಬಿದ್ದಂತೆ ಹೆದ್ದಾರಿ ಪ್ರಾದಿಕಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮರ ಕಡಿಯುವ ಸಲುವಾಗಿ ಸರ್ವೆ ಮಾಡುವ ನೆಪದಲ್ಲಿ ಗ್ರಾಮಸ್ಥರಲ್ಲಿ ಗುಂಪು ಹುಟ್ಟುಹಾಕುತ್ತಿರುವ ಕಾರಣ ದಿಢೀರ್ ಪ್ರತಿಭಟನೆ ನಡೆಸಿ ಮರ ಕಡಿಯದಂತೆ ಒತ್ತಾಯಿಸಿದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿ ಬಳಿ ನಡೆಯಿತು. ಹೆದ್ದಾರಿ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಸೋಪನಹಳ್ಳಿ ಬಳಿಯ ಎರಡು ಬೃಹತ್ ಮರಗಳು ಸುಮಾರು ಐದು ಸಾವಿರ ಬಾವಲಿ ಹಕ್ಕಿಗಳ ವಾಸಸ್ಥಳವಾಗಿರುವ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿತ್ತು. ಅರಣ್ಯ ಇಲಾಖೆಗೂ ಸಹ ಈ ಅಪರೂಪದ ಸಂಕುಲ ಉಳಿಸಲು ಮನವಿ ಮಾಡಿದ್ದ ಗ್ರಾಮಸ್ಥರು ಇಲ್ಲಿನ ಈ ಮರಗಳನ್ನು ಪೂಜೆ ಮಾಡುವ ತಮ್ಮ ಧಾರ್ಮಿಕ ಭಾವನೆಯನ್ನೂ ಸಹ ಹಂಚಿಕೊಂಡಿದ್ದರು. ಆ ಸಮಯದಲ್ಲಿ ಈ ಮರಗಳನ್ನು ಉಳಿಸುವ ಮಾತುಗಳಾಡಿದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕಳೆದ ಆರು ತಿಂಗಳ ಹಿಂದೆ ಮರಗಳನ್ನು ಕಡಿದು ರಸ್ತೆ ನಿರ್ಮಾಣ ಮಾಡಲು ಮುಂದಾದರು. ಅಂದಿನಿಂದ ವಿರೋಧವನ್ನೇ ಎದುರಿಸಿದ ಅಧಿಕಾರಿಗಳು ಕೆಲ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

       ಅರಣ್ಯ ಇಲಾಖೆ ಸಿಬ್ಬಂದಿ ಜಾಣ ಮೌನವಹಿಸಿರುವ ಕಾರಣ ರಸ್ತೆ ಗುತ್ತಿಗೆದಾರರು ಬಾವಲಿ ಹಕ್ಕಿಗಳ ಮಾರಣಹೋಮಕ್ಕೆ ಮುಂದಾಗಿದ್ದರು. ಆರು ತಿಂಗಳ ಹಿಂದೆ ಗ್ರಾಮಸ್ಥರ ವಿರೋಧದ ಹಿನ್ನಲೆ ತಡರಾತ್ರಿ ಸದ್ದಿಲ್ಲದೆ ಆಗಮಿಸಿ ಕ್ಷಣಾರ್ಧದಲ್ಲಿ ಮರದ ಒಂದು ಕೊಂಬೆ ಧರೆಗುರುಳಿಸಿದ್ದರು. ಅಲ್ಲಿದ್ದ ಸಾವಿರಾರು ಬಾವಲಿಗಳು ತಮ್ಮ ವಾಸಸ್ಥಾನಕ್ಕೆ ಚ್ಯುತಿ ಬಂದ ಕಾರಣ ದಿನವಿಡೀ ಆಕಾಶದಲ್ಲೇ ಹಾರಾಡಿ ಕರ್ಕಶವಾಗಿ ಕೂಗಿ ತಮ್ಮ ಆಕ್ರಂದನವನ್ನು ಅಲ್ಲಿಯೇ ಸುತ್ತಿ ಅಳಲು ತೋಡಿಕೊಂಡವು. ಅವುಗಳ ಅರಚಾಟಕ್ಕೆ ಕರಳು ಕಿತ್ತು ಬರುತ್ತಿತ್ತು ಎಂದು ಆಕ್ರೋಶ ಹೊರಹಾಕಿದ ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಹೆದ್ದಾರಿ ಅಧಿಕಾರಿಗಳು ಅಚಿದು ಮರಗಳಿಂದ ಹಕ್ಕಿ ಓಡಿಸಲು ಸಲ್ಲದ ನಾಟಕವಾಡಿದ್ದರು. ಹಕ್ಕಿಗಳು ಸ್ಥಳದಲ್ಲಿಲ್ಲ ಎಂದು ತೋರಲು ನಡೆಸಿದ ಹುನ್ನಾರ ಗ್ರಾಮಸ್ಥರ ಮುಂದೆ ನಡೆಯಲಿಲ್ಲ ಎಂದು ತಿಳಿಸಿದರು.

       ಮರಗಳೆರಡು ಕಡಿದೇ ತೀರುವ ಹಠಕ್ಕೆ ಬಿದ್ದ ಗುತ್ತಿಗೆದಾರರು ಅಧಿಕಾರಿಗಳ ಕುಮ್ಮಕ್ಕಿನಲ್ಲಿ ಈಗ ಮರಗಳ ಕಡಿಯಲು ಸಲ್ಲದ ಮತ್ತೊಂದು ನಾಟಕವಾಡಿದ್ದಾರೆ. ಸೋಪನಹಳ್ಳಿ ಗ್ರಾಮಸ್ಥರಲ್ಲೇ ಎರಡು ಗುಂಪು ಮಾಡಿ ಮರಗಳನ್ನು ಗ್ರಾಮಸüರಿಂದಲೇ ತಗೆಸಲು ಹೊಸ ಕುತಂತ್ರ ನಡೆಸಿದ್ದಾರೆ. ಹೆದ್ದಾರಿ ಮಧ್ಯೆ ಡಿವೇಡರ್ ರಚಿಸಿ ಈ ಮರಗಳನ್ನು ಉಳಿಸಲು ನ್ಯಾಯಾಲಯ ಸೂಚಿಸಿದ್ದರೂ ರಸ್ತೆ ಮತ್ತೇ ಅಗಲೀಕರಣ ಮಾಡುತ್ತೇವೆ ಎಂದು ಅಳತೆ ಮಾಡುವ ನೆಪದಲ್ಲಿ ಅಲ್ಲಿನ ಕೆಲ ರೈತರಲ್ಲಿ ಭಯ ಹುಟ್ಟಿಸಿದ್ದಾರೆ. ನಿಮ್ಮ ಜಮೀನು, ಮನೆಗಳು ಹೋಗುತ್ತವೆ ಎಂದು ಬೆದರಿಸಿ ಈ ಮರಗಳನ್ನು ಕಡಿಯಬೇಕು ಎಂದು ಗ್ರಾಮಸüರಿಂದಲೇ ಹೇಳಿಸುವ ಪ್ರಯತ್ನ ಮಾಡಿರುವ ಅಧಿಕಾರಿಗಳ ಜಾಣತನಕ್ಕೆ ಪ್ರಶಸ್ತಿ ನೀಡಬೇಕು ಎಂದು ಕುಟಿಕಿದ ಅವರು ಗ್ರಾಮಸ್ಥರಲ್ಲಿ ಒಡಕು ಮೂಡಿಸಿ ಗುಂಪು ಕಟ್ಟುವ ಕೆಲಸ ಬಿಟ್ಟು ಈ ಮರಗಳನ್ನು ಉಳಿಸಿ ಸಾವಿರಾರು ಬಾವಲಿ ಹಕ್ಕಿ ಸಂಕುಲ ಉಳಿಸಿ ಎಂದು ಮನವಿ ಮಾಡಿದರು.

      ಸ್ಥಳಕ್ಕೆ ಧಾವಿಸಿದ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಾದ ಯಶಸ್ವಿನಿ ಮತ್ತು ಸಿದ್ದರಾಮಪ್ಪ ಪ್ರತಿಭಟನಾನಿರತರೊಂದಿಗೆ  ಚರ್ಚಿಸಿ ರಸ್ತೆ ಅಗಲೀಕರಣ ಬಗ್ಗೆ ಆಲೋಚಿಸಿ ಈ ಮರಗಳನ್ನು ಕಡಿಯಲು ಸೂಚಿಸಿಲ್ಲ. ಈ ಮರಗಳು ಹಾಗೇಯೇ ಉಳಿಸುವ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಧಾರ್ಮಿಕ ಭಾವನೆಯ ಈ ಮರಗಳನ್ನು ಕಡಿಯುವ ಚಿಂತನೆ ಮಾಡಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿ ಸದ್ಯಕ್ಕೆ ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ರೈತ ಸಂಘದ ಮಹದೇವಯ್ಯ ಇತರರು ಇದ್ದರು.

 

(Visited 10 times, 1 visits today)
Previous Articleರಸ್ತೆ ಕಾಮಗಾರಿ ವಿಳಂಬ : ಓಡಾಟಕ್ಕೆ ತೊಂದರೆ
Next Article ರೈತರ ಪ್ರತಿಭಟನೆ ಬೆಂಬಲಿಸಿ ಪಾದಯಾತ್ರೆ ಕೈಗೊಂಡಿರುವ ಟೆಕ್ಕಿ
News Desk Benkiyabale

Related Posts

೧೦೦೦ಕ್ಕೂ ಹೆಚ್ಚು ದರಖಾಸ್ತು ಪೋಡಿ ದುರಸ್ತಿ ಪೂರ್ಣಗೊಳಿಸಿ ಮೈಲುಗಲ್ಲು ತಲುಪಿದ ತುಮಕೂರು ಜಿಲ್ಲೆ: ಜಿಲ್ಲಾಧಿಕಾರಿ

July 11, 2025 3:40 pm ತುಮಕೂರು

ಮೌಲ್ಯಾಧಾರಿತ ಸಂಬ0ಧಗಳನ್ನು ಕಟ್ಟುವ ಶಿಕ್ಷಣವೇ ಶ್ರೇಷ್ಠ

July 11, 2025 3:38 pm ತುಮಕೂರು

ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು

July 11, 2025 3:36 pm ತುಮಕೂರು
ತಾಜಾ ಸುದ್ಧಿಗಳು
ತುಮಕೂರು

೧೦೦೦ಕ್ಕೂ ಹೆಚ್ಚು ದರಖಾಸ್ತು ಪೋಡಿ ದುರಸ್ತಿ ಪೂರ್ಣಗೊಳಿಸಿ ಮೈಲುಗಲ್ಲು ತಲುಪಿದ ತುಮಕೂರು ಜಿಲ್ಲೆ: ಜಿಲ್ಲಾಧಿಕಾರಿ

July 11, 2025 3:40 pm
ತುಮಕೂರು

ಮೌಲ್ಯಾಧಾರಿತ ಸಂಬ0ಧಗಳನ್ನು ಕಟ್ಟುವ ಶಿಕ್ಷಣವೇ ಶ್ರೇಷ್ಠ

July 11, 2025 3:38 pm
ತುಮಕೂರು

ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು

July 11, 2025 3:36 pm
ತುಮಕೂರು

ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ

July 10, 2025 3:51 pm
ತುಮಕೂರು

ಹಡಪದ ಅಪ್ಪಣ್ಣ ಅವರ ನುಡಿಗಳು ಇಂದಿಗೂ ಪ್ರಸ್ತುತ

July 10, 2025 3:50 pm
ತುಮಕೂರು

ನಗರದ ವಿವಿಧಡೆ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆ

July 10, 2025 3:49 pm
Our Youtube Channel
Our Picks

ಪತ್ರಿಕೋದ್ಯಮ ವಿದ್ಯರ‍್ಥಿಗಳು ಪತ್ರಿಕೋದ್ಯಮದ ಆಸ್ತಿಗಳಾಗಲಿ

July 01, 2025 3:52 pm

೧೭ ಮಹಿಳೆಯರು ಸೇರಿ ೩೨ ಮಂದಿಗೆ ಗಾಯ

June 30, 2025 3:48 pm

ಒಕ್ಕಲಿಗರ ಸಂಘಟನೆಗೆ ಹೊಸ ಚೇತನ ಕೆಂಪೇಗೌಡರು

June 28, 2025 3:39 pm

ಹೆಣ್ಣು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲಿ

June 28, 2025 3:38 pm

ಡಾ. ಶ್ರೀ ಶ್ರೀ ಶ್ರೀಶಿವಕುಮಾರ ಶ್ರೀಗಳ ಗ್ರಂಥ ಲೋಕಾರ್ಪಣೆ

June 28, 2025 3:37 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು

೧೦೦೦ಕ್ಕೂ ಹೆಚ್ಚು ದರಖಾಸ್ತು ಪೋಡಿ ದುರಸ್ತಿ ಪೂರ್ಣಗೊಳಿಸಿ ಮೈಲುಗಲ್ಲು ತಲುಪಿದ ತುಮಕೂರು ಜಿಲ್ಲೆ: ಜಿಲ್ಲಾಧಿಕಾರಿ

By News Desk BenkiyabaleJuly 11, 2025 3:40 pm

ತುಮಕೂರು: ಜಿಲ್ಲೆಯಲ್ಲಿ ಸರ್ಕಾರದಿಂದ ಭೂಮಂಜೂರಾತಿಯಾದ ಜಮೀನುಗಳನ್ನು ಸಾಗುವಳಿ ಮಾಡುವ ರೈತರಿಗೆ ಎರಡು ಮೂರು ತಲೆ ಮಾರುಗಳಿಂದ ಪೋಡಿ ದುರಸ್ಥಿಯಾಗದೇ ಕ್ರಯ,…

ಮೌಲ್ಯಾಧಾರಿತ ಸಂಬ0ಧಗಳನ್ನು ಕಟ್ಟುವ ಶಿಕ್ಷಣವೇ ಶ್ರೇಷ್ಠ

July 11, 2025 3:38 pm

ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರು

July 11, 2025 3:36 pm

ರೈತರ ಹಕ್ಕನ್ನು ಪಡೆಯಲು ಹೋರಾಟ ಒಂದೇ ದಾರಿ

July 10, 2025 3:51 pm
News by Date
July 2025
M T W T F S S
 123456
78910111213
14151617181920
21222324252627
28293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.