BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ: ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ
  • ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ
  • ಕನ್ನೇರಿ ಪೂಜ್ಯರು ಮಠಾಧೀಶರ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ: ಶ್ರೀ ಚಂದ್ರಶೇಖರಸ್ವಾಮಿಜಿ ಹೇಳಿಕೆ
  • ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಇದೆ: ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ
  • ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ
  • ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
  • ಭೈರಪ್ಪನವರ ಕೃತಿಗಳು ಜೀವನಾನುಭವ, ತತ್ವಶಾಸ್ತçದ ಮಿಶ್ರಣ: ಡಾ. ಜಿ. ಬಿ. ಹರೀಶ್
  • ಯೋಗ ಮನೋದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬಸವಣ್ಣನ ನೀರಾವರಿ ಯೋಜನೆ ಇಂದಿಗೂ ಮಾದರಿ
ತುಮಕೂರು

ಬಸವಣ್ಣನ ನೀರಾವರಿ ಯೋಜನೆ ಇಂದಿಗೂ ಮಾದರಿ

By News Desk BenkiyabaleUpdated:May 03, 2022 5:24 pm

ತುಮಕೂರು:
ಜಗತ್ತಿಗೆ ಬೇಕಾದ ಇಬ್ಬರು ಮಹಾನ್ ದಾರ್ಶನಿಕರು ಬಸವಣ್ಣ, ಸಿದ್ದರಾಮೇಶ್ವರರು, ಕೆರೆಕಟ್ಟೆಗಳನ್ನು ಕಟ್ಟಿಸಿ ನೀರಾವರಿ ಯೋಜನೆ ಮಾಡಿದರು, ಅದೇ ಇಂದಿಗೂ ಮಾದರಿಯಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ನಗರದ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಿಂದ ಹಮ್ಮಿಕೊಂಡಿದ್ದ ಜಗಜ್ಜ್ಯೋತಿ ಬಸವವೇಶ್ವರ ಮತ್ತು ಕಾಯಕಯೋಗಿ ಸಿದ್ದರಾಮೇಶ್ವರರ ಜಯಂತಿಯಲ್ಲಿ ಅವರು ಮಾತನಾಡಿದರು.
ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ಎಲ್ಲರು ಚಿಂತಿಸಬೇಕಿದೆ, ಇರುವುದರಲ್ಲಿಯೇ ಸಮಾಜಕ್ಕೆ ಒಳಿತನ್ನೇ ಮಾಡುವ ಮನೋಭಾವನೆಯನ್ನು ರೂಢಿಸಿಕೊಂಡಾಗ ಮಾತ್ರ ಸಮುದಾಯ ಶಕ್ತವಾಗಲಿದೆ, ಸಮುದಾಯಕ್ಕೆ ಕೊಡುವ ನಿಟ್ಟಿನಲ್ಲಿ ಸಮುದಾಯ ಮುಖಂಡರು ಚಿಂತಿಸಬೇಕಿದೆ ಎಂದು ಹೇಳಿದರು.
ವೀರಶೈವ ಬ್ಯಾಂಕ್ ಮಾಜಿ ನಿರ್ದೇಶಕ ಹೆಚ್.ಜಿ.ಬಸವರಾಜು ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ದೇಶದ ಸಮಾನತೆಯ ಆಶಯಗಳು, ಭಗವಾನ್ ಬುದ್ಧ ವೈಚಾರಿಕ ವಿಚಾರಗಳನ್ನು ತಿಳಿಸಿದರೆ ಅಣ್ಣ ಬಸವಣ್ಣ ಅದಕ್ಕೆ ಸ್ಥಿತಪ್ರಜ್ಞೆಯನ್ನು ಮೂಡಿಸಿದರು, ಅಂಬೇಡ್ಕರ್ ಅದಕ್ಕೊಂದು ಚೌಕಟ್ಟು ನೀಡಿದರು ಅದನ್ನು ಪಾಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕಿದೆ, ದೇಶ ಇರುವವರೆಗೆ ಬುದ್ಧ, ಬಸವ, ಅಂಬೇಡ್ಕರ್ ಪ್ರಾಂತಸ್ಮರಣೀಯರು ಎಂದು ಹೇಳಿದರು.
ಯುವ ಪೀಳಿಗೆಗೆ ಮಾರ್ಗದರ್ಶನ ಮಾಡುವ ಹೊಣೆಗಾರಿಕೆ ಪೋಷಕರ ಮೇಲಿದೆ, 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ಕ್ರಾಂತಿ ಮಾಡಿದರು, ವಚನ ಎಂದರೆ ಮಾತು, ಮಾತಿಗೆ ಬೆಲೆ ಕಟ್ಟಲಾಗುವುದಿಲ್ಲ, ಜಾತಿಗೆ ಹೊರತಾದ ವ್ಯವಸ್ಥೆ ತುಮಕೂರಿನಲ್ಲಿದೆ, ಭಾವನಾತ್ಮಕ ಸಂಬಂಧ ಎಲ್ಲರೊಳಗೆ ಒಂದಾಗಿದೆ ಎಂದು ಹೇಳಿದರು.
ಕಾಯಕಯೋಗಿ ಸಿದ್ದರಾಮೇಶ್ವರರು ಕಾಯಕವನ್ನು ಮಾಡಲು ಉತ್ತೇಜಿಸಿದರು, ಬಸವಣ್ಣ ಅದರಲ್ಲಿಯೇ ಕೈಲಾಸವನ್ನು ಕಾಣುವಂತೆ ಹೇಳಿದರು, ಪ್ರಪಂಚದ ಎಲ್ಲ ದಾರ್ಶನಿಕರಲ್ಲಿಯೂ ಬಸವಣ್ಣನವರ ಕೊಡುಗೆಯೇ ಹೆಚ್ಚಿದೆ, ಅವರು ನಮ್ಮವರು ಎಂಬ ಹೆಮ್ಮೆ ಇದ್ದರಷ್ಟೇ ಸಾಲದು, ಅವರ ಆದರ್ಶಗಳನ್ನು ಪಾಲಿಸಬೇಕೆಂದು ಹೇಳಿದರು.
ಸಮಾಜ ಬದಲಾಗುತ್ತಿದೆ ಆದರೆ ಮನಸ್ಸು ಬದಲಾಗುವುದು ಬೇಡ, ತುಮಕೂರು ವೀರಶೈವ ಸಮಾಜ ಇಡೀ ರಾಜ್ಯದಲ್ಲಿಯೇ ಉತ್ತಮ ಸೇವೆಯನ್ನು ಮಾಡಿದೆ, ಡಾ.ಶಿವಕುಮಾರಸ್ವಾಮೀಜಿ ಪ್ರಭಾವದಿಂದ ಉತ್ತಮ ಸಂಸ್ಕಾರವನ್ನು ವೀರಶೈವ ಸಮಾಜ ಅಳವಡಿಸಿಕೊಂಡಿದೆ, ಸಮಾಜದ ಸೇವೆಯನ್ನು ನಿಷ್ಕಳಂಕದಿಂದ ಮಾಡುತ್ತಿರುವ ಬಾವಿಕಟ್ಟೆ ಮಂಜಣ್ಣ ಅವರ ಬ್ಯಾಂಕ್ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸಿದರು.
ಟಿ.ಆರ್.ಲೋಕೇಶ್ ಅವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಹಣಕಾಸು ಸಂಸ್ಥೆಗಳನ್ನು ನಡೆಸುವುದು ಸುಲಭದ ವಿಚಾರವಲ್ಲ, ಹಣಕಾಸು ಸಂಸ್ಥೆಗಳು ದಾಸೋಹ, ಉತ್ಸವ ನಡೆಸುವುದರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ, ಸಮುದಾಯದಲ್ಲಿರುವ ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುವ ಮೂಲಕ ಸಮುದಾಯವನ್ನು ಬಲಿಷ್ಠಗೊಳಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿ ಆರ್ಶೀವಚನ ನೀಡಿದ ಕಾರದಮಠದ ಸ್ವಾಮೀಜಿ, 12ನೇ ಶತಮಾನದಲ್ಲಿಯೇ ಎರಡು ಮಾತಿನಲ್ಲೇ ಬಸವಣ್ಣ ಸಮಾಜದ ಒಳಿತು, ಕೆಡತನ್ನು ಹೇಳಿದ್ದಾರೆ, ಒಳಿತನ್ನು ಪಾಲಿಸುವ ಸಂಕಲ್ಪವನ್ನು ಎಲ್ಲರು ಮಾಡಬೇಕಿದೆ, ದೀಪದಂತಹ ಭಾವೈಕ್ಯತೆಯನ್ನು ರೂಢಿಸಿಕೊಳ್ಳಬೇಕಿದೆ ಎಂದರು.
ಬಸವಣ್ಣ, ಡಾ.ಶಿವಕುಮಾರಸ್ವಾಮೀಜಿ ಹೇಳಿದ್ದು ದಾಸೋಹ ಮಾಡಿ ಎಂದದರು, ಅವರು ಹೇಳಿದಂತೆ ದಾಸೋಹದ ನಗರಿ ತುಮಕೂರಿನಲ್ಲಿ ಇಂದು ಎಲ್ಲೆಡೆ ದಾಸೋಹ ನಡೆಯುತ್ತಿದೆ ಇದೇ ನಮ್ಮ ಸಮುದಾಯದ ಆಶಯ, ನಮ್ಮ ಸಂಸ್ಕಾರ ಎಂದು ಹೇಳಿದ ಅವರು, 889 ವರ್ಷಗಳಾದರೂ ಬಸವಣ್ಣನವರ ಜಯಂತಿ ಮಾಡುತ್ತಿದ್ದೇವೆ ಎಂದರೆ ಬಸವಣ್ಣನವರು ಸಮುದಾಯಕ್ಕೆ ನೀಡಿರುವುದು ಎಂತಹ ಕೊಡುಗೆ ಎಂಬುದನ್ನು ಸ್ಮರಿಸಬೇಕು ಎಂದು ಹೇಳಿದರು.
ಬಸವಣ್ಣನವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗುವ ನಿಟ್ಟಿನಲ್ಲಿ ಜಯಂತಿಗಳನ್ನು ಮಾಡುತ್ತೇವೆ, ಜಯಂತಿಗಳನ್ನು ಮಾಡಿ, ದಾಸೋಹ ಮಾಡಿ ಸುಮ್ಮನಾಗದೇ ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.
ಈ ವೇಳೆ ಮೈತ್ರಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಹೇಮಾ ಪಂಚಾಕ್ಷರಿ,ಸ್ನೇಹ ಸಂಗಮ ಸೌಹಾರ್ದ ಸಹಕಾರಿಯ ಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಉಪಾಧ್ಯಕ್ಷ ನಾಗೇಶ್,ಕೊಪ್ಪಳ್ ನಾಗರಾಜು, ಉಪಾಧ್ಯಕ್ಷ ನಾಗೇಶ್ ಹೆಚ್.ಆರ್, ನಿರ್ದೇಶಕರಾದ ನಳಿನಾ ಟಿ.ಎಸ್, ಮೃತ್ಯುಂಜಯ ಟಿ.ಬಿ, ಶಾಂತಕುಮಾರಿ ಟಿ.ಎಸ್, ಹೆಚ್.ಎನ್.ಶಿವಕುಮಾರ್, ಪ್ರವೀಣ್ ಪ್ರಸಾದ್, ಪ್ರಭಾಕರ್, ಅರುಣ್ ಕುಮಾರ್, ಟಿ.ಎಸ್.ಚಿದಾನಂದ, ಲೋಕೇಶ್ ಕುಮಾರ್, ಜಗದೀಶ್ ಟಿ.ಎಸ್, ಸಿದ್ದರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಇತರರಿದ್ದರು.ಇದೇ ವೇಳೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿಶ್ವರಾಧ್ಯ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಉದ್ಯಮಿ ಹೆಚ್.ಕೆ.ನಟೇಶ್, ಮೈತ್ರಿ ಮಹಿಳಾ ಸಂಘದ ಹೇಮಾ ಪಂಚಾಕ್ಷರಿ ಅವರನ್ನು ಸನ್ಮಾನಿಸಲಾಯಿತು.

(Visited 21 times, 1 visits today)
Basavajayanti tumkur
Previous Articleರಂಜಾನ್ ಉಪವಾಸ ಸೌಹಾರ್ದತೆಯ ಬದುಕಿನ ಸಂದೇಶ
Next Article ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ರಂಜಾನ್ ಸಡಗರ
News Desk Benkiyabale

Related Posts

ಹುಳಿಯಾರು ಬಂದ್‌ಗೆ ಕರೆ ಕೊಡಲು ನಿರ್ಧಾರ

October 18, 2025 1:53 pm ತುಮಕೂರು

ಜಿಲ್ಲೆಯಲ್ಲಿ ನೀರಿನ ಜೈವಿಕ ಪರೀಕ್ಷೆ

October 17, 2025 12:04 pm ತುಮಕೂರು

ತಿಪಟೂರಿಗೆ ಮುಂಜಾನೆ ಬಸ್ ಇಲ್ಲದೆ ಪರದಾಟ

October 16, 2025 1:03 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ: ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ

October 29, 2025 2:01 pm
ಇತರೆ ಸುದ್ಧಿಗಳು

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ

October 29, 2025 1:50 pm
ಇತರೆ ಸುದ್ಧಿಗಳು

ಕನ್ನೇರಿ ಪೂಜ್ಯರು ಮಠಾಧೀಶರ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ: ಶ್ರೀ ಚಂದ್ರಶೇಖರಸ್ವಾಮಿಜಿ ಹೇಳಿಕೆ

October 29, 2025 1:49 pm
ಇತರೆ ಸುದ್ಧಿಗಳು

ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಇದೆ: ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ

October 29, 2025 1:48 pm
ಇತರೆ ಸುದ್ಧಿಗಳು

ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ

October 27, 2025 1:23 pm
ಇತರೆ ಸುದ್ಧಿಗಳು

ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

October 24, 2025 1:30 pm
Our Youtube Channel
Our Picks

ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ: ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ

October 29, 2025 2:01 pm

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ

October 29, 2025 1:50 pm

ಕನ್ನೇರಿ ಪೂಜ್ಯರು ಮಠಾಧೀಶರ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ: ಶ್ರೀ ಚಂದ್ರಶೇಖರಸ್ವಾಮಿಜಿ ಹೇಳಿಕೆ

October 29, 2025 1:49 pm

ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಇದೆ: ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ

October 29, 2025 1:48 pm

ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ

October 27, 2025 1:23 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ: ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ

By News Desk BenkiyabaleOctober 29, 2025 2:01 pm

ತುರುವೇಕೆರೆ: ರೈತರ ಬಗ್ಗೆ ಕಾಳಜಿ ಇಲ್ಲದ ಕುರುಡು ರಾಜ್ಯ ಸರ್ಕಾರ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು. ಪಟ್ಟಣದ ಎಪಿಎಂಸಿ…

ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ

October 29, 2025 1:50 pm

ಕನ್ನೇರಿ ಪೂಜ್ಯರು ಮಠಾಧೀಶರ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ: ಶ್ರೀ ಚಂದ್ರಶೇಖರಸ್ವಾಮಿಜಿ ಹೇಳಿಕೆ

October 29, 2025 1:49 pm

ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಶಕ್ತಿ ಸಹಕಾರಿ ಆಂದೋಲನಕ್ಕೆ ಇದೆ: ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ

October 29, 2025 1:48 pm
News by Date
November 2025
M T W T F S S
 12
3456789
10111213141516
17181920212223
24252627282930
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2025 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.